AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿ ಇಡಬಾರದು ಏಕೆ? ಇದರ ಹಿಂದಿದೆ ವೈಜ್ಞಾನಿಕ ಕಾರಣ

ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿ ಇಡಬಾರದು ಎಂದು ಮನೆಯ ಹಿರಿಯರು ಹೇಳುವುದನ್ನು ಕೇಳಿರಬಹುದು. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಕಡಿಮೆ ತಾಪಮಾನದಲ್ಲಿ ಆಲೂಗಡ್ಡೆಯಲ್ಲಿರುವ ಪಿಷ್ಟ ಸಕ್ಕರೆಯಾಗಿ ಬದಲಾಗಬಹುದು. ಇದರಿಂದ ರುಚಿ ಮತ್ತು ಅಡುಗೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಗಾದರೆ ಆಲೂಗಡ್ಡೆಯನ್ನು ಹೇಗೆ ಸಂಗ್ರಹಿಸಬೇಕು?.

ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿ ಇಡಬಾರದು ಏಕೆ? ಇದರ ಹಿಂದಿದೆ ವೈಜ್ಞಾನಿಕ ಕಾರಣ
Potato
ಮಾಲಾಶ್ರೀ ಅಂಚನ್​
| Edited By: |

Updated on: Sep 16, 2026 | 11:10 AM

Share

ಮುಖ್ಯಾಂಶಗಳು

  • ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿ ಏಕೆ ಇಡಬಾರದು?
  • ಫ್ರಿಜ್‌ನಲ್ಲಿಟ್ಟ ಆಲೂಗಡ್ಡೆಗೆ ಏನಾಗುತ್ತದೆ?
  • ಆಲೂಗಡ್ಡೆ ಸಂಗ್ರಹಿಸುವ ಸರಿಯಾದ ವಿಧಾನ ಯಾವುದು?

ತರಕಾರಿಗಳನ್ನು ಹೆಚ್ಚು ದಿನ ತಾಜಾವಾಗಿ ಇಡಲು ನಾವು ಸಾಮಾನ್ಯವಾಗಿ ಫ್ರಿಜ್‌ ಬಳಸುತ್ತೇವೆ. ಕ್ಯಾರೆಟ್‌, ಬೀನ್ಸ್‌, ಹಸಿರು ಸೊಪ್ಪು (Green Leafy) ಸೇರಿದಂತೆ ಹಲವು ತರಕಾರಿಗಳನ್ನು ಫ್ರಿಜ್‌ನಲ್ಲಿ ಸಂಗ್ರಹಿಸುವುದು ಸಾಮಾನ್ಯ. ಆದರೆ ಆಲೂಗಡ್ಡೆಯನ್ನು ಮಾತ್ರ ಸಾಮಾನ್ಯವಾಗಿ ಫ್ರಿಜ್‌ನೊಳಗೆ ಇಡುವುದಿಲ್ಲ. ಇದಕ್ಕೆ ಕೇವಲ ಹಳೆಯ ಪದ್ಧತಿಯಷ್ಟೇ ಕಾರಣವಲ್ಲ. ಆಲೂಗಡ್ಡೆಯ ರುಚಿ ಮತ್ತು ವಿನ್ಯಾಸದ ಮೇಲೆ ತಂಪಾದ ವಾತಾವರಣ ಪರಿಣಾಮ ಬೀರುವುದೇ ಪ್ರಮುಖ ಕಾರಣವಾಗಿದೆ.

ಫ್ರಿಜ್‌ನಲ್ಲಿ ಇಟ್ಟರೆ ಏನಾಗುತ್ತದೆ?

ಆಲೂಗಡ್ಡೆಯಲ್ಲಿ ಪಿಷ್ಟ ಅಂಶ ಹೆಚ್ಚಾಗಿರುತ್ತದೆ. ಫ್ರಿಜ್‌ನಲ್ಲಿರುವ ಕಡಿಮೆ ತಾಪಮಾನದಲ್ಲಿ ಈ ಪಿಷ್ಟದಲ್ಲಿ ಬದಲಾವಣೆ ಉಂಟಾಗುತ್ತದೆ. ಪಿಷ್ಟದ ಒಂದು ಭಾಗ ಸಕ್ಕರೆಯಾಗಿ ಪರಿವರ್ತನೆಯಾಗುವುದರಿಂದ ಆಲೂಗಡ್ಡೆಯಲ್ಲಿ ಸಿಹಿ ರುಚಿ ಹೆಚ್ಚಾಗಬಹುದು. ಪರಿಣಾಮವಾಗಿ ಅದರ ಮೂಲ ರುಚಿ ಮತ್ತು ವಿನ್ಯಾಸ ಬದಲಾಗುತ್ತದೆ. ಫ್ರಿಜ್‌ನಲ್ಲಿ ಇಟ್ಟ ಆಲೂಗಡ್ಡೆ ಬೇಯಿಸಿದಾಗ ಅಥವಾ ಕರಿದಾಗ ಸಾಮಾನ್ಯ ಆಲೂಗಡ್ಡೆಗಿಂತ ಸ್ವಲ್ಪ ವಿಭಿನ್ನವಾಗಿ ಕಾಣಿಸಬಹುದು ಮತ್ತು ತಿನ್ನುವಾಗಲೂ ವ್ಯತ್ಯಾಸ ಗೊತ್ತಾಗಬಹುದು.

ಇದರಿಂದ ಆಲೂಗಡ್ಡೆ ತಕ್ಷಣವೇ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ ಎಂದರ್ಥವಲ್ಲ. ಆದರೆ ಅದರ ರುಚಿ ಮತ್ತು ಅಡುಗೆಯ ಗುಣಮಟ್ಟದಲ್ಲಿ ಬದಲಾವಣೆ ಉಂಟಾಗಬಹುದು. ವಿಶೇಷವಾಗಿ ಕರಿದ ಆಲೂಗಡ್ಡೆ ಅಥವಾ ಕೆಲವು ನಿರ್ದಿಷ್ಟ ಅಡುಗೆಗಳಲ್ಲಿ ಈ ಬದಲಾವಣೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಆಲೂಗಡ್ಡೆ ಸಂಗ್ರಹಿಸುವ ಸರಿಯಾದ ವಿಧಾನ ಯಾವುದು?

ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿಡುವ ಬದಲು ತಂಪಾದ, ಕತ್ತಲೆಯ ಮತ್ತು ಗಾಳಿ ಸರಿಯಾಗಿ ಹರಿದಾಡುವ ಸ್ಥಳದಲ್ಲಿ ಇಡುವುದು ಸೂಕ್ತ. ಕಾಗದದ ಚೀಲ, ಜಾಲರಿಯ ಚೀಲ, ಬುಟ್ಟಿ ಅಥವಾ ಗಾಳಿಯಾಡುವ ರಟ್ಟಿನ ಪೆಟ್ಟಿಗೆಯಲ್ಲಿ ಸಂಗ್ರಹಿಸಬಹುದು. ಪ್ಲಾಸ್ಟಿಕ್‌ ಚೀಲದಲ್ಲಿ ಆಲೂಗಡ್ಡೆಯನ್ನು ಮುಚ್ಚಿಡುವುದನ್ನು ತಪ್ಪಿಸುವುದು ಉತ್ತಮ. ಗಾಳಿ ಸರಿಯಾಗಿ ಹರಿಯದಿದ್ದರೆ ಅವು ಬೇಗ ಹಾಳಾಗುವ ಸಾಧ್ಯತೆಯಿದೆ.

ನೂರು ವರ್ಷ ಆರೋಗ್ಯವಾಗಿರಲು 5 ಪ್ರಾಚೀನ ಸೂತ್ರಗಳು; ನೀರು ಕುಡಿಯುವುದರಿಂದ ಉಪವಾಸದವರೆಗೆ

ಸಂಗ್ರಹಿಸುವ ಮೊದಲು ಆಲೂಗಡ್ಡೆಯನ್ನು ಒಮ್ಮೆ ಪರಿಶೀಲಿಸುವುದೂ ಮುಖ್ಯ. ಕೀಟಗಳಿಂದ ಹಾನಿಯಾಗಿರುವ, ಕೊಳೆತಿರುವ ಅಥವಾ ಗಾಯಗೊಂಡಿರುವ ಆಲೂಗಡ್ಡೆಯನ್ನು ಉಳಿದವುಗಳೊಂದಿಗೆ ದೀರ್ಘಕಾಲ ಇಡಬಾರದು. ಹಾನಿಗೊಳಗಾದ ಭಾಗವನ್ನು ತೆಗೆದುಹಾಕಿ, ಉತ್ತಮ ಭಾಗವನ್ನು ಸಾಧ್ಯವಾದಷ್ಟು ಬೇಗ ಬಳಸುವುದು ಸೂಕ್ತ.

ಬೆಳಕಿನಿಂದಲೂ ದೂರವಿಡಿ

ಆಲೂಗಡ್ಡೆಯನ್ನು ಕೇವಲ ತಂಪಾದ ಸ್ಥಳದಲ್ಲಿ ಇಡುವುದಷ್ಟೇ ಸಾಕಾಗುವುದಿಲ್ಲ. ನೇರ ಬೆಳಕು ಬೀಳದಂತೆ ನೋಡಿಕೊಳ್ಳಬೇಕು. ಹೆಚ್ಚು ಬೆಳಕಿಗೆ ಒಡ್ಡಿಕೊಂಡಾಗ ಆಲೂಗಡ್ಡೆಯ ಹೊರಭಾಗ ಹಸಿರು ಬಣ್ಣಕ್ಕೆ ತಿರುಗಬಹುದು. ಇದು ಕ್ಲೋರೊಫಿಲ್‌ ಉತ್ಪಾದನೆಯಿಂದ ಉಂಟಾಗುತ್ತದೆ. ಇದೇ ಪ್ರಕ್ರಿಯೆಯೊಂದಿಗೆ ಗ್ಲೈಕೋಆಲ್ಕಲಾಯ್ಡ್ಸ್‌ ಎಂಬ ಸಂಯುಕ್ತಗಳ ಪ್ರಮಾಣವೂ ಹೆಚ್ಚಾಗಬಹುದು. ಇವು ಹೆಚ್ಚಿನ ಪ್ರಮಾಣದಲ್ಲಿ ಸೇವನೆಯಾದರೆ ವಿಷಕಾರಿ ಪರಿಣಾಮ ಉಂಟುಮಾಡುವ ಸಾಧ್ಯತೆಯಿದೆ. ಆದ್ದರಿಂದ ಹಸಿರು ಬಣ್ಣಕ್ಕೆ ತಿರುಗಿರುವ ಆಲೂಗಡ್ಡೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಬಳಸುವುದು ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಫುಟ್​ಪಾತ್​ನಲ್ಲಿ ಕಸ ಸುರಿದ ಕಟ್ಟಡ ಮಾಲೀಕನಿಗೆ 50,000 ರೂ. ದಂಡ!
ಫುಟ್​ಪಾತ್​ನಲ್ಲಿ ಕಸ ಸುರಿದ ಕಟ್ಟಡ ಮಾಲೀಕನಿಗೆ 50,000 ರೂ. ದಂಡ!
ಧಾರಾಕಾರ ಮಳೆಯಿಂದ ಬಾಗಲಕುಂಟೆಯಲ್ಲಿ ಮನೆಗಳಿಗೆ ನುಗ್ಗಿದ ನೀರು!
ಧಾರಾಕಾರ ಮಳೆಯಿಂದ ಬಾಗಲಕುಂಟೆಯಲ್ಲಿ ಮನೆಗಳಿಗೆ ನುಗ್ಗಿದ ನೀರು!
ನಾಮಿನೇಷನ್ ವಿಷಯದಲ್ಲಿ ಉರಿದುಬಿದ್ದ ಶಾಸ್ತ್ರಿ; ನಡೆಯಿತು ಮತ್ತೊಂದು ಜಗಳ
ನಾಮಿನೇಷನ್ ವಿಷಯದಲ್ಲಿ ಉರಿದುಬಿದ್ದ ಶಾಸ್ತ್ರಿ; ನಡೆಯಿತು ಮತ್ತೊಂದು ಜಗಳ
ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿತ್ತು 10 ಟನ್ ಕೆಮಿಕಲ್ ಮಿಶ್ರಿತ ಅಡಿಕೆ
ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿತ್ತು 10 ಟನ್ ಕೆಮಿಕಲ್ ಮಿಶ್ರಿತ ಅಡಿಕೆ
ರವಿ ಸಿಂಹ ರಾಶಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ರವಿ ಸಿಂಹ ರಾಶಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಮಲ್ಲತ್ತಹಳ್ಳಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ
ಮಲ್ಲತ್ತಹಳ್ಳಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ
ಚೆನ್ನೈನಲ್ಲಿ 12,000 ಶಂಖಗಳಿಂದ ಸಿದ್ಧವಾಯ್ತು ಗಣೇಶನ ಮೂರ್ತಿ!
ಚೆನ್ನೈನಲ್ಲಿ 12,000 ಶಂಖಗಳಿಂದ ಸಿದ್ಧವಾಯ್ತು ಗಣೇಶನ ಮೂರ್ತಿ!
ಪಂಚಾಯ್ತಿ ಎಲೆಕ್ಷನ್ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಡಿಸಿಎಂ ಪರಮೇಶ್ವರ್
ಪಂಚಾಯ್ತಿ ಎಲೆಕ್ಷನ್ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಡಿಸಿಎಂ ಪರಮೇಶ್ವರ್
ಜಾರಕಿಹೊಳಿ ಮೇಲೆ ಇಡಿ ದಾಳಿ:‘ಕೈ’ ಮನೆಯೊಳಗೆ ಷಡ್ಯಂತ್ರದ ಮಾತಿನ ಸದ್ದು
ಜಾರಕಿಹೊಳಿ ಮೇಲೆ ಇಡಿ ದಾಳಿ:‘ಕೈ’ ಮನೆಯೊಳಗೆ ಷಡ್ಯಂತ್ರದ ಮಾತಿನ ಸದ್ದು
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ