AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆಲಿವರಿಯಾದ 14 ದಿನಗಳಲ್ಲೇ ಡ್ಯೂಟಿಗೆ ಹಾಜರ್​: ಕೂಸೊಂದಿಗೆ ಕಚೇರಿಗೆ ಬಂದ IAS ಅಧಿಕಾರಿ!

ಲಕ್ನೋ: ಕಚೇರಿ ಹಾಗೂ ಕೆಲಸದ ಸ್ಥಳಗಳಲ್ಲಿ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಮಹಿಳೆಯರಿಗೆ ನೀಡಲಾದ ಮೊದಲನೇ ಸೌಲಭ್ಯವೆಂದರೆ ಅದು ಹೆರಿಗೆ ರಜೆ. ಅಂತೆಯೇ, ಹೆರಿಗೆ ಹಾಗೂ ನವಜಾತ ಶಿಶುವಿನ ಲಾಲನೆಪಾಲನೆಗಾಗಿ ಮಹಿಳೆಯರಿಗೆ 6 ತಿಂಗಳ ಹೆರಿಗೆ ರಜೆಯನ್ನು ನೀಡಲಾಗುತ್ತದೆ. ಅದರೆ, ಇಲ್ಲೊಬ್ಬರು IAS ಅಧಿಕಾರಿ ತಮಗೆ ನೀಡಲಾಗಿದ್ದ ಹೆರಿಗೆ ರಜೆಯ ಪ್ರಯೋಜನ ಪಡೆಯದೆ ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳ ಬಳಿಕ ಕರ್ತವ್ಯಕ್ಕೆ ಹಾಜರಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಹೌದು, ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ಸದ್ಯ ಕೊವಿಡ್​ […]

ಡೆಲಿವರಿಯಾದ 14 ದಿನಗಳಲ್ಲೇ ಡ್ಯೂಟಿಗೆ ಹಾಜರ್​: ಕೂಸೊಂದಿಗೆ ಕಚೇರಿಗೆ ಬಂದ IAS ಅಧಿಕಾರಿ!
KUSHAL V
|

Updated on:Oct 13, 2020 | 6:48 PM

Share

ಲಕ್ನೋ: ಕಚೇರಿ ಹಾಗೂ ಕೆಲಸದ ಸ್ಥಳಗಳಲ್ಲಿ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಮಹಿಳೆಯರಿಗೆ ನೀಡಲಾದ ಮೊದಲನೇ ಸೌಲಭ್ಯವೆಂದರೆ ಅದು ಹೆರಿಗೆ ರಜೆ. ಅಂತೆಯೇ, ಹೆರಿಗೆ ಹಾಗೂ ನವಜಾತ ಶಿಶುವಿನ ಲಾಲನೆಪಾಲನೆಗಾಗಿ ಮಹಿಳೆಯರಿಗೆ 6 ತಿಂಗಳ ಹೆರಿಗೆ ರಜೆಯನ್ನು ನೀಡಲಾಗುತ್ತದೆ. ಅದರೆ, ಇಲ್ಲೊಬ್ಬರು IAS ಅಧಿಕಾರಿ ತಮಗೆ ನೀಡಲಾಗಿದ್ದ ಹೆರಿಗೆ ರಜೆಯ ಪ್ರಯೋಜನ ಪಡೆಯದೆ ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳ ಬಳಿಕ ಕರ್ತವ್ಯಕ್ಕೆ ಹಾಜರಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಹೌದು, ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ಸದ್ಯ ಕೊವಿಡ್​ ನೋಡಲ್​ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ IAS ಅಧಿಕಾರಿ ಸೌಮ್ಯಾ ಪಾಂಡೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ. ಇದಲ್ಲದೆ, ತಮ್ಮ ನವಜಾತ ಶಿಶುವನ್ನು ತಮ್ಮೊಟ್ಟಿಗೆ ಕಚೇರಿಗೂ ಕರೆತಂದಿದ್ಧಾರೆ.

ಈ ಕುರಿತು ಮಾತನಾಡಿದ ಸೌಮ್ಯಾ ಪಾಂಡೆ ನಾನೊಬ್ಬ IAS ಅಧಿಕಾರಿ. ಹಾಗಾಗಿ, ನನ್ನ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಪ್ರತಿ ತಾಯಿಗೂ ತನ್ನ ಮಗುವಿನ ಲಾಲನೆಪಾಲನೆ ಮಾಡಲು ಆ ದೇವರು ಶಕ್ತಿ ನೀಡಿರುತ್ತಾನೆ. ಗ್ರಾಮೀಣ ಭಾರತದಲ್ಲಂತೂ ಮಹಿಳೆಯರು ಗರ್ಭವತಿ ಆಗಿರುವಾಗಲೂ ಮನೆಗೆಲಸವನ್ನು ಮಾಡಿಕೊಂಡು ತದನಂತರ ಹೆರಿಗೆ ಬಳಿಕವೂ ಹಸುಗೂಸು ಮತ್ತು ಕುಟುಂಬವನ್ನು ಸಂಬಾಳಿಸಿಕೊಂಡು ಹೋಗುತ್ತಾರೆ. ಹಾಗೆಯೇ, ನನಗೂ ನನ್ನ ಕರ್ತವ್ಯ ನಿರ್ವಹಿಸಲು ಆ ದೇವರು ಶಕ್ತಿ ಕೊಟ್ಟಿದ್ದಾನೆ ಎಂದು ಹೇಳಿದ್ದಾರೆ.

ಜೊತೆಗೆ, ನನ್ನ ಬೆನ್ನಿಗೆ ನಿಂತ ಜಿಲ್ಲಾಡಳಿತಕ್ಕೆ ಹಾಗೂ ನನ್ನ ಸಿಬ್ಬಂದಿಗೆ ನಾನು ಕೃತಜ್ಞಳಾಗಿರುವೆ ಎಂದು ಹೇಳಿದ್ದಾರೆ. ಸೌಮ್ಯಾ ತಮ್ಮ ಆಪರೇಷನ್​ ಸಂದರ್ಭದಲ್ಲಿ 22 ದಿನಗಳ ಕಾಲ ಹಾಗೂ ಹೆರಿಗೆ ಬಳಿಕ ಎರಡು ವಾರಗಳ ರಜೆ ಪಡೆದಿದ್ದರು.

Published On - 6:37 pm, Tue, 13 October 20

3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ