AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fear: ಭಯ ನಿವಾರಿಸುವುದು ಹೇಗೆ? ಇಲ್ಲಿವೆ ಆರೋಗ್ಯ ತಜ್ಞರಿಂದ ಸಲಹೆಗಳು!

ಒಳಗಿನಿಂದ ಸ್ವಲ್ಪ ಇಚ್ಛಾಶಕ್ತಿ ಮತ್ತು ಮಾನಸಿಕ ಚುರುಕುತನವನ್ನು ಹೊರಗೆಳೆಯುವ ಮೂಲಕ ಭಯವನ್ನು ಜಯಿಸಬಹುದು. ಹಾಗಾದರೆ ಇದರಿಂದ ಹೊರಬರುವುದು ಹೇಗೆ? ಈ ಬಗ್ಗೆ ಶಿಕ್ಷಣ ತಜ್ಞ ಡಾ. ಅನ್ನಿ ಸಿಂಗ್ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಜ್ಞರ ಸಲಹೆಯೊಂದಿಗೆ ಭಯವನ್ನು ನಿವಾರಿಸುವುದು ಹೇಗೆ ಎಂದು ತಿಳಿಯಿರಿ!

Fear: ಭಯ ನಿವಾರಿಸುವುದು ಹೇಗೆ? ಇಲ್ಲಿವೆ ಆರೋಗ್ಯ ತಜ್ಞರಿಂದ ಸಲಹೆಗಳು!
overcome fear
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on: Nov 03, 2023 | 6:59 PM

Share

ಭಯ ಎನ್ನುವುದು ಜೀವನದ ಅನುಭವಗಳನ್ನು ಅವು ಇರುವಂತೆಯೇ ಸ್ವಾಗತಿಸದಂತೆ ನಮ್ಮನ್ನು ತಡೆಯುತ್ತದೆ. ‘ಭಯ’ ಎಂಬುದು ಜೀವನದಲ್ಲಿ ನಮ್ಮನ್ನು ಅಪರಿಚಿತ ನೀರಿಗೆ ಜಿಗಿಯುವುದನ್ನು ತಪ್ಪಿಸು ಎಂದು ಹೇಳುತ್ತದೆ. ಏಕೆಂದರೆ ಅದೊಂದು ಸಣ್ಣ ಅಂಜಿಕೆ ನಮ್ಮೊಳಗೆ ಹುದುಗಿರುತ್ತದೆ. ಅಲ್ಲದೆ ನಮ್ಮೊಳಗಿನ ಸಣ್ಣ ಭಯದ ಭಾವನೆಯನ್ನು ಸಹ ಪ್ರಚೋದಿಸುವ ಪ್ರತಿಯೊಂದು ಪರಿಸ್ಥಿತಿಗೆ ನಾವು ಹೆದರುತ್ತೇವೆ. ಇದು ನಮಗೆ ಹುಟ್ಟಿನಿಂದ ಬಂದ ವಿಷಯವಲ್ಲ. ಆದರೆ ನೆನಪಿಡಿ, ನಾವು ಮಕ್ಕಳಾಗಿದ್ದಾಗ, ಜೀವನವು ಏನನ್ನು ನೀಡುತ್ತದೆಯೋ ಅದನ್ನು ಅನುಭವಿಸಲು ನಾವು ಯಾವಾಗಲೂ ಉತ್ಸುಕರಾಗಿರುತ್ತೇವೆ. ಜೊತೆಗೆ ನಾವು ಬೆಳೆದಂತೆ ಕೆಲವು ವಿಷಯಗಳ ಬಗ್ಗೆ ಭಯ ಬೆಳೆಸಿಕೊಂಡಿರುತ್ತೇವೆ. ವಾಸ್ತವದಲ್ಲಿ, ನಮ್ಮ ಇಚ್ಛಾಶಕ್ತಿಯು ಎಲ್ಲ ಭಯಕ್ಕಿಂತ ದೊಡ್ಡದಾಗಿದೆ, ಏಕೆಂದರೆ ಇದು ನಮ್ಮ ಮನಸ್ಸಿನಲ್ಲಿದೆ. ಇದು ಭಯಾನಕ ಸನ್ನಿವೇಶಗಳ ಚಿತ್ರಿಸುತ್ತದೆ ಅದರಿಂದ ನಾವು ಆ ಕ್ಷಣವನ್ನು ಅನುಭವಿಸಲು ಹೆದರುತ್ತೇವೆ. ಹಾಗಾದರೆ ಇದರಿಂದ ಹೊರಬರುವುದು ಹೇಗೆ? ಈ ಬಗ್ಗೆ ಶಿಕ್ಷಣ ತಜ್ಞ ಡಾ. ಅನ್ನಿ ಸಿಂಗ್ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದು ಭಯವನ್ನು ನಿವಾರಿಸಲು ಸಲಹೆ ನೀಡಿದ್ದಾರೆ.

ಭಯ ನಿವಾರಿಸುವುದು ಹೇಗೆ?

ಭಯವು ನೈಸರ್ಗಿಕ ಪ್ರತಿಕ್ರಿಯೆಯಾಗಿದೆ. ಇದು ಹೆಚ್ಚಿದ ಹೃದಯ ಬಡಿತ, ಉಸಿರಾಟ ಏರಿಳಿತ ಮತ್ತು ಶಾರೀರಿಕ ಮತ್ತು ಮಾನಸಿಕ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ. ಜೊತೆಗೆ ಭಯವು ಅಪಾಯಕ್ಕೆ ಪ್ರತಿಕ್ರಿಯಿಸಲು ನಮಗೆ ಸಹಾಯ ಮಾಡುವ ಒಂದು ಕಾರ್ಯ ವಿಧಾನವಾಗಿದೆ ಎಂದು ಡಾ. ಸಿಂಗ್ ವಿವರಿಸುತ್ತಾರೆ. ಆದರೆ ಫೋಬಿಯಾಗಳು ವಿಭಿನ್ನವಾಗಿವೆ. ಅವು ಭಯದ ಒಂದು ಉಪವರ್ಗವಾಗಿದೆ. ನಿರ್ದಿಷ್ಟ ಸಂದರ್ಭ, ವಸ್ತುಗಳು ಅಥವಾ ಚಟುವಟಿಕೆಗಳ ಹೆಚ್ಚು ತೀವ್ರವಾದ, ಅಂದರೆ ತರ್ಕ ಬದ್ಧವಲ್ಲದ ಭಯಗಳು ಎನ್ನಬಹುದು. ಇವು ಸಾಮಾನ್ಯ ಭಯಗಳಿಗಿಂತ ಭಿನ್ನವಾಗಿರುತ್ತದೆ. ಇಂತಹ ಭಯಗಳಲ್ಲಿ ಎತ್ತರಗಳ ಭಯ (ಅಕ್ರೋಫೋಬಿಯಾ), ಜೇಡಗಳು (ಅರಾಕ್ನೋಫೋಬಿಯಾ), ಹಾರಾಟ (ಅವಿಯೋಫೋಬಿಯಾ) ಮತ್ತು ಸಾರ್ವಜನಿಕ ಭಾಷಣ (ಗ್ಲೋಸೊಫೋಬಿಯಾ) ಸೇರಿವೆ.

ಭಯವನ್ನು ಎದುರಿಸಲು ಕೆಲವು ಸರಳ ದೈನಂದಿನ ಮಾರ್ಗಗಳು ಇಲ್ಲಿವೆ:

1. ನಿಮ್ಮ ಆಲೋಚನೆಗಳಿಗೆ ಸವಾಲು ಮಾಡಿ:

“ತರ್ಕ ರಹಿತ ಅಥವಾ ನಕಾರಾತ್ಮಕ ಆಲೋಚನೆಗಳು ನಿಮ್ಮ ಭಯವನ್ನು ಯಾವಾಗ ಹೆಚ್ಚಿಸುತ್ತವೆ ಎಂಬುದನ್ನು ಗುರುತಿಸಿ. ಈ ನಿಮ್ಮ ಆಲೋಚನೆಗಳು, ಪುರಾವೆಗಳು ಅಥವಾ ಊಹೆಗಳನ್ನು ಆಧರಿಸಿವೆಯೇ ಎಂದು ತಿಳಿದುಕೊಳ್ಳುವ ಮೂಲಕ ಅವುಗಳಿಗೆ ಸವಾಲು ಹಾಕಿ. ಸತ್ಯಾಧಾರಿತ ಆಲೋಚನಾ ಪ್ರಕ್ರಿಯೆಯನ್ನು ಅನುಸರಿಸಿ ಮತ್ತು ಸತ್ಯವನ್ನು ಮಾತ್ರ ನಂಬಿ” ಎಂದು ಡಾ. ಅನ್ನಿ ಸಿಂಗ್ ಹೇಳುತ್ತಾರೆ. ನಿಮ್ಮ ಭಯವನ್ನು ಎದುರಿಸುವುದು ನೀವು ಭಯದ ವಿರುದ್ಧ ಇಡಬಹುದಾದ ಅತ್ಯಂತ ದಿಟ್ಟ ಹೆಜ್ಜೆಯಾಗಿದೆ. ಜೊತೆಗೆ ಇದು ದೀರ್ಘಾವಧಿಯಲ್ಲಿಯೂ ಅತ್ಯಂತ ಲಾಭದಾಯಕವಾಗಿದೆ. ಅಲ್ಲದೆ ಇದು ನಿಮಗೆ ನಿಮ್ಮ ಮನಸ್ಸಿನ ಶಕ್ತಿಯನ್ನು ಅರಿತುಕೊಳ್ಳುವಂತೆ ಮಾಡುತ್ತದೆ.

2. ಜಾಗರೂಕತೆಯನ್ನು ಬೆಳೆಸಿಕೊಳ್ಳಿ:

ನಿಮ್ಮ ಆಲೋಚನೆಗಳು ಮತ್ತು ನಿಮ್ಮ ಭಾವನಾತ್ಮಕ ಪ್ರತಿಕ್ರಿಯೆಗಳ ನಡುವೆ ಅಂತರವನ್ನು ಸೃಷ್ಟಿಸಲು ಬುದ್ಧಿವಂತಿಕೆ ತಂತ್ರಗಳನ್ನು ಅಭ್ಯಾಸ ಮಾಡಿ. ಇದು ಭಯಕ್ಕೆ ಹೆಚ್ಚು ಶಾಂತವಾಗಿ ಮತ್ತು ತರ್ಕಬದ್ಧವಾಗಿ ಪ್ರತಿಕ್ರಿಯಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

3. ಬೆಂಬಲ ಪಡೆಯಿರಿ:

“ಮಾರ್ಗದರ್ಶನ ಮತ್ತು ಭಾವನಾತ್ಮಕ ಬೆಂಬಲಕ್ಕಾಗಿ ಸ್ನೇಹಿತರು, ಕುಟುಂಬ ಅಥವಾ ಮಾನಸಿಕ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನಿಮ್ಮ ಭಯದ ಬಗ್ಗೆ ಮಾತನಾಡುವುದು ಹೊಸ ದೃಷ್ಟಿಕೋನಗಳನ್ನು ಒದಗಿಸುತ್ತದೆ” ಎಂದು ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ರಾತ್ರಿ ಸಮಯದಲ್ಲಿ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ, ಇಲ್ಲಿದೆ ಕಾರಣ

4. ವೈಫಲ್ಯದಿಂದ ಕಲಿಯಿರಿ:

ವೈಫಲ್ಯವನ್ನು ವೈಯಕ್ತಿಕ ಬೆಳವಣಿಗೆಯ ಮೆಟ್ಟಿಲು ಎಂದು ಸ್ವೀಕರಿಸಿ. ಹಿನ್ನಡೆಗಳು ಪ್ರಯಾಣದ ಭಾಗವಾಗಿದೆ ಮತ್ತು ನಿಮ್ಮ ಮೌಲ್ಯದ ಪ್ರತಿಬಿಂಬವಲ್ಲ ಎಂದು ಅರ್ಥಮಾಡಿಕೊಳ್ಳಿ.

5. ಸ್ವಯಂ ಸಹಾನುಭೂತಿಯನ್ನು ಅಭ್ಯಾಸ ಮಾಡಿಕೊಳ್ಳಿ:

ಸ್ವಯಂ ಸಹಾನುಭೂತಿಯು ಭಯವನ್ನು ಜಯಿಸಲು ಹಾಗೂ ನಿಮ್ಮ ಸವಾಲುಗಳನ್ನು ಭರವಸೆಯೊಂದಿಗೆ ಎದುರಿಸಲು ನಿಮಗೆ ಸಹಾಯ ಮಾಡುತ್ತದೆ. ಅದೇ ಸವಾಲುಗಳನ್ನು ಎದುರಿಸುತ್ತಿರುವ ನಿಮ್ಮ ಆತ್ಮೀಯ ಸ್ನೇಹಿತನೊಂದಿಗೆ ನೀವು ಹೇಗೆ ಮಾತನಾಡುತ್ತೀರೋ ಹಾಗೆಯೇ ನಿಮ್ಮೊಂದಿಗೆ ನೀವು ಮಾತನಾಡಿಕೊಳ್ಳಿ.

6. ನಿರಂತರವಾಗಿರಿ:

ಭಯವನ್ನು ನಿವಾರಿಸುವುದು ಒಂದು ಪ್ರಯಾಣ ಎಂದು ಅರ್ಥಮಾಡಿಕೊಳ್ಳಿ. ಭಯವನ್ನು ಜಯಿಸುವ ನಿಮ್ಮ ಆರಂಭಿಕ ದಿನಗಳಲ್ಲಿ ನೀವು ಎಡವಬಹುದು, ಆದರೆ ನಿಮ್ಮ ಉತ್ಸಾಹವನ್ನು ಎಂದಿಗೂ ಬಿಡಬೇಡಿ. ಪ್ರಗತಿಗೆ ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿದುಕೊಂಡು ನಿಮ್ಮ ಪ್ರಯತ್ನಗಳಲ್ಲಿ ಬದ್ಧರಾಗಿರಿ ಮತ್ತು ನಿರಂತರವಾಗಿ ಮುಂದುವರಿಯಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು