AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮಗೆ ಮತ್ತೊಂದು ಅವಕಾಶ ನೀಡಲ್ಲ’; ವಿನಯ್​ಗೆ ಖಡಕ್​ ಆಗಿ ಹೇಳಿದ ಸುದೀಪ್

ಎರಡನೇ ಚಾನ್ಸ್ ಕೇಳಿದ ವಿನಯ್​ಗೆ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ವಿನಯ್ ಅವರು ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಅಲ್ಲಿ ಆದ ತಪ್ಪೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.

‘ನಿಮಗೆ ಮತ್ತೊಂದು ಅವಕಾಶ ನೀಡಲ್ಲ’; ವಿನಯ್​ಗೆ ಖಡಕ್​ ಆಗಿ ಹೇಳಿದ ಸುದೀಪ್
ವಿನಯ್-ಸುದೀಪ್
ರಾಜೇಶ್ ದುಗ್ಗುಮನೆ
|

Updated on:Jan 01, 2024 | 9:07 AM

Share

ವಿನಯ್ ಗೌಡ (Vinay Gowda) ಅವರು ವೀಕೆಂಡ್​ನಲ್ಲಿ ಸೈಲೆಂಟ್ ಆಗಿರುತ್ತಾರೆ. ‘ಸುದೀಪ್ ಎದುರು ವಾದ ಮಾಡೋಕೆ ನನಗೆ ಇಷ್ಟ ಇಲ್ಲ’ ಎಂದು ಅವರು ಈ ಮೊದಲು ಹೇಳಿದ್ದರು. ಈ ವಾರ ಅವರು ಸುದೀಪ್ ಅವರಿಂದ ಪಾಠ ಮಾಡಿಸಿಕೊಂಡಿದ್ದಾರೆ. ಎರಡನೇ ಚಾನ್ಸ್ ಕೇಳಿದ ವಿನಯ್​ಗೆ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ವಿನಯ್ ಅವರು ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಅಲ್ಲಿ ಆದ ತಪ್ಪೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ಜರ್ನಿಯನ್ನು ಗಮನದಲ್ಲಿ ಇಟ್ಟುಕೊಂಡು ಒಬ್ಬರಿಗೆ ಏಣಿ ಹಾಗೂ ಮತ್ತೊಬ್ಬರಿಗೆ ಹಾವಿನ ಸ್ಥಾನ ನೀಡಬೇಕು. ಏಣಿ ಎಂದರೆ ಮೇಲಕ್ಕೆ ಏರಲು ಸಹಾಯ ಮಾಡಿದವರು. ಹಾವು ಎಂದರೆ ಹಿನ್ನಡೆ ಉಂಟು ಮಾಡಿದವರು. ಈ ವೇಳೆ ವಿನಯ್ ಅವರು ನಮ್ರತಾ ಅವರನ್ನು ಏಣಿ ಆಗಿ ಆಯ್ಕೆ ಮಾಡಿದರು. ಆ ಬಳಿಕ ವಿನಯ್ ಅವರು ಹಾವಿಗೆ ಕಾರ್ತಿಕ್ ಹೆಸರನ್ನು ತೆಗೆದುಕೊಂಡರು. ಆದರೆ, ಪಾಸಿಟಿವ್ ವೇನಲ್ಲಿ ಎಂದು ವಿವರಣೆ ನೀಡಿದರು. ಇದು ಸುದೀಪ್​ಗೆ ಇಷ್ಟ ಆಗಲೇ ಇಲ್ಲ.

‘ಹಾವು ಎಂದಾಗ ನೆಗೆಟಿವ್ ವಿಚಾರವನ್ನೇ ತೆಗೆದುಕೊಳ್ಳಬೇಕು. ಆ ಜಾಗಕ್ಕೆ ಕಾರ್ತಿಕ್​ನ ತೆಗೆದುಕೊಳ್ಳಬೇಕು’ ಎಂದರು ಸುದೀಪ್. ಇದರಿಂದ ವಿನಯ್ ಗೊಂದಲಕ್ಕೆ ಒಳಗಾದರು. ಕಾರ್ತಿಕ್ ಅವರಲ್ಲಿ ನೆಗೆಟಿವ್ ವಿಚಾರ ಏನಿದೆ ಎಂದು ಹೇಳಲು ಪ್ರಯತ್ನಿಸಿದರು. ಆದರೆ, ಇದು ಸರಿ ಎನಿಸಲಿಲ್ಲ. ‘ಸರಿಯಾಗಿ ವಿವರಣೆ ನೀಡು ಗುರು’ ಎಂದು ಮೈಕಲ್ ಕೂಡ ವಿನಯ್​ಗೆ ಕಿವಿ ಮಾತು ಹೇಳಿದರು.

ಇದನ್ನೂ ಓದಿ: ಶೈನ್ ಶೆಟ್ಟಿಯಿಂದಾಗಿ ಬದಲಾದ್ರು ವಿನಯ್, ಸಂಗೀತಾನೂ ಜಾಗೃತೆ

ವಿನಯ್ ಅವರ ಬಳಿ ಸುದೀಪ್ ಪದೇ ಪದೇ ಕೇಳಿದರೂ ಸರಿಯಾದ ಉತ್ತರ ಬರಲೇ ಇಲ್ಲ. ಇದರಿಂದ ಸುದೀಪ್ ಬೇಸರಗೊಂಡರು. ಆ ಬಳಿಕ ಮರಳಿ ಬರುವಂತೆ ಹೇಳಿದರು. ಆ ಬಳಿಕ ಸೀಟ್​ಗೆ ಮರಳಿ ಬಂದು ಸ್ವಲ್ಪ ಹೊತ್ತು ಕುಳಿತರು. ನಂತರ ಮತ್ತೆ ವಿವರಣೆ ಕೊಡಲು ಅವಕಾಶ ಕೇಳಿದರು. ಆದರೆ, ಸುದೀಪ್ ಇದಕ್ಕೆ ಅವಕಾಶ ನೀಡಲೇ ಇಲ್ಲ. ‘ನಿಮಗೆ ಎರಡನೇ ಚಾನ್ಸ್ ನೀಡಲ್ಲ’ ಎಂದು ಸುದೀಪ್ ಹೇಳಿದರು. ಇದರಿಂದ ವಿನಯ್​ಗೆ ಮುಖಭಂಗ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:46 am, Mon, 1 January 24

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು