AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Depression Tendency: ಕೊವಿಡ್​ನಿಂದ ಮಾನಸಿಕ ಸಮಸ್ಯೆ, ಖಿನ್ನತೆ ಹೆಚ್ಚಾಗುತ್ತಾ: ಇಲ್ಲಿದೆ ತಜ್ಞರ ಉತ್ತರ

Anxiety Depression: ದೇಶಾದ್ಯಂತ ಕೊರೊನಾ ಪಿಡುಗು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜನರ ಮಾನಸಿಕ ಆರೋಗ್ಯದ ಬಗ್ಗೆ ತುರ್ತಾಗಿ ಗಮನ ಹರಿಸಬೇಕಾದ ಪರಿಸ್ಥಿತಿ ಬಂದಿದೆ. ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಇದು ಆದ್ಯತೆಯ ವಿಷಯವಾಗಬೇಕಿದೆ

Depression Tendency: ಕೊವಿಡ್​ನಿಂದ ಮಾನಸಿಕ ಸಮಸ್ಯೆ, ಖಿನ್ನತೆ ಹೆಚ್ಚಾಗುತ್ತಾ: ಇಲ್ಲಿದೆ ತಜ್ಞರ ಉತ್ತರ
ಮಾನಸಿಕ ಆರೋಗ್ಯ (ಪ್ರಾತಿನಿಧಿಕ ಚಿತ್ರ)
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Jan 25, 2022 | 4:04 PM

Share

ಕೊವಿಡ್ ಸೋಂಕು (Coronavirus Infection) ದೃಢಪಟ್ಟರೆ ಪ್ರತ್ಯೇಕವಾಗಿ, ಒಂಟಿಯಾಗಿ (Quarantine and Isolation) ಇರಬೇಕು. ಕೆಲಸ ಹೋಗುವ ಆತಂಕದ ಜೊತೆಗೆ ಹಣಕಾಸು ಪರಿಸ್ಥಿತಿ (Financial Situation) ಬಿಗಡಾಯಿಸಬಹುದು ಅನ್ನೋ ಭಯ. ಕೊವಿಡ್ (Covid 19) ಸೋಂಕು ದೈಹಿಕವಾಗಿ ಕಾಡಿದರೆ, ಅದರ ಜೊತೆಜೊತೆಗೆ ಬರುವ ಹಲವು ಸಾಮಾಜಿಕ ನಿರ್ಬಂಧ ಮತ್ತು ಇನ್ನಿತರ ವಿಚಾರಗಳು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿವೆ. ಸಾಕಷ್ಟು ಜನರಲ್ಲಿ ಉದ್ವಿಗ್ನತೆ (Anxiety) ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಂಡಿವೆ ಎನ್ನುತ್ತಾರೆ ಡಾ.ಸಮೀರ್ ಪರಿಖ್. ಫೋರ್ಟಿಸ್ ಹೆಲ್ತ್​ಕೇರ್ ಆಸ್ಪತ್ರೆಯಲ್ಲಿ ಮಾನಸಿಕ ಆರೋಗ್ಯ ಮತ್ತು ನಡವಳಿಕೆ ವಿಜ್ಞಾನ ವಿಭಾಗದ ನಿರ್ದೇಶಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ‘ಹಿಂದೂಸ್ತಾನ್ ಟೈಮ್ಸ್’​ ಜಾಲತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಕೊವಿಡ್ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಮುಖ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ದೇಶಾದ್ಯಂತ ಕೊರೊನಾ ಪಿಡುಗು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜನರ ಮಾನಸಿಕ ಆರೋಗ್ಯದ ಬಗ್ಗೆ ತುರ್ತಾಗಿ ಗಮನ ಹರಿಸಬೇಕಾದ ಪರಿಸ್ಥಿತಿ ಬಂದಿದೆ. ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಇದು ಆದ್ಯತೆಯ ವಿಷಯವಾಗಬೇಕಿದೆ. ಕೊರೊನಾ ಪಿಡುಗಿನಿಂದ ಖಿನ್ನತೆ ಹೆಚ್ಚಾಗುತ್ತಿದೆಯೇ? ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗುವರ ಸಂಖ್ಯೆ ಹೆಚ್ಚಾಗುತ್ತಿದೆಯೇ? ನಮ್ಮ ಮಿದುಳಿನ ಮೇಲೆ ವೈರಸ್‌ನ ಪ್ರಭಾವಕ್ಕಿಂತ ಹೆಚ್ಚಾಗಿ ನಾವು ಬದುಕುವ ವಿಧಾನದಲ್ಲಿ ಅಗುತ್ತಿರುವ ಬದಲಾವಣೆಗಳು ಮುಖ್ಯ ಕಾರಣವೇ?

ತಜ್ಞವೈದ್ಯರು ನೀಡಿರುವ ಉತ್ತರದ ಅಕ್ಷರ ರೂಪ ಇಲ್ಲಿದೆ…

ಕೊರೊನಾ ಪಿಡುಗು ಜಗತ್ತನ್ನು ಆವರಿಸುವ ಮೊದಲು ಮತ್ತು ಆವರಿಸಿದ ನಂತರ ಜಗತ್ತಿನ ಅತಿದೊಡ್ಡ ಸಮಸ್ಯೆ ಎನಿಸಿದ್ದು ಖಿನ್ನತೆ (ಡಿಪ್ರೆಷನ್). ಕೊವಿಡ್​ನಿಂದಾಗಿ ಖಿನ್ನತೆ ಹೆಚ್ಚಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಕೊವಿಡ್ ಮತ್ತು ಖಿನ್ನತೆ ನಡುವೆ ಇರುವ ನೇರ ಸಂಬಂಧದ ಬಗ್ಗೆ ಈವರೆಗೆ ಸಾಕಷ್ಟು ದತ್ತಾಂಶಗಳು ಲಭ್ಯವಾಗಿಲ್ಲ. ಈ ವಿದ್ಯಮಾನ ಅರ್ಥೈಸಲು ನಾವು ಇನ್ನೂ ಸ್ವಲ್ಪ ದಿನ ಕಾಯಬೇಕಾಗುತ್ತದೆ.

ಕೊವಿಡ್ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲರೂ ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ಉದ್ವಿಗ್ನತೆ, ಅನಿಶ್ಚಿತತೆ, ಆರೋಗ್ಯ, ಹಣಕಾಸು ಪರಿಸ್ಥಿತಿ ಮತ್ತು ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಒತ್ತಡಗಳು ಕೊವಿಡ್​ನಿಂದ ಹೆಚ್ಚಾದವು. ಸಾಕಷ್ಟು ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡರು. ಕೊವಿಡ್ ಕಾರಣದಿಂದಾಗಿ ನಾವು ಮನೆಗಳಲ್ಲಿಯೇ ಉಳಿದುಕೊಳ್ಳುವ ಪರಿಸ್ಥಿತಿ ಬಂತು. ಸಾಮಾಜಿಕವಾಗಿ ಜನರೊಂದಿಗೆ ಬೆರೆಯುವುದೂ ಕಡಿಮೆಯಾಯಿತು. ಸ್ಕ್ರೀನ್​ ಟೈಮ್ ಎಂದರೆ ಟಿವಿ, ಟ್ಯಾಬ್, ಮೊಬೈಲ್ ನೋಡುವುದು ಹೆಚ್ಚಾಯಿತು. ಇದು ಸಹ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತು.

Dr-Samir-Parikh

ಫೋರ್ಟಿಸ್ ಆಸ್ಪತ್ರೆಯ ಮನಃಶಾಸ್ತ್ರಜ್ಞ ಡಾ.ಸಮೀರ್ ಪರೀಖ್

ಕೆಲವರಿಗಂತೂ ಕೊವಿಡ್ ಎನ್ನುವುದು ದುಸ್ವಪ್ನಕ್ಕಿಂತ ಕಡಿಮೆ ಆಗಿರಲಿಲ್ಲ. ಕೊರೊನಾದಿಂದ ಹಲವರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡರು. ಕೊವಿಡ್ ಸಂಬಂಧಿತ ಸಮಸ್ಯೆಗಳಿಂದ ಹತ್ತಾರು ರೀತಿಯ ತೊಂದರೆಗಳನ್ನು ಎದುರಿಸಿದರು. ತಾವು ಕೊವಿಡ್ ಸೋಂಕಿತರಾಗಿದ್ದಾಗಲೇ, ಕುಟುಂಬದ ಹಲವು ಸದಸ್ಯರು ಒಂದೇ ಸಲಕ್ಕೆ ಕೊರೊನಾ ಸಂಬಂಧಿತ ಆರೋಗ್ಯ ಸಮಸ್ಯೆ ಎದುರಿಸುವ ಸಂದರ್ಭ ಬಂದಾಗ ಪರಿಸ್ಥಿತಿ ಇನ್ನಷ್ಟು ವಿಕೋಪಕಕ್ಕೆ ಹೋಯಿತು.

ಹಲವು ಕುಟುಂಬಳಿಗೆ ಸಂಕಷ್ಟ ಪರಿಸ್ಥಿತಿ ಒಂದೆರೆಡು ದಿನಗಳಲ್ಲಿ ಪರಿಹಾರವಾಗಲಿಲ್ಲ. ಕ್ವಾರಂಟೈನ್, ಐಸೊಲೇಶನ್, ಚಿಕಿತ್ಸೆ ಸೇರಿದಂತೆ ಹಲವು ಹಂತಗಳಲ್ಲಿ ಸಮಸ್ಯೆ ಮುಂದುವರಿಯುತ್ತಲೇ ಇತ್ತು. ಸಂಕಷ್ಟ ಪರಿಸ್ಥಿತಿ ಎದುರಿಸುವಾಗ ಸಹಜವಾಗಿಯೇ ಉದ್ವಿಗ್ನತೆ ಅಥವಾ ಖಿನ್ನತೆಯಂಥ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇಂಥ ಲಕ್ಷಣಗಳು ಬಹುಕಾಲ ಉಳಿದರೆ ಅಂಥವರನ್ನು ಗುರುತಿಸಿ, ಆಪ್ತ ಸಮಾಲೋಚನೆಯ ಸೌಲಭ್ಯ ದೊರೆಯುವಂತೆ ಮಾಡಬೇಕು.

ಇದನ್ನೂ ಓದಿ: Mental health: ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಆಹಾರದ ಕ್ರಮ ಹೀಗಿರಲಿ ಇದನ್ನೂ ಓದಿ: Tips to Boost Mental Health: ಮಾನಸಿಕ ಒತ್ತಡದಿಂದ ಹೊರಬರಲು ಈ ಮೂರು ಕೆಲಸಗಳನ್ನು ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ