AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಗರ ಉತ್ಪನ್ನಗಳ ರಫ್ತಿನಲ್ಲಿ ಕರ್ನಾಟಕಕ್ಕೆ ಅಭೂತಪೂರ್ವ ಯಶಸ್ಸು: 5,371 ಕೋಟಿ ರೂ.ಗೆ ಜಿಗಿದ ರಫ್ತು ಮೌಲ್ಯ, ದೇಶದಲ್ಲೇ 5ನೇ ಸ್ಥಾನ

ಕರ್ನಾಟಕವು ಸಾಗರ ಉತ್ಪನ್ನಗಳ ರಫ್ತಿನಲ್ಲಿ FY2025-26ರಲ್ಲಿ ಭರ್ಜರಿ ಸಾಧನೆ ಮಾಡಿದೆ. ರಫ್ತು ಮೌಲ್ಯ 5,371.85 ಕೋಟಿ ರೂ. ಗೆ ಏರಿಕೆ ಕಂಡಿದ್ದು, ಶೇ. 56.1 ರಷ್ಟು ಪ್ರಗತಿ ದಾಖಲಿಸಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು. ದೇಶದಲ್ಲಿ ಕರ್ನಾಟಕ 6ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ ಮತ್ತು ದಕ್ಷಿಣ ಭಾರತದ ರಾಜ್ಯಗಳಲ್ಲಿ ಅತಿ ಹೆಚ್ಚು ಶೇಕಡಾವಾರು ಬೆಳವಣಿಗೆಯನ್ನು ಸಾಧಿಸಿದೆ.

ಸಾಗರ ಉತ್ಪನ್ನಗಳ ರಫ್ತಿನಲ್ಲಿ ಕರ್ನಾಟಕಕ್ಕೆ ಅಭೂತಪೂರ್ವ ಯಶಸ್ಸು: 5,371 ಕೋಟಿ ರೂ.ಗೆ ಜಿಗಿದ ರಫ್ತು ಮೌಲ್ಯ, ದೇಶದಲ್ಲೇ 5ನೇ ಸ್ಥಾನ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Aug 07, 2026 | 1:24 PM

Share

ಮಂಗಳೂರು ಆ. 7: ದೇಶದ ಸಾಗರ ಉತ್ಪನ್ನಗಳ (Seafood) ರಫ್ತು ವಲಯದಲ್ಲಿ ಕರ್ನಾಟಕ ರಾಜ್ಯವು ಭರ್ಜರಿ ಸಾಧನೆ ಮಾಡಿದೆ. 2025-26ನೇ ಹಣಕಾಸು ವರ್ಷದಲ್ಲಿ ರಾಜ್ಯದ ಸಾಗರ ಉತ್ಪನ್ನಗಳ ರಫ್ತು ಮೌಲ್ಯವು ಬರೋಬ್ಬರಿ ಶೇ. 56.1 ರಷ್ಟು ಏರಿಕೆಯಾಗಿದ್ದು, 5,371.85 ಕೋಟಿ ರೂ.ಗೆ ತಲುಪಿದೆ. 2024-25ರಲ್ಲಿ ಈ ಮೊತ್ತ 3,440.57 ಕೋಟಿ ರೂ. ಯಷ್ಟಿತ್ತು. ರಾಷ್ಟ್ರೀಯ ಸರಾಸರಿ ಬೆಳವಣಿಗೆ ದರಕ್ಕಿಂತಲೂ (ಶೇ. 18.4) ಕರ್ನಾಟಕದ ಸಾಧನೆ ಅತ್ಯಂತ ಹೆಚ್ಚಾಗಿದೆ.

ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಲಾದ ಅಧಿಕೃತ ವರದಿಯ ಪ್ರಕಾರ, ಸಾಗರ ಉತ್ಪನ್ನಗಳ ರಫ್ತು ಮಾಡುವ ದೇಶದ ಪ್ರಮುಖ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು 6ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಕರ್ನಾಟಕದಿಂದ ರಫ್ತಾದ ಸಾಗರ ಉತ್ಪನ್ನಗಳ ಪ್ರಮಾಣವು 2024-25ರಲ್ಲಿ 2,42,143 ಟನ್ ಇತ್ತು. ಇದು 2025-26ರಲ್ಲಿ ಶೇ. 39.3 ರಷ್ಟು ಹೆಚ್ಚಳಗೊಂಡು 3,37,239 ಟನ್‌ಗೆ ತಲುಪಿದೆ. ದಕ್ಷಿಣ ಭಾರತದ ಪ್ರಮುಖ ರಾಜ್ಯಗಳ ಪೈಕಿ ಕರ್ನಾಟಕವೇ ಅತ್ಯಧಿಕ ಶೇಕಡಾವಾರು ಬೆಳವಣಿಗೆ ದಾಖಲಿಸಿದೆ.

ದಕ್ಷಿಣ ಭಾರತದ ರಾಜ್ಯಗಳ ಪೈಕಿ ಆಂಧ್ರಪ್ರದೇಶವು 23,765.11 ಕೋಟಿ ರೂ. (ಶೇ. 11.9 ಏರಿಕೆ) ಮೌಲ್ಯದ ಸಾಗರ ಉತ್ಪನ್ನ ರಫ್ತು ಮಾಡಿ ದೇಶದಲ್ಲೇ ಅಗ್ರಸ್ಥಾನ ಕಾಯ್ದುಕೊಂಡಿದೆ. ಕೇರಳ ₹8,466.77 ಕೋಟಿ (ಶೇ. 22 ಏರಿಕೆ), ತಮಿಳುನಾಡು 7,660.48 ಕೋಟಿ ರೂ. (ಶೇ. 8.9 ಏರಿಕೆ) ಹಾಗೂ ತೆಲಂಗಾಣ 715.02 ಕೋಟಿ ರೂ.(ಶೇ. 16.2 ಏರಿಕೆ) ಮೌಲ್ಯದ ರಫ್ತು ಮಾಡಿದೆ.

ಇದನ್ನೂ ಓದಿ: ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಮತ್ತೆ ವಿವಾದ: 30 ಕೋಟಿ ರೂ. ಮೌಲ್ಯದ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಭಕ್ತರ ವಿರೋಧ, ಶಾಸಕರ ನಡೆಗೆ ಆಕ್ರೋಶ

ಜಾಗತಿಕ ಮಟ್ಟದಲ್ಲಿ ಭಾರತದ ಸಾರ್ವಕಾಲಿಕ ದಾಖಲೆ:

2025-26ರಲ್ಲಿ ಭಾರತದ ಒಟ್ಟು ಸಾಗರ ಉತ್ಪನ್ನಗಳ ರಫ್ತು ಸಾರ್ವಕಾಲಿಕ ದಾಖಲೆಯಾದ 73,890.46 ಕೋಟಿ ರೂ.ಗೆ (19.72 ಲಕ್ಷ ಟನ್) ತಲುಪಿದೆ. ಕಳೆದ ಹಣಕಾಸು ವರ್ಷದಲ್ಲಿ ಇದು 62,408.45 ಕೋಟಿ ರೂ.ಯಷ್ಟಿತ್ತು (16.98 ಲಕ್ಷ ಟನ್). ಭಾರತದ ರಫ್ತು ಬುಟ್ಟಿಯಲ್ಲಿ ಹಿಪ್ಪುಗಟ್ಟಿಸಿದ ಸೀಗಡಿಯೇ ಸಿಂಹಪಾಲನ್ನು ಕಾಯ್ದುಕೊಂಡಿದೆ. ಇದರ ರಫ್ತು ಮೌಲ್ಯ ಶೇ. 13.2 ರಷ್ಟು ಹೆಚ್ಚಳವಾಗಿ 49,037.93 ಕೋಟಿ ರೂ.ಗೆ (7.93 ಲಕ್ಷ ಟನ್) ತಲುಪಿದೆ. ಒಣ ಸಾಗರ ಉತ್ಪನ್ನಗಳ (Dried items) ರಫ್ತು ಪ್ರಮಾಣ ಶೇ. 62ಕ್ಕೂ ಹೆಚ್ಚು ಹೆಚ್ಚಳ ಕಂಡಿದ್ದು, ರಫ್ತು ಮೌಲ್ಯ ಬರೋಬ್ಬರಿ ಶೇ. 78 ರಷ್ಟು ಜಿಗಿದು 5,079.09 ಕೋಟಿ ರೂ.ಗೆ ತಲುಪಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:24 pm, Fri, 7 August 26

Follow Us
ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್
ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್
ಇಂದು ಕೊನೆಯ ಆಷಾಢ ಶುಕ್ರವಾರ: ನಾಡ ದೇವಿ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ
ಇಂದು ಕೊನೆಯ ಆಷಾಢ ಶುಕ್ರವಾರ: ನಾಡ ದೇವಿ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ
'ಎತ್ತರಕ್ಕೆ ಬೆಳೆದರೆ ಅವರನ್ನು ಮುಗಿಸಲು ಪಿತೂರಿ ಮಾಡ್ತಾರೆ': ಸಚಿವ ಜಮೀರ್​​
'ಎತ್ತರಕ್ಕೆ ಬೆಳೆದರೆ ಅವರನ್ನು ಮುಗಿಸಲು ಪಿತೂರಿ ಮಾಡ್ತಾರೆ': ಸಚಿವ ಜಮೀರ್​​
ಚಾಮುಂಡಿಬೆಟ್ಟದಲ್ಲಿ ನಾಡದೇವಿಗೆ ವಿಶೇಷ ಪೂಜೆ; ಮಳೆ-ಬೆಳೆಗಾಗಿ ಪ್ರಾರ್ಥನೆ
ಚಾಮುಂಡಿಬೆಟ್ಟದಲ್ಲಿ ನಾಡದೇವಿಗೆ ವಿಶೇಷ ಪೂಜೆ; ಮಳೆ-ಬೆಳೆಗಾಗಿ ಪ್ರಾರ್ಥನೆ
ಶಾಸಕ ಶ್ರೀನಿವಾಸ್ ಮಾನೆ ಜನ್ಮದಿನ: ಧರ್ಮಗುರುಗಳಿಗೆ ರಕ್ತ ತುಲಾಭಾರ
ಶಾಸಕ ಶ್ರೀನಿವಾಸ್ ಮಾನೆ ಜನ್ಮದಿನ: ಧರ್ಮಗುರುಗಳಿಗೆ ರಕ್ತ ತುಲಾಭಾರ
ಮೆಜೆಸ್ಟಿಕ್​​ನಲ್ಲಿ ಆದ ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಮೋನಿಷಾ ವಿಜಯ್
ಮೆಜೆಸ್ಟಿಕ್​​ನಲ್ಲಿ ಆದ ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಮೋನಿಷಾ ವಿಜಯ್
ಆಷಾಢದ ಕೊನೆಯ ಶುಕ್ರವಾರ; ಮಹಾಲಕ್ಷ್ಮೀ ಅಲಂಕಾರದಲ್ಲಿ ಚಾಮುಂಡೇಶ್ವರಿ
ಆಷಾಢದ ಕೊನೆಯ ಶುಕ್ರವಾರ; ಮಹಾಲಕ್ಷ್ಮೀ ಅಲಂಕಾರದಲ್ಲಿ ಚಾಮುಂಡೇಶ್ವರಿ
ತೆಂಗಿನ ಮರವನ್ನೇ ಹೊತ್ತೊಯ್ದ ಪುಂಡಾನೆಗಳು: AI ವೀಡಿಯೋ ವೈರಲ್!
ತೆಂಗಿನ ಮರವನ್ನೇ ಹೊತ್ತೊಯ್ದ ಪುಂಡಾನೆಗಳು: AI ವೀಡಿಯೋ ವೈರಲ್!
ಹುಲಗೆಮ್ಮ ದೇವಸ್ಥಾನದ ಹುಂಡಿ ಎಣಿಕೆ
ಹುಲಗೆಮ್ಮ ದೇವಸ್ಥಾನದ ಹುಂಡಿ ಎಣಿಕೆ
ಖಾತೆ ಮಾಡಿಸಲು ಲಂಚ ಕೇಳಿದ ಆರೋಪ: GBA ಅಧಿಕಾರಿಗಳಿಗೆ ಸಾರ್ವಜನಿಕರಿಂದ ತರಾಟೆ
ಖಾತೆ ಮಾಡಿಸಲು ಲಂಚ ಕೇಳಿದ ಆರೋಪ: GBA ಅಧಿಕಾರಿಗಳಿಗೆ ಸಾರ್ವಜನಿಕರಿಂದ ತರಾಟೆ