AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಯಗೊಂಡ ಆನೆ ಚಿಕಿತ್ಸೆಗೆ ಪಾದರಕ್ಷೆ, ಮೈಸೂರು ಪಶುವೈದ್ಯರ‌ ವಿಭಿನ್ನ ಪ್ರಯತ್ನ

ಮೈಸೂರಿನ ಪಶು ವೈದ್ಯರು ಆನೆಯೊಂದರ ಚಿಕಿತ್ಸೆಗಾಗಿ ಅಳವಡಿಸಿಕೊಂಡಿರುವ ವಿಶೇಷ ವಿಭಿನ್ನವಾದ ಕ್ರಮ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಗಾಯಗೊಂಡ ಆನೆಗೆ ಚಿಕಿತ್ಸೆ ನೀಡಲೆಂದು ಆನೆಗೆ ಪಾದರಕ್ಷೆ ತಯಾರಿಸಲಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೈದ್ಯರಾಗಿರುವ ಡಾ ರಮೇಶ್ ಆನೆಗಾಗಿ ವಿಶೇಷ ಪಾದರಕ್ಷೆಯನ್ನು ತಯಾರಿಸಿದ್ದಾರೆ. ವಾಹನದ ಟೈರ್‌ ಬಳಸಿಕೊಂಡು ಪಾದರಕ್ಷೆಯೊಂದನ್ನು ತಯಾರಿಸಿದ್ದಾರೆ.

ಗಾಯಗೊಂಡ ಆನೆ ಚಿಕಿತ್ಸೆಗೆ ಪಾದರಕ್ಷೆ, ಮೈಸೂರು ಪಶುವೈದ್ಯರ‌ ವಿಭಿನ್ನ ಪ್ರಯತ್ನ
ಆನೆಗೆ ಪಾದರಕ್ಷೆ
Follow us
ರಾಮ್​, ಮೈಸೂರು
| Updated By: ಆಯೇಷಾ ಬಾನು

Updated on: Sep 09, 2023 | 10:08 AM

ಮೈಸೂರು, ಸೆ.09: ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕ್ರಾಂತಿಕಾರಕ ಬದಲಾವಣೆಗಳಾಗುತ್ತಿವೆ.‌ ಪ್ರತಿನಿತ್ಯ ಒಂದಲ್ಲ‌ ಒಂದು ವಿಶೇಷ ವಿಭಿನ್ನ ಚಿಕಿತ್ಸಾ ಕ್ರಮಗಳನ್ನು ವೈದ್ಯರು ಅಳವಡಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಇಂತಹ ಚಿಕಿತ್ಸೆಗಳು ವಿಶ್ವದಾದ್ಯಂತ ಕಂಡು ಬರುತ್ತವೆ. ಆದರೆ ಮೈಸೂರಿನ(Mysuru) ಪಶು ವೈದ್ಯರು ಆನೆಯೊಂದರ(Elephant) ಚಿಕಿತ್ಸೆಗಾಗಿ ಅಳವಡಿಸಿಕೊಂಡಿರುವ ವಿಶೇಷ ವಿಭಿನ್ನವಾದ ಕ್ರಮ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಗಾಯಗೊಂಡ ಆನೆಗೆ ಚಿಕಿತ್ಸೆ ನೀಡಲೆಂದು ಆನೆಗೆ ಪಾದರಕ್ಷೆ ತಯಾರಿಸಲಾಗಿದೆ.

ಆನೆ ಕಾಲಿಗೆ ಗಾಯ, ವಿಶೇಷ ಪಾದರಕ್ಷೆ ತಯಾರಿಸಿದ ವೈದ್ಯ

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ದೊಡ್ಡ ಹರವೆ ಆನೆ ಕ್ಯಾಂಪ್‌ನಲ್ಲಿರುವ 60 ವರ್ಷದ ಕುಮಾರಿ ಆನೆಯ ಕಾಲಿಗೆ ಗಾಯವಾಗಿತ್ತು. ಕುಮಾರಿ ಆನೆಯನ್ನು 2015ರಲ್ಲಿ ಕೇರಳ ಮೂಲದ ಸರ್ಕಸ್ ಕಂಪನಿಯಿಂದ ರಕ್ಷಣೆ ಮಾಡಿ ಕರೆತರಲಾಗಿತ್ತು. ಅಂದಿನಿಂದ ಕುಮಾರಿ ಆನೆ ದೊಡ್ಡ ಹರವೆ ಆನೆ ಕ್ಯಾಂಪ್‌ನಲ್ಲಿ ಅಶ್ರಯಪಡೆದು ಆರಾಮಾಗಿತ್ತು. ಕೆಲ ದಿನಗಳ ಹಿಂದೆ ಕುಮಾರಿ ಆನೆಯ ಬಲಗಾಲಿಗೆ ಗಾಯವಾಗಿದೆ. ತಕ್ಷಣ ವೈದ್ಯರ ತಂಡ‌ ಕುಮಾರಿ ಆನೆಗೆ ಔಷಧ ಸಿದ್ದಪಡಿಸಿ ಹಚ್ಚಲಾಗಿತ್ತು. ಆದರೆ ಗಾಯದ ಸ್ಥಳದಲ್ಲಿ ಔಷಧಿ ನಿಂತಿಲ್ಲ. ಔಷಧಿ ಮಣ್ಣು ಪಾಲಾಗುತಿತ್ತು. ಇದರಿಂದ ಆನೆಯ ಕಾಲಿನ ಗಾಯ ವಾಸಿಯಾಗಿಲ್ಲ. ಎಷ್ಟೇ ಪ್ರಯತ್ನ ಪಟ್ಟರು ಆನೆಯ ಕಾಲಿಗೆ ಔಷಧಿಯನ್ನು ಹಚ್ಚಲು ಸಾಧ್ಯವಾಗಿಲ್ಲ. ಕೊನೆಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೈದ್ಯರಾಗಿರುವ ಡಾ ರಮೇಶ್ ಹೊಸ ಐಡಿಯಾ ಮಾಡಿದ್ದಾರೆ. ಆನೆಗಾಗಿ ವಿಶೇಷ ಪಾದರಕ್ಷೆಯನ್ನು ತಯಾರಿಸಿದ್ದಾರೆ. ವಾಹನದ ಟೈರ್‌ ಬಳಸಿಕೊಂಡು ಪಾದರಕ್ಷೆಯೊಂದನ್ನು ತಯಾರಿಸಿದ್ದಾರೆ. ನಂತರ ಔಷಧಿಯನ್ನು ಪಾದರಕ್ಷೆಗೆ ಹಚ್ಚಿ ಕುಮಾರಿ ಆನೆಯ ಕಾಲಿಗೆ ಅಳವಡಿಸಿದ್ದಾರೆ. ಡಾ ರಮೇಶ್ ಪ್ರಯತ್ನ ಯಶಸ್ವಿಯಾಗಿದೆ. ಔಷಧಿಯ ಪರಿಣಾಮ ಕುಮಾರಿ ಆನೆಯ ಕಾಲಿಗ ಗಾಯ ವಾಸಿಯಾಗುತ್ತಿದೆ. ಕುಮಾರಿ ಆನೆ ನೋವು ಕಡಿಮೆಯಾಗಿದ್ದು ಮತ್ತೆ ಲವಲವಿಕೆಯಿಂದಿದೆ.

ಯಾರು ಈ ಡಾ ರಮೇಶ್

ಡಾ ರಮೇಶ್ ಅಪ್ಪಟ ಗ್ರಾಮೀಣ ಪ್ರತಿಭೆ. ವಯಸ್ಸು 29. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು‌ ಅನ್ನೋ ಮಾತಿಗೆ ಡಾ ರಮೇಶ್ ತಕ್ಕಂತಿದ್ದಾರೆ. ಅವರನ್ನು ನೋಡಿದರೆ ಅವರನ್ನು ಯಾರು ವೈದ್ಯರು ಅಂತಾ ಹೇಳುವುದಿಲ್ಲ. ಸಣಕಲು ದೇಹ ಅಬ್ಬಾಬ್ಬ ಅಂದ್ರೆ ಸುಮಾರು 50ಕೆಜಿ ತೂಗುತ್ತಾರೆ ಅಷ್ಟೇ. ಸದ್ಯ ಡಾ ರಮೇಶ್ ನಾಗರಹೊಳೆ ವಲಯದಲ್ಲಿ ಅರಣ್ಯ ಇಲಾಖೆಯ ಪಶುವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ ರಮೇಶ್ ಹುಟ್ಟಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಛತ್ರದ ಹೊಸಹಳ್ಳಿ ಗ್ರಾಮದವರು. ಕಳೆದ 5 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಪಶುವೈದ್ಯರಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಸಾಕಷ್ಟು ಸಾಹಸಮಯ ಕೆಲಸಗಳನ್ನು‌ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳನ್ನು ಸುರಕ್ಷಿತವಾಗಿ ವಾಪಸ್ಸು ಕಾಡಿಗೆ ಕಳುಹಿಸುವುದರಲ್ಲಿ ಡಾ ರಮೇಶ್ ಪರಿಣಿತಿ ಹೊಂದಿದ್ದಾರೆ. ಡಾ ರಮೇಶ್ ಇದುವರೆಗೂ 6 ಹುಲಿ ಕಾರ್ಯಾಚರಣೆ 35 ಆನೆ ಕಾರ್ಯಾಚರಣೆ ಹಾಗೂ 50ಕ್ಕೂ ಹೆಚ್ಚು ಚಿರತೆಗಳನ್ನು ನಾಡಿನಿಂದ ಕಾಡಿಗೆ ವಾಪಸ್ಸು ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಹಾಸನ: ಚಿಕಿತ್ಸೆ ನೀಡಲು ಸೆರೆ ಹಿಡಿಯುತ್ತಿದ್ದಾಗ ಆನೆ ದಾಳಿ, ಮಲೆನಾಡ ಶಾರ್ಪ್ ಶೂಟರ್ ಸಾವು

ಪಶು ವೈದ್ಯರನ್ನಾಗಿಸಿದ ಸಾಕುಪ್ರಾಣಿಗಳ ಯಾತನೆ

ಡಾ ರಮೇಶ್ ಪಶುವೈದ್ಯರಾಗಿದ್ದೇ ರೋಚಕ. ಅವರಿಗೆ ಪ್ರಾಣಿಗಳಿಗೆ‌ ಚಿಕಿತ್ಸೆ ನೀಡಬೇಕು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕೆಂಬುದು ಬಾಲ್ಯದ ಕನಸು. ಡಾ ರಮೇಶ್ ಅವರದ್ದು ರೈತಾಪಿ ಕುಟುಂಬ‌. ಮನೆಯಲ್ಲಿ ಹಸು, ಕರು, ಎಮ್ಮೆ, ನಾಯಿ, ಬೆಕ್ಕು ಹೀಗೆ ನಾನಾ ಪ್ರಾಣಿಗಳಿದ್ದವು. ಅವುಗಳನ್ನು ಕಂಡರೆ ರಮೇಶ್ ಅವರಿಗೆ ಎಲ್ಲಿಲ್ಲದ ಪ್ರೀತಿ. ಹೆಚ್ಚಿನ ಕಾಲ ಅವುಗಳ ಜೊತೆಯಲ್ಲೇ ಕಳೆಯುತ್ತಿದ್ದರು. ಇನ್ನು ಹಳ್ಳಿಗಳಲ್ಲಿ ಸಾಮಾನ್ಯವಾಗಿ ಮನುಷ್ಯರು ಹುಷಾರು ತಪ್ಪಿದರೆ ಸೂಕ್ತ ಕಾಲಕ್ಕೆ ಚಿಕಿತ್ಸೆ ಸಿಗುತ್ತಿರಲಿಲ್ಲ. ಇನ್ನು ಪ್ರಾಣಿಗಳಿಗೆ ಚಿಕಿತ್ಸೆ ಕೇಳೋದೆ ಬೇಡ ಆ ರೀತಿ ಇತ್ತು. ಪರಿಸ್ಥಿತಿ. ಯಾವಾಗಲೂ ತನ್ನ ನೆಚ್ಚಿನ ಪ್ರಾಣಿಗಳು ಅನಾರೋಗ್ಯದಿಂದ ಬಳಲುವಾಗ, ಗಾಯಗೊಂಡು ನರಳುವಾಗ ರಮೇಶ್ ಅವರ ಕರುಳು ಕಿತ್ತು ಬರುತಿತ್ತು. ಎಷ್ಟೋ ಬಾರಿ ತಮ್ಮ ಸಾಕು ಪ್ರಾಣಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ತಮ್ಮ ಕಣ್ಣ ಮುಂದೆ ಸಾವನ್ನಪ್ಪಿದ್ದು ರಮೇಶ್ ಅವರನ್ನು ಬಹುವಾಗಿ ಕಾಡಿದೆ. ಇದೆಲ್ಲವನ್ನೂ ನೋಡಿದ ರಮೇಶ್ ನಾನು ಪಶುವೈದ್ಯ ಆಗಲೇಬೇಕು. ಮನುಷ್ಯರಾದರೆ ತಮ್ಮ ನೋವು ಹೇಳಿಕೊಳ್ಳುತ್ತಾರೆ ಆದರೆ ಪ್ರಾಣಿಗಳಿಗೆ ಹೇಳಿಕೊಳ್ಳಲು ಬಾಯಿ ಇಲ್ಲ‌. ಹೀಗಾಗಿ ಅವುಗಳ ಮೂಕರೋಧನೆಗೆ ಇತಿಶ್ರೀ ಹಾಡಬೇಕು ಅನ್ನೋ ಸಂಕಲ್ಪ ಮಾಡಿದರು. ಅಷ್ಟೇ ಅಲ್ಲ ಅದಕ್ಕಾಗಿ ಕಠಿಣವಾಗಿ ಅಭ್ಯಾಸ ಮಾಡಿ ಇಂದು ಒಬ್ಬ ವಿಶೇಷ ಪಶುವೈದ್ಯರಾಗಿ ರಮೇಶ್ ಗುರುತಿಸಿಕೊಂಡಿದ್ದಾರೆ.

ಓದಿದ್ದು ಕನ್ನಡ ಮಾಧ್ಯಮ – ಆಗಿದ್ದು ವೈದ್ಯ

ರಮೇಶ್ ಪ್ರಾಥಮಿಕ ಪ್ರೌಢಶಿಕ್ಷಣ ಪೂರೈಸಿದ್ದು ಕನ್ನಡ ಮಾಧ್ಯಮದಲ್ಲಿ. ವೈದ್ಯನಾಗಲು ಪಿಯುಸಿಯಲ್ಲಿ ಪಿಸಿಎಂಬಿ ತೆಗೆದುಕೊಳ್ಳಬೇಕಾಗಿತ್ತು. ಕನ್ನಡ‌ ಮಾಧ್ಯಮದಲ್ಲಿ ಓದಿದ್ದ ರಮೇಶ್‌ಗೆ ಇದು ಕಬ್ಬಿಣದ ಕಡಲೆಯಾಗಿತ್ತು. ನನಗೆ ಓದುವುದೇ ಬೇಡ ಅನ್ನೋ ತೀರ್ಮಾನಕ್ಕೆ ರಮೇಶ್ ಬಂದಿದ್ದರು‌. ಬಲವಂತವಾಗಿ ರಮೇಶ್ ಅವರನ್ನು ಕಾಲೇಜಿಗೆ ಸೇರಿಸಲಾಯಿತು. ಆದರೆ ಮೂರು ತಿಂಗಳ ನಂತರ ರಮೇಶ್ ಕಾಲೇಜು ಬಿಟ್ಟು ಮನೆ ಸೇರಿದರು. ಆಗ ಅವರಿಗೆ ಧೈರ್ಯ ತುಂಬಿದ್ದು ಅವರ ಎಸ್ ಎಸ್ ಎಲ್ ಸಿಯ ವಿಜ್ಞಾನದ ಶಿಕ್ಷಕರು. ರಮೇಶ್‌ಗೆ ತನ್ನ ಕನಸು ನನಸು ಮಾಡಿಕೊಳ್ಳಲು ಓದಲೇಬೇಕು ಅನ್ನುವುದನ್ನು ಮನದ್ಟಟ್ಟು ಮಾಡಿ ರಮೇಶ್ ಶಿಕ್ಷಣ ಮುಂದುವರಿಸುವಂತೆ ಅವರು ಮಾಡಿದರು.

ಅರಣ್ಯ ಇಲಾಖೆ

ರಮೇಶ್ ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಮದ್ದೂರಿನ ಚಿಕ್ಕ ಅರಸಿನಕರೆಯಲ್ಲಿ ಪೂರೈಸಿದರು‌‌. ಅದಾದ ನಂತರ ಹಾಸನದ ಪಶುವೈದ್ಯಕೀಯ ಕಾಲೇಜು ಸೇರಿ ಪದವಿ ಪಡೆದುಕೊಂಡರು. ನಂತರ ಬೆಂಗಳೂರು ಪಶು ವೈದ್ಯಕೀಯ ಕಾಲೇಜು ಸೇರಿ ಪ್ರಾಣಿಗಳ ಶಸ್ತ್ರಚಿಕಿತ್ಸೆ ಹಾಗೂ ರೇಡಿಯಾಲಜಿಯ ಕೋರ್ಸ್ ಪೂರೈಸಿದರು. 2018ರಲ್ಲಿ ರಮೇಶ್ ಅವರ ಕನಸು ನನಸಾಯಿತು. ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂತು. ಆಗ ರಮೇಶ್ ಅವರ ವಯಸ್ಸು ಕೇವಲ 24. ಮೊದಲ ಡ್ಯೂಟು ಬನ್ನೇರುಘಟ್ಟದ ಪ್ರಾಣಿಗಳ ಪುನರ್ವಸತಿ ಕೇಂದ್ರ. ಅಲ್ಲಿ ರಮೇಶ್ ಅವರಿಗೆ ಪ್ರ್ಯಾಕ್ಟಿಕಲ್ ಆಗಿ ಕಲಿಯಲು ಸಾಕಷ್ಟು ಅವಕಾಶ ಸಿಕ್ಕಿತು. ಅದನ್ನು ಸದುಪಯೋಗಪಡಿಸಿಕೊಂಡ ಡಾ ರಮೇಶ್ ಶ್ರದ್ದೆಯಿಂದ ಎಲ್ಲವನ್ನೋ ಕಲಿತರು. ಬನ್ನೇರುಘಟ್ಟದಲ್ಲಿದ್ದಾಗ ಸಿಂಹದ ಮರಿಗಳು ಹುಲಿಮರಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಸೈ ಎನಿಸಿಕೊಂಡರು. 2021ರಲ್ಲಿ ಅವರಿಗೆ ಮೈಸೂರು ಜಿಲ್ಲಾ ವ್ಯಾಪ್ತಿಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಇದೇ ವೇಳೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021ನ್ನು ಯಶಸ್ವಿಯಾಗಿ ನೆರವೇರಿಸುವಲ್ಲಿ ಡಾ ರಮೇಶ್ ಪಾತ್ರ ಮಹತ್ವದಾಗಿತ್ತು. ಕೋವಿಡ್ ಕಾಲಘಟ್ಟವಾಗಿದ್ದರಿಂದ ಆನೆಗಳ ಸುರಕ್ಷತೆ ಅದರ ಮಾವುತರು ಕಾವಾಡಿಗಳ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಾಗಿತ್ತು. ಹಲವು ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಡಾ ರಮೇಶ್ ಕರ್ತವ್ಯ ನಿರ್ವಹಿಸಿದ್ದಾರೆ. ಇದೆಲ್ಲಕೂ ಕಾರಣ ರಮೇಶ್ ಅವರಲ್ಲಿರುವ ಪ್ರಾಣಿಗಳ ಬಗೆಗಿನ ಪ್ರೀತಿಯೇ ಕಾರಣ. ಚಿಕ್ಕ ವಯಸ್ಸಿಗೆ ಮಹತ್ತರ ಸಾಧನೆ ಮಾಡಿರುವ ಡಾ ರಮೇಶ್ ಅವರಿಂದ ಮತ್ತಷ್ಟು ಉತ್ತಮ ಕೆಲಸಗಳಾಗಲಿ ಅನ್ನೋದರ ನಮ್ಮ ಶುಭ ಹಾರೈಕೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್