AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಕ್ಸಿನ್ ವಿಚಾರದಲ್ಲಿ ಸರ್ಕಾರದ ಲೆಕ್ಕಾಚಾರ ಉಲ್ಟಾ.. ಹೆಲ್ತ್ ವಾರಿಯರ್ಸ್‌ಗೆ ಬಂದ ವ್ಯಾಕ್ಸಿನ್ ಫ್ರಂಟ್‌ಲೈನ್ ವಾರಿಯರ್ಸ್‌ಗೆ

ಕೊರೊನಾ ವ್ಯಾಕ್ಸಿನ್ ವಿಚಾರದಲ್ಲಿ ಸರ್ಕಾರದ ಲೆಕ್ಕಾಚಾರ ಉಲ್ಟಾ ಆಗಿದೆ. ಕೈ ಮುಗಿತ್ತೀವಿ ಲಸಿಕೆ ಹಾಕಿಸಿಕೊಳ್ರಪ್ಪ ಅಂದ್ರು ಯಾರು ಕ್ಯಾರೆ ಅಂತಿಲ್ಲ. ಅದರಲ್ಲೂ ಹೆಲ್ತ್ ವಾರಿಯರ್ಸ್ ತಿರುಗಿಯೂ ಕೂಡ ನೋಡ್ತಿಲ್ಲ. ಅದಕ್ಕಾಗಿ ಬಿಬಿಎಂಪಿ ಮತ್ತೊಂದು ಪ್ಲ್ಯಾನ್ ಸಿದ್ದಮಾಡಿಟ್ಟುಕೊಂಡಿದೆ.

ವ್ಯಾಕ್ಸಿನ್ ವಿಚಾರದಲ್ಲಿ ಸರ್ಕಾರದ ಲೆಕ್ಕಾಚಾರ ಉಲ್ಟಾ.. ಹೆಲ್ತ್ ವಾರಿಯರ್ಸ್‌ಗೆ ಬಂದ ವ್ಯಾಕ್ಸಿನ್ ಫ್ರಂಟ್‌ಲೈನ್ ವಾರಿಯರ್ಸ್‌ಗೆ
ಆಯೇಷಾ ಬಾನು
|

Updated on: Jan 21, 2021 | 7:01 AM

Share

ಬೆಂಗಳೂರು: ಕೊರೊನಾ ವ್ಯಾಕ್ಸಿನ್.. ಇದೊಂದು ಬ್ರಹ್ಮಾಸ್ತ್ರಕ್ಕಾಗಿ ಎಲ್ಲರೂ ಎದುರು ನೋಡ್ತಾಯಿದ್ರು. ಈಗ ವ್ಯಾಕ್ಸಿನ್ ಬಂದಿದೆ. ವ್ಯಾಕ್ಸಿನ್ ಹಂಚಿಕೆ ಅತಿದೊಡ್ಡ ಅಭಿಯಾನವೂ ಆರಂಭವಾಗಿದೆ. ಕೊರೊನಾ ಸಂಕಷ್ಟದಲ್ಲಿ ಸೇವೆ ಸಲ್ಲಿಸಿದ ಹೆಲ್ತ್ ವಾರಿಯರ್ಸ್​ಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗ್ತಿದೆ. ಆದ್ರೆ ವ್ಯಾಕ್ಸಿನ್ ಪಡೆಯೋಕೆ ಹೆಲ್ತ್ ವಾರಿಯರ್ಸ್ ಹಿಂದೇಟು ಹಾಕ್ತಿದ್ದಾರೆ. ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳೋಕೆ ನೊಂದಾಯಿಸಿಕೊಂಡಿದ್ದ ಹೆಲ್ತ್ ವಾರಿಯರ್ಸ್ ಯಾರೂ ಮುಂದೆ ಬರ್ತಿಲ್ಲ.

ಎಲ್ಲೋ ಒಂದೆರೆಡು ಕಡೆ ವ್ಯಾಕ್ಸಿನ್ ಅಡ್ಡಪರಿಣಾಮ ನೀಡಿದೆ ಅಂತಾ ಸುದ್ದಿ ಹಬ್ಬಿತ್ತು. ಇದನ್ನ ಕೇಳಿಯೆ ಹೆಲ್ತ್ ವಾರಿಯರ್ಸ್ ಲಸಿಕೆ ಪಡೆಯಲು ಹಿಂದೇಟು ಹಾಕ್ತಿದ್ದಾರೆ. ಇದರಿಂದ ಹೆಲ್ತ್ ವಾರಿಯರ್ಸ್‌ಗೆ ಅಂತಾ ಮೀಸಲಿಟ್ಟ ವ್ಯಾಕ್ಸಿನ್ ಬಳಕೆ ಆಗದೇ ಕೋಲ್ಡ್ ಸ್ಟೋರೇಜ್‌ನಲ್ಲಿ ಹಾಗೇ ಬಿದ್ದಿದೆ. ಐಸಿಎಂಆರ್ ಸುದ್ದಿಗೋಷ್ಠಿ ನಡೆಸಿದ ಕೈ ಮುಗಿದ್ದು ಕೇಳಿಕೊಂಡ್ರೂ ನಮ್ಮ ಹೆಲ್ತ್ ವಾರಿಯರ್ಸ್ ವ್ಯಾಕ್ಸಿನ್ ಸಹವಾಸಕ್ಕೆ ಹೋಗ್ತಿಲ್ವಂತೆ. ಹೀಗಾಗಿ ಸರ್ಕಾರ ಹೆಲ್ತ್ ವಾರಿಯರ್ಸ್​ಗೆ ಅಂತಾ ಬಂದಿರುವ ವ್ಯಾಕ್ಸಿನ್‌ಗಳನ್ನ ಫ್ರೆಂಟ್ ಲೈನ್ ವಾರಿಯರ್ಸ್‌ಗೆ ನೀಡಲು ಪ್ಲ್ಯಾನ್ ಮಾಡಿದೆ.

ನಿತ್ಯ ಕೇವಲ ನಾಲ್ಕೈದು ಸಾವಿರ ಲಸಿಕೆ ಮಾತ್ರ ಬಳಕೆ ಅಂದಹಾಗೆ ಬಿಬಿಎಂಪಿ ನಿತ್ಯ 20 ಸಾವಿರ ಹೆಲ್ತ್ ವಾರಿಯರ್ಸ್‌ಗೆ ಲಸಿಕೆ ರವಾನೆ ಮಾಡ್ತಿದೆ. ಅದರಲ್ಲಿ ಕೇವಲ ನಾಲ್ಕೈದು ಸಾವಿರ ಲಸಿಕೆ ಬಳಕೆ ಆಗಿ ಉಳಿದ ವ್ಯಾಕ್ಸಿನ್‌ಗಳು ವಾಪಸ್ ಆಗ್ತಿವೆ. ಕೆಲ ವಾರಿಯರ್ಸ್‌ಗಳು ಕಾದು ನೋಡುವ ತಂತ್ರ ಹಾಗೂ ವ್ಯಾಕ್ಸಿನ್ ಸಹವಾಸವೆ ಬೇಡ ಅಂತಾ ಸೈಲೆಂಟ್ ಆಗಿದ್ದಾರೆ. ಹೀಗಾಗಿ ಬಿಬಿಎಂಪಿ ಬಳಿ ಇರುವ ವ್ಯಾಕ್ಸಿನ್ ಗಳು ಬಳಕೆನೇ ಆಗ್ತಿಲ್ಲ.

ಜೊತೆಗೆ ವ್ಯಾಕ್ಸಿನ್ ಪಡೆಯಲು ನಿರ್ದಿಷ್ಟ ಕಾಲಾವಧಿ ನಿಗದಿಯಾಗದಿರುವ ಕಾರಣ ವ್ಯಾಕ್ಸಿನ್ ಪಡೆಯಲು ಯಾರು ಬರ್ತಿಲ್ಲ. ಆದ್ರೆ  ಬಿಬಿಎಂಪಿಗೆ 1ಲಕ್ಷದ 68 ಸಾವಿರ ಜನ ಹೆಲ್ತ್ ವಾರಿಯರ್ಸ್ ಗೆ ಲಸಿಕೆ ನೀಡಬೇಕು. ನೀಡ್ದೆ ಹೋದ್ರೆ ಕೇಂದ್ರಕ್ಕೆ ಲೆಕ್ಕ ಕೊಡ್ಬೇಕು. ಹೀಗಾಗಿ ಬಿಬಿಎಂಪಿ ಮತ್ತು ಸರ್ಕಾರ ಕೊರೊನಾ ಟೈಮ್‌ನಲ್ಲಿ ಕೆಲಸ ಮಾಡಿದ ಫ್ರೆಂಟ್ ಲೈನ್ ವಾರಿಯಗಳಾದ ಪೊಲೀಸ್ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿಗಳಿಗೆ ವ್ಯಾಕ್ಸಿನ್ ನೀಡಲು ನಿರ್ಧರಿಸಿದೆ.

ಇಲ್ಲಿವರೆಗೂ ಕೇವಲ 20 ಸಾವಿರ ವ್ಯಾಕ್ಸಿನ್‌ಗಳು ಮಾತ್ರ ಬಳಕೆ ಆಗಿವೆ. ಸರ್ಕಾರಿಂದ ಒಂದು ಲಕ್ಷಕ್ಕೂ ಅಧಿಕ ವ್ಯಾಕ್ಸಿನ್ ಬಾಟೆಲ್‌ಗಳು ಬಿಬಿಎಂಪಿ ಕೈ ಸೇರಿವೆ. ಆದ್ರೆ ನಾಲ್ಕು ದಿನದಲ್ಲಿ ಕೇವಲ 20 ಸಾವಿರ ವ್ಯಾಕ್ಸಿನ್ ಬಳಕೆ ಆಗಿದೆ. ಮುಂದಿನ ಒಂದು ವಾರದೊಳಗೆ 60 ಸಾವಿರ ವ್ಯಾಕ್ಸಿನ್ ಖಾಲಿಯಾಗೋದು ಅನುಮಾನವಾಗಿದೆ. ಹೀಗಾಗಿ ಹೆಲ್ತ್ ವಾರಿಯರ್ಸ್‌ಗೆ ಎರಡನೇ ಅವಕಾಶ ನೀಡಿದ್ದು ಈಗಲೂ ಲಸಿಕೆ ಪಡೆಯಲು ಬಾರದೆ ಹೋದ್ರೆ ಬಂದ ಲಸಿಕೆಗಳನ್ನ ಫ್ರೆಂಟ್ ಲೈನ್ ವಾರಿಯರ್ಸ್ ಗೆ ಕೊಟ್ಟು, ಟಾರ್ಗೆಟ್ ರೀಚ್ ಆಗುವ ಯೋಚನೆ ನಡೆದಿದೆ. ಇನ್ನು ಹೆಲ್ತ್ ವಾರಿಯರ್ಸ್ ತಮಗೆ ನೀಡಿರುವ ಸಮಯದಲ್ಲಿ ಬಾರದೆ, ನಂತರ ಬಂದ್ರೆ, ನೋ ಸ್ಟಾಕ್ ಬೋರ್ಡ್ ಹಾಕಲು ಪ್ಲ್ಯಾನ್ ಸಿದ್ಧವಾಗ್ತಿದೆ.

ಕೊರೊನಾ ಲಸಿಕೆಯೇನೋ ಬಂತು.. ಆದರೆ, ಪಡೆಯಲು ನಿರೀಕ್ಷಿತ ಮಟ್ಟದಲ್ಲಿ ಜನರೇ ಬರುತ್ತಿಲ್ಲ.. ಏನಿರಬಹುದು ಕಾರಣ?

ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್