Daily Horoscope 19 October 2024: ಆಸ್ತಿ ವಿಚಾರದಲ್ಲಿ ಹಿನ್ನಡೆಯಾಗಲಿದೆ, ನ್ಯಾಯಾಲಯ ಮೊರೆ ಹೋಗುವಿರಿ

ಅಕ್ಟೋಬರ್ 19,​ 2024ರ​​ ನಿಮ್ಮ ಭವಿಷ್ಯ ಹೇಗಿದೆ?: ಅರ್ಥಿಕವಾಗಿ ಕಷ್ಟವಿದ್ದರೂ ವಿದ್ಯಾಭ್ಯಾಸಕ್ಕೆ ಒತ್ತು ಕೊಡುವಿರಿ. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ದಾನವಾಗಿ ಕೊಡುವಿರಿ. ನಿಮಗೆ ಸಿಕ್ಕ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವಿರಿ. ಇಂದಿನ (2024 ಅಕ್ಟೋಬರ್ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 19 October 2024: ಆಸ್ತಿ ವಿಚಾರದಲ್ಲಿ ಹಿನ್ನಡೆಯಾಗಲಿದೆ, ನ್ಯಾಯಾಲಯ ಮೊರೆ ಹೋಗುವಿರಿ
ಆಸ್ತಿ ವಿಚಾರದಲ್ಲಿ ಹಿನ್ನಡೆಯಾಗಲಿದೆ, ನ್ಯಾಯಾಲಯ ಮೊರೆ ಹೋಗುವಿರಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 19, 2024 | 12:02 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಭರಣೀ, ಯೋಗ: ಸಿದ್ಧಿ​, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 09 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:22 ರಿಂದ 10:50ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:45 ರಿಂದ 03:13ರವರೆಗೆ, ಗುಳಿಕ ಕಾಲ ಸಂಜೆ 06:26 ರಿಂದ 07:54 ರವರೆಗೆ.

ಮೇಷ ರಾಶಿ: ಹಂಚಿಕೊಂಡು ಬದುಕುವುದು ಗೊತ್ತಿರಲಿ. ನೀವು ಕೊಟ್ಟ ಮಾತನ್ನು ಇಂದು ಉಳಿಸಿಕೊಳ್ಳುವುದು ಕಷ್ಟವಾದೀತು. ಉದ್ಯೋಗವು ಮಂದಗತಿಯಲ್ಲಿ ಸಾಗಲಿದೆ. ಮಾನಸಿಕ ಜಾಡ್ಯವು ನಿಮ್ಮ ಎಲ್ಲ ಕೆಲಸವೂ ಹಿಂದುಳಿಯುವುದು. ಹಿರಿಯರಿಗೆ ಅಗೌರವವನ್ನು ಕೊಡುವುದು ಬೇಡ. ಪ್ರಯಾಣದಿಂದ ನಿಮಗೆ ಆಯಾಸವಾಗಬಹುದು. ಅರ್ಥಿಕವಾಗಿ ಕಷ್ಟವಿದ್ದರೂ ವಿದ್ಯಾಭ್ಯಾಸಕ್ಕೆ ಒತ್ತು ಕೊಡುವಿರಿ. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ದಾನವಾಗಿ ಕೊಡುವಿರಿ. ನಿಮಗೆ ಸಿಕ್ಕ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವಿರಿ. ಆಗದಿರುವ ಕಾರ್ಯವನ್ನು ಒಪ್ಪಿಕೊಂಡು ಸಂಕಟಪಡುವಿರಿ. ಅನಧಿಕೃತ ವ್ಯವಹಾರದಿಂದ ನಿಮಗೆ ತೊಂದರೆಯಾಗಲಿದೆ. ನಿಮ್ಮ ಮಿತ್ರರನ್ನು ಭೇಟಿಯಾಗಲಿದ್ದೀರಿ. ವಿವಾಹದ ಮಾತುಕತೆ ನಡೆಯಬಹುದು. ನಿಮಗಾದ ಅಪಮಾನಕ್ಕೆ ಪ್ರತಿಕಾರ ಬೇಡ. ನಿಮ್ಮ ದೌರ್ಬಲ್ಯವನ್ನು ನೀವು ಸಹಾಕರಾತ್ಮಕವಾಗಿ ಪಡೆದುಕೊಂಡು ಮುನ್ನಡೆಯಬಹುದು. ಎಲ್ಲರ ಬಗ್ಗೆಯೂ ಗೌರವ ಇರಲಿ.‌

ವೃಷಭ ರಾಶಿ: ಮಾತಿಗೆ ಮಾತು ಬೆಳೆಯಬಹುದು. ಅದನ್ನು ನಿಭಾಯಿಸುವ ಕಲೆ ಗೊತ್ತಿರಲಿ. ನಿಮ್ಮ ಭೂಮಿಯ ಮಾರಾಟಕ್ಕೆ ಯಾರಾದರೂ ಬರಬಹುದು. ನಿಮ್ಮ ಬಗ್ಗೆ ಕುಟುಂಬಕ್ಕೆ ಕನಿಕರ ಬರಬಹುದು. ಉದ್ಯೋಗಕ್ಕೆ ಬಂಧುಗಳಿಂದ ಸಹಾಯ ದೊರೆಯುವುದು. ವೃತ್ತಿಯಲ್ಲಿ ಯಶಸ್ಸು ಸಿಗಲಿದೆ. ಕೆಲಸಗಳಿಗೆ ನಿಮ್ಮ ಮೇಲೆ‌ ಒತ್ತಡ ಬರಬಹುದು. ಸ್ನೇಹಿತರ ಮಧ್ಯದಲ್ಲಿ ಅನ್ಯರ ಪ್ರವೇಶವು ಆಗಬಹುದು. ನಿಮ್ಮ ವೈಫಲ್ಯವನ್ನು ನೀವು ಸಕಾರಾತ್ಮಕವಾಗಿಯೇ ತೆಗೆದುಕೊಳ್ಳುವಿರಿ. ನಿರುದ್ಯೋಗದಿಂದ ನಿಮಗೆ ಬಿಡುಗಡೆ ಸಿಗುವುದು. ಹೆಚ್ಚಿನ ವೆಚ್ಚಕ್ಕೆ ಕಡಿವಾಣ ಹಾಕುವ ನಿರ್ಧಾರವನ್ನು ಮಾಡುವಿರಿ. ಉದರಕ್ಕೆ‌ ಸಂಬಂಧಿಸಿದ ತೊಂದರೆ ಕಾಣಿಸಿಕೊಳ್ಳಬಹುದು. ಮನೆಯಲ್ಲಿಯೇ ಸೂಕ್ತ ಔಷಧವನ್ನು ಮಾಡಿಕೊಳ್ಳಿ. ಅಶುಭವಾರ್ತೆಗೆ ನೀವು ಕಿವಿಯಾಗಬೇಕಾದೀತು. ನೀವು ಯಾರಿಗೂ ಭಾರವಾಗದಂತೆ ಇರಿ. ನಿಮ್ಮ ಬಗ್ಗೆ ಹೇಳಿಕೊಳ್ಳುವುದು ಅಹಂಕಾರವಾದೀತು.

ಮಿಥುನ ರಾಶಿ: ವಿದೇಶದ ವ್ಯಾಪಾರದಲ್ಲಿ ಸ್ಥಿರತೆ ಸಾಧಿಸುವುದು ಕಷ್ಟವಾದೀತು. ಇಂದು ಸಹೋದರನ ನಡತೆ ನಿಮಗೆ ಸಂಶಯ ತರಿಸಬಹುದು. ನಿಮ್ಮ ಕಾರ್ಯಗಳಿಗೆ ಕೂಡಲೇ ಫಲವನ್ನು ನಿರೀಕ್ಷಿಸುವ ಅಗತ್ಯವಿಲ್ಲ. ನಿಮ್ಮ ಕಾರ್ಯದಲ್ಲಿ ನಿಷ್ಠೆಯಿಂದ ಇರಲಿ. ಇನ್ನೊಬ್ಬರಿಗೆ ಸಹಾಯವನ್ನು ಮಾಡುವ ಮನಸ್ಸಾಗುವುದು. ಮಕ್ಕಳಿಂದ ಶುಭಸಮಾಚಾರವು ಬರಲಿದೆ. ಸ್ವಂತ ಲಾಭವನ್ನು ಮಾಡುವ ಹಪಹಪಿಕೆ ಇರುವುದು. ತಪ್ಪಿಲ್ಲದೇ ಇದ್ದರೂ ತಲೆ ತಗ್ಗಿಸಬೇಕಾದ ಸ್ಥಿತಿಯು ಬರಬಹುದು. ಸಾಹಸ ಕಾರ್ಯಗಳಿಗೆ ಹೋಗುವುದು ಬೇಡ. ಇಟ್ಟ ಹೆಜ್ಜೆ ಸರಿಯಾಗಿದೆಯೇ ನೋಡಿಕೊಳ್ಳಿ. ಸಿಟ್ಟಾಗಲು ಇಂದು ನಿಮಗೆ ಬಹಳ ಅವಕಾಶಗಳು ಸಿಗಲಿದೆ. ನಿಮ್ಮ ವರ್ತನೆಯ ಮೇಲೆ ಮುಂದಿನದ್ದು ನಿರ್ಣಯವಾಗುವುದು. ಉದ್ಯಮವನ್ನು ಬಹಳ ಯೋಜನೆಯಿಂದ ನಡೆಸಬೇಕಾಗುವುದು. ಒತ್ತಡದಿಂದ ಮುಕ್ತರಾಗ ಸಂದರ್ಭವು ಬರಬಹುದು. ಇಂದಿನ ಒತ್ತಡವನ್ನು ಸಹಿಸಿಕೊಂಡು ಇರುವುದು ಕಷ್ಟವಾದೀತು. ಇರುವುದನ್ನು ಇದ್ದಂತೆ ಹೇಳುವುದು ಇನ್ನೊಬರಿಗೆ ಆಗಿಬಾರದು. ಅಧಿಕಾರವು ನಿಮ್ಮ ಕೈ ತಪ್ಪಬಹುದು.

ಕರ್ಕಾಟಕ ರಾಶಿ: ಯಾರದೋ ಯೋಜನೆಯನ್ನು ನೀವು ಬಳಸಿಕೊಳ್ಳಬಹುದು. ನಿಮ್ಮ ಪ್ರಭಾವದಿಂದಾಗಿ ಇನ್ನೊಬ್ಬರಿಗೆ ಸಹಾಯ ಸಿಗಲಿದೆ. ಯಾರ ಜೊತೆ ಹೇಗೆ ವ್ಯವಹರಿಸಬೇಕು ಎಂಬ ಔಚಿತ್ಯದ ಕೊರತೆಯು ಕಾಣಿಸುವುದು. ವ್ಯಾಪಾರದಲ್ಲಿ ಇದು ಬಹಳ ಮುಖ್ಯವಾಗಿ ಬೇಕಾಗಬಹುದು. ಸ್ತ್ರೀಯರ ಮಾತಿಗೆ ನಿಮ್ಮ ಬೆಂಬಲವು ಇರಲಿದೆ. ನಿಮ್ಮ ಮಾತು ವಿಶ್ವಾರ್ಹವಾಗಿರಲಿ. ಆಕಸ್ಮಿಕ ಧನಲಾಭವು ನಿಮಗೆ ಗೊಂದಲವನ್ನೂ ಸಂತೋಷವನ್ನೂ ತರುವುದು. ಇನ್ನೊಬ್ಬರ ಸುಖವನ್ನು ಕಸಿದುಕೊಳ್ಳುವ ಪ್ರಯತ್ನ ಒಳ್ಳೆಯದಲ್ಲ. ಸಂಗಾತಿಯ ಜೊತೆ ಅಕಾರಣವಾಗಿ ಕಲಹವಾಗಬಹುದ. ಮನೆಯಿಂದ ದೂರದಲ್ಲಿ ವಾಸ ಮಾಡುವ ಸ್ಥಿತಿಯು ಬರಬಹುದು. ಆಪ್ತರನ್ನು ದೂರ ಮಾಡಿಕೊಳ್ಳುವುದು ನಿಮಗೆ ಕಷ್ಟವಾದೀತು. ನಿಮ್ಮ ಯೋಜನೆಯನ್ನು ನೀವಂದುಕೊಂಡಂತೆ ನಡೆಸಲಾಗದು. ಅಸಭ್ಯ ಮಾತಿನಿಂದ ನಿಮ್ಮ ಕೆಲಸವು ಹಾಳಾಗುವುದು. ಕಾರ್ಯಕ್ಷೇತ್ರದಲ್ಲಿ ಹೆಚ್ಚು ಸಮಯ ಕೆಲಸವನ್ನು ಮಾಡಬೇಕಾಗುವುದು.

ಸಿಂಹ ರಾಶಿ: ಅನಪೇಕ್ಷಿತ ಮಾತನ್ನು ಬಿಡುವುದು ಒಳ್ಳೆಯದು. ಅಧಿಕಾರದ ಹಿಡಿತ ತಪ್ಪುವ ಸಾಧ್ಯತೆ ಇದೆ. ನಿಮ್ಮ ಇಷ್ಟದ‌ ಕಾರ್ಯವನ್ನು ಮಾಡಿ ಸಂತೋಷಗೊಳ್ಳುವಿರಿ. ಸಂಗಾತಿಯ ನಡುವೆ ಅತಿಯಾದ ಕಲಹವು ಆಗಬಹುದು. ಆಸ್ತಿಯ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ನ್ಯಾಯಾಲಯದಿಂದ ದಂಡನೆ ಸಿಗುವ ಸಾಧ್ಯತೆ ಇದೆ. ಯಾರದೋ ಮನಸ್ಸಿಗೂ ನೋವಾಗುವಂತೆ ಮಾತನಾಡುವಿರಿ‌. ನಿಮ್ಮ ಆರೋಗ್ಯದ ರಕ್ಷಣೆಯ ಬಗ್ಗೆ ನಿಮಗೇ ನಂಬಿಕೆ ಸಾಲದು. ನಿರ್ಲಕ್ಷ್ಯದಿಂದ ನೀವು ಹಣವನ್ನು ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳೂ ಹಿನ್ನಡೆಯನ್ನು ಸಾಧಿಸುವರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕೊರತೆಯು ಕಾಣಿಸುವುದು. ಮಕ್ಕಳು ನಿಮ್ಮನ್ನು ಕಂಡು ಹಾಸ್ಯ ಮಾಡಿಯಾರು.‌ ಹೆದರಿದಷ್ಟೂ ನೀವು ಅಶಕ್ತರಾಗುವಿರಿ. ಗೆಲುವಿಗಾಗಿ ಅಧಿಕ ಶ್ರಮದ ಅವಶ್ಯಕತೆ ಇರಲಿದೆ. ಯಾರ ಜೊತೆಯೂ ಅಸಂಬದ್ಧ ಚರ್ಚೆಗೆ ಹೋಗುವುದು ಬೇಡ.

ಕನ್ಯಾ ರಾಶಿ: ಅಧಿಕಸರವಿಲ್ಲದೇ ಉಭಯಸಂಕಟದ ಸ್ಥಿತಿ ಬರಬಹುದು. ನಿಮಗೆ ಇಂದು ಏನಾದರೂ ಹೊಸತನ್ನು ಮಾಡಬೇಕು ಎಂದು ಅನ್ನಿಸುವುದು. ವ್ಯಾಮೋಹದಿಂದ ಕೆಲವನ್ನು ನೀವು ಬಿಡುವುದು ಕಷ್ಟವಾದೀತು. ನಿಮ್ಮ ವ್ಯವಹಾರದ ಬಗ್ಗೆ ಕಣ್ಣಿಟ್ಟಿರುತ್ತಾರೆ. ನಿಮ್ಮ ಆಪ್ತರೆನಿಸಕೊಂಡವರ ಜೊತೆ ಬೇಕಾದುದಷ್ಟನ್ನೇ ಮಾತನಾಡಿ. ನಿಮ್ಮನ್ನು ಬಳಸಿಕೊಳ್ಳುವವರ ಬಗೆಗೆ ಎಚ್ಚರಿಕೆ ಅಗತ್ಯ. ಏಕಾಗ್ರತೆಯಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ತಂದೆಯಿಂದ ನಿಮಗೆ ಶುಭವಾರ್ತೆ ಸಿಗಬಹುದು. ನಿಮ್ಮ ಕೈಲಾಗುವ ಕೆಲಸವನ್ನಷ್ಟೇ ಮಾಡಿ. ನಿಮ್ಮನ್ನು ಮೀರಿದ ಕೆಲಸವನ್ನು ಮಾಡುವುದು ಬೇಡ. ವ್ಯಾಪರ ಸುಗಮವಾಗಿ ಸಾಗುವುದು. ಮನೆಯವರಿಂದ ದೂರವಿದ್ದೇನೆಂಬ ಭಾವವು ಕಾಡಬಹುದು. ದೂರ ವಾಹನದಲ್ಲಿ ಸಂಚಾರ ಮಾಡುವುದು ಹಿತವಾಗದು. ನಿಮ್ಮ ಬಳಿ ಬಂದವರಿಗೆ ಸಾಂತ್ವನದ ಸುಖವು ಬೇಕಾಗಿರಬಹುದು. ಒಳ್ಳೆಯ ಮಾತುಗಳು ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡುವುದು. ಹಳೆಯ ಗೆಳೆತನವು ಪುನಃ ಸೇರುವುದು.

ತುಲಾ ರಾಶಿ: ಇಂದು ನಿಮ್ಮ ಎಂತಹ ಎಚ್ಚರಿಕೆಯೂ ಹಾದಿ ತಪ್ಪಿಸೀತು. ಬೇಗನೆ ಯಶಸ್ಸು ಸಿಗುವುದೆಂದು ದಾರಿ ಬದಲಿಸಬಾರದು. ಸ್ಥಿರಾಸ್ತಿಯ ವಿಚಾರದಲ್ಲಿ ನಿಮಗೆ ಲಾಭವಾಗುವುದು. ಯಾವುದೇ ಸಂದರ್ಭವು ಬಂದರೂ ಅದನ್ನು ಧೈರ್ಯದಿಂದ ಎದುರಿಸುವಿರಿ. ನಿಮಗೆ ಅಭದ್ರತೆಯು ಕಾಡಬಹುದು. ಸ್ನೇಹಿತರ ಸಹವಾಸದಿಂದ ನಿಮಗೆ ಅಪವಾದಗಳು ಬರಬಹುದು. ಮಕ್ಕಳಿಂದ ಸಂತೋಷವು ಸಿಗಲಿದೆ. ನೀವೇ ಹೆಣೆದ ಬೇಲಿಯಲ್ಲಿ ಸಿಕ್ಕಿಬೀಳುವಿರಿ. ನಿಮ್ಮ ಸಮಯವು ಬೇರೆಯವರ ಕಾರಣಕ್ಕೆ ದುರಪಯೋಗವಾಗಬಹುದು. ತೊಂದರೆಯಾಗುತ್ತದೆ ಎಂದು ಏನನ್ನೂ ಮಾಡದೇ ಇರುವುದು ಬೇಡ. ಹೊಸ ವಸ್ತುವನ್ನು ಖರೀದಿಸುವಾಗ ಪರೀಕ್ಷಿಸಿ. ನಿಮ್ಮ ನಿಲುವು ಸ್ಪಷ್ಟವಾಗಿರಿ. ಅನಗತ್ಯ ಖರ್ಚಿಗೆ ಅವಕಾಶವನ್ನು ಕೊಟ್ಟು ಸಂಕಟಪಡುವಿರಿ. ನಿಮಗಿರುವ ಹೊಣೆಗಾರಿಕೆ ತಪ್ಪಬಹುದು. ನಿಮ್ಮ ಉತ್ಸಾಹವು ಯಾರನ್ನೂ ಏನೂ ಮಾಡೀತು. ಪ್ರಯಾಣದಲ್ಲಿ ಜಾಗರೂಕತೆ ಅವಶ್ಯಕ. ನಿಮ್ಮ ಶ್ರಮದ ಬಗ್ಗೆ ಕಹಿಯಾದ ಮಾತುಗಳನ್ನು ನೀವು ಕೇಳಿಬೇಕಾಗಬಹುದು.

ವೃಶ್ಚಿಕ ರಾಶಿ: ಇನ್ನೊಬ್ಬರನ್ನು ಗೆಲ್ಲುವುದಕ್ಕಿಂತ ಖುಷಿಗಾಗಿ ಆಟವಾಡಿ. ಇಂದು ವೃತ್ತಿಯಲ್ಲಿ ಸಮಯ ಬದಲಾವಣೆ ಆಗುವ ಸಾಧ್ಯತೆ ಇದೆ‌. ಆಲಸ್ಯದಿಂದಾಗಿ ನಿಮಗೆ ಸಿಗುವ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಅಲಂಕಾರಿಕ ವಸ್ತುಗಳನ್ನು ಹೆಚ್ಚು ಬಳಕೆ ಮಾಡುವಿರಿ. ನಿಮ್ಮ ಮಾತುಗಳು ಅಸ್ಪಷ್ಟವಾಗಿರುವುದು. ನಿಮ್ಮ ಅಸೂಯೆಯೇ ನಿಮಗೆ ಮಾರಕವಾಗುವುದು. ಹಳೆಯ ಸ್ನೇಹಿತರ ಬಗ್ಗೆ ನಿಮಗೆ ಅಸಮಾಧಾನವಿರುವುದು. ಪುಣ್ಯಕ್ಷೇತ್ರಕ್ಕೆ ಕುಟುಂಬದ ಜೊತೆ ಹೋಗುವಿರಿ. ಸಾಹಿತ್ಯಾಸಕ್ತರಿಗೆ ಪ್ರಶಂಸೆಯು ಸಿಗುವುದು. ಎಲ್ಲ ಸಮಯವೂ ಒಂದೇ ರೀತಿಯಲ್ಲಿ ಇರಲಾರದು. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯು ಕಷ್ಟವಾಗುವುದು. ಗೆಳೆತನಕ್ಕೆ ಹೊಸ ವ್ಯಕ್ತಿಗಳು ಸಿಗುವರು.‌ ಅವರವರ ಸಾಮರ್ಥ್ಯವನ್ನು ನೀವು ತಿಳಿದಿಲ್ಲ. ಕೆಲವನ್ನು ನೀವು ಸಣ್ಣವರಿಂದ ಕಲಿಯಬೇಕಾಗುವುದು. ಬಹಳ ದಿನಗಳಿಂದ ಕಾಣಿಸಿಕೊಳ್ಳದ ನೋವು ಕಾಣಿಸಿಕೊಳ್ಳಬಹುದು. ಸಹೋದ್ಯೋಗಿಗಳ ಜೊತೆ ಆಪ್ತವಾಗಿ ಮಾತನಾಡುವಿರಿ.

ಧನು ರಾಶಿ: ಎರಡು ದೋಣಿಯಲ್ಲಿ ಕಾಲು ಹಾಕಿ ಸಾಗಲಾಗದು. ಖರ್ಚನ್ನು ‌ನಿಭಾಯಿಸುವ ಕೌಶಲವನ್ನು ಅನುಭವಿಗಳಿಂದ ಪಡೆಯಬೇಕು. ಇಂದು ದುಸ್ಸಾಧ್ಯವಾದ ಕಾರ್ಯವನ್ನೇ ಮಾಡಲು ಮುಂದಾಗುವಿರಿ. ನಿಮ್ಮ ಹಳೆಯ ವಸ್ತುಗಳನ್ನು ಆರ್ಥಿಕ ಸಮಸ್ಯೆಯಿಂದಾಗಿ ಮಾರಾಟ ಮಾಡುವಿರಿ. ಸ್ಥಿರಾಸ್ತಿಯನ್ನೂ ಕಳೆದುಕೊಳ್ಳುವ ಸ್ಥಿತಿಯು ಬರಬಹುದು. ನಿಮ್ಮದೆನ್ನುವ ಪ್ರತಿಷ್ಠೆಯು ಮುರಿದುಹೋದೀತು. ಬೇಕು ಎನಿಸಿದವರಿಗೆ ಸಹಾಯವನ್ನು ಮಾಡುವಿರಿ. ನೀವು ನಂಬಿಕೆಯನ್ನು ಒಂದು ಮಾತಿನಿಂದ ಕಳೆದುಕೊಳ್ಳುವಿರಿ. ಆಕಸ್ಮಿಕವಾಗಿ ಅಶುಭವಾರ್ತೆಯು ಬರಲಿದೆ. ಕಾರ್ಯದ ಒತ್ತಡವನ್ನು ನೀವು ಕಡಿಮೆ ಮಾಡಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸ ಬಗ್ಗೆ ಚಿಂತೆ ಇರಲಿದೆ. ಹೂಡಿಕೆಯನ್ನು ತಾಳ್ಮೆಯಿಂದ ಮಾಡಿ. ಮಕ್ಕಳ ಅತಿಯಾದ ಮಾತು ನಿಮಗೆ ಮುಜುಗರ ತಂದೀತು. ಸ್ಪರ್ಧಾತ್ಮಕ ಚಟುವಟಿಕೆಗಳಿಗೆ ಪೋಷಕರ ಸಹಕಾರ ಸಿಗಲಿದೆ.

ಮಕರ ರಾಶಿ: ಜಾಣ ಕಿವುಡುತನವನ್ನು ತೋರಿಸುವಿರಿ.‌ ಇಂದು ನಿಮಗೆ ನ್ಯಾಯಾಲಯದ ವಿಚಾರದಲ್ಲಿ ಬೇಸರವೆನಿಸಬಹುದು. ಹಿಂದೆ ಮಾಡಿದ ಹೂಡಿಕೆಯಿಂದ ಇಂದು ಪ್ರಯೋಜನವಾಗುವುದು. ಸ್ವಂತ ವ್ಯವಹಾರವು ಲಾಭದಾಯಕವಾಗುವುದು. ಮನೆಯನ್ನು ಬದಲಾಯಿಸಬೇಕಾಗಬಹುದು. ಅನ್ಯಾಯದ ವಿರುದ್ಧ ನಿಲ್ಲುವುದು ಕಷ್ಟಕರವೆನಿಸಬಹುದು. ಯಂತ್ರೋಪಕರಣಗಳ ತಯಾರಿಯಲ್ಲಿ ಹಿನ್ನಡೆ ಸಾಧ್ಯತೆವಿದೆ. ಕಛೇರಿಯ ಒತ್ತಡದಿಂದ ಕುಟುಂಬದ ಜೊತೆ ಕಳೆಯುವುದು ಆಗದು. ಯಾರದೋ ವಿಚಾರಕ್ಕೆ ನಿಮ್ಮನ್ನು ತೋರಿಸುವರು. ನೀವು ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಪಡುವಿರಿ. ಕೆಲವು ಉದ್ವೇಗದ ಮಾತುಗಳನ್ನು ಗೊತ್ತಿಲ್ಲದಂತೆ ಆಡುವಿರಿ.‌ ಸಂಬಂಧಗಳನ್ನು ನೀವು ಚೆನ್ನಾಗಿ ಇಟ್ಟುಕೊಳ್ಳುವಿರಿ. ನಿದ್ರೆಯಿಂದ ಸುಖವು ಸಿಗಲಿದೆ. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ.

ಕುಂಭ ರಾಶಿ: ಸ್ಥಿರಾಸ್ತಿಯಿಂದ ಕೆಲವು ಲಾಭಗಳೂ ಆಗಲಿವೆ. ನಿಮ್ಮ ಗುರಿಯನ್ನು ಇಂದು ಯಾರಾದರೂ ಬದಲಿಸಬಹುದು. ವೃತ್ತಿಯ ಸ್ಥಳದಲ್ಲಿ ನಿಮಗೆ ಕಿರಿಕಿರಿ ಆಗಬಹುದು. ಲೆಕ್ಕ ಶೋಧಕರು ಹೆಚ್ಚಿನ ಒತ್ತಡದಲ್ಲಿ ಸಿಲುಕುವರು. ದೇವರ ಮೇಲೆ ಪೂರ್ಣ ಭಾರ ಹಾಕಿ ಕೈಕಟ್ಟಿ ಕೂರಬಾರದು. ಅಪರಿಚಿತರ ಜೊತೆ ಮಾತನ್ನು ಕಡಿಮೆ‌ ಮಾಡಿ. ನಿಮ್ಮ ವಸ್ತುವೇ ಆದರೂ ಅದನ್ನು ನಿಯಮಿತವಾಗಿ ಬಳಸಿಕೊಳ್ಳಬೇಕು. ಸಂಗಾತಿಯ ಮಾತು ನಿಮಗೆ ಇಷ್ಟವಾಗದೇ ಹೋಗದಬಹುದು. ಪ್ರೇಮದಿಂದ ಹೊರಬರುವುದು ನಿಮಗೆ ಕಷ್ಟ ಎನಿಸಬಹುದು. ರಾಜಕಾರಣಿಗಳು ಹಿನ್ನಡೆಯನ್ನು ಪಡೆಯುವರು. ನಿಮ್ಮ‌ ಮಾತಿಗೆ ವಿರೋಧವು ಬರುವುದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಇಂದು ಸಮಯವನ್ನು ಸಂತೋಷದಿಂದ ಕಳೆಯುವಿರಿ. ಧಾರ್ಮಿಕ ಮುಖಂಡರು ತಮ್ಮ ನಿಲುವನ್ನು ಗಟ್ಟಿಮಾಡಿಕೊಳ್ಳಿ.

ಮೀನ ರಾಶಿ: ಕೆಡುಕಿನ ಆಲೋಚನೆಯಿಂದಲೇ ನೀವು ದೂರವಾಗುವುದು ಉತ್ತಮ. ನಿಮಗೆ ಸಿಗುವ ಕೆಲವು ಜವಾಬ್ದಾರಿಗಳಲ್ಲಿ ಹಿನ್ನಡೆಯಾಗಲಿದೆ. ನಿಮ್ಮ ಮಕ್ಕಳ‌ ಬಗ್ಗೆ ನಿರ್ಲಕ್ಷ್ಯ ಮಾಡುವುದು ಬೇಡ. ಸಂಗಾತಿಯನ್ನು ಹೆಚ್ಚು ಇಷ್ಟುಪಡುವಿರಿ. ಏನಾದರೂ ಉಡುಗೊರೆಯನ್ನು ಕೊಡುವಿರಿ. ಸ್ವಯಂ ಆತ್ಮಸ್ಥೈರ್ಯವನ್ನು ತುಂಬಿಕೊಳ್ಳುವ ಪ್ರಯತ್ನವನ್ನು ಮಾಡಲೇಬೇಕು. ಧಾರ್ಮಿಕ ಆಚರಣೆಗಳಲ್ಲಿ ಶ್ರದ್ಧೆ ಬರುವುದು. ಮಿತ್ರರ ಸಹಾಯದಿಂದ ವಾಹನವನ್ನು ಖರೀದಿಸುವಿರಿ. ವಿದೇಶೀಯ ವ್ಯಾಪಾರದಿಂದ ಲಾಭವಾಗುವುದು.‌ ನಿಮ್ಮ ವಿರುದ್ಧ ಯಾರಾದರೂ ಮಾತು ಕೇಳಿಬರಬಹುದು. ಹಿತಶತ್ರುಗಳಿರುವ ಕಾರಣ ವ್ಯವಹಾರದ ಬಗ್ಗೆ ಗಮನವು ಅವಶ್ಯಕ. ಅಪರಿಚಿತರ ಕರೆಯನ್ನು ನಿರ್ಲಕ್ಷಿಸಿ. ದೂರ ಪ್ರಯಾಣವನ್ನು ಮಾಡುವಿರಿ‌. ಕಛೇರಿಯಲ್ಲಿ ಅನಿರೀಕ್ಷಿತವಾಗಿ ಒತ್ತಡಕ್ಕೆ ಸಿಲುಕುವಿರಿ. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. ಶತ್ರುಗಳು ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ.

ಲೋಹಿತ ಹೆಬ್ಬಾರ್ – 8762924271 (what’s app only)

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ