AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sleeping: ಪ್ರತಿದಿನ 8 ಗಂಟೆ ನಿದ್ದೆ ಮಾಡಿದರೂ ಸುಸ್ತಾಗುತ್ತಿದೆಯೇ? ಇದೊಂದು ಅಭ್ಯಾಸ ತಪ್ಪಿಸಿ

ಪ್ರತಿದಿನ 8 ಗಂಟೆಗಳ ಕಾಲ ನಿದ್ದೆ ಮಾಡಿದರೂ ಬೆಳಿಗ್ಗೆ ಸುಸ್ತಾಗುತ್ತಿದೆಯೇ? ಸಮಸ್ಯೆ ನಿದ್ದೆಯ ಅವಧಿಯಲ್ಲಿ ಮಾತ್ರ ಇರದೇ, ನೀವು ಯಾವ ಸಮಯಕ್ಕೆ ಮಲಗುತ್ತೀರಿ ಮತ್ತು ಎದ್ದೇಳುತ್ತೀರಿ ಎಂಬುದರಲ್ಲೂ ಇರಬಹುದು. ವಾರಾಂತ್ಯದಲ್ಲಿ ನಿದ್ರೆಯ ಸಮಯವನ್ನು ಹೆಚ್ಚು ಬದಲಾಯಿಸುವುದು ‘ಸೋಶಿಯಲ್ ಜೆಟ್ ಲ್ಯಾಗ್’ಗೆ ಕಾರಣವಾಗಬಹುದು.

Sleeping: ಪ್ರತಿದಿನ 8 ಗಂಟೆ ನಿದ್ದೆ ಮಾಡಿದರೂ ಸುಸ್ತಾಗುತ್ತಿದೆಯೇ? ಇದೊಂದು ಅಭ್ಯಾಸ ತಪ್ಪಿಸಿ
Sleep
ಮಾಲಾಶ್ರೀ ಅಂಚನ್​
| Edited By: |

Updated on: Aug 30, 2026 | 3:42 PM

Share

ಮುಖ್ಯಾಂಶಗಳು

  • 8 ಗಂಟೆ ನಿದ್ದೆ ಮಾಡಿದರೂ ಏಕೆ ಸುಸ್ತಾಗುತ್ತದೆ?
  • ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಏಕೆ ಮುಖ್ಯ?
  • ವಾರಾಂತ್ಯದ ನಿದ್ರೆ ಬದಲಾವಣೆ ‘ಸೋಶಿಯಲ್ ಜೆಟ್ ಲ್ಯಾಗ್’ಗೆ ಕಾರಣವಾಗಬಹುದೇ?

ಪ್ರತಿದಿನ 7 ಅಥವಾ 8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ (Sleep) ಮಾಡಿದರೂ ಬೆಳಿಗ್ಗೆ ಎದ್ದಾಗ ಸುಸ್ತು, ಆಯಾಸ ಅಥವಾ ನಿದ್ರಾವಸ್ಥೆ ಅನುಭವವಾಗುತ್ತಿದೆಯೇ? ಹಾಗಿದ್ದರೆ ಸಮಸ್ಯೆ ಕೇವಲ ನೀವು ಎಷ್ಟು ಗಂಟೆ ನಿದ್ದೆ ಮಾಡುತ್ತೀರಿ ಎಂಬುದರಲ್ಲಿ ಮಾತ್ರ ಇರದೇ ಇರಬಹುದು. ನೀವು ಪ್ರತಿದಿನ ಯಾವ ಸಮಯಕ್ಕೆ ಮಲಗುತ್ತೀರಿ ಮತ್ತು ಯಾವ ಸಮಯಕ್ಕೆ ಎದ್ದೇಳುತ್ತೀರಿ ಎಂಬುದೂ ಮುಖ್ಯವಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಇತ್ತೀಚೆಗೆ ವೈದ್ಯ ಮಾರ್ಕ್ ಹೈಮನ್ ಹಂಚಿಕೊಂಡ ಪಾಡ್‌ಕಾಸ್ಟ್ ವಿಡಿಯೊದಲ್ಲಿ, ಮಾನವ ಕಾರ್ಯಕ್ಷಮತೆ ಕುರಿತು ಅಧ್ಯಯನ ನಡೆಸುವ ವಿಜ್ಞಾನಿ ಮತ್ತು ಕಾರ್ಯಕ್ಷಮತಾ ತರಬೇತುದಾರ ಡಾ. ಆಂಡಿ ಗಾಲ್ಪಿನ್ ನಿದ್ರೆಯಲ್ಲಿನ ಒಂದು ಪ್ರಮುಖ ಅಂಶದ ಬಗ್ಗೆ ವಿವರಿಸಿದ್ದಾರೆ. ಅವರ ಪ್ರಕಾರ, ಹೆಚ್ಚಿನ ಜನರು ನಿದ್ದೆಯ ಅವಧಿಯ ಮೇಲೆ ಮಾತ್ರ ಗಮನ ಹರಿಸುತ್ತಾರೆ. ಆದರೆ ನಿದ್ರೆಯಲ್ಲಿ ನಿಯಮಿತ ಸಮಯ ಪಾಲಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ.

ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಏಕೆ ಮುಖ್ಯ?

ಉದಾಹರಣೆಗೆ, ನೀವು ವಾರದ ದಿನಗಳಲ್ಲಿ ರಾತ್ರಿ 10 ಗಂಟೆಗೆ ಮಲಗಿ ಬೆಳಿಗ್ಗೆ 6 ಗಂಟೆಗೆ ಎದ್ದೇಳುತ್ತೀರಿ ಎಂದುಕೊಳ್ಳಿ. ಈ ರೀತಿ ನಿಮಗೆ ಪ್ರತಿದಿನ ಸುಮಾರು 8 ಗಂಟೆಗಳ ನಿದ್ದೆ ಸಿಗುತ್ತದೆ.

ಆದರೆ ವಾರಾಂತ್ಯ ಬಂದಾಗ ರಾತ್ರಿ 1 ಅಥವಾ 2 ಗಂಟೆಯವರೆಗೆ ಎಚ್ಚರವಾಗಿದ್ದು, ಬೆಳಿಗ್ಗೆ 9 ಅಥವಾ 10 ಗಂಟೆಯವರೆಗೆ ಮಲಗಿದರೆ ಏನಾಗುತ್ತದೆ? ನಿಮಗೆ ಆಗಲೂ 8 ಗಂಟೆಗಳ ನಿದ್ದೆ ಸಿಕ್ಕಿರಬಹುದು. ಆದರೆ ನಿಮ್ಮ ದೇಹದ ನಿದ್ರೆಯ ಸಮಯ ಸಂಪೂರ್ಣವಾಗಿ ಬದಲಾಗಿರುತ್ತದೆ.

ಈ ರೀತಿಯ ನಿದ್ರೆಯ ಸಮಯದಲ್ಲಿನ ದೊಡ್ಡ ಬದಲಾವಣೆಯನ್ನು ‘ಸೋಶಿಯಲ್ ಜೆಟ್ ಲ್ಯಾಗ್’ ಎಂದು ಕರೆಯಲಾಗುತ್ತದೆ. ಅಂದರೆ, ವಿಮಾನದಲ್ಲಿ ಬೇರೆ ಸಮಯ ವಲಯಕ್ಕೆ ಪ್ರಯಾಣಿಸಿದಾಗ ದೇಹಕ್ಕೆ ಉಂಟಾಗುವ ಜೆಟ್ ಲ್ಯಾಗ್‌ನಂತೆಯೇ, ವಾರಾಂತ್ಯದಲ್ಲಿ ನಿದ್ರೆಯ ಸಮಯವನ್ನು ಬಹಳಷ್ಟು ಬದಲಾಯಿಸುವ ಮೂಲಕ ನಮ್ಮ ದೇಹದ ಆಂತರಿಕ ಗಡಿಯಾರಕ್ಕೆ ಗೊಂದಲ ಉಂಟಾಗಬಹುದು.

8 ಗಂಟೆ ನಿದ್ದೆ ಮಾಡಿದರೂ ಏಕೆ ಸುಸ್ತಾಗುತ್ತದೆ?

ಡಾ. ಆಂಡಿ ಗಾಲ್ಪಿನ್ ಅವರ ಪ್ರಕಾರ, ಸಮಸ್ಯೆ ಯಾವಾಗಲೂ ನಿದ್ದೆಯ ಪ್ರಮಾಣದಲ್ಲೇ ಇರಬೇಕೆಂದಿಲ್ಲ. ನೀವು ಯಾವ ಸಮಯದಲ್ಲಿ ನಿದ್ದೆ ಮಾಡುತ್ತೀರಿ ಎಂಬುದೂ ಮುಖ್ಯ. ವಾರದ ಐದು ದಿನ ಒಂದು ಸಮಯಕ್ಕೆ ಮಲಗಿ, ವಾರಾಂತ್ಯದಲ್ಲಿ 3 ಅಥವಾ 4 ಗಂಟೆಗಳಷ್ಟು ತಡವಾಗಿ ಮಲಗುವ ಅಭ್ಯಾಸ ದೇಹದ ನಿಯಮಿತ ನಿದ್ರೆ ಚಕ್ರವನ್ನು ಅಸ್ತವ್ಯಸ್ತಗೊಳಿಸಬಹುದು. ಪರಿಣಾಮವಾಗಿ, ಸಾಕಷ್ಟು ಗಂಟೆಗಳ ನಿದ್ದೆ ಮಾಡಿದರೂ ಬೆಳಿಗ್ಗೆ ಎದ್ದಾಗ ದೇಹ ಸಂಪೂರ್ಣ ವಿಶ್ರಾಂತಿ ಪಡೆದಂತೆ ಅನಿಸದೇ ಇರಬಹುದು. ಕೆಲವರಿಗೆ ತಲೆ ಭಾರವಾಗುವುದು, ಸುಸ್ತು, ಏಕಾಗ್ರತೆಯ ಕೊರತೆ ಮತ್ತು ಶಕ್ತಿಯ ಕೊರತೆಯಂತಹ ಅನುಭವವಾಗಬಹುದು.

Walking: ಬರಿಗಾಲಿನಲ್ಲಿ ಹುಲ್ಲಿನ ಮೇಲೆ ನಡೆಯುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆಯೇ?

ವಯಸ್ಸಾದಂತೆ ಪರಿಣಾಮ ಹೆಚ್ಚಾಗಬಹುದು

ಯುವ ವಯಸ್ಸಿನಲ್ಲಿ ಕೆಲವರು ನಿದ್ರೆಯ ಸಮಯದಲ್ಲಿ ಆಗಾಗ ಬದಲಾವಣೆ ಮಾಡಿದರೂ ಅದರ ಪರಿಣಾಮವನ್ನು ಸುಲಭವಾಗಿ ನಿಭಾಯಿಸಬಹುದು. ಆದರೆ ವಯಸ್ಸು ಹೆಚ್ಚಾದಂತೆ ದೇಹಕ್ಕೆ ಈ ರೀತಿಯ ಅನಿಯಮಿತ ನಿದ್ರೆಯ ಸಮಯಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಬಹುದು ಎಂದು ಗಾಲ್ಪಿನ್ ವಿವರಿಸಿದ್ದಾರೆ.

ಹೀಗಾಗಿ, ಉತ್ತಮ ನಿದ್ರೆ ಎಂದರೆ ಕೇವಲ ಪ್ರತಿದಿನ 8 ಗಂಟೆಗಳ ಕಾಲ ಮಲಗುವುದಷ್ಟೇ ಅಲ್ಲ. ಸಾಧ್ಯವಾದಷ್ಟು ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಒಂದೇ ಸಮಯಕ್ಕೆ ಎದ್ದೇಳುವುದು ಕೂಡ ಮುಖ್ಯವಾಗಿದೆ.

ಸೂಚನೆ: ನಿದ್ರೆಯ ಸಮಸ್ಯೆ, ನಿರಂತರ ಆಯಾಸ ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ. ಈ ಮಾಹಿತಿ ಸಾಮಾನ್ಯ ಅರಿವಿಗಾಗಿ ಮಾತ್ರ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ