ಮಹಾರಾಷ್ಟ್ರದ ರಾಜ್ಯಪಾಲರಿಗೆ ರಾಖಿ ಕಳುಹಿಸಿ, ಆಶೀರ್ವದಿಸಿದ ಬಿಎಪಿಎಸ್ ಗುರು ಮಹಂತ್ ಸ್ವಾಮಿ ಮಹಾರಾಜ್
ರಕ್ಷಾಬಂಧನದ ಪ್ರಯುಕ್ತ ಮಹಾರಾಷ್ಟ್ರದ ರಾಜ್ಯಪಾಲರಿಗೆ ಮುಂಬೈನ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದ ಧಾರ್ಮಿಕ ಗುರು ಮಹಂತ್ ಸ್ವಾಮಿ ಮಹಾರಾಜ್ ಅವರು ಆಶೀರ್ವದಿಸಿ ರಾಖಿಯನ್ನು ನೀಡಿದರು. ಮಹಂತ್ ಸ್ವಾಮಿ ಮಹಾರಾಜ್ ಕಳುಹಿಸಿದ ರಾಖಿಯನ್ನು ಮಹಾರಾಷ್ಟ್ರದ ರಾಜ್ಯಪಾಲರಾದ ಜಿಷ್ಣು ದೇವ್ ವರ್ಮಾ ಅವರಿಗೆ ಕಟ್ಟಿ, ಶ್ರೀಗಳ ಆಶೀರ್ವಾದವನ್ನು ತಲುಪಿಸಲಾಯಿತು. ಈ ಮಾತುಕತೆಯ ವೇಳೆ, ಬಿಎಪಿಎಸ್ ಸಂಸ್ಥೆಯು ನಡೆಸುತ್ತಿರುವ ಆಧ್ಯಾತ್ಮಿಕ ಹಾಗೂ ಮಾನವೀಯ ಸೇವಾ ಕಾರ್ಯಗಳನ್ನು ರಾಜ್ಯಪಾಲರು ಮುಕ್ತಕಂಠದಿಂದ ಶ್ಲಾಘಿಸಿದರು.

ಮುಂಬೈ, ಆಗಸ್ಟ್ 28: ರಕ್ಷಾಬಂಧನದ (Raksha Bandhan) ಶುಭ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾದ ಜಿಷ್ಣು ದೇವ್ ವರ್ಮಾ ಅವರಿಗೆ ಬಿಎಪಿಎಸ್ (BAPS) ಸ್ವಾಮಿನಾರಾಯಣ ಸಂಸ್ಥೆಯ ಮುಖ್ಯಸ್ಥರು ಹಾಗೂ ಆಧ್ಯಾತ್ಮಿಕ ಗುರುಗಳಾದ ಮಹಂತ್ ಸ್ವಾಮಿ ಮಹಾರಾಜ್ ಅವರಿಂದ ಆಶೀರ್ವದಿಸಲ್ಪಟ್ಟ ಪವಿತ್ರ ರಾಖಿಯನ್ನು ಕಟ್ಟಲಾಯಿತು. ಮುಂಬೈನ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದ ಸ್ವಾಮೀಜಿ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ, ಮಹಂತ್ ಸ್ವಾಮಿ ಮಹಾರಾಜ್ ಅವರ ಪರವಾಗಿ ರಾಖಿ ಕಟ್ಟಿ, ಶ್ರೀಗಳ ವಿಶೇಷ ಆಶೀರ್ವಾದ ಹಾಗೂ ಸಂದೇಶವನ್ನು ತಲುಪಿಸಿದರು.
ರಾಖಿಯನ್ನು ಸ್ವೀಕರಿಸಿದ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಅವರು ಅತ್ಯಂತ ಹರ್ಷ ವ್ಯಕ್ತಪಡಿಸಿ, ಮಹಂತ್ ಸ್ವಾಮಿ ಮಹಾರಾಜ್ ಅವರಿಗೆ ತಮ್ಮ ಪ್ರಣಾಮಗಳು ಮತ್ತು ಭಕ್ತಿಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಬಿಎಪಿಎಸ್ ಸಂಸ್ಥೆಯು ಸಮಾಜ ಸೇವೆ, ಶಿಕ್ಷಣ, ಪರಿಹಾರ ಕಾರ್ಯಗಳು ಹಾಗೂ ಆಧ್ಯಾತ್ಮಿಕ ಜಾಗೃತಿಯಲ್ಲಿ ತೊಡಗಿಸಿಕೊಂಡಿರುವ ರೀತಿಗೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಬುಧಾಬಿ ಬಿಎಪಿಎಸ್ ದೇವಾಲಯ ಏಕತೆಯ ಸಂಕೇತ; ಯುಎಇ ಅಧ್ಯಕ್ಷರ ಸಾಂಸ್ಕೃತಿಕ ಸಲಹೆಗಾರರಿಂದ ಶ್ಲಾಘನೆ
ಈ ವೇಳೆ, ಸಮಾಜಕ್ಕೆ ಬಿಎಪಿಎಸ್ ಸಂಸ್ಥೆಯು ನೀಡುತ್ತಿರುವ ಮೌಲ್ಯಯುತ ಸೇವೆಯನ್ನು ಪ್ರಶಂಸಿಸಿದ ಮಹಾರಾಷ್ಟ್ರದ ರಾಜ್ಯಪಾಲರು ಪ್ರಸಾದ ಮತ್ತು ಆಶೀರ್ವಾದಗಳನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿ ಮಹಂತ್ ಸ್ವಾಮಿ ಮಹಾರಾಜ್ ಅವರಿಗೆ ತಮ್ಮ ಹೃತ್ಪೂರ್ವಕ ನಮಸ್ಕಾರಗಳು ಮತ್ತು ಶುಭಾಶಯಗಳನ್ನು ರವಾನಿಸಿದರು.
ಬಿಎಪಿಎಸ್ ಸಂಸ್ಥೆಯು ವಿಶ್ವದಾದ್ಯಂತ ಕೈಗೊಳ್ಳುತ್ತಿರುವ ಮಾನವೀಯ ಮತ್ತು ಸಾಂಸ್ಕೃತಿಕ ಸೇವೆಗಳು ನಿಸ್ವಾರ್ಥವಾಗಿದ್ದು, ಸಮಾಜದಲ್ಲಿ ಸೌಹಾರ್ದತೆ ಬೆಳೆಸಲು ಶ್ರಮಿಸುತ್ತಿವೆ ಎಂದು ರಾಜ್ಯಪಾಲರು ಪ್ರಶಂಸಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




