Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಲ್ನುಪಿರಾವಿರ್ ಮಾತ್ರೆಗಳಿಂದ ಕೊವಿಡ್​ ಸೋಂಕಿತರಿಗೆ ಚಿಕಿತ್ಸೆ ನೀಡಲು 2000-3000 ರೂ.ವೆಚ್ಚವಾಗಬಹುದು

ಯುಎಸ್​ ಮೂಲದ ಬಯೋಟೆಕ್ನಾಲಜಿ ಕಂಪನಿ ರೆಡ್ಜ್​ಬ್ಯಾಕ್​ ಬಯೋಥೆರಪಿಟಿಕ್ಸ್​ ಕಂಪನಿಯು ಯುಎಸ್ ಫಾರ್ಮಾ ದೈತ್ಯ ಮೆರ್ಕ್​ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ  ಈ ಮೊಲ್ನುಪಿರಾವಿರ್ ಆ್ಯಂಟಿವೈರಲ್​ ಮಾತ್ರೆಯನ್ನು ಸದ್ಯ ಭಾರತದ 13 ಕಂಪನಿಗಳು ತಯಾರಿಸುತ್ತಿವೆ.

ಮೊಲ್ನುಪಿರಾವಿರ್ ಮಾತ್ರೆಗಳಿಂದ ಕೊವಿಡ್​ ಸೋಂಕಿತರಿಗೆ ಚಿಕಿತ್ಸೆ ನೀಡಲು 2000-3000 ರೂ.ವೆಚ್ಚವಾಗಬಹುದು
ಮೊಲ್ನುಪಿರಾವಿರ್
Follow us
TV9 Web
| Updated By: Lakshmi Hegde

Updated on:Dec 30, 2021 | 12:07 PM

ಕೊವಿಡ್​ 19 ಚಿಕಿತ್ಸೆ ಬಳಕೆಗೆ ಇತ್ತೀಚೆಗಷ್ಟೇ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (DCGI)ದ ಅನುಮೋದನೆ ಪಡೆದಿರುವ ಆ್ಯಂಟಿ ವೈರಲ್​ ಮಾತ್ರೆ ಮೊಲ್ನುಪಿರಾವಿರ್ (Molnupiravir)​ನಿಂದಲೇ ಒಬ್ಬ ಕೊವಿಡ್​ 19 ಸೋಂಕಿತನಿಗೆ ಚಿಕಿತ್ಸೆ ನೀಡಬೇಕು ಎಂದರೆ, ಒಟ್ಟಾರೆ 2000 ರೂ.ದಿಂದ 3000 ರೂ.ವರೆಗೆ ಖರ್ಚು ಬರುತ್ತದೆ ಎಂದು ಹೇಳಲಾಗಿದೆ. ಈ ಮಾತ್ರೆಯನ್ನು ಅಭಿವೃದ್ಧಿಪಡಿಸಿದ ಮೆರ್ಕ್​ ಕಂಪನಿ,  ವಿಶ್ವಬ್ಯಾಂಕ್​ ದೇಶಗಳ ಆದಾಯ ಮಾನದಂಡಗ ಆಧಾರದ ಮೇಲೆ, ಶ್ರೇಣೀಕೃತ ಬೆಲೆಯನ್ನು ಜಾರಿಗೆ ತರಲು ಯೋಜಿಸಿರುವುದಾಗಿ ಹೇಳಿತ್ತು. ಪ್ರಪಂಚದ ಪ್ರತಿ ಪ್ರದೇಶಕ್ಕೂ ಔಷಧವನ್ನು ತಲುಪಿಸುವುದು ನಮ್ಮ ಉದ್ದೇಶ. ಹೀಗಾಗಿ ಸಂಬಂಧಪಟ್ಟ ಜನರಿಕ್​ ಔಷಧ ತಯಾರಕರೊಟ್ಟಿಗೆ ಪರವಾನಗಿ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದೂ ತಿಳಿಸಿತ್ತು. 

ಯುಎಸ್​ ಮೂಲದ ಬಯೋಟೆಕ್ನಾಲಜಿ ಕಂಪನಿ ರೆಡ್ಜ್​ಬ್ಯಾಕ್​ ಬಯೋಥೆರಪಿಟಿಕ್ಸ್​ ಕಂಪನಿಯು ಯುಎಸ್ ಫಾರ್ಮಾ ದೈತ್ಯ ಮೆರ್ಕ್​ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ  ಈ ಮೊಲ್ನುಪಿರಾವಿರ್ ಆ್ಯಂಟಿವೈರಲ್​ ಮಾತ್ರೆಯನ್ನು ಸದ್ಯ ಭಾರತದ ಟೊರೆಂಟ್​, ಸಿಪ್ಲಾ, ಸನ್ ಫಾರ್ಮಾ, ಡಾ. ರೆಡ್ಡೀಸ್, ನ್ಯಾಟ್ಕೋ, ಮೈಲಾನ್, ಹೆಟೆರೊ, ಆಪ್ಟಿಮಸ್ ಸೇರಿ ಒಟ್ಟು 13 ಪ್ರಮುಖ ಔಷಧ ಕಂಪನಿಗಳು ತಯಾರಿಸುತ್ತಿವೆ. ಸದ್ಯ ಈ ಮಾತ್ರೆಯನ್ನು 18ವರ್ಷ ಮೇಲ್ಪಟ್ಟ, ಕೊವಿಡ್​ 19 ಸೋಂಕಿತರ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಬಹುದು ಎಂದು ಡಿಸಿಜಿಐ ಹೇಳಿದ್ದು, 18 ವರ್ಷದ ಕೆಳಗಿನವರಿಗೆ ಚಿಕಿತ್ಸೆ ನೀಡುವಂತಿಲ್ಲ. ಕೊವಿಡ್​ 19 ಸೋಂಕಿನಿಂದ ಬಳಲುತ್ತಿರುವವರು ಐದು ದಿನಗಳ ಕಾಲ ಎರಡು ಹೊತ್ತೂ, 800 ಮಿಲಿಗ್ರಾಂನಷ್ಟು ಈ ಔಷಧ ತೆಗೆದುಕೊಳ್ಳಬೇಕು ಎಂಬುದು ವೈದ್ಯರ ಶಿಫಾರಸ್ಸು. ಚಿಕಿತ್ಸೆ ಸಂದರ್ಭದಲ್ಲಿ ಒಬ್ಬ ರೋಗಿ 40 ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಮಾತ್ರೆ ತಯಾರಕ ಕಂಪನಿಗಳು 200 ಮಿಲಿಗ್ರಾಂ ಮಾತ್ರೆಗಳನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿವೆ.  ಆದರೆ ಈ ಮಾತ್ರೆಯನ್ನು  5 ದಿನಗಳಿಗಿಂತ ಹೆಚ್ಚಿನ ದಿನ ತೆಗೆದುಕೊಳ್ಳುವಂತಿಲ್ಲ. ಹಾಗೇ, ಕೊರೊನಾ ಗಂಭೀರವಾಗಿದ್ದು, ಆಸ್ಪತ್ರೆ ಸೇರಲೇಬೇಕಾದವರು ಈ ಮಾತ್ರೆ ತೆಗೆದುಕೊಳ್ಳುತ್ತ ಸಮಯ ಹಾಳು ಮಾಡುವಂತಿಲ್ಲ. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದೂ ವೈದ್ಯರು ತಿಳಿಸಿದ್ದಾರೆ.

ಅಮೆರಿಕ ಔಷಧ ಕಂಪನಿಯ ಈ ಮಾತ್ರೆಯನ್ನು ಭಾರತದಲ್ಲೂ ಬಳಕೆ ಮಾಡಲು ಇತ್ತೀಚೆಗೆಷ್ಟೇ ಅನುಮೋದನೆ ದೊರೆತಿದೆ. ಇದರೊಂದಿಗೆ ಕಾರ್ಬೆವ್ಯಾಕ್ಸ್ ಮತ್ತು ಕೊವಾವ್ಯಾಕ್ಸ್ ಕೊವಿಡ್​ 19 ಲಸಿಕೆಗಳ ತುರ್ತು ಬಳಕೆಗೂ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದೆ. ಈ ಮಾತ್ರೆಗಳು ಮನುಷ್ಯನ ದೇಹ ಹೊಕ್ಕಿರುವ ಕೊವಿಡ್​ 19 ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಿ, ರೋಗದ ಗಂಭೀರತೆ ಹೆಚ್ಚುವುದನ್ನು ತಪ್ಪಿಸುತ್ತವೆ. ಈ ಮೂಲಕ ಆಸ್ಪತ್ರೆಗ ಸೇರುವ ಪ್ರಮಾಣವನ್ನೂ ಕಡಿಮೆ ಮಾಡುತ್ತವೆ ಎಂದು ಹೇಳಲಾಗಿದೆ.

ಇದನ್ನೂ ಓದಿ:  ಏರ್​​ಪೋರ್ಟ್​​ನಲ್ಲಿ ಚೆಕಿಂಗ್ ವೇಳೆ 40 ಲಕ್ಷದ ವಾಚ್ ತೆಗೆಯಲು ಪ್ರಯಾಣಿಕನ ಕಿರಿಕ್: ಮುಂದೇನಾಯ್ತು?

Published On - 12:06 pm, Thu, 30 December 21

ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್