ವಿಜಯಪುರ: ಹಿಟ್ಟಿನಹಳ್ಳಿ ಬಳಿ ಬೈಕ್ಗಳ ನಡುವೆ ಡಿಕ್ಕಿ, MLA ಸಂಬಂಧಿ ಸ್ಥಳದಲ್ಲೇ ಸಾವು
ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹಿಟ್ಟಿನಹಳ್ಳಿ ಬಳಿ 2 ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಸವಾರರು ಸಾವನ್ನಪ್ಪಿದ್ದಾರೆ.

ಮೃತ ಬೈಕ್ ಸವಾರ ಗಂಗಾರಾಮ ಚೌವ್ಹಾಣ್ (ಎಡ); ಶಾಸಕ ದೇವಾನಂದ ಚೌವ್ಹಾಣ್ (ಬಲ)
ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹಿಟ್ಟಿನಹಳ್ಳಿ ಬಳಿ 2 ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಸವಾರರು ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಗಂಗಾರಾಮ ಚೌವ್ಹಾಣ್ (59) ಎಂಬ ಬೈಕ್ ಸವಾರ ಮೃತಪಟ್ಟಿದ್ದಾರೆ. ಇವರು ನಾಗಠಾಣ ಶಾಸಕ ದೇವಾನಂದ ಚೌವ್ಹಾಣ್ ಅವರ ದಾಯಾದಿ ಸಹೋದರ ಎಂದು ತಿಳಿದುಬಂದಿದೆ.
ಇನ್ನು, ಅಪಘಾತಕ್ಕೀಡಾದ ಮೂರನೇ ಸವಾರನ ಸ್ಥಿತಿ ಗಂಭೀರವಾಗಿದೆ. ಈತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಾರುತಿ, ಹುಂಡೈ ಕಾರುಗಳು ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು, ಯಾವೂರಲ್ಲಿ?



