DCM Ashwath Narayan Press Meet ಕೊರೊನಾ ಮಾರಿಯನ್ನು ನಿಯಂತ್ರಿಸಲು ರಾಜ್ಯ ಕೊವಿಡ್‌ ಟಾಸ್ಕ್ ಫೋರ್ಸ್ ತೆಗೆದುಕೊಂಡಿದೆ ಅನೇಕ ಪ್ರಮುಖ ತೀರ್ಮಾನಗಳು, ಏನವು? ಇಲ್ಲಿದೆ ವಿವರ

ಉಪ‌ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ನೇತೃತ್ವದಲ್ಲಿ ಕೋವಿಡ್ ಕಾರ್ಯಪಡೆ ಸಭೆ ಶನಿವಾರ ನಡೆಯಿತು. ಸಚಿವರಾದ ಸುರೇಶ ಕುಮಾರ, ಡಾ.ಸುಧಾಕರ, ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಹಾಜರಿದ್ದರು. ಇನ್ನೂ 10 ದಿನಗಳ ಕಾಲ ಲಾಕ್ ಡೌನ್ ಇರುವಾಗ ಅದರ ವಿಸ್ತರಣೆ ಬಗ್ಗೆ ಈಗ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

DCM Ashwath Narayan Press Meet ಕೊರೊನಾ ಮಾರಿಯನ್ನು ನಿಯಂತ್ರಿಸಲು ರಾಜ್ಯ ಕೊವಿಡ್‌ ಟಾಸ್ಕ್ ಫೋರ್ಸ್ ತೆಗೆದುಕೊಂಡಿದೆ ಅನೇಕ ಪ್ರಮುಖ ತೀರ್ಮಾನಗಳು, ಏನವು? ಇಲ್ಲಿದೆ ವಿವರ
DCM Ashwath Narayan Press Meet ಕೊರೊನಾ ಮಾರಿಯನ್ನು ನಿಯಂತ್ರಿಸಲು ರಾಜ್ಯ ಕೊವಿಡ್‌ ಟಾಸ್ಕ್ ಫೋರ್ಸ್ ತೆಗೆದುಕೊಂಡಿದೆ ಅನೇಕ ಪ್ರಮುಖ ತೀರ್ಮಾನಗಳು, ಏನವು? ಇಲ್ಲಿದೆ ವಿವರ
Follow us
|

Updated on:May 15, 2021 | 4:09 PM

ಬೆಂಗಳೂರು: ಕರ್ನಾಟಕ ರಾಜ್ಯ ಕೊವಿಡ್‌ ಟಾಸ್ಕ್ ಫೋರ್ಸ್ ಇಂದು ಸಭೆ ನಡೆಸಿದ್ದು, ಸಭೆಯ ಬಳಿಕ ಡಿಸಿಎಂ ಡಾ. ಅಶ್ವತ್ಥ್‌ ನಾರಾಯಣ ಅವರು ಕೊವಿಡ್ ಕಾರ್ಯಪಡೆ ಸಭೆಯ ಪ್ರಮುಖ ತೀರ್ಮಾನಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ. ಉಪ‌ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ನೇತೃತ್ವದಲ್ಲಿ ಕೋವಿಡ್ ಕಾರ್ಯಪಡೆ ಸಭೆ ಶನಿವಾರ ನಡೆಯಿತು. ಸಚಿವರಾದ ಸುರೇಶ ಕುಮಾರ, ಡಾ.ಸುಧಾಕರ, ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಹಾಜರಿದ್ದರು. ಇನ್ನೂ 10 ದಿನಗಳ ಕಾಲ ಲಾಕ್ ಡೌನ್ ಇರುವಾಗ ಅದರ ವಿಸ್ತರಣೆ ಬಗ್ಗೆ ಈಗ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಶನಿವಾರ ನಡೆದ ಕೊವಿಡ್‌ ಟಾಸ್ಕ್ ಫೋರ್ಸ್ ಸಭೆಯ ಪ್ರಧಾನ ಅಂಶಗಳು ಹೀಗಿವೆ: ಇನ್ಮುಂದೆ ಕೊವ್ಯಾಕ್ಸಿನ್ 2ನೇ ಡೋಸ್ ಮಾತ್ರ ನೀಡುವುದು. ಮೊದಲು ಡೋಸ್ ಪಡೆದ 6 ವಾರದ ಬಳಿಕ 2ನೇ ಡೋಸ್. 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಕೊವಿಶೀಲ್ಡ್ ಮೊದಲ ಡೋಸ್ ನೀಡುವುದಕ್ಕೆ ಆದ್ಯತೆ. ಮೊದಲ ಡೋಸ್ ಪಡೆದ 12 ವಾರಕ್ಕೆ 2ನೇ ಡೋಸೇಜ್. ಅದಕ್ಕೂ ಮೊದಲು ಯಾರಿಗೂ 2ನೇ ಡೋಸ್ ಇಲ್ಲ.

ಅದಾದ ಮೇಲೆ ಲಸಿಕೆಯ ದಾಸ್ತಾನು ನೋಡಿಕೊಂಡು ಲಸಿಕೆ ನೀಡಲು ತೀರ್ಮಾನ ಮಾಡಲಾಗಿದ್ದು, 18ರಿಂದ 44 ವರ್ಷದವರಿಗೆ ಲಸಿಕೆ ನೀಡುವುದಕ್ಕೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಆದ್ಯತೆ ಮೇಲೆ ಲಸಿಕೆ ನೀಡುವುದಕ್ಕೆ ಮೊದಲು ಪಟ್ಟಿ ತಯಾರಿ ಮಾಡಲಾಗುವುದು. ಅಂಚೆ ಇಲಾಖೆ, ಕೃಷಿ ಇಲಾಖೆ, ಡೆಲಿವರಿ ಬಾಯ್ಸ್, ಬ್ಯಾಂಕ್ ಸಿಬ್ಬಂದಿ, ಇಂಟರ್‌ನೆಟ್ ಪ್ರೊವೈಡರ್ಸ್‌ ಆದ್ಯತೆ ಪಟ್ಟಿಗೆ ಸೇರುತ್ತಾರೆ. ಆಸ್ಪತ್ರೆಯಿಂದ ಹೊರಗೆ ಲಸಿಕೆ ನೀಡುವುದಕ್ಕೆ ತೀರ್ಮಾನ ಮಾಡಲಾಗಿದೆ. ಶಾಲಾ-ಕಾಲೇಜುಗಳಲ್ಲೂ ಲಸಿಕೆ ನೀಡಲು ತೀರ್ಮಾನಿಸಿದ್ದೇವೆ.

ಕೊವಿಶೀಲ್ಡ್‌ ಲಸಿಕೆ ಖರೀದಿಗೆ ಜಾಗತಿಕ ಟೆಂಡರ್ ಕರೆಯುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಜಾಗತಿಕ ಟೆಂಡರ್ ಮೂಲಕ 2 ಕೋಟಿ ಲಸಿಕೆ ತರಿಸುತ್ತೇವೆ. ಒಮ್ಮೆ 50 ಲಕ್ಷದಂತೆ 4 ಸಲ 2 ಕೋಟಿ ಲಸಿಕೆ ತರಿಸುತ್ತೇವೆ.

ಚಿತಾಗಾರದಲ್ಲಿ ಕೆಲಸ ಮಾಡುವವರಿಗೆ ವಿಮೆ ನೀಡುತ್ತೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೊವಿಡ್ ಮೆಡಿಕಲ್ ತ್ಯಾಜ್ಯ ವಿಲೇವಾರಿಗೆ ಪ್ರತಿ ಬೆಡ್‌ಗೆ ಗರಿಷ್ಟ 10 ರೂಪಾಯಿ ನೀಡಲು ತೀರ್ಮಾನ. ಗ್ರಾಮೀಣ ಪ್ರದೇಶದಲ್ಲಿ ಹೋಂ ಐಸೋಲೇಷನ್ ಇರಲ್ಲ. ನಗರದ ಕೊಳಗೇರಿಗಳಲ್ಲೂ ಹೋಂ ಐಸೋಲೇಷನ್ ಇರಲ್ಲ. ಗ್ರಾಮೀಣ ಭಾಗದ PHC ಮಟ್ಟದಲ್ಲಿ CCCಗಳ ಸ್ಥಾಪನೆ ಮಾಡಲಾಗುವುದು.

ಮನೆ ಮನೆಗೆ ಹೋಗಿ ರಾಟ್ ಟೆಸ್ಟ್ ಮಾಡಲು ತೀರ್ಮಾನ:

* 1 ಕೋಟಿ ಆರ್‌ಎಟಿ ಕಿಟ್ ಖರೀದಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಮನೆ ಮನೆಗೆ ಹೋಗಿ ರಾಟ್ ಟೆಸ್ಟ್ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. * ಪಾಸಿಟಿವ್ ಆದವರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರಬೇಕು. ಗ್ರಾಮೀಣ ಮಟ್ಟದಲ್ಲಿನ ಹಾಸ್ಟೆಲ್ ಇತ್ಯಾದಿ ಕಡೆ ವ್ಯವಸ್ಥೆ. ಇದರ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗೆ ನೀಡಲು ತೀರ್ಮಾನ. * ಖಾಸಗಿ ವೈದ್ಯರು ಸಲಹೆ‌ ನೀಡಿದ ಸೋಂಕಿತರಿಗೂ ಸರ್ಕಾರಿ ಮೆಡಿಕಲ್ ಕಿಟ್ ಕೊಡುವುದು. * ವೈರಸ್ ನ ಜೆನೆಟಿಕ್ಸೆ ಬದಲಾವಣೆ ಬಗ್ಗೆ ಅಧ್ಯಯನ ನಡೆಸುವ Genome Lab ಗಳನ್ನು ರಾಜ್ಯದ ಆರು ಕಡೆ ಸ್ಥಾಪಿಸಲು ತೀರ್ಮಾನ. ನಾಲ್ಕು ಮೆಡಿಕಲ್ ಕಾಲೇಜುಗಳಲ್ಲಿ ಹಾಗೂ ಎರಡು, ಆರೋಗ್ಯ ಇಲಾಖೆ ವತಿಯಿಂದ ಮಾಡಲು ತೀರ್ಮಾನ * ಮುಂದಿನ 90 ದಿನಗಳಿಗೆ ಅಗತ್ಯ ಇರುವ ಔಷಧ ಮತ್ತು ಪರಿಕರಗಳನ್ನು ಹಂತ ಹಂತವಾಗಿ 260 ಕೋಟಿ ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ. ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಟೆಂಡರ್ ಮೂಲಕ ಖರೀದಿಸಲು ತೀರ್ಮಾನ * Black Fungal- ಪ್ರತಿ ವಾರ 400 ರೋಗಿಗಳಿಗೆ ಈ ರೀತಿ ಬ್ಲಾಕ್ ಫೋಂಗಲ್ ಬರುವ ನಿರೀಕೆ ಇದೆ… ವಾರಕ್ಕೆ 20,000 vials ಬೇಡಿಕೆಗೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. * ಆಮ್ಲಜನಕ ಬಳಕೆಯನ್ನು ನಿಯಂತ್ರಣ ಮಾಡುವ DRDO ಅಭಿವೃದ್ಧಿ ಪಡಿಸಿರುವ 1,000 ಯಂತ್ರಗಳನ್ನು ಪ್ರಾಯೋಗಿಕ ವಾಗಿ ಬಳಸಲು ತೀರ್ಮಾನ. ಇದಕ್ಕೆ 6ರಿಂದ 10 ಸಾವಿರ ಆಗುತ್ತದೆ. * ಆಮ್ಲಜನಕ ಬಾಟ್ಲಿಂಗ್ ಯುನಿಟ್ ಗಳನ್ನು ಕೆಲವು ಕಡೆ ಸ್ಥಾಪಿಸುವುದು. * ಒಟ್ಟು 843 ಕೋಟಿ ವೆಚ್ಚದಲ್ಲಿ ಪರಿಕರ ಖರೀದಿಸಲು ನಿರ್ಧಾರ. ತಾಲೂಕು ಆಸ್ಪತ್ರೆಗಳಲ್ಲಿ ಶೇ. 100ರಷ್ಟು ಆಕ್ಸಿಜನ್ ಬೆಡ್‌. ಈ ಪೈಕಿ ಶೇ. 25ರಷ್ಟು ಐಸಿಯು, ಶೇ. 25ರಷ್ಟು HDU ಬೆಡ್‌ ಗಳಿಗೆ ಮೀಸಲು. ಜಿಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಠ 100 ಐಸಿಯು ಬೆಡ್‌ ಸ್ಥಾಪನೆ. ವೈದ್ಯಕೀಯ ಕಾಲೇಜುಗಳಲ್ಲೂ ಕನಿಷ್ಠ 100 ಐಸಿಯು ಬೆಡ್‌ ಗೆ ವ್ಯವಸ್ಥೆ. ಬೆಂಗಳೂರಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ 100 ಬೆಡ್‌ಗಳ ಆಸ್ಪತ್ರೆ. * ಲಸಿಕೆ- ಜಾಗತಿಕ ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ ‌843 ಕೋಟಿ ಅನುದಾನದ ಅವಶ್ಯಕತೆ ಇದ್ದು ಇದಕ್ಕೆ ಕಾರ್ಯಪಡೆ ಒಪ್ಪಿಗೆ ನೀಡಿದೆ. * ರೆಮಿಡಿಸ್ವೀರ್-5 ಲಕ್ಷ ಇಂಜೆಕ್ಷನ್ ಖರೀದಿಗೆ‌ ಜಾಗತಿಕ ಟೆಂಡರ್. ಇದಕ್ಕೆ 75 ಕೋಟಿ ಮೀಸಲು. * ರಾಜ್ಯದ 207 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 30 ಬೆಡ್ ಇವೆ . ಇದರಲ್ಲಿ 10 ಬೆಡ್ ಐಸಿಯು; ತಾಲ್ಲೂಕು ಆಸ್ಪತ್ರೆ ಗಳಲ್ಲಿ 50 ಬೆಡ್ ಐಸಿಯು ( 15 ventilator, out of this 6 is for pediatric). ಮೆಡಿಕಲ್ ಕಾಲೇಜು‌ ಇಲ್ಲದ ಜಿಲ್ಲಾ ಕೇಂದ್ರಗಳಲ್ಲಿ ತಲಾ 100 ಬೆಡ್ ‌ಐಸಿಯು‌ ಮಾಡಲು ತೀರ್ಮಾನ. * ಬೆಂಗಳೂರು ನಗರ- ಆರೋಗ್ಯವನ್ನು ಬಿಬಿಎಂಪಿ ವ್ಯಾಪ್ತಿ ಯಿಂದ ತೆಗೆದು ಅದನ್ನು ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರಬೇಕು.. ತಾಂತ್ರಿಕ ಸಮಸ್ಯೆಗಳು ಇವೆ. ಇದರ ಬಗ್ಗೆ ಅಧ್ಯಯನ ಮಾಡಿ ಮುಂದಿನ ಸಭೆಗೆ ಮಂಡಿಸುವುದು. * ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ‌ 100 Bed Secondary hospital ನಿರ್ಮಾಣ

(DCM Ashwath Narayan headed karnataka covid task force Press meet details )

Published On - 3:49 pm, Sat, 15 May 21

Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ