AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Namma Metro: ನಮ್ಮ ಮೆಟ್ರೋ ಪಿಂಕ್ ಲೈನ್ ಇಂಟೆನ್ಸಿವ್ ಟೆಸ್ಟಿಂಗ್: ಆಗಸ್ಟ್ 12 ರಿಂದ 14 ರವರೆಗೆ ರೈಲುಗಳ ಸುರಕ್ಷತಾ ತಪಾಸಣೆ

ನಮ್ಮ ಮೆಟ್ರೋದ ಬಹುನಿರೀಕ್ಷಿತ ಪಿಂಕ್ ಲೈನ್ ಕಾರಿಡಾರ್‌ನ ಹೊಸ ರೈಲುಗಳ ಸುರಕ್ಷತಾ ಮತ್ತು ತಾಂತ್ರಿಕ ತಪಾಸಣೆಯು ಆಗಸ್ಟ್ 12 ರಿಂದ 14 ರವರೆಗೆ ನಡೆಯಲಿದೆ. ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರ (CCRS) ನೇತೃತ್ವದಲ್ಲಿ ಕೊತ್ತನೂರು ಡಿಪೋದಲ್ಲಿ ಈ ತೀವ್ರ ಪರಿಶೀಲನೆ ನಡೆಯಲಿದ್ದು, ಬ್ರೇಕಿಂಗ್ ಮತ್ತು ಸಿಗ್ನಲಿಂಗ್ ವ್ಯವಸ್ಥೆಯನ್ನು ಪರೀಕ್ಷಿಸಲಾಗುತ್ತದೆ. ಈ ಪ್ರಕ್ರಿಯೆಯು ಪಿಂಕ್ ಲೈನ್ ವಾಣಿಜ್ಯ ಸಂಚಾರ ಮುಕ್ತಗೊಳ್ಳುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

Namma Metro: ನಮ್ಮ ಮೆಟ್ರೋ ಪಿಂಕ್ ಲೈನ್ ಇಂಟೆನ್ಸಿವ್ ಟೆಸ್ಟಿಂಗ್: ಆಗಸ್ಟ್ 12 ರಿಂದ 14 ರವರೆಗೆ ರೈಲುಗಳ ಸುರಕ್ಷತಾ ತಪಾಸಣೆ
ನಮ್ಮ ಮೆಟ್ರೋ ಪಿಂಕ್ ಲೈನ್ ಇಂಟೆನ್ಸಿವ್ ಟೆಸ್ಟಿಂಗ್
ಭಾವನಾ ಹೆಗಡೆ
|

Updated on: Aug 08, 2026 | 7:49 AM

Share

ಮುಖ್ಯಾಂಶಗಳು

  • ನಮ್ಮ ಮೆಟ್ರೋ ಪಿಂಕ್ ಲೈನ್ ರೈಲುಗಳ ಸುರಕ್ಷತಾ ತಪಾಸಣೆ ಆಗಸ್ಟ್ 12 ರಿಂದ.
  • ಕೊತ್ತನೂರು ಡಿಪೋದಲ್ಲಿ ಹೊಸ ರೈಲುಗಳ ತಾಂತ್ರಿಕ ಸಾಮರ್ಥ್ಯವನ್ನು ತಜ್ಞರು ಪರಿಶೀಲಿಸಲಿದ್ದಾರೆ.
  • ಸಿಎಂಆರ್‌ಎಸ್ ಅಂತಿಮ ಅನುಮೋದನೆ ನೀಡಿದ ಬಳಿಕ ವಾಣಿಜ್ಯ ಸಂಚಾರ ಅಧಿಕೃತವಾಗಿ ಆರಂಭ.

ಬೆಂಗಳೂರು, ಆಗಸ್ಟ್ 08: ನಮ್ಮ ಮೆಟ್ರೋ (Namma Metro) ಫೇಸ್-2 ಅಡಿಯಲ್ಲಿ ಬಹುನಿರೀಕ್ಷಿತ ಪಿಂಕ್ ಲೈನ್ (ಕಾಳೇನ ಅಗ್ರಹಾರದಿಂದ ನಾಗವಾರ) ಕಾರಿಡಾರ್‌ನ ವಾಣಿಜ್ಯ ಸಂಚಾರದ ಸಿದ್ಧತೆಗಳು ಕೊನೆಯ ಹಂತಕ್ಕೆ ತಲುಪಿವೆ. ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿರುವ ಹೊಸ ಮೆಟ್ರೋ ರೈಲುಗಳ ತಾಂತ್ರಿಕ ಹಾಗೂ ಸುರಕ್ಷತಾ ತಪಾಸಣೆಯನ್ನು ಆಗಸ್ಟ್ 12 ರಿಂದ 14 ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಕೋರಿಕೆಯ ಮೇರೆಗೆ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರು (CCRS) ಈ ರೋಲಿಂಗ್ ಸ್ಟಾಕ್ (ರೈಲು ಪೆಟ್ಟಿಗೆಗಳು) ತಪಾಸಣೆಯನ್ನು ಕೈಗೊಳ್ಳಲಿದ್ದಾರೆ.

ಕೊತ್ತನೂರು ಡಿಪೋದಲ್ಲಿ ತಪಾಸಣೆ

ಮೆಟ್ರೋ ಅಧಿಕಾರಿಗಳ ಮಾಹಿತಿಯ ಪ್ರಕಾರ, ಪಿಂಕ್ ಲೈನ್‌ಗಾಗಿ ಬಿಇಎಂಎಲ್ (BEML) ಪೂರೈಸಿರುವ ಹೊಸ ರೈಲು ಸೆಟ್‌ಗಳನ್ನು ಕೊತ್ತನೂರು ಡಿಪೋದಲ್ಲಿ ತೀವ್ರ ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗುವುದು. ರೈಲುಗಳ ಬ್ರೇಕಿಂಗ್ ಸಿಸ್ಟಮ್, ಸಿಗ್ನಲಿಂಗ್ ತಂತ್ರಜ್ಞಾನದೊಂದಿಗಿನ ಸಮನ್ವಯತೆ ಮತ್ತು ಸ್ವಯಂಚಾಲಿತ ಚಾಲನಾ ಸಾಮರ್ಥ್ಯಗಳನ್ನು ತಜ್ಞರ ತಂಡವು ಪರಿಶೀಲಿಸಲಿದೆ.

ಸಿಎಂಆರ್‌ಎಸ್ (CMRS) ಅಂತಿಮ ಪರಿಶೀಲನೆ

ಈ ಪ್ರಾಥಮಿಕ ತಪಾಸಣೆ ಮುಗಿದ ಬಳಿಕ, ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (CMRS) ಪಿಂಕ್ ಲೈನ್‌ನ ಸಂಪೂರ್ಣ ಮೂಲಸೌಕರ್ಯಗಳ ವಿಸ್ತೃತ ಪರಿಶೀಲನೆ ನಡೆಸಲಿದ್ದಾರೆ.

  • ಪ್ರಾಯೋಗಿಕ ಸಂಚಾರ (Trial Runs)
  • ಸಿಗ್ನಲಿಂಗ್ ಮತ್ತು ಟೆಲಿಕಾಂ ವ್ಯವಸ್ಥೆ
  • ಸುರಕ್ಷತಾ ಜಾಲಗಳ ಸಂಯೋಜನೆ
  • ನಿಲ್ದಾಣಗಳು, ಟ್ರ್ಯಾಕ್ ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆ
  • ಪ್ರಯಾಣಿಕರ ಸೌಲಭ್ಯಗಳು ಮತ್ತು ತುರ್ತು ನಿರ್ಗಮನ ವ್ಯವಸ್ಥೆಗಳನ್ನು ಪರಿಶೀಲಿಸಲಾಗುತ್ತದೆ.

ಹಂತ-ಹಂತವಾಗಿ ಮುಕ್ತಾಯಗೊಳ್ಳಲಿರುವ ಮಾರ್ಗ

ಪಿಂಕ್ ಲೈನ್ ಒಟ್ಟು 21.3 ಕಿಲೋಮೀಟರ್ ಉದ್ದವಿದ್ದು, ಇದರಲ್ಲಿ 7.5 ಕಿ.ಮೀ ಎತ್ತರಿಸಿದ ಮಾರ್ಗ (Elevated Stretch) ಹಾಗೂ 13.8 ಕಿ.ಮೀ ಅಂಡರ್​ ಗ್ರೌಂಡ್ ಮಾರ್ಗ ಒಳಗೊಂಡಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ 6 ನಿಲ್ದಾಣಗಳನ್ನು ಹೊಂದಿರುವ ಎತ್ತರಿಸಿದ ಮಾರ್ಗವು ಈಗಾಗಲೇ ಆರ್‌ಡಿಎಸ್‌ಒ (RDSO) ವೇಗ ತಪಾಸಣೆಯಲ್ಲಿ ಗಂಟೆಗೆ 90 ಕಿಮೀ ವೇಗದ ಸರ್ಟಿಫಿಕೇಟ್ ಪಡೆದುಕೊಂಡಿದೆ. ಸಿಎಂಆರ್‌ಎಸ್‌ನಿಂದ ಅಂತಿಮ ಕ್ಲಿಯರೆನ್ಸ್ ಸಿಕ್ಕ ತಕ್ಷಣವೇ ಈ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಅಧಿಕಾರಿಗಳ ಪ್ರಕಾರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಎಲ್ಲಾ ಅಗತ್ಯ ಅನುಮೋದನೆಗಳು ಸಿಗುವ ನಿರೀಕ್ಷೆಯಿದೆ. ಉಳಿದ ಭೂಗತ ಮಾರ್ಗದ ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದು, ಮುಂದಿನ ವರ್ಷದ ಆರಂಭದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಮೋಸ ಮಾಡಿ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗಗನ್ ಚಿನ್ನಪ್ಪ
ಮೋಸ ಮಾಡಿ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗಗನ್ ಚಿನ್ನಪ್ಪ
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ವೇ ಫ್ಲೈಓವರ್‌‌ನಿಂದ ಕೆಳಗೆ ಬಿದ್ದ ಕಾರು
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ವೇ ಫ್ಲೈಓವರ್‌‌ನಿಂದ ಕೆಳಗೆ ಬಿದ್ದ ಕಾರು
ಪ್ರತಿ ಲೀಟರ್‌ ಹಾಲಿನ ದರ ₹8 ಹೆಚ್ಚಳಕ್ಕೆ ಹಾಲು ಒಕ್ಕೂಟಗಳ ಆಗ್ರಹ
ಪ್ರತಿ ಲೀಟರ್‌ ಹಾಲಿನ ದರ ₹8 ಹೆಚ್ಚಳಕ್ಕೆ ಹಾಲು ಒಕ್ಕೂಟಗಳ ಆಗ್ರಹ
ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ
ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ
ಟಿ ನರಸೀಪುರದಲ್ಲಿ ಬಿಗಿ ಭದ್ರತೆ: 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಟಿ ನರಸೀಪುರದಲ್ಲಿ ಬಿಗಿ ಭದ್ರತೆ: 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ