AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 500 ಹೆಣ್ಣುಮಕ್ಕಳಿಗೆ ವಂಚನೆ: ಪ್ರೀತಿ ಹೆಸರಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದ ವಂಚಕ ಅರೆಸ್ಟ್

ಡೇಟಿಂಗ್ ಆಪ್‌ಗಳಲ್ಲಿ ನಕಲಿ ಪ್ರೊಫೈಲ್‌ಗಳ ಮೂಲಕ ಆನಂದ್ ಕುಮಾರ್ 500ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿ 2 ಕೋಟಿ ರೂಪಾಯಿ ಸುಲಿಗೆ ಮಾಡಿದ್ದಾನೆ. ಪ್ರೀತಿಯ ನಾಟಕವಾಡಿ, ವೈದ್ಯಕೀಯ ತುರ್ತು ಪರಿಸ್ಥಿತಿಯ ನೆಪ ಹೇಳಿ ಹಣ ದೋಚಿದ್ದಾನೆ. ಅಲ್ಲದೆ, ಖಾಸಗಿ ಫೋಟೋಗಳನ್ನು ಬಳಸಿ ಬ್ಲಾಕ್‌ಮೇಲ್ ಮಾಡಿದ್ದಾನೆ. ದೆಹಲಿ ಪೊಲೀಸರು ಈತನನ್ನು ಬಂಧಿಸಿದ್ದು, ಡೇಟಿಂಗ್ ಆಪ್ ಬಳಕೆದಾರರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ.

ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 500 ಹೆಣ್ಣುಮಕ್ಕಳಿಗೆ ವಂಚನೆ: ಪ್ರೀತಿ ಹೆಸರಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದ ವಂಚಕ ಅರೆಸ್ಟ್
ಡೇಟಿಂಗ್ Image Credit source: Google Gemini
ನಯನಾ ರಾಜೀವ್
|

Updated on: Apr 16, 2026 | 2:24 PM

Share

ಕೋಲ್ಕತ್ತಾ, ಏಪ್ರಿಲ್ 16: ಡೇಟಿಂಗ್ ಆ್ಯಪ್‌(Dating App)ಗಳಲ್ಲಿ ಸುಂದರ ಪ್ರೊಫೈಲ್, ಆಕರ್ಷಕ ಮಾತುಗಳು, ಪ್ರತಿಷ್ಠಿತ ಉದ್ಯೋಗದ ಹಣೆಪಟ್ಟಿ, ಆನಂದ್ ಕುಮಾರ್‌ಗೆ ಯಾರನ್ನಾದರೂ ಬಲೆಗೆ ಬೀಳಿಸಲು ಇವಿಷ್ಟೇ ಸಾಕಿತ್ತು. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ನಿವಾಸಿಯಾದ 35 ವರ್ಷದ ಆನಂದ್ ಕುಮಾರ್, ದೆಹಲಿ ಪೊಲೀಸರ ಸೈಬರ್ ಕ್ರೈಂ ತಂಡದ ಕೈಲಿ ಸಿಕ್ಕಿಬಿದ್ದಿದ್ದಾನೆ. ಈತ ಮಾಡಿರುವ ವಂಚನೆಯ ಆಳ ಕೇಳಿದರೆ ಶಾಕ್ ಆಗೋದು ಖಚಿತ.

ಆನಂದ್ ಕುಮಾರ್ ಡೇಟಿಂಗ್ ಆ್ಯಪ್‌ಗಳಲ್ಲಿ ಈತ ಒಮ್ಮೆ ಡಾಕ್ಟರ್, ಇನ್ನೊಮ್ಮೆ ಲಾಯರ್, ಮತ್ತೊಮ್ಮೆ ಸಿನಿಮಾ ಪ್ರೊಡ್ಯೂಸರ್, ವೈಭವ್ ಅರೋರಾ, ರೋಹಿತ್ ಬೆಹ್ಲ್, ತರುಣ್ ಶರ್ಮಾ ಎಂಬ ನಕಲಿ ಹೆಸರುಗಳ ಅಡಿಯಲ್ಲಿ ಇನ್‌ಸ್ಟಾಗ್ರಾಮ್ ಮತ್ತು ವೈವಾಹಿಕ ತಾಣಗಳಲ್ಲಿ ನೂರಾರು ನಕಲಿ ಪ್ರೊಫೈಲ್‌ಗಳನ್ನು ಈತ ನಿರ್ವಹಿಸುತ್ತಿದ್ದ.

ಈತನ ವಂಚನೆಯ ಜಾಲ ಎಷ್ಟು ಕುತೂಹಲಕಾರಿಯೆಂದರೆ, ಒಮ್ಮೆ ಒಬ್ಬ ಯುವತಿಯ ವಿಶ್ವಾಸ ಗಳಿಸಿದ ಮೇಲೆ ಮದುವೆಯಾಗುವ ಭರವಸೆ ನೀಡುತ್ತಿದ್ದ. ಸಂತ್ರಸ್ತೆಯೊಬ್ಬರಿಂದ ಸುಮಾರು 7 ಲಕ್ಷ ರೂ. ದೋಚಲು ಈತ ಒಂದು ನಾಟಕವನ್ನೇ ಆಡಿದ್ದ.

ವೈಭವ್ ಅರೋರಾ ಹೆಸರಿನಲ್ಲಿ ಪ್ರೀತಿ ಬೆಳೆಸಿದ. ಆನಂದ್ ಎಂಬ ಸ್ನೇಹಿತನನ್ನು (ತಾನೇ ಮತ್ತೊಂದು ಧ್ವನಿಯಲ್ಲಿ) ಪರಿಚಯಿಸಿ ವಿಶ್ವಾಸ ಮೂಡಿಸಿದ. ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಹಣ ಪಡೆದ. ಸಂತ್ರಸ್ತೆ ಹಣ ವಾಪಸ್ ಕೇಳಿದಾಗ, ‘ವೈಭವ್ ಮೃತಪಟ್ಟಿದ್ದಾನೆ’ ಎಂಬ ಸುಳ್ಳು ಮಾಹಿತಿಯನ್ನು ವಾಟ್ಸಾಪ್ ಮೂಲಕ ರವಾನಿಸಿ ಕಣ್ಮರೆಯಾಗಲು ಯತ್ನಿಸಿದ್ದ.

ಮತ್ತಷ್ಟು ಓದಿ: ಮದುವೆ, ಆನ್​​ಲೈನ್​​ ಟ್ರೇಡಿಂಗ್​​ ಹೆಸರಲ್ಲಿ 18 ಲಕ್ಷ ಪಂಗನಾಮ ಹಾಕಿದ ಮಹಿಳೆ: ಹಣ ಕೊಟ್ಟು ಕೆಟ್ಟ ಎಂಜಿನಿಯರ್​​ನಿಂದ ದೂರು ದಾಖಲು

ಬರೋಬ್ಬರಿ 500 ಬಲಿಪಶುಗಳು, 2 ಕೋಟಿ ರೂ. ಸುಲಿಗೆ ಪೊಲೀಸರ ತನಿಖೆಯ ಪ್ರಕಾರ, ಈತ ಭಾರತದಾದ್ಯಂತ ಸುಮಾರು 500ಕ್ಕೂ ಹೆಚ್ಚು ಮಹಿಳೆಯರನ್ನು ಹನಿಟ್ರಾಪ್ ಮಾಡಿದ್ದಾನೆ. ಒಟ್ಟು 2 ಕೋಟಿ ರೂ. ಹಣವನ್ನು ಹೀಗೆ ಸುಲಿಗೆ ಮಾಡಲಾಗಿದೆ. ಕೇವಲ ಹಣವಷ್ಟೇ ಅಲ್ಲ, ಮಹಿಳೆಯರ ಖಾಸಗಿ ಫೋಟೋಗಳನ್ನು ಸಂಗ್ರಹಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕ್ರೂರತನವೂ ಈತನಲ್ಲಿತ್ತು.

ಪೊಲೀಸರ ಕಾರ್ಯಾಚರಣೆ ಮತ್ತು ವಶಪಡಿಸಿಕೊಂಡ ವಸ್ತುಗಳು ಪಿಎಸ್ ಸೈಬರ್ ತಂಡವು ಐಪಿ ಲಾಗ್‌ಗಳು ಮತ್ತು ಡಿಜಿಟಲ್ ಹೆಜ್ಜೆಗುರುತುಗಳನ್ನು ಬೆನ್ನತ್ತಿ ಪಶ್ಚಿಮ ಬಂಗಾಳದಲ್ಲಿ ಈತನನ್ನು ಬಂಧಿಸಿದೆ.

ವಶಪಡಿಸಿಕೊಂಡ ವಸ್ತುಗಳು: 4 ಸ್ಮಾರ್ಟ್‌ಫೋನ್, 8 ಸಿಮ್ ಕಾರ್ಡ್‌ಗಳು, 4 ಚಿನ್ನದ ಬಳೆಗಳು ಮತ್ತು 5 ಚಿನ್ನದ ಸರಗಳು, ದೋಚಿದ ಹಣದ ಬಹುಪಾಲು ಮೊತ್ತವನ್ನು ಈತ ಆನ್‌ಲೈನ್ ಗೇಮಿಂಗ್ ಮತ್ತು ಐಷಾರಾಮಿ ಜೀವನಕ್ಕೆ ಖರ್ಚು ಮಾಡಿದ್ದಾನೆ.

ಎಚ್ಚರಿಕೆ ಗಂಟೆ ಆನಂದ್ ಕುಮಾರ್ ಈ ಹಿಂದೆ ದೆಹಲಿ ಮತ್ತು ಗಾಜಿಯಾಬಾದ್‌ನಲ್ಲೂ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಳೆ ಆರೋಪಿ. ಈ ಘಟನೆಯು ಡೇಟಿಂಗ್ ಮತ್ತು ವೈವಾಹಿಕ ಆ್ಯಪ್‌ಗಳನ್ನು ಬಳಸುವವರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಅಪರಿಚಿತರ ಮಾತನ್ನು ನಂಬಿ ವೈಯಕ್ತಿಕ ಫೋಟೋ ಹಂಚಿಕೊಳ್ಳುವುದು ಅಥವಾ ಹಣದ ವರ್ಗಾವಣೆ ಮಾಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಸಾಕ್ಷಿ.​

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆಶಿ ಚರ್ಚೆ
ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆಶಿ ಚರ್ಚೆ