AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರ್ವಜನಿಕರ ಹಣದಲ್ಲಿ 290 ಕೋಟಿ ಮೌಲ್ಯದ ಹವಾಲಾ ದಂದೆ! ಸಿಐಡಿಯಿಂದ ಕಿಂಗ್​ಪಿನ್ ಅರೆಸ್ಟ್

ಚೀನಾ ಮೂಲದ ಮತ್ತು ಟಿಬೆಟ್ ಪ್ರಜೆಗಳು ಬ್ಯಾಂಕ್ ಖಾತೆ, ಕಂಪನಿ ತೆರೆಯುತ್ತಿದ್ದರು. ಅನಸ್ ಅಹ್ಮದ್ ಚೈನಾ ಹವಾಲಾ ಏಜೆಂಟ್​ರ ಸಂಪರ್ಕಿಸುತ್ತಿದ್ದ. ಅಕ್ರಮ ಹಣ ವರ್ಗಾವಣೆಯ ಸಲುವಾಗಿ ಬುಲ್ ಫಿಂಚ್ ಟೆಕ್ನಾಲಜೀಸ್‌, ಹೆಚ್ ಆ್ಯಂಡ್ ಎಸ್ ವೈಚರ್ಸ್, ಕ್ಲಿಪೋಡ್‌ ವೆಂಚರ್ಸ್ ಮುಂತಾದ ಕಂಪನಿಗಳನ್ನು ತೆರೆದಿದ್ದರು ಎಂಬ ಮಾಹಿತಿ ದೊರೆತಿದೆ.

ಸಾರ್ವಜನಿಕರ ಹಣದಲ್ಲಿ 290 ಕೋಟಿ ಮೌಲ್ಯದ  ಹವಾಲಾ ದಂದೆ! ಸಿಐಡಿಯಿಂದ ಕಿಂಗ್​ಪಿನ್ ಅರೆಸ್ಟ್
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 13, 2021 | 8:28 AM

Share

ಬೆಂಗಳೂರು: ಪವರ್ ಬ್ಯಾಂಕ್ ಎಂಬ ಹೆಸರಲ್ಲಿ ಹೂಡಿಕೆ ನಡೆಸುತ್ತಿದ್ದ 290 ಕೋಟಿ ಮೌಲ್ಯದ  ಅಕ್ರಮ ಹವಾಲಾ ದಂದೆಯನ್ನು ಬೇಧಿಸಿರುವ ಸಿಐಡಿ ಎಸ್​ಪಿ ಶರತ್ ನೇತೃತ್ವದ ತನಿಖಾ ತಂಡ ಪ್ರಕರಣದ ಕಿಂಗ್​ಪಿನ್ ಆಗಿರುವ ಕೇರಳ ಮೂಲದ ಅನಸ್ ಅಹ್ಮದ್ ಎಂಬ ವ್ಯಕ್ತಿಯನ್ನು ಬಂಧಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಆದಾಯ ನೀಡುವುದಾಗಿ ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಳ್ಳಲಾಗುತ್ತಿತ್ತು. ಹಣ ಹೂಡಿಕೆ ಮಾಡುವ ಅಪ್ಲಿಕೇಷನ್ ತಯಾರಿಸಿ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಬಿಡುಗಡೆ ಮಾಡಲಾಗಿತ್ತು. ಆರಂಭಿಕವಾಗಿ ಹೊಡಿಕೆದಾರರಿಗೆ ಸಣ್ಣ ಪ್ರಮಾಣದಲ್ಲಿ ಬಡ್ಡಿ ಪಾವತಿಸಲಾಗುತ್ತಿತ್ತು. ಹೆಚ್ಚು ಹೂಡಿಕೆ ಆದ ನಂತರ ಬಡ್ಡಿ ನೀಡದೆ ಹೂಡಿಕೆ ಹಣ ಬಳಸಿ ಶೇರ್ ಅಥವಾ ಬೇನಾಮಿ ಕಂಪನಿ ತೆರೆಯಲಾಗುತ್ತಿತ್ತು. ಈ ಮೂಲಕ ಜನರ ಹಣಕ್ಕೆ ಪಂಗನಾಮ ಎರಚಲಾಗುತ್ತಿತ್ತು ಎಂದು ತನಿಖಾ ತಂಡ ತಿಳಿಸಿದೆ.

ಚೀನಾ ಮೂಲದ ಮತ್ತು ಟಿಬೆಟ್ ಪ್ರಜೆಗಳು ಬ್ಯಾಂಕ್ ಖಾತೆ, ಕಂಪನಿ ತೆರೆಯುತ್ತಿದ್ದರು. ಅನಸ್ ಅಹ್ಮದ್ ಚೈನಾ ಹವಾಲಾ ಏಜೆಂಟ್​ರ ಸಂಪರ್ಕಿಸುತ್ತಿದ್ದ. ಅಕ್ರಮ ಹಣ ವರ್ಗಾವಣೆಯ ಸಲುವಾಗಿ ಬುಲ್ ಫಿಂಚ್ ಟೆಕ್ನಾಲಜೀಸ್‌, ಹೆಚ್ ಆ್ಯಂಡ್ ಎಸ್ ವೈಚರ್ಸ್, ಕ್ಲಿಪೋಡ್‌ ವೆಂಚರ್ಸ್ ಮುಂತಾದ ಕಂಪನಿಗಳನ್ನು ತೆರೆದಿದ್ದರು ಎಂಬ ಮಾಹಿತಿ ದೊರೆತಿದೆ.

ಈ ಪ್ರಕರಣದಲ್ಲಿ ಕೊವಿಡ್​ನ ಸಂಕಷ್ಟ ಸಮಯದಲ್ಲಿ ಹೆಚ್ಚಿನ ಜನರು ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ. 15 ಲಕ್ಷ ಮಂದಿಗೆ ಸುಮಾರು 250 ಕೋಟಿಗೂ ಹೆಚ್ಚು ವಂಚನೆ ಆಗಿರುವ ದಾಖಲೆ ಪತ್ತೆಯಾಗಿದೆ.  ಕಂಪನಿ ಹಾಗೂ ಗ್ರಾಹಕರಿಗೆ ಹಣ ವರ್ಗಾವಣೆ ಮಧ್ಯವರ್ತಿಯಾಗಿ ರೇಜೋರ್ ಪೇ ಎಂಬ ಕಂಪನಿ ಕೆಲಸ ಮಾಡಿರುವುದು ತಿಳಿದುಬಂದಿದ್ದು, ರೇಜೋರ್ ಪೇ ಕಂಪನಿ ದೂರಿನ ಮೇರೆಗೆ ಸಿಐಡಿ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: 2 ತೊಲೆ ಬಂಗಾರದ ಸರ ನುಂಗಿದ ಸಾಕುನಾಯಿ; ಯಾವಾಗ ಹೊರಬರುತ್ತೆ ಎಂದು ನಾಯಿಯ ಹಿಂದೆ ಅಲೆಯುವಂತಾಗಿದೆ ಪರಿಸ್ಥಿತಿ

G7 Summit 2021: ಜಿ7 ಶೃಂಗಸಭೆಯಲ್ಲಿ ‘ಒಂದು ಭೂಮಿ, ಒಂದು ಆರೋಗ್ಯ’ ಮಂತ್ರ ಉಚ್ಛರಿಸಿದ ಪ್ರಧಾನಿ ನರೇಂದ್ರ ಮೋದಿ

(CID arrests kingpin of Cyber crime Hawala worth Rs 290 crore in public money in the name of power bank)

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ