AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shivaji Maharaj Jayanti 2023: ಶಿವಾಜಿ ಮಹಾರಾಜರ ಪರಾಕ್ರಮದ ಕಥೆಗಳು ಪ್ರತಿಧ್ವನಿಸುವ ಈ ಕೋಟೆಗಳಿಗೆ ಭೇಟಿ ನೀಡಿ

ಇಂದು (ಫೆಬ್ರವರಿ 19, 2023)ರಂದು, ಶಿವಾಜಿ ಮಹಾರಾಜರ 393 ನೇ ಜನ್ಮದಿನವಾಗಿದೆ. ಶಿವಾಜಿ ಹುಟ್ಟೂರಿನಲ್ಲಿರುವ ಕೋಟೆ, ತೋರ್ಣ ಕೋಟೆ, ಕೋರಿಗಡ್ ಮತ್ತು ರಾಯಗಡ ಕೋಟೆಗಳ ಕುರಿತು ಮಾಹಿತಿ ಇಲ್ಲಿದೆ.

Shivaji Maharaj Jayanti 2023: ಶಿವಾಜಿ ಮಹಾರಾಜರ ಪರಾಕ್ರಮದ ಕಥೆಗಳು ಪ್ರತಿಧ್ವನಿಸುವ ಈ ಕೋಟೆಗಳಿಗೆ ಭೇಟಿ ನೀಡಿ
ಛತ್ರಪತಿ ಶಿವಾಜಿ ಮಹಾರಾಜ್​​​Image Credit source: explore.India
Follow us
ಅಕ್ಷತಾ ವರ್ಕಾಡಿ
|

Updated on:Feb 19, 2023 | 4:32 PM

ಮಹಾರಾಷ್ಟ್ರ ಐತಿಹಾಸಿಕ ಪ್ರಬಲ ಕೋಟೆಗಳು ಮಹಾನ್ ಮರಾಠ ಚಕ್ರವರ್ತಿಯ ಕಥೆಗಳನ್ನು ಸಾರಿ ಹೇಳುತ್ತದೆ. ಕೋಟೆಗಳಲ್ಲಿನ ಕಾಲುದಾರಿಗಳು, ಬಂದೀಖಾನೆಗಳು ಮತ್ತು ಗೋಡೆಗಳು ಈಗಲೂ ಯುದ್ಧಕಾಲದ ಕಥೆಗಳು ಮತ್ತು ಮರಾಠ ಚಕ್ರವರ್ತಿ ಛತ್ರಪತಿ ಶಿವಾಜಿಯ ಶೌರ್ಯವನ್ನು ಪ್ರತಿಧ್ವನಿಸುತ್ತವೆ. ಇಂದು (ಫೆಬ್ರವರಿ 19, 2023)ರಂದು, ಶಿವಾಜಿ ಮಹಾರಾಜರ 393 ನೇ ಜನ್ಮದಿನವನ್ನು ಆಚರಿಸಲಾಗುತ್ತದೆ. ಶಿವಾಜಿ ಹುಟ್ಟೂರಿನಲ್ಲಿರುವ ಕೋಟೆಯಿಂದ ಹಿಡಿದು  ತನ್ನ 16 ನೇ ವಯಸ್ಸಿನಲ್ಲಿ ವಶಪಡಿಸಿಕೊಂಡ ಕೋಟೆಯ ವರೆಗಿನ ಶಿವಾಜಿಯ ಪರಾಕ್ರಮವನ್ನು ಸಾರುವ ಕೋಟೆಗಳ ಐತಿಹಾಸಿಕ ವಿವರಗಳು ಇಲ್ಲಿವೆ.

ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಯನ್ನು ಹೊಂದಿರುವ ಕೋಟೆಗಳು:

ಶಿವನೇರಿ ಕೋಟೆ:

ಶಿವನೇರಿ ಛತ್ರಪತಿ ಶಿವಾಜಿಯ ಜನ್ಮಸ್ಥಳವಾಗಿದೆ. ಶಿವನೇರಿ ಮಹಾರಾಷ್ಟ್ರದ ಹೆಮ್ಮೆಯ ಮತ್ತೊಂದು ಬೆಟ್ಟದ ಕೋಟೆಯಾಗಿದೆ. ಮಂತ್ರಮುಗ್ಧಗೊಳಿಸುವ ನೋಟಗಳ ಹೊರತಾಗಿ, ಈ ಕೋಟೆ ಆವರಣದಲ್ಲಿ ಕೊಳಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡಬಹುದು.

ಲೋಹಗಢ್ ಕೋಟೆ:

ಮರಾಠಿಯಲ್ಲಿ ಲೋಹಗಢ್ ಕೋಟೆ ಎಂದರೆ ಕಬ್ಬಿಣದ ಕೋಟೆ ಎಂಬ ಅರ್ಥವನ್ನು ನೀಡುತ್ತದೆ. ಈ ಕೋಟೆ ಲೋನಾವ್ಲಾದ ಸಹ್ಯಾದ್ರಿ ಶ್ರೇಣಿಯ ತಪ್ಪಲಿನಲ್ಲಿ ಸುಮಾರು 1,033 ಮೀ ಎತ್ತರದಲ್ಲಿದೆ. ಇದನ್ನು ಸುಮಾರು 18 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂಬ ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಮಳೆಗಾಲದಲ್ಲಿ ನೀವು ಇಲ್ಲಿಗೆ ಭೇಟಿ ನೀಡಿದರೆ ಸುಂದರ ಹಸಿರ ಹೊದಿಕೆಗಳಿಂದ ಕೋಟೆಯನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ. ಜೊತೆಗೆ ದಾರಿಯುದ್ದಕ್ಕೂ ಕೆಲವು ಅದ್ಭುತ ಜಲಪಾತಗಳನ್ನು ಕಾಣಬಹುದು.

ಸಿಂಧುದುರ್ಗ ಕೋಟೆ:

ಸುಮಾರು 1664 ರಲ್ಲಿ ಛತ್ರಪತಿ ಶಿವಾಜಿ ನಿರ್ಮಿಸಿದ ಈ ಭವ್ಯವಾದ ಕೋಟೆಯು ಸುಮಾರು 44 ಎಕರೆಗಳಷ್ಟು ವಿಸ್ತಾರವಾಗಿದೆ. ನೀವು ಎಂದಾದರೂ ಮಹಾರಾಷ್ಟ್ರಕ್ಕೆ ಭೇಟಿ ನೀಡಿದಾಗ ಈ ಕೋಟೆಗೆ ಭೇಟಿ ನೀಡಿ.

ರಾಯಗಡ ಕೋಟೆ:

ಸುಮಾರು 2700 ಅಡಿ ಎತ್ತರದಲ್ಲಿರುವ ಈ ಕೋಟೆಯು 1400 ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹೊಂದಿದೆ. ಈ ಭವ್ಯ ಕೋಟೆಯು ಶಿವಾಜಿ ಮಹರಾಜರ ಸಾಹಸದ ಕಥೆಯನ್ನು ಸಾರಿ ಹೇಳುತ್ತದೆ. ಈ ಚಾರಣದ ಒಂದು ಪ್ರಮುಖ ಅಂಶವೆಂದರೆ ನೀವು ರೋಪ್‌ವೇಯಲ್ಲಿ ಕುಳಿತು ಕೋಟೆಯನ್ನು ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು.

ಇದನ್ನೂ ಓದಿ: 5000 ವರ್ಷಗಳ ಹಿಂದಿನ ಪುರಾತನ ಹೋಟೆಲಿನ ಅವಶೇಷಗಳು ಪತ್ತೆ

ತೋರ್ಣ ಕೋಟೆ:

ಪುಣೆಯಲ್ಲಿ ನೋಡಲೇಬೇಕಾದ ಕೋಟೆಗಳಲ್ಲಿ ಒಂದಾದ ತೊರ್ನಾ ಕೋಟೆಯನ್ನು ಪ್ರಚಂಡಗಡ ಎಂದೂ ಕರೆಯುತ್ತಾರೆ. ಇದು ಸಮುದ್ರ ಮಟ್ಟದಿಂದ 1,403 ಮೀ ಎತ್ತರದಲ್ಲಿದೆ. ಇದು ಪುಣೆಯ ಅತಿ ಎತ್ತರದ ಬೆಟ್ಟದ ಕೋಟೆಯಾಗಿದೆ. ಇದು ಶಿವಾಜಿ ಮಹಾರಾಜರು 1643 ರಲ್ಲಿ 16 ನೇ ವಯಸ್ಸಿನಲ್ಲಿ ವಶಪಡಿಸಿಕೊಂಡ ಮೊದಲ ಕೋಟೆಯಾಗಿದೆ. ಕೋಟೆಯೊಳಗೆ ಗೋಪುರಗಳು ಮತ್ತು ಸ್ಮಾರಕಗಳು ಭಾರತದ ಶ್ರೀಮಂತ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ.

ಕೋರಿಗಡ್ ಕೋಟೆ:

ಕೊರೈಗಡ್ ಎಂದೂ ಕರೆಯಲ್ಪಡುವ ಕೋರಿಗಡ್ ಕೋಟೆಯು ಲೋನಾವಾಲಾದಿಂದ 20-ಕಿಲೋಮೀಟರ್ ದೂರದಲ್ಲಿ ಮತ್ತು ಪೇತ್ ಶಾಹಪುರ್ ಎಂಬ ಹಳ್ಳಿಯ ಸಮೀಪದಲ್ಲಿದೆ. ಛತ್ರಪತಿ ಶಿವಾಜಿಯ ಆಳ್ವಿಕೆಯ ಸಮಯದಲ್ಲಿ ಈ ಕೋಟೆಯನ್ನು ನಿರ್ಮಿಸಲಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 4:26 pm, Sun, 19 February 23

ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ
ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ
ದುರಂತಕ್ಕೆ ರಾಶಿಗಟ್ಟಲೇ ಚಪ್ಪಲಿಗಳು ಸಾಕ್ಷಿ: ಇವೇ ಹೇಳುತ್ತಿವೆ ಸಾವಿನ ಕಥೆ
ದುರಂತಕ್ಕೆ ರಾಶಿಗಟ್ಟಲೇ ಚಪ್ಪಲಿಗಳು ಸಾಕ್ಷಿ: ಇವೇ ಹೇಳುತ್ತಿವೆ ಸಾವಿನ ಕಥೆ
ಆಟಗಾರರ ಜೊತೆ ಸೆಲ್ಪೀ ತೆಗೆದುಕೊಳ್ಳೋದು ನಮ್ಮ ನಾಯಕರಿಗೆ ಬೇಕಿತ್ತಾ? ಸುಧಾಕರ್
ಆಟಗಾರರ ಜೊತೆ ಸೆಲ್ಪೀ ತೆಗೆದುಕೊಳ್ಳೋದು ನಮ್ಮ ನಾಯಕರಿಗೆ ಬೇಕಿತ್ತಾ? ಸುಧಾಕರ್
Live: ವಿಜಯೇಂದ್ರ, ಅಶೋಕ್​ ಜಂಟಿ ಸುದ್ದಿಗೋಷ್ಠಿ ನೇರ ಪ್ರಸಾರ
Live: ವಿಜಯೇಂದ್ರ, ಅಶೋಕ್​ ಜಂಟಿ ಸುದ್ದಿಗೋಷ್ಠಿ ನೇರ ಪ್ರಸಾರ
ಬೆಂಗಳೂರು ಕಾಲ್ತುಳಿತ: ಘೋರ ದುರಂತವನ್ನು ಕನ್ನಡಿಗರು ಯಾವತ್ತೂ ಮರೆಯಲಾರರು
ಬೆಂಗಳೂರು ಕಾಲ್ತುಳಿತ: ಘೋರ ದುರಂತವನ್ನು ಕನ್ನಡಿಗರು ಯಾವತ್ತೂ ಮರೆಯಲಾರರು
ನನಗೂ ಉಸಿರುಗಟ್ಟಿತ್ತ; ಸ್ಟೇಡಿಯಂ ಕರಾಳ ಅನುಭವ ಬಿಚ್ಚಿಟ್ಟ ಚಂದನ್ ಶೆಟ್ಟಿ
ನನಗೂ ಉಸಿರುಗಟ್ಟಿತ್ತ; ಸ್ಟೇಡಿಯಂ ಕರಾಳ ಅನುಭವ ಬಿಚ್ಚಿಟ್ಟ ಚಂದನ್ ಶೆಟ್ಟಿ
ಸ್ಮಶಾನವಾದ ಚಿನ್ನಸ್ವಾಮಿ ಸ್ಟೇಡಿಯಂ, ದುರಂತಕ್ಕೆ ಸಾಕ್ಷಿಯಾದ ರಾಶಿ ಚಪ್ಪಲಿ
ಸ್ಮಶಾನವಾದ ಚಿನ್ನಸ್ವಾಮಿ ಸ್ಟೇಡಿಯಂ, ದುರಂತಕ್ಕೆ ಸಾಕ್ಷಿಯಾದ ರಾಶಿ ಚಪ್ಪಲಿ
Daily Devotional: ಸಹವಾಸದಿಂದ ಏನೆಲ್ಲಾ ಪ್ರಭಾವ ಬೀರುತ್ತೆ ಗೊತ್ತಾ?
Daily Devotional: ಸಹವಾಸದಿಂದ ಏನೆಲ್ಲಾ ಪ್ರಭಾವ ಬೀರುತ್ತೆ ಗೊತ್ತಾ?
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಅಶುಭ ಫಲ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಅಶುಭ ಫಲ
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು