AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿದಿನ ಬಿಂದಿ ಧರಿಸುವುದರ ಹಿಂದಿರುವ ವೈಜ್ಞಾನಿಕ ಕಾರಣ ನಿಮಗೆ ಗೊತ್ತಾ? ಚರ್ಮವನ್ನು ಸುಂದರವಾಗಿರಿಸಲು ಸಹಾಯ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಭಾರತೀಯ ಮಹಿಳೆಯರು ಶತಮಾನಗಳಿಂದ ಪ್ರತಿದಿನವೂ ಬಿಂದಿ ಹಚ್ಚುತ್ತಾ ಬಂದಿದ್ದಾರೆ. ಇದು ಕೇವಲ ಫ್ಯಾಷನ್ ಗಾಗಿ ಎಂದು ಜನರು ಭಾವಿಸಬಹುದು ಆದರೆ ಅದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಅವು ಯಾವುದು ಇಲ್ಲಿದೆ ಮಾಹಿತಿ.

ಪ್ರತಿದಿನ ಬಿಂದಿ ಧರಿಸುವುದರ ಹಿಂದಿರುವ ವೈಜ್ಞಾನಿಕ  ಕಾರಣ ನಿಮಗೆ ಗೊತ್ತಾ? ಚರ್ಮವನ್ನು ಸುಂದರವಾಗಿರಿಸಲು  ಸಹಾಯ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
Image Credit source: pixabay
ಪ್ರೀತಿ ಭಟ್​, ಗುಣವಂತೆ
| Edited By: |

Updated on:Apr 19, 2023 | 6:53 PM

Share

ಮುಖ್ಯಾಂಶಗಳು

  • ಭಾರತದಲ್ಲಿ, ಪ್ರತಿಯೊಬ್ಬ ಮಹಿಳೆಯರ ಬ್ಯಾಗ್ನಲ್ಲಿ ಕನಿಷ್ಠ ಒಂದು ಬಿಂದಿ ಡಬ್ಬ ಖಂಡಿತವಾಗಿಯೂ ಕಾಣಬಹುದು.
  • ಭಾರತೀಯ ಮಹಿಳೆಯರು ಶತಮಾನಗಳಿಂದ ಪ್ರತಿದಿನವೂ ಬಿಂದಿ ಹಚ್ಚುತ್ತಾ ಬಂದಿದ್ದಾರೆ.
  • ಇದು ಕೇವಲ ಫ್ಯಾಷನ್ ಗಾಗಿ ಎಂದು ಜನರು ಭಾವಿಸಬಹುದು ಆದರೆ ಅದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಅವು ಯಾವುದು ಇಲ್ಲಿದೆ ಮಾಹಿತಿ.

ಭಾರತದಲ್ಲಿ, ಪ್ರತಿಯೊಬ್ಬ ಮಹಿಳೆಯರ ಬ್ಯಾಗ್ನಲ್ಲಿ ಕನಿಷ್ಠ ಒಂದು ಬಿಂದಿ ಡಬ್ಬ ಖಂಡಿತವಾಗಿಯೂ ಕಾಣಬಹುದು. ಸಾಂಪ್ರದಾಯಿಕ ಏನನ್ನಾದರೂ ಧರಿಸುವ ಸಮಯ ಬಂದಾಗಲೆಲ್ಲಾ, ಹೆಚ್ಚಿನ ಮಹಿಳೆಯರು ಸುಂದರವಾಗಿ ಕಾಣಲು ಬಿಂದಿ ಹಾಕಲು ಬಯಸುತ್ತಾರೆ. ಅದರಲ್ಲಿಯೂ ಭಾರತೀಯ ಮಹಿಳೆಯರು ಶತಮಾನಗಳಿಂದ ಪ್ರತಿದಿನವೂ ಬಿಂದಿ ಹಚ್ಚುತ್ತಾ ಬಂದಿದ್ದಾರೆ. ಇದು ಕೇವಲ ಫ್ಯಾಷನ್ ಗಾಗಿ ಎಂದು ಜನರು ಭಾವಿಸಬಹುದು ಆದರೆ ಅದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಯೋಗದ ಪ್ರಕಾರ, ಮಹಿಳೆಯರು ತಮ್ಮ ಬಿಂದಿಯನ್ನು ಧರಿಸುವ ಸ್ಥಳವನ್ನು ಅಜ್ನಾ ಚಕ್ರ ಎಂದು ಕರೆಯಲಾಗುತ್ತದೆ, ಮತ್ತು ಈ ಬಿಂದುವನ್ನು ದಿನಕ್ಕೆ ಅನೇಕ ಬಾರಿ ಒತ್ತುವುದರಿಂದ(ಪ್ರೆಸ್) ಹಲವಾರು ಪ್ರಯೋಜನಗಳಿವೆ.

ಆಯುರ್ವೇದ ತಜ್ಞರೊಬ್ಬರು ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಬಿಂದಿ ಹಚ್ಚುವುದರಿಂದ ಮಾನವ ದೇಹಕ್ಕೆ ಹೇಗೆ ಪ್ರಯೋಜನವಾಗುತ್ತದೆ ಎಂಬುದರ ಬಗ್ಗೆ ಮಾತನಾಡಿದ್ದರು. ಅಲ್ಲದೆ ಯೋಗದ ಪ್ರಕಾರ, ಈ ಬಿಂದುವನ್ನು ‘ಅಜ್ನಾ ಚಕ್ರ’ ಎಂದು ಕರೆಯಲಾಗುತ್ತದೆ – ಇದು ಮಾನವ ದೇಹದ ಆರನೇ ಮತ್ತು ಅತ್ಯಂತ ಶಕ್ತಿಯುತ ಚಕ್ರವಾಗಿದೆ ಮತ್ತು ಇದು ತಲೆ, ಕಣ್ಣುಗಳು, ಮೆದುಳು, ಪೀನಿಯಲ್ ಗ್ರಂಥಿ ಮತ್ತು ಪಿಟ್ಯುಟರಿ ಗ್ರಂಥಿಯನ್ನು ಒಳಗೊಂಡಿದೆ ಎಂದು ಡಾ.ದಿಕ್ಸಾ ಭಾವ್ಸರ್ ಸವಲಿಯಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುತ್ತಿದೆಯೇ? ಗ್ರಹಣಕಾಲದಲ್ಲಿ ಏನು ಮಾಡಬೇಕು ಏನೇನು ಮಾಡಬಾರದು; ಇಲ್ಲಿದೆ ಮಾಹಿತಿ

ಸಾಮಾನ್ಯವಾಗಿ ಮಹಿಳೆಯರಿಗೆ ಬಿಂದಿ ಧರಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ನೀವು ಗಮನಿಸಿರಬಹುದು ಅದನ್ನು ಇರಿಸಿ, ಸ್ವಲ್ಪ ಸರಿಹೊಂದಿಸಿ ಮತ್ತು ನಂತರ ಅದು ಸ್ಥಳದಲ್ಲಿಯೇ ಇದೆಯೆ ಎಂದು ಖಚಿತಪಡಿಸಿಕೊಳ್ಳಲು ಅದನ್ನು ದೃಢವಾಗಿ ಒತ್ತುತ್ತೀರಿ. ಇನ್ನು ಕೆಲವರಿಗೆ ಬಿದ್ದು ಹೋಗಬಹುದೆಂಬ ಭಯದಿಂದ ಹಾಗೆ ಮಾಡುತ್ತಾರೆ. ಪ್ರತಿದಿನ ಅನೇಕ ಬಾರಿ ಹೀಗೆ ಮಾಡುವುದರಿಂದ ಹಲವಾರು ಪ್ರಯೋಜನಗಳನ್ನು ಹೊಂದಿದೆ ಎಂಬುದು ತಿಳಿದು ಬಂದಿದೆ. ಇದು ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಪ್ರಯೋಜನಕಾರಿಯಾಗಿದೆ. ಪುರುಷರು ಬಿಂದಿ ಧರಿಸಲು ಸಾಧ್ಯವಿಲ್ಲದ ಕಾರಣ, ಅವರು ಅಜ್ನಾ ಚಕ್ರದ ಮೇಲೆ ಪ್ರತಿದಿನ ಕುಂಕುಮ ತಿಲಕವನ್ನು ಹಾಕಬಹುದು ಅಥವಾ ಅವರು ದಿನಕ್ಕೆ 100 ಆ ಬಾರಿ ಬಿಂದುವನ್ನು ಒತ್ತಬಹುದು.

ಬಿಂದಿ ಇಡುವುದರಿಂದ ಆಗುವ ಪ್ರಯೋಜನಗಳೇನು?

  • ತಲೆನೋವನ್ನು ನಿವಾರಿಸುತ್ತದೆ.
  • ನಿಮ್ಮ ಸೈನಸ್ ಗಳನ್ನು ನಿವಾರಿಸುತ್ತದೆ.
  • ದೃಷ್ಟಿ ಮತ್ತು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.
  • ನಿಮ್ಮ ಚರ್ಮವನ್ನು ಕಾಂತಿಯುತವಾಗಿ ಮಾಡಿ ಚರ್ಮ ಸುಕ್ಕು ಗಟ್ಟದಂತೆ ನೋಡಿಕೊಳ್ಳುತ್ತದೆ.
  • ಖಿನ್ನತೆ ತಡೆಯುತ್ತದೆ.
  • ಶ್ರವಣ ಶಕ್ತಿಯನ್ನು ಸುಧಾರಿಸುತ್ತದೆ.
  • ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
  • ಒತ್ತಡದಿಂದ ಉಂಟಾಗುವ ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:53 pm, Wed, 19 April 23

Follow Us
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು