AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಶಾಢ ಅಮವಾಸ್ಯೆ 2021: ಶುಭ ದಿನದ ಮುಹೂರ್ತ, ಪೂಜಾ ವಿಧಿ-ವಿಧಾನ ಮತ್ತು ವಿಶೇಷತೆ ತಿಳಿಯಲೇಬೇಕು

Ashadha Amavasya 2021: ಈ ದಿನದ ಆರಾಧನೆಯಿಂದ ಜೀವನದಲ್ಲಿ ಕಷ್ಟ-ದುಃಖಗಳೆಲ್ಲ ತೊರೆದು ಹೋಗಿ ಸುಖ- ಶಾಂತಿ, ನೆಮ್ಮದಿಯು ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ಆಶಾಢ ಅಮವಾಸ್ಯೆ 2021: ಶುಭ ದಿನದ ಮುಹೂರ್ತ, ಪೂಜಾ ವಿಧಿ-ವಿಧಾನ ಮತ್ತು ವಿಶೇಷತೆ ತಿಳಿಯಲೇಬೇಕು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 09, 2021 | 10:45 AM

Share

ಈ ಬಾರಿಯ ಅಶಾಢ ಅಮವಾಸ್ಯೆಯನ್ನು ಇಂದು ( ಜುಲೈ 9) ಆಚರಿಸಲಾಗುತ್ತದೆ. ಇಂದು ಶುಭ ಶುಕ್ರವಾರವೂ ಹೌದು. ಹಿಂದೂ ನಂಬಿಕೆಯ ಪ್ರಕಾರ ಈ ದಿನ ಬಹಳ ವಿಶೇಷವಾದದ್ದು. ಪೂರ್ವಜರು ಅಥವಾ ಹಿರಿಯರ ದಿನವನ್ನು ನೆನೆಯುತ್ತ ಇಂದು ಅರ್ಪಣೆಗಳನ್ನು ಬಿಡುತ್ತಾರೆ. ವಿಶೇಷ ಪೂಜೆ ಕೈಗೊಳ್ಳುವ ಮೂಲಕ ಅವರನ್ನು ನೆನೆಯುವ ದಿನ. ಇದಲ್ಲದೇ ಈ ದಿನದ ಆರಾಧನೆಯಿಂದ ಜೀವನದಲ್ಲಿ ಕಷ್ಟ-ದುಃಖಗಳೆಲ್ಲ ತೊರೆದು ಹೋಗಿ ಸುಖ- ಶಾಂತಿ, ನೆಮ್ಮದಿಯು ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಜತೆಗೆ ಜಾತಕದ ಪ್ರಕಾರ ಪಿತೃ ದೋಷ, ಗ್ರಹ ದೋಷ ಮತ್ತು ಶನಿ ದೋಷಗಳಿಂದ ಮುಕ್ತರಾಗುವಂತೆ ಉಪವಾಸ ಕೈಗೊಂಡು ಆಚರಿಸುವ ಪದ್ಧತಿ ಮೊದಲಿನಿಂದಲೂ ಬಂದಿದೆ.

ಆಶಾಢ ಅಮವಾಸ್ಯೆ 2021: ದಿನಾಂಕ ಮತ್ತು ಶುಭ ಮುಹೂರ್ತ ದಿನಾಂಕ: 2021 ಜುಲೈ 9, ಶುಕ್ರವಾರ ಶುಭ ಮುಹೂರ್ತ ಪ್ರಾರಂಭ: ಜುಲೈ 9 ಬೆಳಿಗ್ಗೆ 05:16 ಶುಭ ಮುಹೂರ್ತ ಮುಕ್ತಾಯ: ಜುಲೈ 10 ಬೆಳಗ್ಗೆ 06:46

ಆಶಾಢ ಅಮವಾಸ್ಯೆಯ ಮಹತ್ವ ಗರುಡ ಪುರಾಣದ ಪ್ರಕಾರ ಆಶಾಢ ಅಮವಾಸ್ಯೆಯಂದು ಉಪವಾಸ ಕೈಗೊಳ್ಳುತ್ತಾರೆ. ಜತೆಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಎಲ್ಲಾ ರೀತಿಯ ಪಾಪಗಳಿಂದ ಮತ್ತು ದೋಷಗಳಿಂದ ಮುಕ್ತರಾಗಲೆಂದು ದಾನ-ಧರ್ಮಗಳಲ್ಲಿ ತೊಡಗುತ್ತಾರೆ. ಈ ದಿನ ಉಪವಾಸ ಕೈಗೊಳ್ಳುವುದರಿಂದ ಪೂರ್ವಜರಿಗೆ ಮತ್ತು ಆತ್ಮಗಳಿಗೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ.

ಪೂಜಾ ವಿಧಿ-ವಿಧಾನ *ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಭ್ರ ವಸ್ತ್ರವನ್ನು ಧರಿಸುವುದು *ಆಶಾಢ ಅಮವಾಸ್ಯೆ ದಿನ ಪ್ರಯುಕ್ತ ಉಪವಾಸ ಕೈಗೊಳ್ಳುವುದು *ಮಂತ್ರಗಳನ್ನು ಪಠಿಸುವುದು *ಪೂರ್ವಜರಿಗೆ ಪೂಜೆ ಸಲ್ಲಿಸುವುದು ಮತ್ತು ಅಗತ್ಯವಿರುವವರಿಗೆ ನಿಮ್ಮ ಕೈಲಾದಷ್ಟು ದಾನ-ಧರ್ಮ ಮಾಡುವುದು *ಮುಖ್ಯವಾಗಿ ಹನುಮ ಮತ್ತು ಶನಿ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ *ಹಿಂದೂ ನಂಬಿಕೆಯ ಪ್ರಕಾರ ಪಂಚ ಭೂತಗಳಿಗೆ (ಗಾಳಿ, ನೀರು, ಬೆಂಕಿ, ಆಕಾಶ ಮತ್ತು ಭೂಮಿ) ಪ್ರಾರ್ಥನೆ ಮಾಡುತ್ತಾರೆ. ಮತ್ತು ವಿಶೇಷ ಪೂಜೆ ಕೈಗೊಳ್ಳುತ್ತಾರೆ

ಇದನ್ನೂ ಓದಿ:

Strawberry Full Moon 2021: ಇಂದು ಸ್ಟ್ರಾಬೆರಿ ಮೂನ್​ ಗೋಚರಿಸುತ್ತಿದೆ! ಭಾರತದಲ್ಲಿ ಈ ವಿಸ್ಮಯವನ್ನು ನೋಡಬಹುದೇ?

Kara Hunnime: ಕಾರ ಹುಣ್ಣಿಮೆ ಆಚರಣೆ ವೇಳೆ ಅವಘಡ, ಎತ್ತು ಡಿಕ್ಕಿ ಹೊಡೆದು ವ್ಯಕ್ತಿಯ ಸಾವು

Follow Us
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!