AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮಗೆ ಮತ್ತೊಂದು ಅವಕಾಶ ನೀಡಲ್ಲ’; ವಿನಯ್​ಗೆ ಖಡಕ್​ ಆಗಿ ಹೇಳಿದ ಸುದೀಪ್

ಎರಡನೇ ಚಾನ್ಸ್ ಕೇಳಿದ ವಿನಯ್​ಗೆ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ವಿನಯ್ ಅವರು ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಅಲ್ಲಿ ಆದ ತಪ್ಪೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.

‘ನಿಮಗೆ ಮತ್ತೊಂದು ಅವಕಾಶ ನೀಡಲ್ಲ’; ವಿನಯ್​ಗೆ ಖಡಕ್​ ಆಗಿ ಹೇಳಿದ ಸುದೀಪ್
ವಿನಯ್-ಸುದೀಪ್
ರಾಜೇಶ್ ದುಗ್ಗುಮನೆ
|

Updated on:Jan 01, 2024 | 9:07 AM

Share

ವಿನಯ್ ಗೌಡ (Vinay Gowda) ಅವರು ವೀಕೆಂಡ್​ನಲ್ಲಿ ಸೈಲೆಂಟ್ ಆಗಿರುತ್ತಾರೆ. ‘ಸುದೀಪ್ ಎದುರು ವಾದ ಮಾಡೋಕೆ ನನಗೆ ಇಷ್ಟ ಇಲ್ಲ’ ಎಂದು ಅವರು ಈ ಮೊದಲು ಹೇಳಿದ್ದರು. ಈ ವಾರ ಅವರು ಸುದೀಪ್ ಅವರಿಂದ ಪಾಠ ಮಾಡಿಸಿಕೊಂಡಿದ್ದಾರೆ. ಎರಡನೇ ಚಾನ್ಸ್ ಕೇಳಿದ ವಿನಯ್​ಗೆ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ವಿನಯ್ ಅವರು ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಅಲ್ಲಿ ಆದ ತಪ್ಪೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ಜರ್ನಿಯನ್ನು ಗಮನದಲ್ಲಿ ಇಟ್ಟುಕೊಂಡು ಒಬ್ಬರಿಗೆ ಏಣಿ ಹಾಗೂ ಮತ್ತೊಬ್ಬರಿಗೆ ಹಾವಿನ ಸ್ಥಾನ ನೀಡಬೇಕು. ಏಣಿ ಎಂದರೆ ಮೇಲಕ್ಕೆ ಏರಲು ಸಹಾಯ ಮಾಡಿದವರು. ಹಾವು ಎಂದರೆ ಹಿನ್ನಡೆ ಉಂಟು ಮಾಡಿದವರು. ಈ ವೇಳೆ ವಿನಯ್ ಅವರು ನಮ್ರತಾ ಅವರನ್ನು ಏಣಿ ಆಗಿ ಆಯ್ಕೆ ಮಾಡಿದರು. ಆ ಬಳಿಕ ವಿನಯ್ ಅವರು ಹಾವಿಗೆ ಕಾರ್ತಿಕ್ ಹೆಸರನ್ನು ತೆಗೆದುಕೊಂಡರು. ಆದರೆ, ಪಾಸಿಟಿವ್ ವೇನಲ್ಲಿ ಎಂದು ವಿವರಣೆ ನೀಡಿದರು. ಇದು ಸುದೀಪ್​ಗೆ ಇಷ್ಟ ಆಗಲೇ ಇಲ್ಲ.

‘ಹಾವು ಎಂದಾಗ ನೆಗೆಟಿವ್ ವಿಚಾರವನ್ನೇ ತೆಗೆದುಕೊಳ್ಳಬೇಕು. ಆ ಜಾಗಕ್ಕೆ ಕಾರ್ತಿಕ್​ನ ತೆಗೆದುಕೊಳ್ಳಬೇಕು’ ಎಂದರು ಸುದೀಪ್. ಇದರಿಂದ ವಿನಯ್ ಗೊಂದಲಕ್ಕೆ ಒಳಗಾದರು. ಕಾರ್ತಿಕ್ ಅವರಲ್ಲಿ ನೆಗೆಟಿವ್ ವಿಚಾರ ಏನಿದೆ ಎಂದು ಹೇಳಲು ಪ್ರಯತ್ನಿಸಿದರು. ಆದರೆ, ಇದು ಸರಿ ಎನಿಸಲಿಲ್ಲ. ‘ಸರಿಯಾಗಿ ವಿವರಣೆ ನೀಡು ಗುರು’ ಎಂದು ಮೈಕಲ್ ಕೂಡ ವಿನಯ್​ಗೆ ಕಿವಿ ಮಾತು ಹೇಳಿದರು.

ಇದನ್ನೂ ಓದಿ: ಶೈನ್ ಶೆಟ್ಟಿಯಿಂದಾಗಿ ಬದಲಾದ್ರು ವಿನಯ್, ಸಂಗೀತಾನೂ ಜಾಗೃತೆ

ವಿನಯ್ ಅವರ ಬಳಿ ಸುದೀಪ್ ಪದೇ ಪದೇ ಕೇಳಿದರೂ ಸರಿಯಾದ ಉತ್ತರ ಬರಲೇ ಇಲ್ಲ. ಇದರಿಂದ ಸುದೀಪ್ ಬೇಸರಗೊಂಡರು. ಆ ಬಳಿಕ ಮರಳಿ ಬರುವಂತೆ ಹೇಳಿದರು. ಆ ಬಳಿಕ ಸೀಟ್​ಗೆ ಮರಳಿ ಬಂದು ಸ್ವಲ್ಪ ಹೊತ್ತು ಕುಳಿತರು. ನಂತರ ಮತ್ತೆ ವಿವರಣೆ ಕೊಡಲು ಅವಕಾಶ ಕೇಳಿದರು. ಆದರೆ, ಸುದೀಪ್ ಇದಕ್ಕೆ ಅವಕಾಶ ನೀಡಲೇ ಇಲ್ಲ. ‘ನಿಮಗೆ ಎರಡನೇ ಚಾನ್ಸ್ ನೀಡಲ್ಲ’ ಎಂದು ಸುದೀಪ್ ಹೇಳಿದರು. ಇದರಿಂದ ವಿನಯ್​ಗೆ ಮುಖಭಂಗ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:46 am, Mon, 1 January 24

ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ