AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Trauma Day 2023: ವಿಶ್ವ ಆಘಾತ ದಿನದ ಇತಿಹಾಸ, ಮಹತ್ವ, ತಡೆಗಟ್ಟುವ ಕ್ರಮಗಳೇನು?

ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಅಪಘಾತಗಳು, ಸಾವು ಮತ್ತು ಅಂಗವೈಕಲ್ಯಕ್ಕೆ ಕಾರಣವಾಗುವ ಗಾಯಗಳ ಪ್ರಮಾಣವನ್ನು ತಡೆಗಟ್ಟುವ ದೃಷ್ಟಿಯಿಂದ ವಿಶ್ವ ಆಘಾತ ದಿನವನ್ನು ಆಚರಿಸಲಾಗುತ್ತದೆ. 2011ರಲ್ಲಿ ಭಾರತದ ನವದೆಹಲಿಯಲ್ಲಿ ಈ ದಿನವನ್ನು ಆರಂಭಿಸಲಾಯಿತು.

World Trauma Day 2023: ವಿಶ್ವ ಆಘಾತ ದಿನದ ಇತಿಹಾಸ, ಮಹತ್ವ, ತಡೆಗಟ್ಟುವ ಕ್ರಮಗಳೇನು?
ವಿಶ್ವ ಆಘಾತ ದಿನImage Credit source: iStock
ಸುಷ್ಮಾ ಚಕ್ರೆ
|

Updated on: Oct 17, 2023 | 1:10 PM

Share

ಕ್ರೀಡೆ ಮತ್ತು ಅಥ್ಲೆಟಿಸಮ್ ಕ್ಷೇತ್ರದಲ್ಲಿ ಗಾಯಗಳು ಆಗುವುದು ಸಾಮಾನ್ಯ. ಈ ರೀತಿ ಗಾಯಗಳಾದಾಗ ಕ್ರೀಡಾಪಟುಗಳು ತಮ್ಮ ವೃತ್ತಿಬದುಕಿನ ಸಂಕಷ್ಟದ ಸಮಯವನ್ನು ಎದುರಿಸಬೇಕಾಗುತ್ತದೆ. ಗಾಯ ಉಂಟಾದಾಗ ವಿಶ್ರಾಂತಿ ತೆಗೆದುಕೊಳ್ಳುವುದು ಮತ್ತು ಚೇತರಿಸಿಕೊಳ್ಳುವುದು ಬಹಳ ಮುಖ್ಯ. ದೇಹವನ್ನು ಗುಣಪಡಿಸಲು ಸಾಕಷ್ಟು ಸಮಯ ನೀಡುವುದು ಅಗತ್ಯ. ಇಂದು ವಿಶ್ವ ಆಘಾತ ದಿನ (World Trauma Day). ಪ್ರತಿ ವರ್ಷ ಅಕ್ಟೋಬರ್ 17ರಂದು ವಿಶ್ವ ಆಘಾತ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಅಪಘಾತಗಳು, ಸಾವು ಮತ್ತು ಅಂಗವೈಕಲ್ಯಕ್ಕೆ ಕಾರಣವಾಗುವ ಗಾಯಗಳ ಪ್ರಮಾಣವನ್ನು ತಡೆಗಟ್ಟುವ ದೃಷ್ಟಿಯಿಂದ ವಿಶ್ವ ಆಘಾತ ದಿನವನ್ನು ಆಚರಿಸಲಾಗುತ್ತದೆ. 2011ರಲ್ಲಿ ಭಾರತದ ನವದೆಹಲಿಯಲ್ಲಿ ಈ ದಿನವನ್ನು ಆರಂಭಿಸಲಾಯಿತು. ಪ್ರತಿ ದಿನ 400ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಎಂದು ಅಂದಾಜಿಸಲಾಗಿದೆ. ರಸ್ತೆ ಸಂಚಾರ ಅಪಘಾತ (RTA) ಪ್ರಪಂಚದಾದ್ಯಂತ ಉಂಟಾಗುತ್ತಿರುವ ಆಘಾತಕ್ಕೆ ಪ್ರಮುಖ ಕಾರಣವಾಗಿದೆ.

ವಿಶ್ವ ಆಘಾತ ದಿನದಂದು, ಹಿಂಸೆ ಮತ್ತು ಆಘಾತ ಅಥವಾ ಅಪಘಾತಗಳಿಂದ ಸಾವನ್ನಪ್ಪಿದ ಅಥವಾ ಗಾಯಗೊಂಡವರನ್ನು ಸ್ಮರಿಸಲಾಗುತ್ತದೆ. ಗಾಯಗಳು ಮತ್ತು ಸಾವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಈ ದಿನವನ್ನು ಆರಂಭಿಸಲಾಯಿತು.

ರಸ್ತೆ ಅಪಘಾತಗಳು ಪ್ರಪಂಚದ ಅತ್ಯಂತ ಸಾಮಾನ್ಯವಾದ ಆಘಾತಗಳಲ್ಲಿ ಒಂದಾಗಿದೆ. ಇದರ ಜೊತೆಗೆ, ಪ್ರಾಥಮಿಕ ಮಿಲಿಟರಿ ಕಾರ್ಯಾಚರಣೆಗಳು, ಲೈಂಗಿಕ ಆಕ್ರಮಣಗಳಿಂದ ಉಂಟಾಗುವ ಅನುಭವಗಳು ಕೂಡ ಸ್ಥಾನ ಪಡೆದಿವೆ. ಆಘಾತಕಾರಿ ಗಾಯದ ನಂತರ ನಮ್ಮ ದೇಹಕ್ಕೆ ಯಾವ ರೀತಿಯ ವ್ಯಾಯಾಮವನ್ನು ನೀಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ನೆನಪಿನ ಶಕ್ತಿ, ಮೆದುಳಿನ ಆರೋಗ್ಯಕ್ಕೆ ಮನೆಯಲ್ಲೇ ತಯಾರಿಸಿದ 5 ಜ್ಯೂಸ್​ಗಳು ಇಲ್ಲಿವೆ

ಅಮೆರಿಕನ್ ಸೈಕಾಲಾಜಿಕಲ್ ಅಸೋಸಿಯೇಷನ್ (APA) ಪ್ರಕಾರ, ಒಬ್ಬ ವ್ಯಕ್ತಿಯು ದೈಹಿಕವಾಗಿ ಅಥವಾ ಭಾವನಾತ್ಮಕವಾಗಿ ಬೆದರಿಕೆ ಅಥವಾ ಹಾನಿಕಾರಕವಾದ ಯಾವುದೇ ಘಟನೆಗೆ ಪ್ರತಿಕ್ರಿಯೆಯಾಗಿ ಆಘಾತವನ್ನು ಅನುಭವಿಸಬಹುದು. ಆಘಾತಕ್ಕೊಳಗಾದ ವ್ಯಕ್ತಿಯು ಆ ಘಟನೆಯ ನಂತರ ಮತ್ತು ದೀರ್ಘಾವಧಿಯಲ್ಲಿ ಭಾವನೆಗಳ ಏರಿಳಿತವನ್ನು ಅನುಭವಿಸಬಹುದು. ಆಘಾತವು ವ್ಯಕ್ತಿಯ ಯೋಗಕ್ಷೇಮದ ಮೇಲೆ ದೀರ್ಘಕಾಲದ ಪರಿಣಾಮಗಳನ್ನು ಬೀರಬಹುದು.

ವ್ಯಾಯಾಮದ ಸಮಯದಲ್ಲಿ ಯಾವುದೇ ನೋವಿಗೆ ಗಮನ ಕೊಡುವುದು ಮತ್ತು ಫಿಸಿಯೋಥೆರಪಿಸ್ಟ್ ಅಥವಾ ವೈದ್ಯರಿಗೆ ನಿಮ್ಮ ಸಮಸ್ಯೆಯನ್ನು ಕೂಡಲೇ ತಿಳಿಸುವುದು ಬಹಳ ಮುಖ್ಯ. ಗಾಯದ ನಂತರದ ಕ್ರೀಡೆಗಳಿಗೆ ಹಿಂತಿರುಗುವುದರಿಂದ ನಿಮ್ಮ ಶಕ್ತಿ ವಾಪಾಸ್ ಬರುವುದು ಮಾತ್ರವಲ್ಲದೆ ಚುರುಕುತನ ಮತ್ತು ಒಟ್ಟಾರೆ ಸ್ನಾಯುಗಳ ಕಂಡೀಷನಿಂಗ್ ಹೆಚ್ಚಾಗುತ್ತದೆ.

ಇದನ್ನೂ ಓದಿ: Mulberry Benefits: ಹಿಪ್ಪುನೇರಳೆ ಸೇವನೆಯಿಂದ ಏನು ಪ್ರಯೋಜನ? ಈ ಹಣ್ಣಿನ ಬಗ್ಗೆ ನಿಮಗೆ ಗೊತ್ತಾ?

ಆಘಾತ ಅಥವಾ ಅಪಘಾತಕ್ಕೊಳಗಾದವರು ಸಾಕಷ್ಟು ವಿಶ್ರಾಂತಿ, ಸರಿಯಾದ ನಿದ್ರೆ, ಸಾಕಷ್ಟು ನೀರು ಕುಡಿಯವುದು ಮತ್ತು ಸಮತೋಲಿತ ಆಹಾರದ ಮೇಲೆ ಗಮನ ಕೇಂದ್ರೀಕರಿಸುವುದು ಬಹಳ ಮುಖ್ಯ. ಇದು ದೇಹವನ್ನು ಚೇತರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ವ್ಯಾಯಾಮ ಮಾಡಲು ವೃತ್ತಿಪರರ ಮಾರ್ಗದರ್ಶನವನ್ನು ಪಡೆಯಿರಿ, ವ್ಯಾಯಾಮದ ತೀವ್ರತೆಯನ್ನು ಕ್ರಮೇಣ ಹೆಚ್ಚಿಸಿ, ನಿಮ್ಮ ದೇಹಕ್ಕೆ ಏನು ಬೇಕೆಂಬುದನ್ನು ಗಮನಿಸಿ, ನಂತರ ನಿಧಾನವಾಗಿ ಚೇತರಿಸಿಕೊಳ್ಳಿ.

ಆಘಾತದ ಲಕ್ಷಣಗಳು ಸೌಮ್ಯದಿಂದ ತೀವ್ರವಾಗಿರುತ್ತವೆ. ಆಘಾತಕಾರಿ ಘಟನೆಯು ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅನೇಕ ಅಂಶಗಳು ನಿರ್ಧರಿಸುತ್ತವೆ. ಕೋಪ, ಭಯ, ದುಃಖ, ಅವಮಾನ, ಗೊಂದಲ, ಆತಂಕ, ಖಿನ್ನತೆ, ಅಪರಾಧ, ಹತಾಶೆ, ಸಿಡುಕುತನ, ಏಕಾಗ್ರತೆಯ ಸಮಸ್ಯೆ ಇವು ಮುಖ್ಯವಾದ ಲಕ್ಷಣಗಳಾಗಿವೆ. ಇದಿಷ್ಟೇ ಅಲ್ಲದೆ, ತಲೆನೋವು, ಜೀರ್ಣಕಾರಿ ಸಮಸ್ಯೆ, ಆಯಾಸ, ಹೃದಯ ಬಡಿತ ಹೆಚ್ಚಾಗುವುದು, ಬೆವರುವುವಿಕೆಯಂತಹ ದೈಹಿಕ ಸಮಸ್ಯೆಗಳು ಕೂಡ ಉಂಟಾಗುತ್ತವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ