AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂದಿರ ದೇಣಿಗೆ ಲೆಕ್ಕ: ಚುನಾವಣೆ ಬಂದಾಗಲೇ ಇದರ ಬಗ್ಗೆ ಪ್ರಶ್ನೆ, ಸಂದೇಹ ಬರುತ್ತದೆ – ಪೇಜಾವರ ಶ್ರೀ ಅಸಮಾಧಾನ

ರಾಮ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹವಾಗುತ್ತಿರುವ ದೇಣಿಗೆಯ ಲೆಕ್ಕ ಕೇಳಿದ ರಾಜಕಾರಣಿಗಳಿಗೆ ಪೇಜಾವರ ಶ್ರೀಗಳು ತಿರುಗೇಟು ನೀಡಿದ್ದಾರೆ. ಎಲೆಕ್ಷನ್ ಬಳಿಕ ಅವರಿಗೆ ಉತ್ತರ ಸಿಗುತ್ತೋ, ಬಿಡುತ್ತೋ ಗೊತ್ತಿಲ್ಲ. ಈ ಹಿಂದೆಯೂ ಲೆಕ್ಕ ಕೇಳಿದ್ದರು, ಲೆಕ್ಕ ಕೊಟ್ಟಾಗಿದೆ. ವ್ಯರ್ಥ ಪ್ರಶ್ನೆಗಳನ್ನ ಕೇಳ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಂದಿರ ದೇಣಿಗೆ ಲೆಕ್ಕ: ಚುನಾವಣೆ ಬಂದಾಗಲೇ ಇದರ ಬಗ್ಗೆ ಪ್ರಶ್ನೆ, ಸಂದೇಹ ಬರುತ್ತದೆ - ಪೇಜಾವರ ಶ್ರೀ ಅಸಮಾಧಾನ
ಮಂದಿರ ದೇಣಿಗೆ ಲೆಕ್ಕ: ಚುನಾವಣೆ ಬಂದಾಗಲೇ ಇದರ ಬಗ್ಗೆ ಪ್ರಶ್ನೆ-ಸಂದೇಹಗಳು ಬರ್ತಿವೆ- ಪೇಜಾವರ ಶ್ರೀ ಅಸಮಾಧಾನ
TV9 Web
| Updated By: ಸಾಧು ಶ್ರೀನಾಥ್​|

Updated on:Oct 21, 2021 | 1:07 PM

Share

ಗದಗ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹವಾಗುತ್ತಿರುವ ದೇಣಿಗೆಯ ಲೆಕ್ಕ ಕೇಳಿದ ರಾಜಕಾರಣಿಗಳಿಗೆ ಪೇಜಾವರ ಶ್ರೀಗಳು ತಿರುಗೇಟು ನೀಡಿದ್ದಾರೆ. ಗದಗ ನಗರದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡುತ್ತಾ ದೇಣಿಗೆ ಸಂಗ್ರಹಕ್ಕೆ ಸಂಬಂಧಿಸಿದ ಟ್ರಸ್ಟ್ ಇದೆ ಅವರ ಬಳಿ ಇದನ್ನೆಲ್ಲ ಕೇಳಬೇಕು. ಸಾರ್ವಜನಿಕರ ಬಳಿ ಕೇಳುವುದು ಹಾಸ್ಯಾಸ್ಪದವಾದೀತು. ಯಾವುದಾದರೂ ಚುನಾವಣೆ ಬಂದಾಗಲೇ ಈ ಬಗ್ಗೆ ಪ್ರಶ್ನೆ, ಸಂದೇಹಗಳು ಬರ್ತಿವೆ ಅಂತಾ ಅವರು ಕಿಡಿಕಿಡಿಯಾದರು.

ಎಲೆಕ್ಷನ್ ಬಳಿಕ ಅವರಿಗೆ ಉತ್ತರ ಸಿಗುತ್ತೋ, ಬಿಡುತ್ತೋ ಗೊತ್ತಿಲ್ಲ. ಈ ಹಿಂದೆಯೂ ಲೆಕ್ಕ ಕೇಳಿದ್ದರು, ಲೆಕ್ಕ ಕೊಟ್ಟಾಗಿದೆ. ವ್ಯರ್ಥ ಪ್ರಶ್ನೆಗಳನ್ನ ಕೇಳ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಮತಾಂತರ ಹಾವಳಿ ವಿಚಾರವಾಗಿ ಮಾತನಾಡಿದ ಪೇಜಾವರ ಶ್ರೀ ಅವರು ಸಮಾಜದಲ್ಲಿ ಸಾಮರಸ್ಯ ಇರಬೇಕು ಅಂದ್ರೆ ಇಂತಹ ಅವ್ಯವಹಾರ ಮಾಡಬಾರದು. ಆಮಿಷ ಒಡ್ಡಿ ಒತ್ತಾಯಪೂರ್ವಕವಾಗಿ ಮತಾಂತರ ಮಾಡಬಾರದು. ಮತಾಂತರ ಕಾಯ್ದೆ ಜಾರಿಗೆಯಾಗಬೇಕು ಎಂದರು.

ವರ್ಲ್ಡ್ ಕಪ್ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಶ್ರೀಗಳು ಸಹ ವಿರೋಧ ವ್ಯಕ್ತಪಡಿಸಿದರು. ಎರಡೂ ಕಡೆ ವಿರೋಧವಿದ್ದರೆ ಪಂದ್ಯ ವಾಡುವುದು ಬೇಡ. ಪಾಕಿಸ್ತಾನ ಮಾಡುವ ಕೃತ್ಯಗಳು ನಿಲ್ಲಬೇಕು. ಪಾಕಿಸ್ತಾನದ ಕೃತ್ಯಗಳ ವಿರೋಧಿಸುವ ನಿಟ್ಟಿನಲ್ಲಿ ಪಂದ್ಯ ಆಡುವುದು ಬೇಡ ಎಂದು ಗದಗನಲ್ಲಿ ಪೇಜಾವರ ಶ್ರೀಗಳು ಗುಡುಗಿದರು.

Also Read: Ram Temple: ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕದ ಕೊಳ್ಳೇಗಾಲದ ಗ್ರಾನೈಟ್; ಇಲ್ಲಿದೆ ಪೂರ್ತಿ ಮಾಹಿತಿ

Also Read: ರಾಷ್ಟ್ರೀಯ ಸ್ವಯಂ ಸೇವಕ ಶಿಬಿರಕ್ಕೆ ಸಿದ್ದರಾಮಯ್ಯ – ಹೆಚ್.​ಡಿ. ಕುಮಾರಸ್ವಾಮಿಗೆ ಪತ್ರ ಬರೆದ ಆರ್​​ಎಸ್ಎಸ್ ಕಾರ್ಯಕರ್ತ

ರಾಮಮಂದಿರ ಲೆಕ್ಕ ಕೇಳಿದ ಎಚ್​ಡಿಕೆಗೆ ಮಾರ್ಮಿಕವಾಗಿ ಉತ್ತರಿಸಿದ ಪೇಜಾವರ ಶ್ರೀಗಳು |Pejavarashree byte On HDK|

(Sri ram mandir donation collection pejawar sri question the motives of the politicians)

Published On - 12:59 pm, Thu, 21 October 21

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!