AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಕರ್ಣದ ಕಡಲಿಗಿಳಿದು ತುರಿಕೆಯಿಂದಾಗಿ ಆಸ್ಪತ್ರೆಗೆ ಸೇರಿದ ಪ್ರವಾಸಿಗರು; ಕಾರಣವೇನು ಗೊತ್ತಾ?

ಈ ಜೆಲ್ಲಿ ಫಿಶ್​ಗಳಿಂದಾಗಿ ಉಂಟಾಗುವ ತುರಿಕೆಯನ್ನು ತಡೆದುಕೊಳ್ಳುವ ಶಕ್ತಿ ಮೀನುಗಾರರಿಗಿದೆ. ಅವರಿಗೆ ಇದು ಅಭ್ಯಾಸವಾಗಿದೆ. ಬಂಗುಡೆ ಬಳ್ಳಿ ಅಥವಾ ರೇತಿಯನ್ನು ಬಳಸಿಕೊಂಡು ತುರಿಕೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಸಾಮಾನ್ಯ ಜನರಿಗೆ, ಪ್ರವಾಸಿಗರಿಗೆ ಇದು ಹೊಸತು. ಸಾಮಾನ್ಯವಾಗಿ ಈ ಜೆಲ್ಲಿ ಫಿಶ್​ಗಳು ಕಡಲತೀರದಲ್ಲಿ ಸತ್ತು ಬಿದ್ದಿರುವುದು ಕಂಡುಬರುತ್ತವೆ.

ಗೋಕರ್ಣದ ಕಡಲಿಗಿಳಿದು ತುರಿಕೆಯಿಂದಾಗಿ ಆಸ್ಪತ್ರೆಗೆ ಸೇರಿದ ಪ್ರವಾಸಿಗರು; ಕಾರಣವೇನು ಗೊತ್ತಾ?
ಸಮುದ್ರ ತೀರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Nov 10, 2021 | 5:03 PM

Share

ಉತ್ತರ ಕನ್ನಡ: ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದು ಕಡಲಿಗೆ ಇಳಿದವರು ಮೈಯೆಲ್ಲ ತುರಿಕೆಯಾಗಿ ಆಸ್ಪತ್ರೆ ಸೇರುತ್ತಿರುವ ಘಟನೆಗಳು ನಡೆಯುತ್ತಿದೆ. ಗೋಕರ್ಣ ಹೇಳಿಕೇಳಿ ಪ್ರಸಿದ್ಧ ಪ್ರವಾಸಿ ತಾಣ(Tourist place). ಇಲ್ಲಿಗೆ ದಿನಂಪ್ರತಿ ಸಾವಿರಾರು ದೇಶಿ-ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವೂ ಆಗಿರುವ ಕಾರಣ ಇಲ್ಲಿನ ಆತ್ಮಲಿಂಗದ ದರ್ಶನಕ್ಕೂ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಭೇಟಿ ನೀಡಿದವರು ಸಮೀಪದ ಮೇನ್ ಬೀಚ್, ಕುಡ್ಲೆ ಬೀಚ್, ಹಾಫ್ ಮೂನ್ ಬೀಚ್​ಗಳಿಗೆ ಭೇಟಿ ನೀಡಿಯೇ ತೆರಳುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ಸಮುದ್ರಕ್ಕೆ ಆಟವಾಡಲು ಇಳಿದವರು ತುರಿಕೆ, ಉರಿ (ಅಲರ್ಜಿ) ಯಿಂದ ಬಳಲುತ್ತ, ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಬಹುತೇಕ ಪ್ರವಾಸಿಗರು ಈ ತುರಿಕೆ, ಉರಿಯಿಂದಾಗಿ ಆತಂಕಕ್ಕೊಳಗಾಗುತ್ತಿದ್ದಾರೆ.

ಸದ್ಯ ಗೋಕರ್ಣದ ಕಡಲತೀರದಲ್ಲಿ ಜೆಲ್ಲಿ ಫಿಶ್​ಗಳು ಕಾಣಸಿಗಲಾರಂಭಿಸಿದೆ. ಮೀನುಗಾರರಿಗೂ ಹೇರಳ ಪ್ರಮಾಣದಲ್ಲಿ ಇವು ಬಲೆಗೆ ಬೀಳುತ್ತಿವೆ. ಪ್ರವಾಸಿಗರಿಗೆ ಈ ಜೆಲ್ಲಿ ಫಿಶ್​ಗಳ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಪ್ರವಾಸಿಗರು ಆತಂಕಕ್ಕೊಳಗಾಗುತ್ತಿದ್ದಾರೆ.

ಹಿಂದೂ ಮಹಾಸಾಗರ ಹಾಗೂ ಶಾಂತ ಸಾಗರದಲ್ಲಿ ಹೆಚ್ಚಾಗಿ ಕಂಡುಬರುವ ಈ ಜೆಲ್ಲಿ ಫಿಶ್​ಗಳು ಇತ್ತೀಚೆಗೆ ಉತ್ತರ ಕನ್ನಡದ ಕರಾವಳಿ ತೀರಗಳಲ್ಲೂ ಕಂಡುಬರುತ್ತಿವೆ. ನವೆಂಬರ್- ಡಿಸೆಂಬರ್ ಹೆಚ್ಚು ಶೀತ ತಿಂಗಳುಗಳು. ಈ ಸಂದರ್ಭದಲ್ಲಿ ಸಮುದ್ರ ಕೂಡ ತಂಪಾಗಿರುತ್ತವೆ. ಈ ಜೆಲ್ಲಿ ಫಿಶ್​ಗಳು ಕೂಡ ತಂಪು ನೀರಿನಲ್ಲೇ ಹೆಚ್ಚು ಕಂಡುಬರುತ್ತವೆ ಎಂದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಹೇಳಿದ್ದಾರೆ.

ಜೆಲ್ಲಿ ಫಿಶ್​ಗಳಲ್ಲಿ ಸೂಜಿ ಥರನಾದ ಅತಿ ಸೂಕ್ಷ್ಮ ಮುಳ್ಳುಗಳಿರುತ್ತವೆ. ಅವು ನೀರಿನಲ್ಲಿ ಬಿದ್ದು ಹೋಗಿರುತ್ತವೆ. ಈ ಸಂದರ್ಭದಲ್ಲಿ ಸಮುದ್ರಕ್ಕೆ ಇಳಿದರೆ ಅದು ಚರ್ಮಕ್ಕೆ ತಾಗಿ ತುರಿಕೆಯನ್ನುಂಟು ಮಾಡುತ್ತದೆ. ನಮ್ಮಲ್ಲಿ ಕಂಡುಬರುವ ಜೆಲ್ಲಿ ಫಿಶ್​ಗಳು ಜೀವಕ್ಕೆ ಹೆಚ್ಚು ಅಪಾಯಕಾರಿಯಲ್ಲ. ಆದರೆ ಆಸ್ಟ್ರೇಲಿಯಾದ ಕಡಲಿನಲ್ಲಿ ಕಂಡುಬರುವ ಬಾಕ್ಸ್ ಜೆಲ್ಲಿ ಫಿಶ್​ಗಳು ತಾಗಿ ಅದರಿಂದ ಸಾವು ಉಂಟಾಗಿರುವುದು ಕೂಡ ಇದೆ ಎಂದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ತಿಳಿಸಿದ್ದಾರೆ.

ಈ ಜೆಲ್ಲಿ ಫಿಶ್​ಗಳಿಂದಾಗಿ ಉಂಟಾಗುವ ತುರಿಕೆಯನ್ನು ತಡೆದುಕೊಳ್ಳುವ ಶಕ್ತಿ ಮೀನುಗಾರರಿಗಿದೆ. ಅವರಿಗೆ ಇದು ಅಭ್ಯಾಸವಾಗಿದೆ. ಬಂಗುಡೆ ಬಳ್ಳಿ ಅಥವಾ ರೇತಿಯನ್ನು ಬಳಸಿಕೊಂಡು ತುರಿಕೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಸಾಮಾನ್ಯ ಜನರಿಗೆ, ಪ್ರವಾಸಿಗರಿಗೆ ಇದು ಹೊಸತು. ಸಾಮಾನ್ಯವಾಗಿ ಈ ಜೆಲ್ಲಿ ಫಿಶ್​ಗಳು ಕಡಲತೀರದಲ್ಲಿ ಸತ್ತು ಬಿದ್ದಿರುವುದು ಕಂಡುಬರುತ್ತವೆ. ನಮ್ಮ ಜಿಲ್ಲೆಯ ಎಲ್ಲಾ ಕಡಲತೀರಗಳಲ್ಲಿ ಜೀವ ರಕ್ಷಕ ಸಿಬ್ಬಂದಿ ಕೂಡ ಇದ್ದಾರೆ. ಹೀಗೆ ತೀರದಲ್ಲಿ ಜೆಲ್ಲಿ ಫಿಶ್​ಗಳು ಕಂಡುಬಂದಾಗ ಜೀವ ರಕ್ಷಕ ಸಿಬ್ಬಂದಿ ಪ್ರವಾಸಿಗರು ಕಡಲಿಗೆ ಇಳಿಯುವುದನ್ನು ತಡೆದರೆ ಒಳ್ಳೆಯದು ಎಂದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಹೇಳಿದ್ದಾರೆ.

ಇದನ್ನೂ ಓದಿ: ಗೋಕರ್ಣ ಆತ್ಮಲಿಂಗ ದರ್ಶನ; ಭಕ್ತರಿಗೆ ಅಡ್ಡಿಪಡಿಸದಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಸೂಚನೆ

ರಾತ್ರಿ ಊಟ ಮಾಡಿ ಮಲಗಿದ್ದ ವಿದ್ಯಾರ್ಥಿಗಳಿಗೆ ಫುಡ್ ಪಾಯಿಸನ್‌ನಿಂದ ವಾಂತಿ-ಭೇದಿ, 8 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

Published On - 3:47 pm, Wed, 10 November 21

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!