AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ananda Raaga Serial: ಕಪ್ಪು ಹುಡುಗನ ಕಥೆಯೇ ‘ಆನಂದರಾಗ’; ಮಾ.13ರಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ

Udaya TV | Kannada Serial: ಡಿಫರೆಂಟ್​ ಲವ್​ ಸ್ಟೋರಿ ಹೊಂದಿರುವ ‘ಆನಂದರಾಗ’ ಧಾರಾವಾಹಿಯಲ್ಲಿ ದುರ್ಗಾ ಪಾತ್ರವನ್ನು ನಟಿ ದೀಪಾ ಹಿರೇಮಠ್‌ ಅವರು ನಿಭಾಯಿಸುತ್ತಿದ್ದಾರೆ. ಚೆಲುವರಾಜ್​ ಪಾತ್ರಕ್ಕೆ ರಂಗಭೂಮಿ ನಟ ಮಂಜು ಬಣ್ಣ ಹಚ್ಚುತ್ತಿದ್ದಾರೆ.

Ananda Raaga Serial: ಕಪ್ಪು ಹುಡುಗನ ಕಥೆಯೇ ‘ಆನಂದರಾಗ’; ಮಾ.13ರಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ
‘ಆನಂದರಾಗ’ ಧಾರಾವಾಹಿ ಪಾತ್ರವರ್ಗ
ಮದನ್​ ಕುಮಾರ್​
|

Updated on: Mar 10, 2023 | 5:12 PM

Share

ಧಾರಾವಾಹಿಗಳ ಮಾರುಕಟ್ಟೆ ದಿನದಿನಕ್ಕೂ ಹಿರಿದಾಗುತ್ತಿದೆ. ಪ್ರತಿ ವಾಹಿನಿಗಳ ನಡುವೆ ಪೈಪೋಟಿ ಇದೆ. ಡಿಫರೆಂಟ್​ ಆದಂತಹ ಕಥಾಹಂದರ ಇರುವ ಕನ್ನಡ ಸೀರಿಯಲ್​ಗಳಿಗೆ (Kannada Serials) ಪ್ರೇಕ್ಷಕರು ಮನಸೋಲುತ್ತಾರೆ. ಹಾಗಾಗಿ ಒಂದಕ್ಕಿಂತ ಒಂದು ಭಿನ್ನವಾದ ಕಥೆಯನ್ನು ಜನರಿಗೆ ಪರಿಚಯಿಸುವ ಪ್ರಯತ್ನ ಆಗುತ್ತಿದೆ. ಈ ನಿಟ್ಟಿನಲ್ಲಿ ‘ಉದಯ ಟಿವಿ’ (Udaya TV) ಒಂದು ಹೊಸ ಸೀರಿಯಲ್​ ಪ್ರಸಾರಕ್ಕೆ ಸಜ್ಜಾಗಿದೆ. ಈ ಧಾರಾವಾಹಿ ಹೆಸರು ‘ಆನಂದರಾಗ’. ಮಾರ್ಚ್‌ 13ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30ಕ್ಕೆ ಈ ಧಾರಾವಾಹಿ ಬಿತ್ತರ ಆಗಲಿದೆ. ‘ವಿಷನ್‌ ಟೈಮ್ಸ್‌’ ನಿರ್ಮಾಣ ಹಾಗೂ ಎಸ್. ಗೋವಿಂದ್‌ ಅವರು ನಿರ್ದೇಶನದಲ್ಲಿ ‘ಆನಂದರಾಗ’ ಸೀರಿಯಲ್​ (Ananda Raaga Serial) ಮೂಡಿಬರಲಿದೆ. ಈ ಹೊಸ ಧಾರಾವಾಹಿ ಬಗ್ಗೆ ಇಲ್ಲಿದೆ ವಿವರ..

ಕಪ್ಪು ಮೈಬಣ್ಣ ಇರುವ ಯುವತಿಯ ಕಥೆಗಳನ್ನು ಈಗಾಗಲೇ ಕೆಲವು ಸೀರಿಯಲ್​ಗಳಲ್ಲಿ ಪ್ರೇಕ್ಷಕರು ನೋಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಯುವಕನ ಪಾತ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ಈ ರೀತಿಯ ಕಥೆಯನ್ನು ‘ಆನಂದರಾಗ’ ಧಾರಾವಾಹಿ ಮೂಲಕ ಹೇಳಲಾಗುತ್ತಿದೆ. ಅದೇ ಈ ಸೀರಿಯಲ್​ನ ವಿಶೇಷ. ಕಪ್ಪು ಮೈಬಣ್ಣ ಇರುವ ಹುಡುಗನ ಮನಸ್ಥಿತಿ ಎಂಥದ್ದು? ಅವನಿಗೆ ಎದುರಾಗುವ ಅವಮಾನ ಹೇಗಿರುತ್ತದೆ? ಖಿನ್ನತೆಯಿಂದ ಆತ ಹೊರಬರುವುದು ಹೇಗೆ ಎಂಬಿತ್ಯಾದಿ ವಿಷಯಗಳು ಈ ಧಾರಾವಾಹಿಯಲ್ಲಿ ಇರಲಿವೆ.

ಇದನ್ನೂ ಓದಿ: ಕೆಲಸ ಇಲ್ಲದೆ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಖ್ಯಾತ ಸೀರಿಯಲ್​ ನಟಿಯರು

ಇದನ್ನೂ ಓದಿ
Image
‘ಮಾಯಾಮೃಗ’ ಧಾರಾವಾಹಿಗೆ ಸೀಕ್ವೆಲ್​; ಈ ಬಾರಿ ಟಿ.ಎನ್​. ಸೀತಾರಾಮ್ ಹೇಳ ಹೊರಟಿರುವ ವಿಚಾರಗಳೇನು?
Image
‘ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್​ ಪಾತ್ರಕ್ಕೆ ಆಫರ್ ಬಂದಿದ್ದು ನಿಜ, ಆದರೆ…’: ಅನೂಪ್ ಭಂಡಾರಿ ಸ್ಪಷ್ಟನೆ
Image
Anirudh Jatkar: ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಸಿಕ್ಕ ಸಂಬಳದ ಬಗ್ಗೆ ನೇರವಾಗಿ ಮಾತನಾಡಿದ ಅನಿರುದ್ಧ್​
Image
‘ನಾನು ಮತ್ತೆ ಆ ಧಾರಾವಾಹಿ ಮಾಡಲ್ಲ’; ತೆಲುಗು ಸೀರಿಯಲ್​ನಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡ ಚಂದನ್ ಕುಮಾರ್

ಹೇಗಿದೆ ‘ಆನಂದರಾಗ’ ಹೀರೋ ಪಾತ್ರ?

‘ಆನಂದರಾಗ’ ಧಾರಾವಾಹಿಯ ಕಥಾನಾಯಕನ ಪಾತ್ರದ ಹೆಸರು ಚೆಲುವರಾಜ್. ಇವನು ‘ರೆಬಲ್‌ ಸ್ಟಾರ್‌’ ಅಂಬರೀಷ್‌ ಅವರ ಅಪ್ಪಟ ಅಭಿಮಾನಿ. ಒಂದಲ್ಲ ಒಂದು ದಿನ ತಾನೂ ಅಂಬರೀಷ್‌ ರೀತಿ ಹೀರೋ ಆಗಬಲ್ಲೆ ಎಂದು ಆತ ಕನಸು ಕಂಡಿದ್ದಾನೆ. ಚೆಲುವನ ತಾಯಿ ಹೆಸರು ವಸುಂಧರ. ಮಗನಿಗೆ ವಿದ್ಯೆ ಕಲಿಸಲು ಸಾಧ್ಯವಾಗದೇ ಆಕೆ ಹೈರಾಣಾಗಿದ್ದಾಳೆ. ಸಮಾಜದಲ್ಲಿ ಮಗನಿಗೆ ಉತ್ತಮ ಸ್ಥಾನ ಕೊಡಿಸಬೇಕು ಎಂದು ಆಕೆ ಪಣ ತೊಟ್ಟಿದ್ದಾಳೆ.

ಇದನ್ನೂ ಓದಿ: ತಾಯಿಯಾದ ಬಳಿಕ ಸೀರಿಯಲ್​ ನಟಿ ಟಾಪ್​ ಲೆಸ್ ಪೋಸ್​; ಬೇಸರಗೊಂಡ ಫ್ಯಾನ್ಸ್​ ಹೇಳಿದ್ದೇನು?

ಚೆಲುವರಾಜನಿಗೆ ಜೋಡಿ ದುರ್ಗಾ:

ಕಥಾನಾಯಕಿ ಪಾತ್ರದ ಹೆಸರು ದುರ್ಗಾ. ಅಪ್ಪ-ಅಮ್ಮನ ಮುದ್ದಿನ ಮಗಳಾದ ಆಕೆಗೆ ಐ.ಪಿ.ಎಸ್‌. ಆಫೀಸರ್​ ಆಗಬೇಕು ಎಂಬ ಕನಸು. ಇಂಥ ಹುಡುಗಿಗೆ ಚೆಲುವರಾಜ್​ ಜೊತೆ ಅರಳುವ ವಿಭಿನ್ನವಾದ ಪ್ರೇಮಕಥೆಯೇ ‘ಆನಂದರಾಗ’ ಧಾರಾವಾಹಿಯ ಹೈಲೈಟ್​. ತನ್ನ ಮುಗುಳುನಗೆಯಿಂದಲೇ ಎಲ್ಲ ಸಮಸ್ಯೆ ಬಗೆಹರಿಸುವ ಚತುರೆಯಾದ ದುರ್ಗಾ ಮತ್ತು ಚೆಲುವರಾಜನ ಋಣಾನುಬಂಧದ ಕಥೆಯನ್ನು ಹೇಳಲಿದೆ ‘ಆನಂದರಾಗ’ ಸೀರಿಯಲ್​.

‘ಆನಂದರಾಗ’ ಧಾರಾವಾಹಿ ಪಾತ್ರವರ್ಗ:

ಡಿಫರೆಂಟ್​ ಲವ್​ ಸ್ಟೋರಿ ಹೊಂದಿರುವ ‘ಆನಂದರಾಗ’ ಧಾರಾವಾಹಿಯಲ್ಲಿ ದುರ್ಗಾ ಪಾತ್ರವನ್ನು ನಟಿ ದೀಪಾ ಹಿರೇಮಠ್‌ ಅವರು ನಿಭಾಯಿಸುತ್ತಿದ್ದಾರೆ. ಚೆಲುವರಾಜ್​ ಪಾತ್ರಕ್ಕೆ ರಂಗಭೂಮಿ ನಟ ಮಂಜು ಬಣ್ಣ ಹಚ್ಚುತ್ತಿದ್ದಾರೆ. ಕಥಾನಾಯಕಿಯ ತಂದೆಯಾಗಿ ಕೀರ್ತಿರಾಜ್‌, ತಾಯಿಯಾಗಿ ಉಷಾ ಭಂಡಾರಿ ನಟಿಸುತ್ತಿದ್ದಾರೆ. ಹೀರೋ ತಾಯಿ ಪಾತ್ರದಲ್ಲಿ ವೀಣಾ ಸುಂದರ್ ಅಭಿನಯಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ