ಶ್ವಾನ ಪ್ರಿಯರೇ ಗಮನಿಸಿ: ಜುಲೈ 18ರಂದು ಜಿಬಿಎ ವತಿಯಿಂದ ‘ಸೆಕೆಂಡ್ ಇನ್ನಿಂಗ್ಸ್’ ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಆಯೋಜನೆ
ಜುಲೈ 18ರಂದು ವೈಟ್ಫೀಲ್ಡ್ನ ನೆಕ್ಸಸ್ ಶಾಂತಿನಿಕೇತನ ಮಾಲ್ನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ 'ಸೆಕೆಂಡ್ ಇನ್ನಿಂಗ್ಸ್' ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಆರೋಗ್ಯವಂತ ದೇಸಿ ತಳಿ ನಾಯಿಗಳನ್ನು ದತ್ತು ಪಡೆಯುವ ಮೂಲಕ ಅವುಗಳಿಗೆ ಹೊಸ ಜೀವನ ನೀಡಿ ಎಂದು ಜಿಬಿಎ ಕರೆ ನೀಡಿದ್ದು, ದತ್ತು ಪಡೆಯಲು ಲಭ್ಯವಿರುವ ನಾಯಿಗಳ ಬಗ್ಗೆ ಮಾಹಿತಿ ತಿಳಿಯೋದು ಹೇಗೆಂಬ ಬಗ್ಗೆಯೂ ಪ್ರಕಟಣೆ ಮೂಲಕ ತಿಳಿಸಲಾಗಿದೆ.

ಮುಖ್ಯಾಂಶಗಳು
- ಜುಲೈ 18ರಂದು ಜಿಬಿಎ ವತಿಯಿಂದ ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ
- ವೈಟ್ಫೀಲ್ಡ್ನ ನೆಕ್ಸಸ್ ಶಾಂತಿನಿಕೇತನ ಮಾಲ್ ನಲ್ಲಿ "ಸೆಕೆಂಡ್ ಇನ್ನಿಂಗ್ಸ್"
- ದೇಸಿ ನಾಯಿಗಳನ್ನು ದತ್ತು ಪಡೆದು ಅವುಗಳಿಗೆ ಹೊಸ ಜೀವನ ನೀಡುವಂತೆ ಕರೆ
ಬೆಂಗಳೂರು, ಜುಲೈ 08: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಜುಲೈ 18 (ಶನಿವಾರ) ಮಧ್ಯಾಹ್ನ 3 ಗಂಟೆಗೆ ವೈಟ್ಫೀಲ್ಡ್ನ ನೆಕ್ಸಸ್ ಶಾಂತಿನಿಕೇತನ ಮಾಲ್ ನಲ್ಲಿ “ಸೆಕೆಂಡ್ ಇನ್ನಿಂಗ್ಸ್” ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಅಪಘಾತ ಅಥವಾ ಕ್ರೌರ್ಯಕ್ಕೆ ಬಲಿಯಾದ, ತಾಯಿ ಇಲ್ಲದ, ಆರೈಕೆ ಮತ್ತು ಚಿಕಿತ್ಸೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಆರೋಗ್ಯವಂತ ದೇಸಿ ತಳಿ ನಾಯಿಗಳನ್ನು ದತ್ತು ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಾಯಿಗಳ ಮಾಹಿತಿ ತಿಳಿಯೋದು ಹೇಗೆ?
🐾 ನಮಸ್ಕಾರ ಬೆಂಗಳೂರು ನಾಗರೀಕರೆ,
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಜುಲೈ 18, 2026 (ಶನಿವಾರ) ಮಧ್ಯಾಹ್ನ 3:00 ಗಂಟೆಗೆ ವೈಟ್ಫೀಲ್ಡ್ನ ನೆಕ್ಸಸ್ ಶಾಂತಿನಿಕೇತನ ಮಾಲ್ ನಲ್ಲಿ “ಸೆಕೆಂಡ್ ಇನ್ನಿಂಗ್ಸ್” ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಪಘಾತ ಅಥವಾ ಕ್ರೌರ್ಯಕ್ಕೆ ಬಲಿಯಾದ,… pic.twitter.com/GStg1mNKis
— Greater Bengaluru Authority (@GBA_office) July 8, 2026
https://drive.google.com/drive/folders/1qljNy3UQAv4Zi32cQ7DN1proDf-ZUDha ಲಿಂಕ್ಗೆ ಭೇಟಿ ನೀಡಿ ದತ್ತುಗೆ ಲಭ್ಯವಿರುವ ದೇಸಿ ನಾಯಿಗಳ ವಿವರಗಳನ್ನು ತಿಳಿಯಬಹುದಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಆರೋಗ್ಯವಂತ ದೇಸಿ ನಾಯಿಗಳನ್ನು ದತ್ತು ಪಡೆದು ಅವುಗಳಿಗೆ ಹೊಸ ಜೀವನ ನೀಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಾರ್ವಜನಿಕರಿಗೆ ಮನವಿ ಮಾಡಿದೆ.
ಇದನ್ನೂ ಓದಿ: ಬೀದಿ ನಾಯಿಗಳು ಕಚ್ಚಿದ್ರೆ ಸರ್ಕಾರವೇ ಪರಿಹಾರ ನೀಡಬೇಕು; ಸುಪ್ರೀಂ
ನಟ ಮಾಸ್ಟರ್ ಆನಂದ್ ಮನವಿ
🐾 Hello Bengaluru Citizens,
The Greater Bengaluru Authority’s Bengaluru East City Corporation is organizing the “Second Innings” Dog Adoption Drive on Saturday, July 18, 2026, at 3:00 PM at Nexus Shantiniketan Mall, Whitefield.
Well known Kannada Actor Master Anand requested… pic.twitter.com/72dsGS1AVN
— Greater Bengaluru Authority (@GBA_office) July 8, 2026
ಶಾಶ್ವತ ಪ್ರೀತಿಯ ಮನೆಯ ನಿರೀಕ್ಷೆಯಲ್ಲಿರುವ ಸ್ಥಳೀಯ (ದೇಸಿ) ನಾಯಿಗಳನ್ನು ದತ್ತು ಪಡೆದು ಅವುಗಳಿಗೆ ಹೊಸ ಜೀವನ ನೀಡುವಂತೆ ಖ್ಯಾತ ಕನ್ನಡ ನಟ ಮಾಸ್ಟರ್ ಆನಂದ್ ಅವರು ಕೂಡ ಶ್ವಾನ ಪ್ರಿಯರಿಗೆ ಕರೆ ನೀಡಿದ್ದಾರೆ. ಈ ದತ್ತು ಸ್ವೀಕಾರ ಅಭಿಯಾನದಲ್ಲಿ ಭಾಗವಹಿಸಿ, ಆರೋಗ್ಯವಂತ ದೇಸಿ ನಾಯಿಯನ್ನು ದತ್ತು ಪಡೆಯುವ ಮೂಲಕ ಅವುಗಳ ಬದುಕಿಗೆ ಹೊಸ ಭರವಸೆ ಮತ್ತು ಪ್ರೀತಿಯ ನೆಲೆ ನೀಡೋಣ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:24 pm, Wed, 8 July 26




