AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​​ಸಿ ಒಳಮೀಸಲಾತಿ ಸಮೀಕ್ಷೆ: ನೀವು ತಿಳಿಯಲೇಬೇಕಾದ ಅಂಶಗಳು

ಜಾತಿಗಣತಿ ಜಟಾಪಟಿಯ ಮಧ್ಯೆ ರಾಜ್ಯ ಸರ್ಕಾರ ಈಗ ಮತ್ತೊಂದು ಮಹತ್ವದ ತೀರ್ಮಾನ ಮಾಡಿದೆ. ದಲಿತ ಸಮುದಾಯದ ಬಹುಕಾಲದ ಬೇಡಿಕೆ ಒಳಮೀಸಲಾತಿ ಸಮೀಕ್ಷೆಗೆ ಮುಂದಾಗಿದೆ. ಈ ಮೂಲಕ ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯ ಮತ್ತೊಂದು ಭರವಸೆಯನ್ನು ಈಡೇರಿಸಲು ಮುಂದಾಗಿದೆ. ಈ ಒಳಮೀಸಲಾತಿ ಸಮೀಕ್ಷೆ ಬಗ್ಗೆ ಜನರು ತಿಳಿದಿರಲೇಬೇಕಾದ ಬಹುಮುಖ್ಯ ಅಂಶಗಳು ಇಲ್ಲಿವೆ.

ಎಸ್​​ಸಿ ಒಳಮೀಸಲಾತಿ ಸಮೀಕ್ಷೆ: ನೀವು ತಿಳಿಯಲೇಬೇಕಾದ ಅಂಶಗಳು
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: May 05, 2025 | 2:55 PM

ಬೆಂಗಳೂರು, ಮೇ 5: ಪರಿಶಿಷ್ಟ ಜಾತಿ (SC) ವರ್ಗದ ಬಹುಕಾಲದ ಬೇಡಿಕೆ ಒಳಮೀಸಲಾತಿ ಸಮೀಕ್ಷೆಗೆ (Internal Reservation Caste Census) ಕೊನೆಗೂ ರಾಜ್ಯ ಸರ್ಕಾರ (Karnataka Govt) ಮುಂದಾಗಿದೆ. ಇಂದಿನಿಂದಲೇ ಒಳಮೀಸಲಾತಿ ಸಮೀಕ್ಷೆ ಆರಂಭವಾಗಿದ್ದು, ದಲಿತ ಸಮುದಾಯದ ಎಡ, ಬಲ ತಿಕ್ಕಾಟಕ್ಕೆ ಬ್ರೇಕ್ ಹಾಕುವ ಕಾಲ ಸನ್ನಿಹಿತವಾಗಿದೆ. ಈ ಸಮೀಕ್ಷೆಗೆ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ಆಯೋಗ ರಚಿಸಲಾಗಿದೆ. ಸಿಬ್ಬಂದಿಗೆ ನಾಗಮೋಹನ್‌ ದಾಸ್‌ ಅವರೇ ತರಬೇತಿ ನೀಡಿದ್ದಾರೆ. ಏಕಸದಸ್ಯ ಆಯೋಗದ ಮೂಲಕವೇ ಸರ್ಕಾರ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ಈ ಬಗ್ಗೆ ಸಚಿವರಾದ ಪರಮೇಶ್ವರ್, ಕೆ.ಹೆಚ್ ಮುನಿಯಪ್ಪ, ಹೆಚ್​.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಈಗಾಗಲೇ ಸಭೆ ಕೂಡ ನಡೆಸಿದ್ದರು.

ಮೂರು ಹಂತಗಳಲ್ಲಿ ಒಳಮೀಸಲಾತಿ ಸಮೀಕ್ಷೆ

ಮೊದಲ ಹಂತದಲ್ಲಿ ಮನೆ ಮನೆಗೆ ತೆರಳಿ ಶಿಕ್ಷಕರು ಸಮೀಕ್ಷೆ ನಡೆಸಲಿದ್ದಾರೆ. ಸುಮಾರು 65 ಸಾವಿರ ಶಿಕ್ಷಕರನ್ನು ಡಿಸಿಗಳು ನೇಮಕ ಮಾಡಿದ್ದಾರೆ. 10 ರಿಂದ 12 ಶಿಕ್ಷಕರಿಗೆ ಒಬ್ಬರು ಮೇಲ್ವಿಚಾರಕರು ಇರುತ್ತಾರೆ. ಎರಡನೇ ಹಂತದಲ್ಲಿ ಮೇ 19 ರಿಂದ 21 ರವರೆಗೆ ವಿಶೇಷ ಶಿಬಿರ ಏರ್ಪಡಿಸಲಾಗುತ್ತದೆ. ಮೂರನೇ ಹಂತದಲ್ಲಿ ಮೇ 19 ರಿಂದ ಮೇ 23 ರವರೆಗೆ ಆನ್‌ಲೈನ್ ಮೂಲಕ ಜಾತಿ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಹೇಗಿರುತ್ತೆ ಒಳಮೀಸಲಾತಿ ಸಮೀಕ್ಷೆಗೆ ದತ್ತಾಂಶ ಸಂಗ್ರಹ?

  • 46 ಪ್ರಶ್ನೆಗಳು, ಉಪಪ್ರಶ್ನೆಗಳ ಮೂಲಕ ದತ್ತಾಂಶ ಸಂಗ್ರಹ.
  • ಮೊಬೈಲ್ ಆ್ಯಪ್ ಮೂಲಕವೂ ಸಿಬ್ಬಂದಿ ದತ್ತಾಂಶ ಸಂಗ್ರಹಿಸಲಿದ್ದಾರೆ.
  • ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರಿಂದ ಗಣತಿ ನಡೆಯಲಿದೆ.
  • ಪ್ರತಿ ಗಣತಿದಾರರಿಗೆ 100 ರಿಂದ 120 ಮನೆಗಳು ನಿಗದಿಯಾಗಿವೆ.
  • ಸಮೀಕ್ಷೆ ವೇಳೆ ಕುಟುಂಬದ ಸದಸ್ಯರ ಜಾತಿ ಪ್ರಮಾಣಪತ್ರ ಪರಿಶೀಲಿಸಲಾಗುತ್ತದೆ.
  • ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆಗಳನ್ನು ನೀಡಬೇಕು.
  • ಮೂರು ದಾಖಲೆಗಳ ಪೈಕಿ ಒಂದು ದಾಖಲೆ ಕೊಡಬಹುದು.
  • ಪ್ರಶ್ನಾವಳಿ ಭರ್ತಿ ಮಾಡಿ, ದಾಖಲೆ ಅಪ್​ಲೋಡ್ ಮಾಡಬೇಕು.
  • ಬಳಿಕ ಕುಟುಂಬದ ಸದಸ್ಯರೊಬ್ಬರ ಸಹಿ ಪಡೆಯಬೇಕು.
  • ಅವರ ಫೋಟೋ ಅಪ್​ಲೋಡ್ ಮಾಡಿ, ಲಾಕ್ ಮಾಡ್ಬೇಕು.
  • ಸಹಾಯವಾಣಿ ಸಂಖ್ಯೆಗೆ (9481359009) ಕರೆ ಮಾಡುವ ಮೂಲಕವೂ ಜನರು ಮಾಹಿತಿ ನೀಡಬಹುದು. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ: ಕರ್ನಾಟಕ ಒಳಮೀಸಲಾತಿ ಜಾತಿ ಗಣತಿ ಇಂದಿನಿಂದ ಶುರು: ಸಿಎಂ ಸಿದ್ದರಾಮಯ್ಯ ಮಾಹಿತಿ

ಇದನ್ನೂ ಓದಿ
Image
ಕರ್ನಾಟಕ ಒಳಮೀಸಲಾತಿ ಗಣತಿ ಇಂದಿನಿಂದ ಶುರು: ಸಿಎಂ ಸಿದ್ದರಾಮಯ್ಯ ಮಾಹಿತಿ
Image
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
Image
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್
Image
ಜನಗಣತಿಯಲ್ಲಿ ಜಾತಿಗಣತಿ; ಕೇಂದ್ರದ ನಿರ್ಧಾರಕ್ಕೆ ಕಾಂಗ್ರೆಸ್ ಹೇಳಿದ್ದೇನು?

ಈ ಮಧ್ಯೆ ಸಮೀಕ್ಷೆಯಲ್ಲಿ ಒಂದೇ ಜಾತಿ ಹೆಸರು ಬರೆಸುವಂತೆ ದಲಿತ ನಾಯಕರು ಸಲಹೆ ನೀಡಿದ್ದಾರೆ. ಆದಿ ಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ ಎಂದು ಬರೆಸಿದರೆ ಗೊಂದಲ ಆಗುತ್ತದೆ ಎಂಬ ಕಾರಣಕ್ಕೆ ಮಾದಿಗ ಎಂದು ನಮೂದಿಸುವಂತೆ ಕುಟುಂಬಗಳಿಗೆ ಸಲಹೆ ನೀಡಿದ್ದಾರೆ. ಈ ಮೂಲಕ ಒಗ್ಗಟ್ಟಿನ ಮಂತ್ರ ಪಠಿಸಲು ದಲಿತ ಎಡಗೈ ನಾಯಕರು ಸಜ್ಜಾಗಿದ್ದಾರೆ.

ವರದಿ: ಈರಣ್ಣ ಬಸವ, ‘ಟಿವಿ9’ ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ