AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

September 2024 Monthly Horoscope: ಮೇಷ, ವೃಷಭ, ಮಿಥುನ, ಕರ್ಕಾಟಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳ ಭವಿಷ್ಯ ಹೇಗಿರಲಿದೆ?

ಮೇಷ ರಾಶಿ, ವೃಷಭ ರಾಶಿ, ಮಿಥುನ, ಕರ್ಕಾಟಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಹೇಗಿರಲಿದೆ? ಸೆಪ್ಟೆಂಬರ್​ ತಿಂಗಳು ಈ ರಾಶಿಯವರಿಗೆ ಹೇಗಿರಲಿದೆ, ರಾಶಿಗನುಗುಣವಾಗಿ ನೀವು ಯಾವ ಫಲವನ್ನು ಪಡೆಯುತ್ತಾರೆ? ಆರ್ಥಿಕ ಸ್ಥಿತಿ, ವೃತ್ತಿಜೀವನ, ಕೌಟುಂಬಿಕ ಜೀವನ ಹೇಗಿರಲಿದೆ ಎನ್ನುವುದರ ರಾಶಿಫಲ ಇಲ್ಲಿದೆ.

September 2024 Monthly Horoscope: ಮೇಷ, ವೃಷಭ, ಮಿಥುನ, ಕರ್ಕಾಟಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳ ಭವಿಷ್ಯ ಹೇಗಿರಲಿದೆ?
ದಿನ ಭವಿಷ್ಯ
TV9 Web
| Edited By: |

Updated on:Aug 23, 2024 | 11:03 PM

Share

2024ರ ಒಂಭತ್ತನೇ ತಿಂಗಳಾದ ಸಪ್ಟೆಂಬರ್ ನಲ್ಲಿ ಗ್ರಹಗತಿಗಳ ಬದಲಾವಣೆ ಶುಭಾಶುಭವನ್ನು ನೀಡಲಿವೆ. ಸೂರ್ಯ ತನ್ನ ಸ್ವಕ್ಷೇತ್ರದಿಂದ ನೀಚಸ್ಥಾನದ ಕಡೆ ಹೋಗುವನು. ಬುಧನೂ ಸ್ವರಾಶಿ ಮತ್ತು ಉಚ್ಚಸ್ಥಾನವನ್ನು ಪ್ರವೇಶಿಸುವನು. ಶುಕ್ರನು ನೀಚ ಸ್ಥಾನದಿಂದ ಹೊರಬಂದು ಸ್ವ ಕ್ಷೇತ್ರದಲ್ಲಿ ನೆಲೆಸಿದ್ದಾನೆ. ಕುಜನೂ ಶತ್ರು ಸ್ಥಾನದಲ್ಲಿ ಇರುವ ಕಾರಣ ಶುಭಾಶುಭ ಫಲಗಳು ಮಿಶ್ರವಾಗಿ ಇರುತ್ತವೆ. ಅಶುಭಸ್ಥಾನದವರು ಬಹಳ ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ಹಾಗಾದ್ರೆ, ಮೇಷ, ವೃಷಭ, ಮಿಥುನ, ಕರ್ಕಾಟಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಹೇಗಿರಲಿದೆ? ಎನ್ನುವುದನ್ನು ತಿಳಿದುಕೊಳ್ಳಿ

ಮೇಷ ರಾಶಿ :ಇದು ರಾಶಿ ಚಕ್ರದ ಮೊದಲ ರಾಶಿಯಾಗಿದ್ದು, ಸಪ್ಟೆಂಬರ್ ತಿಂಗಳಲ್ಲಿ ನಿಮಗೆ ಶುಭವಿರಲಿದೆ. ರಾಶಿಯ ಅಧಿಪತಿ ಹಾಗೂ ಅಷ್ಟಮದ ಅಧಿಪತಿ‌ ಕುಜನು ತೃತೀಯ ಸ್ಥಾನಕ್ಕೆ ಹೋಗುವನು. ಮಿತ್ರರ ಸಹವಾಸ ಸಾಕೆನಿಸಬಹುದು. ಕಲಹವು ನಿಮ್ಮ ಮನಸ್ಸನ್ನು ಹಾಳುಮಾಡುವುದು. ದ್ವಿತೀಯದಲ್ಲಿ‌ ಇರುವ ಗುರುವು ಒಳ್ಳೆಯ ಮಾತುಗಳನ್ನು ಆಡಿಸುವನು. ಸಂಗಾತಿಯ ಮೇಲೆ ಪ್ರೀತಿ ಹೆಚ್ಚಾಗುವುದು. ತಂದೆಯ ಜೊತೆ ಮನಸ್ತಾಪ‌ ಕಾಣಿಸಿಕೊಳ್ಳುವುದು. ಆರ್ಥಿಕ ಸ್ಥಿತಿ ನಿಧಾನ ಗತಿಯಲ್ಲಿ ಸರಿಯಾಗಲಿದೆ. ನಿಮ್ಮ ಆದಾಯವು ಯಾವದೋ ಕಾರಣಕ್ಕಾಗಿ ಖರ್ಚಾಗುವುದು. ಯೋಚಿಸಿ ಅದನ್ನು ಸರಿಯಾದ ಕಡೆಗೆ ಹೋಗುವಂತೆ ನೋಡಿಕೊಳ್ಳಬೇಕು. ಸುಬ್ರಹ್ಮಣ್ಯನ‌ ಸ್ತೋತ್ರವನ್ನು ಅನವರತ ಪಠಿಸಿ.

ವೃಷಭ ರಾಶಿ :ರಾಶಿ ಚಕ್ರದ ಎರಡನೇ ರಾಶಿಯವರಿಗೆ ಶುಭಾಶುಭ ಮಿಶ್ರಫಲ. ರಾಶಿಯಲ್ಲಿ ಗುರುವಿರುವುದು ನಿಮಗೆ ಸ್ವಲ್ಪ ಶುಭ. ಏಕೆಂದರೆ ಶತ್ರುವಿನ‌ ರಾಶಿ. ಶತ್ರುಗಳ ಪೀಡಿಯು ನಿಮಗೆ‌ ಕಾಣಿಸುವುದು. ಯಾರನ್ನೂ ನಂಬುವುದೂ ನಿಮಗೆ ಕಷ್ಟವೆನಿಸುವುದು. ಉದ್ಯೋಗವನ್ನು ಪ್ರೀತಿಯಿಂದ ಮಾಡಲಾಗದು. ಜೀವನೋಪಾಯಕ್ಕೆಂದು ಮಾಡುವಿರಿ. ದೂರ ಪ್ರಯಾಣದ ಸಾಧ್ಯತೆ ಇದೆ. ನಿಮ್ಮ ಶ್ರಮವೇ ಆದಾಯ ಮೂಲವಾಗಿರಲಿದೆ. ಶ್ರಮವಹಿಸಿ ಕಾರ್ಯವನ್ನು ಮಾಡಬೇಕಾಗುವುದು. ನಿಮ್ಮ ಮಾತು ಸಿಟ್ಟನ್ನು ತರಿಸುವಂತೆ ಇರುತ್ತದೆ. ಸಂಗಾತಿಯ ವಿಚಾರದಲ್ಲಿ ಬರುವ ಮನಸ್ತಾಪಕ್ಕೆ ಉಪಶಮನ ಅಗತ್ಯ ಬೇಕು. ತ್ರಿಪುರಸುಂದರಿಯನ್ನು ಉಪಾಸಿಸಿ.

ಮಿಥುನ ರಾಶಿ :ಸಪ್ಟೆಂಬರ್ ತಿಂಗಳಲ್ಲಿ ಮೂರನೇ ರಾಶಿಯವರಿಗೆ ಅಶುಭ. ಕುಜನೇ ರಾಶಿಗೆ ಬರುವ ಕಾರಣ ಸಿಟ್ಟು, ಮನಸ್ತಾಪ, ಉದ್ವೇಗ ಹೆಚ್ಚಾಗುವುದು. ಮಕ್ಕಳ‌ ಮೇಲೆ‌ ಪ್ರೀತಿ ಹೆಚ್ಚಾಗುವುದು. ಕೌಟುಂಬಿಕ ಕಲಹ, ಸಮಾಧಾನಗಳು ನಿರಂತರ ಆಗುವುದು. ಉದ್ಯೋಗದ ಸ್ಥಳದಿಂದ ಹೊರಗಿರಬೇಕಾಗುವುದು.‌ ಅಲೆದಾಟು ಹೆಚ್ಚು ಮಾಡುವಿರಿ. ವಿದೇಶದಲ್ಲಿ ಇರುವವರಿಗೆ ನೆಮ್ಮದಿ ಇರದು. ಅಲ್ಲಿಂದ ಬರುವುದೂ ಸುಲಭವಿಲ್ಲ. ಸ್ನೇಹಿತರು ಸರಿಯಾಗಿ ಸಿಗುವುದಿಲ್ಲ. ಹಿರಿಯರ ವಿಚಾರದಲ್ಲಿ ನಿಮಗೆ ಸಮಾಧನವಿಲ್ಲ. ಅವರನ್ನು ನಿತ್ಯವೂ ದೂರುವಿರಿ. ಸೀತಾರಾಮರ ಉಪಾಸನೆಯಿಂದ ನೆಮ್ಮದಿ ಇರುವುದು.

ಕರ್ಕಾಟಕ ರಾಶಿ :ಈ ತಿಂಗಳಲ್ಲಿ ನಿಮಗೆ ಶುಭ. ಗುರುವು ಏಕಾದಶದಲ್ಲಿ ಇದ್ದು ನಿಮ್ಮ ಎಲ್ಲ ಆಸೆಗಳನ್ನು ಇಡೇರಿಸುವನು. ಪಂಚಮ ಮತ್ತು ದಶಮಾಧಿಪತಿಯಾದ ಕುಜನು‌ ದ್ವಾದಶ ಸ್ಥಾನಕ್ಕೆ ಬರುವನು. ಭೂನಷ್ಟವಾಗುವ ಸಂಭವ ಬರುವುದು. ಅಗ್ನಿ ಭೀತಿಯು ನಿಮ್ಮನ್ನು ಕಾಡುವುದು. ಕೌಟುಂಬಿಕ ಸೌಹಾರ್ದತೆಯನ್ನು ಚೆನ್ನಾಗಿ ನಿರ್ವಹಣೆ ಮಾಡುವಿರಿ. ತಾಯಿಯ ಪ್ರೀತಿ ನಿಮಗೆ ಸಿಗಲಿದೆ. ಸಿಟ್ಟು‌ ಮಾಡಿಕೊಳ್ಳುವ ಸಂದರ್ಭ ಬರುವುದು. ರಾತ್ರಿ ಭಯಪಡುವಿರಿ. ಹಿರಿಯರ ಮೇಲೆ ಪ್ರೀತಿ ಪಾತ್ರರ ಮೇಲೆ‌ ಗೌರವ ಕಡಿಮೆಯಾಗುವುದು. ಬಂಧುಗಳ ಸಖ್ಯವು ನಿಮಗೆ ಆಗಲಿದೆ. ಶಾಂತಸ್ವರೂಪಿಯಾದ ದೇವಿಯನ್ನು ಆರಾಧಿಸಿ.

Published On - 8:13 pm, Fri, 23 August 24

Follow Us
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು