AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಫಲ್ಯದಿಂದ ನಿರಾಶರಾಬೇಕಿಲ್ಲ, ಈ ಹಿನ್ನಡೆಯನ್ನು ಹಿಮ್ಮೆಟ್ಟಿಸಿ ಪುಟಿದೇಳುವ ಕ್ಷಮತೆ ಇಸ್ರೋ ಸಮುದಾಯಕ್ಕಿದೆ: ಮಾಧವನ್ ನಾಯರ್

ನಾಯರ್ ಅವರು 2003ರಲ್ಲಿ ಇಸ್ರೋ ಚೇರ್ಮನ್ ಆದ ನಂತರದ ಆರು ವರ್ಷಗಳ ಅವಧಿಯಲ್ಲಿ 25 ಮಿಶನ್​ಗಳನ್ನೂ ಯಶಸ್ವೀಯಾಗಿ ಸಾಧಿಸಲಾಗಿತ್ತು. ಈ ಬಗೆಯ ವೈಫಲ್ಯಗಳು ಅಸಹಜವೇನೂ ಅಲ್ಲ, ಇಸ್ರೋ ವಿಜ್ಞಾನಿಗಳು ಯಾವ ಕಾರಣಕ್ಕೂ ಎದೆಗುಂದಬಾರದು ಎಂದು ಅವರು ಬೆಂಗಳೂರಿನಲ್ಲಿ ಗುರುವಾರ ಹೇಳಿದರು.

ವೈಫಲ್ಯದಿಂದ ನಿರಾಶರಾಬೇಕಿಲ್ಲ, ಈ ಹಿನ್ನಡೆಯನ್ನು ಹಿಮ್ಮೆಟ್ಟಿಸಿ ಪುಟಿದೇಳುವ ಕ್ಷಮತೆ ಇಸ್ರೋ ಸಮುದಾಯಕ್ಕಿದೆ: ಮಾಧವನ್ ನಾಯರ್
ಜಿ ಮಾಧವನ್ ನಾಯರ್
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 13, 2021 | 12:12 AM

Share

ಬೆಂಗಳೂರು: ಭಾರತದ ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿ ಜಿ ಮಾಧವನ್ ನಾಯರ್ ಅವರು ಜಿಎಸ್ಎಲ್ವಿ-ಎಫ್10 ಲಾಂಚ್ ವಿಫಲಗೊಂಡ ಬಗ್ಗೆ ಆಘಾತ ವ್ಯಕ್ತಪಡಿಸಿರುವರಾದರೂ ಈ ಹಿನ್ನಡೆಯನ್ನು ಹಿಮ್ಮೆಟ್ಟಿ ಪುಟಿದೇಳುವ ಸಾಮರ್ಥ್ಯ ಮತ್ತು ಕ್ಷಮತೆ ಇಸ್ರೋ ಮತ್ತು ಅದರ ವಿಜ್ಞಾನಿಗಳಿಗಿದೆ ಎಂದರು. ಮೊದಲೇ ನಿಗದಿಯಾದಂತೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಜಿಎಸ್ಎಲ್ವಿ ರಾಕೆಟ್ ಅನ್ನು ಭೂ ಪರಿವಿಕ್ಷಣಾ ಉಪಗ್ರಹದೊಂದಿಗೆ ಗುರುವಾರ ಬೆಳಗ್ಗೆ 5:43ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಹಾರಿಬಿಡಲಾಗಿತ್ತು.

‘ಉಪಗ್ರಹವನ್ನು ಹಾರಿಬಿಟ್ಟಾಗ ಅದರ ಮೊದಲ ಮತ್ತು ಎರಡನೇ ಹಂತದ ಚಟುವಟಿಕೆ ಸಾಮಾನ್ಯವಾಗಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಕ್ರಯೋಜಿನಿಕ್ ಅಪ್ಪರ್ ಸ್ಟೇಜ್ನಲ್ಲಿ ಹೊತ್ತಿಕೊಳ್ಳುವಿಕೆ (ಇಗ್ನಿಷನ್) ಸಾಧ್ಯವಾಗಲಿಲ್ಲ. ಹಾಗಾಗಿ ಉಪಗ್ರಹ ಉಡಾವಣೆಯ ಉದ್ದೇಶಿತ ಗುರಿ ಈಡೇರಲಿಲ್ಲ’ ಅಂತ ಇಸ್ರೋ ಹೇಳಿಕೆಯೊಂದರಲ್ಲಿ ತಿಳಿಸಿತ್ತು.

ನಾಯರ್ ಅವರು 2003ರಲ್ಲಿ ಇಸ್ರೋ ಚೇರ್ಮನ್ ಆದ ನಂತರದ ಆರು ವರ್ಷಗಳ ಅವಧಿಯಲ್ಲಿ 25 ಮಿಶನ್​ಗಳನ್ನೂ ಯಶಸ್ವೀಯಾಗಿ ಸಾಧಿಸಲಾಗಿತ್ತು. ಈ ಬಗೆಯ ವೈಫಲ್ಯಗಳು ಅಸಹಜವೇನೂ ಅಲ್ಲ, ಇಸ್ರೋ ವಿಜ್ಞಾನಿಗಳು ಯಾವ ಕಾರಣಕ್ಕೂ ಎದೆಗುಂದಬಾರದು ಎಂದು ಅವರು ಬೆಂಗಳೂರಿನಲ್ಲಿ ಗುರುವಾರ ಹೇಳಿದರು.

‘ಇದೊಂದು ಸಂಕೀರ್ಣ ಮಿಶನ್ ಆಗಿತ್ತು. ಸಾಮಾನ್ಯವಾಗಿ ಕ್ರಯೋಜೆನಿಕ್ ಹಂತವು ಬೇರೆಲ್ಲ ರಾಕೆಟ್ ಪ್ರೊಪಲ್ಶನ್ಗಳಿಗೆ ಹೋಲಿಸಿದರೆ ಅತ್ಯಂತ ಕಷ್ಟಕರವಾಗಿದೆ,’ ಎಂದು ಪ್ರೆಸ್ ಟ್ರಸ್ಟ್ ಆಫ್ಗೆ ನೀಡಿದ ಸಂದರ್ಶನದಲ್ಲಿ ನಾಯರ್ ಹೇಳಿದ್ದಾರೆ.

ಕ್ರಯೋಜೆನಿಕ್ ತಂತ್ರಜ್ಞಾನದಲ್ಲಿ ಇಸ್ರೋ ಪರಿಣಿತಿ ಸಾಧಿಸಿದೆ, ಬೇರೆ ಯೂರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದರೆ ಇಸ್ರೋದ ಸಾಧನೆ ಕೆಟ್ಟದ್ದಾಗೇನೂ ಇಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಹಳ ಮುಂದುವರಿದ ರಾಷ್ಟ್ರವಾಗಿರುವ ರಷ್ಯಾದಲ್ಲಿ ಕ್ರಯೋಜೆನಿಕ್ ಸ್ಟೇಜ್ ವೈಫಲ್ಯ ಶೇಕಡಾ 20ರ ವ್ಯಾಪ್ತಿಯಲ್ಲಿದೆ ಎಂದು ನಾಯರ್ ಹೇಳಿದರು.

‘ಕ್ರಯೋಜೆನಕ್ ಹಂತದ ಎಂಟನೇ ಲಾಂಚ್ ಇದಾಗಿದೆ. ಮೊದಲನೆಯದರಲ್ಲಿ ಸಮಸ್ಯೆ ತಲೆದೋರಿ ಅಸಫಲಗೊಂಡಿತ್ತು. ನಂತರ ನಡೆದ ಲಾಂಚ್ಗಳು ಪಠ್ಯಪುಸ್ತಕದಲ್ಲಿ ವಿವರಿಸಿರುವ ರೀತಿ ಪ್ರದರ್ಶನ ನೀಡಿದವು. ಇಂಥ ಯಾವುದೇ ಸಂಕೀರ್ಣ ವ್ಯವಸ್ಥೆಯಲ್ಲಿ ವೈಫಲ್ಯದ ಸೀಮಿತ ಸಾಧ್ಯತೆಯಿರುತ್ತದೆ. ಆದರೆ ನಾವು ನಿರಾಶರಾಗಬೇಕಿಲ್ಲ. ಆದರೆ ಈ ಸಂದರ್ಭದಲ್ಲಿ ನಾನು ಹೇಳಬಯಸುವ ಮತ್ತೊಂದು ವಿಷಯವೆಂದರೆ, ನಾವು ವೈಫಲ್ಯದ ತಳಕ್ಕೆ ಹೋಗಿ ಅದನ್ನು ಸರಿಪಡಿಸಬೇಕು, ಇಂಥ ವೈಫಲ್ಯ ಮರುಕಳಿಸದಂತೆ ಜಾಗ್ರತೆ ವಹಿಸಬೇಕು,’ ಎಂದು ನಾಯರ್ ಹೇಳಿದರು.

‘ಇದು ನಮ್ಮೆಲ್ಲರಿಗೆ ಆಘಾತಕಾರಿ ಸಂಗತಿಯಾಗಿದೆ. ಆದರೆ ಈ ಆಘಾತದಿಂದ ನಾವು ಬೇಗ ಚೇತರಿಸಿಕೊಳ್ಳಲಿದ್ದೇವೆ. ಇಂಥ ಕ್ಲಿಷ್ಟ ಪರಿಸ್ಥಿತಿ ಮತ್ತು ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಇಸ್ರೋ ಸಮುದಾಯಕ್ಕಿದೆ,’ ಎಂದು ನಾಯರ್ ಹೇಳಿದರು.

EOS-03 ಅತ್ಯಾಧುನಿಕ ಕುಶಾಗ್ರಮತಿ ಭೂ ಪರಿವೀಕ್ಷಣೆ ಉಪಗ್ರಹವಾಗಿದ್ದು ಇದನ್ನು GSLV-F10 ನಿಂದ ಜಿಯೋಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್‌ನಲ್ಲಿ ಇರಿಸಬೇಕಿತ್ತು. ಅದಾದ ನಂತರ ಉಪಗ್ರಹವು ತನ್ನ ಆನ್‌ಬೋರ್ಡ್ ಪ್ರೊಪಲ್ಶನ್ ವ್ಯವಸ್ಥೆಯನ್ನು ಬಳಸಿಕೊಂಡು ಅಂತಿಮ ಭೂಸ್ಥಿರ ಕಕ್ಷೆಯನ್ನು ತಲುಪಬೇಕಿತ್ತು.

ಇಒಎಸ್-03 ಉಪಗ್ರಹವು ನೈಸರ್ಗಿಕ ವಿಪತ್ತುಗಳಾದ ಚಂಡಮಾರುತ, ಮೇಘಸ್ಫೋಟ, ಬಿರುಗಾಳಿ ಮೊದಲಾದವುಗಳನ್ನು ತ್ವರಿತ ಗತಿಯಲ್ಲಿ ನಿಗ್ರಾಣಿ ಮಾಡುವುದಕ್ಕೆಂದು ಜಿಯೋಸಿಂಕ್ರೊನಾಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್ವಿ) ಮೂಲಕ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೆಂದ್ರದಿಂದ ಅಂತರಿಕ್ಷಕ್ಕೆ ಹಾರಿಬಿಡಲಾಗಿತ್ತು

ಇದನ್ನೂ ಓದಿ:  ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿರುವವರನ್ನು ಪ್ರೇರೇಪಿಸಲು ಕಸ್ಟಮೈಸ್ಡ್ ಮರ್ಕಂಡೈಸ್ ಲಾಂಚ್ ಮಾಡಿದ ಇಸ್ರೋ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ