AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬಿಆರ್‌ಎಸ್ ಹೆಚ್ಚು ಕಾಣಿಸಿಕೊಂಡಿಲ್ಲ, ಕೆಸಿಆರ್ ಮೌನದ ಹಿಂದಿನ ರಹಸ್ಯವೇನು?

ರಾಜಕಾರಣ ಚದುರಂಗದಂತಿದೆ. ಯಾವಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದು ಇಡೀ ರಾಜಕೀಯ ಅಸ್ತಿತ್ವವನ್ನೇ ಪ್ರಶ್ನಿಸುತ್ತದೆ. ರಾಜಕೀಯದಲ್ಲಿ ಉಚ್ಛ್ರಾಯಕ್ಕೆ ತಲುಪಿದ ಮಹಾನ್ ನಾಯಕರು ಸೋತ ನಂತರ ಪಾಠ ಕಲಿತಿದ್ದಾರೆ. ಈಗ ಇದೆಲ್ಲ ಹೇಳುತ್ತಿರುವುದು ಬಿಆರ್ ಎಸ್ ಪಕ್ಷದ ಬಗ್ಗೆ.

ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬಿಆರ್‌ಎಸ್ ಹೆಚ್ಚು ಕಾಣಿಸಿಕೊಂಡಿಲ್ಲ, ಕೆಸಿಆರ್ ಮೌನದ ಹಿಂದಿನ ರಹಸ್ಯವೇನು?
ಕೆಸಿಆರ್ ಮೌನದ ಹಿಂದಿನ ರಹಸ್ಯವೇನು?
Follow us
ಸಾಧು ಶ್ರೀನಾಥ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 19, 2024 | 3:13 PM

ರಾಜಕೀಯ ಚಾಣಾಕ್ಷತೆಯಲ್ಲಿ ಕೆ ಚಂದ್ರಶೇಖರರಾವ್​ ಅವರನ್ನು ಮೀರಿಸುವವರು ಯಾರು.. ಸಂಸತ್ ಚುನಾವಣೆಗೂ ಮುನ್ನವೇ ಪ್ರಮುಖ ನಾಯಕರು ಪಕ್ಷ ತೊರೆಯುತ್ತಿದ್ದಾರೆ.. ಮದ್ಯ ಪ್ರಕರಣದಲ್ಲಿ ಕವಿತಾ ಬಂಧನವಾದರೂ ಬಿಆರ್ ಎಸ್ ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಇಂಥದ್ದಕ್ಕೆಲ್ಲ ಹೆದರುವುದಿಲ್ಲ ಎಂಬಂತಿದ್ದಾರೆ. ತಮ್ಮ ರಾಜಕೀಯ ಚಾಣಾಕ್ಷತೆಯಿಂದ ಆರ್.ಎಸ್.ಪ್ರವೀಣ್ ಕುಮಾರ್ ಅವರಂತಹವರನ್ನೂ ಬಿಆರ್ ಎಸ್ ಸೇರುವಂತೆ ಪ್ರೇರೇಪಿಸಿದ್ದಾರೆ. ಅವರ ಜತೆಗೆ ಬಹುಜನ ನಾಯಕರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಕಷ್ಟಕಾಲದಲ್ಲಿ ತನಗೆ ಇಂತಹವರೇ ಬೇಕಾಗಿರುವುದು ಎಂದು ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಸಿಆರ್ ಪರೋಕ್ಷವಾಗಿ ಹೇಳಿದ್ದಾರೆ. ನಾಯಕರು ಹೋದರೂ ಕೇಡರ್ ಉಳಿಯುವಂತೆ ನೋಡಿಕೊಳ್ಳುತ್ತಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಕೆಸಿಆರ್ ನಾನಾ ಜಿಲ್ಲೆಗಳಿಗೆ ಭೇಟಿ ನೀಡಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸರಣಿ ಸಭೆ ನಡೆಸಬೇಕು ಎಂಬುದು ಪಕ್ಷದ ಮುಖಂಡರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಕೆಸಿಆರ್ ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ರಾಜಕಾರಣ ಚದುರಂಗದಂತಿದೆ. ಯಾವಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಉಚ್ಛ್ರಾಯ ಅಧಿಕಾರಕ್ಕೆ ಕರೆದೊಯ್ದರೆ ಮರು ಕ್ಷಣವೇ ಪಾತಾಳ ತೋರಿಸಿರುತ್ತದೆ. ಇದು ಇಡೀ ರಾಜಕೀಯ ಅಸ್ತಿತ್ವವನ್ನೇ ಪ್ರಶ್ನಿಸುತ್ತದೆ. ರಾಜಕೀಯದಲ್ಲಿ ಉಚ್ಛ್ರಾಯಕ್ಕೆ ತಲುಪಿದ ಮಹಾನ್ ನಾಯಕರು ಸೋತ ನಂತರ ಪಾಠ ಕಲಿತಿದ್ದಾರೆ. ಈಗ ಇದೆಲ್ಲ ಹೇಳುತ್ತಿರುವುದು ಬಿಆರ್ ಎಸ್ ಪಕ್ಷದ ಬಗ್ಗೆ.

ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದು ದೆಹಲಿಯನ್ನೂ ನಡುಗಿಸಿರುವ, ತೆಲಂಗಾಣ ಚಳವಳಿಯ ಪಕ್ಷವಾಗಿ ಬಿಆರ್‌ಎಸ್‌ಗೆ ಬಲವಾದ ಗುರುತಿದೆ. ಕೇಂದ್ರದ ಮೋದಿ ಸರಕಾರಕ್ಕೆ ಕಂಟಕ ಎನ್ನುವಷ್ಟರ ಮಟ್ಟಿಗೆ ಬಿಆರ್ ಎಸ್ ತನ್ನ ಪ್ರಭಾವ ಬೀರಿತ್ತು. ಆದರೆ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ ಪಕ್ಷ 39 ಸ್ಥಾನಗಳನ್ನು ಗೆದ್ದು ಪ್ರತಿಪಕ್ಷಕ್ಕೆ ಸೀಮಿತವಾಗಿಬಿಟ್ಟಿದೆ. ಆದರೆ, ಈ ಅನಿರೀಕ್ಷಿತ ಬೆಳವಣಿಗೆ ಕೆಸಿಆರ್ ಮತ್ತು ಬಿಆರ್‌ಎಸ್ ಪಕ್ಷಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ವಿರೋಧ ಪಕ್ಷವಾಗಿ ಪ್ರಬಲ ಧ್ವನಿಯನ್ನು ಎತ್ತಬೇಕಿರುವ ಕಾಲದಲ್ಲಿ ಕಾಳೇಶ್ವರಂ, ಲಿಕ್ಕರ್ ಹಗರಣವು ಪಕ್ಷದ ನಾಯಕರನ್ನು ವಿಧಾನಸಭೆಯಲ್ಲಿ ಉಸಿರುಗಟ್ಟಿಸಿದೆ. ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ನಾಯಕರೆಲ್ಲ ಈಗ ಕೈ ಬಿಡುತ್ತಿರುವುದರಿಂದ ಬಿಆರ್ ಎಸ್ ಮುಖಂಡರಲ್ಲಿ ಸಹಜವಾಗಿಯೇ ಗೊಂದಲ ಮೂಡಿದೆ. ಮಾಜಿ ಶಾಸಕ ಅರೂರಿ ರಮೇಶ್, ಚೇವೆಲ್ಲಾ ಸಂಸದ ರಂಜಿತ್ ರೆಡ್ಡಿ, ಖೈರತಾಬಾದ್ ಶಾಸಕ ದಾನಂ, ಬೊಂತು ರಾಮಮೋಹನ್, ಗ್ರೇಟರ್ ಹೈದರಾಬಾದ್‌ನಲ್ಲಿ ಬಾಬಾ ಫಸಿಯುದ್ದೀನ್ ಮತ್ತು ಪ್ರಮುಖ ಕಾರ್ಪೊರೇಟರ್‌ಗಳು ಕೈ ಪಕ್ಷದ ಜೊತೆ ಕೈ ಜೋಡಿಸಿ ಬಿಆರ್‌ಎಸ್‌ಗೆ ಅನಿರೀಕ್ಷಿತ ಶಾಕ್ ನೀಡಿದ್ದಾರೆ. ಮಾಜಿ ಸಚಿವ ಮಲ್ಲಾರ್ ರೆಡ್ಡಿ ಕೂಡ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದೇ ರೀತಿ ಪಕ್ಷಕ್ಕೆ ಗುಡ್ ಬೈ ಹೇಳಲು ಇನ್ನೂ ಹಲವು ನಾಯಕರು ಚಿಂತನೆ ನಡೆಸುತ್ತಿರುವಂತೆ ಕಾಣುತ್ತಿದೆ.

Published On - 2:21 pm, Tue, 19 March 24

ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!