AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮಗೆ ಮತ್ತೊಂದು ಅವಕಾಶ ನೀಡಲ್ಲ’; ವಿನಯ್​ಗೆ ಖಡಕ್​ ಆಗಿ ಹೇಳಿದ ಸುದೀಪ್

ಎರಡನೇ ಚಾನ್ಸ್ ಕೇಳಿದ ವಿನಯ್​ಗೆ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ವಿನಯ್ ಅವರು ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಅಲ್ಲಿ ಆದ ತಪ್ಪೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.

‘ನಿಮಗೆ ಮತ್ತೊಂದು ಅವಕಾಶ ನೀಡಲ್ಲ’; ವಿನಯ್​ಗೆ ಖಡಕ್​ ಆಗಿ ಹೇಳಿದ ಸುದೀಪ್
ವಿನಯ್-ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on:Jan 01, 2024 | 9:07 AM

ವಿನಯ್ ಗೌಡ (Vinay Gowda) ಅವರು ವೀಕೆಂಡ್​ನಲ್ಲಿ ಸೈಲೆಂಟ್ ಆಗಿರುತ್ತಾರೆ. ‘ಸುದೀಪ್ ಎದುರು ವಾದ ಮಾಡೋಕೆ ನನಗೆ ಇಷ್ಟ ಇಲ್ಲ’ ಎಂದು ಅವರು ಈ ಮೊದಲು ಹೇಳಿದ್ದರು. ಈ ವಾರ ಅವರು ಸುದೀಪ್ ಅವರಿಂದ ಪಾಠ ಮಾಡಿಸಿಕೊಂಡಿದ್ದಾರೆ. ಎರಡನೇ ಚಾನ್ಸ್ ಕೇಳಿದ ವಿನಯ್​ಗೆ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ವಿನಯ್ ಅವರು ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಅಲ್ಲಿ ಆದ ತಪ್ಪೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ಜರ್ನಿಯನ್ನು ಗಮನದಲ್ಲಿ ಇಟ್ಟುಕೊಂಡು ಒಬ್ಬರಿಗೆ ಏಣಿ ಹಾಗೂ ಮತ್ತೊಬ್ಬರಿಗೆ ಹಾವಿನ ಸ್ಥಾನ ನೀಡಬೇಕು. ಏಣಿ ಎಂದರೆ ಮೇಲಕ್ಕೆ ಏರಲು ಸಹಾಯ ಮಾಡಿದವರು. ಹಾವು ಎಂದರೆ ಹಿನ್ನಡೆ ಉಂಟು ಮಾಡಿದವರು. ಈ ವೇಳೆ ವಿನಯ್ ಅವರು ನಮ್ರತಾ ಅವರನ್ನು ಏಣಿ ಆಗಿ ಆಯ್ಕೆ ಮಾಡಿದರು. ಆ ಬಳಿಕ ವಿನಯ್ ಅವರು ಹಾವಿಗೆ ಕಾರ್ತಿಕ್ ಹೆಸರನ್ನು ತೆಗೆದುಕೊಂಡರು. ಆದರೆ, ಪಾಸಿಟಿವ್ ವೇನಲ್ಲಿ ಎಂದು ವಿವರಣೆ ನೀಡಿದರು. ಇದು ಸುದೀಪ್​ಗೆ ಇಷ್ಟ ಆಗಲೇ ಇಲ್ಲ.

‘ಹಾವು ಎಂದಾಗ ನೆಗೆಟಿವ್ ವಿಚಾರವನ್ನೇ ತೆಗೆದುಕೊಳ್ಳಬೇಕು. ಆ ಜಾಗಕ್ಕೆ ಕಾರ್ತಿಕ್​ನ ತೆಗೆದುಕೊಳ್ಳಬೇಕು’ ಎಂದರು ಸುದೀಪ್. ಇದರಿಂದ ವಿನಯ್ ಗೊಂದಲಕ್ಕೆ ಒಳಗಾದರು. ಕಾರ್ತಿಕ್ ಅವರಲ್ಲಿ ನೆಗೆಟಿವ್ ವಿಚಾರ ಏನಿದೆ ಎಂದು ಹೇಳಲು ಪ್ರಯತ್ನಿಸಿದರು. ಆದರೆ, ಇದು ಸರಿ ಎನಿಸಲಿಲ್ಲ. ‘ಸರಿಯಾಗಿ ವಿವರಣೆ ನೀಡು ಗುರು’ ಎಂದು ಮೈಕಲ್ ಕೂಡ ವಿನಯ್​ಗೆ ಕಿವಿ ಮಾತು ಹೇಳಿದರು.

ಇದನ್ನೂ ಓದಿ: ಶೈನ್ ಶೆಟ್ಟಿಯಿಂದಾಗಿ ಬದಲಾದ್ರು ವಿನಯ್, ಸಂಗೀತಾನೂ ಜಾಗೃತೆ

ವಿನಯ್ ಅವರ ಬಳಿ ಸುದೀಪ್ ಪದೇ ಪದೇ ಕೇಳಿದರೂ ಸರಿಯಾದ ಉತ್ತರ ಬರಲೇ ಇಲ್ಲ. ಇದರಿಂದ ಸುದೀಪ್ ಬೇಸರಗೊಂಡರು. ಆ ಬಳಿಕ ಮರಳಿ ಬರುವಂತೆ ಹೇಳಿದರು. ಆ ಬಳಿಕ ಸೀಟ್​ಗೆ ಮರಳಿ ಬಂದು ಸ್ವಲ್ಪ ಹೊತ್ತು ಕುಳಿತರು. ನಂತರ ಮತ್ತೆ ವಿವರಣೆ ಕೊಡಲು ಅವಕಾಶ ಕೇಳಿದರು. ಆದರೆ, ಸುದೀಪ್ ಇದಕ್ಕೆ ಅವಕಾಶ ನೀಡಲೇ ಇಲ್ಲ. ‘ನಿಮಗೆ ಎರಡನೇ ಚಾನ್ಸ್ ನೀಡಲ್ಲ’ ಎಂದು ಸುದೀಪ್ ಹೇಳಿದರು. ಇದರಿಂದ ವಿನಯ್​ಗೆ ಮುಖಭಂಗ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:46 am, Mon, 1 January 24

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?