AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದು ಹೋದ ಬ್ಯಾಗ್​​ ವಾಪಸ್​ ಪಡೆಯಲು ಇಂಡಿಗೋ ಏರ್​​ಲೈನ್ಸ್​​ನ ವೆಬ್​​ಸೈಟ್ ಹ್ಯಾಕ್​ ಮಾಡಿದೆ ಎಂದ ಬೆಂಗಳೂರು ಮೂಲದ ಪ್ರಯಾಣಿಕ !

ನಮ್ಮ ವೆಬ್​ಸೈಟ್ ಹ್ಯಾಕ್​ ಆಗಿಲ್ಲ. ಸೈಬರ್ ಭದ್ರತೆ ವಿಷಯದಲ್ಲಿ ನಾವು ಯಾವುದೇ ರಾಜಿಯನ್ನೂ ಮಾಡಿಕೊಂಡಿಲ್ಲ. ನಮ್ಮಲ್ಲಿ ಐಟಿ ಪ್ರಕ್ರಿಯೆಗಳು ತುಂಬ ದೃಢವಾಗಿದ್ದು, ಹ್ಯಾಕ್​ ಮಾಡುವುದು ಸುಲಭವಲ್ಲ ಎಂದು ಇಂಡಿಗೋ ತಿಳಿಸಿದೆ.

ಕಳೆದು ಹೋದ ಬ್ಯಾಗ್​​ ವಾಪಸ್​ ಪಡೆಯಲು ಇಂಡಿಗೋ ಏರ್​​ಲೈನ್ಸ್​​ನ ವೆಬ್​​ಸೈಟ್ ಹ್ಯಾಕ್​ ಮಾಡಿದೆ ಎಂದ ಬೆಂಗಳೂರು ಮೂಲದ ಪ್ರಯಾಣಿಕ !
ಇಂಡಿಗೋ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on:Mar 31, 2022 | 7:55 AM

Share

ಇಂಡಿಗೋ ವಿಮಾನದಲ್ಲಿ (IndiGo Airline) ಪ್ರಯಾಣ ಮಾಡಿದ್ದ ಬೆಂಗಳೂರು ಮೂಲದ ಪ್ರಯಾಣಿಕನೊಬ್ಬ ಇಂಡಿಗೋ ಸಂಸ್ಥೆಯ ವೆಬ್​ಸೈಟ್​​ನ್ನೇ ಹ್ಯಾಕ್​ ಮಾಡಿದ ಘಟನೆ ನಡೆದಿದೆ. ಪ್ರಯಾಣಿಕನ ಹೆಸರು ನಂದನ್​ ಕುಮಾರ್​ ಎಂದಾಗಿದ್ದು, ತಾನು ಹ್ಯಾಕ್​ ಮಾಡಿದ್ದು ಯಾಕೆ ಮತ್ತು ಹೇಗೆ ಎಂಬುದನ್ನು ಸರಣಿ ಟ್ವೀಟ್​ ಮೂಲಕ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇಂಡಿಗೋ ವೆಬ್​ಸೈಟ್​​​ನಲ್ಲಿ ಎಷ್ಟು ಸುಲಭವಾಗಿ ತನಗೆ ಬೇಕಾದ ಸೂಕ್ಷ್ಮ ಮಾಹಿತಿಗಳನ್ನು ಪಡೆದೆ ಎಂದು ಹೇಳಿರುವ ನಂದನ್​ ಕುಮಾರ್​, ಏರ್​ಲೈನ್ಸ್​ ಅದನ್ನು ಸರಿಪಡಿಸಿಕೊಳ್ಳಬೇಕು. ಇನ್ನಷ್ಟು ಭದ್ರಪಡಿಸಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ. ಅಷ್ಟಕ್ಕೂ ನಂದನ್​ ಕುಮಾರ್​ ವೆಬ್​​ಸೈಟ್ ಹ್ಯಾಕ್​ ಮಾಡಲು ಕಾರಣ ಬ್ಯಾಗ್​ ಕಳೆದುಕೊಂಡಿದ್ದು. ನಂದನ್​ ಬ್ಯಾಗ್​​ ಅವರ ಸಹಪ್ರಯಾಣಿಕರೊಟ್ಟಿಗೆ ಹೋಗಿತ್ತು. ಇದು ಕಣ್ತಪ್ಪಿನಿಂದ ಆದ ಎಡವಟ್ಟಾಗಿತ್ತು. ಆದರೆ ಬ್ಯಾಗ್​​ನ್ನು ಪಡೆಯಲು ಇಂಡಿಗೋ ಕೊಟ್ಟ ಸಹಕಾರ ಸೂಕ್ತವಾಗಿರಲಿಲ್ಲ. ನನ್ನ ಬ್ಯಾಗ್​ನಲ್ಲಿ ಅನೇಕ ಮಹತ್ವದ ವಸ್ತುಗಳು ಇದ್ದುದರಿಂದ ಅದನ್ನು ಪಡೆಯಲೇಬೇಕಾಗಿತ್ತು. ಹೀಗಾಗಿ ಇಂಡಿಗೋ ವೆಬ್​ಸೈಟ್​ ಹ್ಯಾಕ್​ ಮಾಡುವ ಮೂಲಕ ಸಹ ಪ್ರಯಾಣಿಕನ ಫೋನ್​​ ನಂಬರ್ ಪಡೆದೆ ಎಂದು ನಂದನ್​ ಹೇಳಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿದ ನಂದನ್​ ಕುಮಾರ್​, ‘ನಾನು ಪಾಟ್ನಾದಿಂದ ಬೆಂಗಳೂರಿಗೆ ಇಂಡಿಗೋ 6ಇ-185  ಎಂಬ ಫ್ಲೈಟ್​​ನಲ್ಲಿ ಮಾರ್ಚ್​ 27ರಂದು ಪ್ರಯಾಣ ಮಾಡಿದೆ. ಆದರೆ ಬೆಂಗಳೂರಿನಲ್ಲಿ ಇಳಿದಾಗ ನನ್ನ ಬ್ಯಾಗ್​ ಕಳೆದು ಹೋಗಿತ್ತು.  ಅದನ್ನು ಕಣ್ತಪ್ಪಿನಿಂದ ನನ್ನೊಂದಿಗೇ ಪ್ರಯಾಣ ಮಾಡಿದ್ದವ ತೆಗೆದುಕೊಂಡು ಹೋಗಿದ್ದು ನನಗೆ ಗೊತ್ತಾಯಿತು. ನನ್ನ ಮತ್ತು ಅವನ ಬ್ಯಾಗ್​​ ಒಂದೇ ತರ ಇದ್ದುದರಿಂದ ಈ ಪ್ರಮಾದ ಆಗಿತ್ತು. ನನಗೆ ನನ್ನ ಬ್ಯಾಗ್​ ಬೇಕಾಗಿತ್ತು. ಹೀಗಾಗಿ ಇಂಡಿಗೋ ಕಸ್ಟಮರ್​ ಕೇರ್​​ಗೆ ಕರೆ ಮಾಡಲು ಪ್ರಯತ್ನ ಪಟ್ಟೆ. ತುಂಬ ಸಲ ಫೋನ್​ ಮಾಡಿದ ಬಳಿಕ ಕನೆಕ್ಟ್​ ಆಯಿತು. ನಂತರ ಏರ್​​ಲೈನ್​ ಸಂಸ್ಥೆಯ ಇಂಟರಾಕ್ಟಿವ್​ ವೈಸ್​ ರೆಸ್ಪಾನ್ಸ್​ (IVR) ಮೂಲಕ ನ್ಯಾವಿಗೇಟ್​ ಮಾಡಲೂ ಸಾಧ್ಯವಾಯಿತು. ಆದರೆ ನನ್ನೊಂದಿಗೆ ಪ್ರಯಾಣ ಮಾಡಿದ್ದವನನ್ನು ಕನೆಕ್ಟ್ ಮಾಡಲು ಇಂಡಿಗೋ ಕಸ್ಟಮರ್​ ಕೇರ್​ ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಆಗ ನಾನು, ಐವಿಆರ್ ಮೂಲಕ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹೀಗಾಗಿ ನನಗೆ ಆತನ ಫೋನ್​ ನಂಬರ್​ ಕೊಡಿ, ನಾನೇ ಸಂಪರ್ಕ ಮಾಡುತ್ತೇನೆ ಎಂದು ಹೇಳಿದೆ. ಆದರೆ ಇಂಡಿಗೋ ಅದಕ್ಕೆ ಸಿದ್ಧ ಇರಲಿಲ್ಲ. ಇನ್ನೊಬ್ಬರ ಫೋನ್​ ನಂಬರ್​ ಕೊಡಲು ಸಾಧ್ಯವಿಲ್ಲ, ಅದು ಸುರಕ್ಷತಾ ನಿಯಮಗಳಿಗೆ ವಿರುದ್ಧ ಎಂದು ಹೇಳಿದರು’.

ನಿಮ್ಮ ಬ್ಯಾಗ್ ತೆಗೆದುಕೊಂಡು ಹೋದವರ ಸಂಪರ್ಕಕ್ಕೆ ನಿರಂತರವಾಗಿ ಪ್ರಯತ್ನ ಮಾಡುತ್ತಿರುತ್ತೇವೆ. ಅವರ ಕಾಲ್​ ಕನೆಕ್ಟ್​ ಆದ ತಕ್ಷಣ ನಿಮಗೆ ಕಾಲ್​ ಮಾಡುತ್ತೇವೆ ಎಂದು ಏರ್​ಲೈನ್ಸ್​​ನವರು ಹೇಳಿದ್ದರು. ಆದರೆ ಎಷ್ಟು ದಿನ ಕಳೆದರೂ ನನಗೆ ಕರೆ ಬರಲಿಲ್ಲ. ಆಗ ನಾನು ಇಂಡಿಗೋ ವೆಬ್​ಸೈಟ್​ಗೆ ಹೋಗಿ, ಅಲ್ಲಿ ನನ್ನ ಸಹ ಪ್ರಯಾಣಿಕನ ಪಿಎನ್​ಆರ್  ಹಾಕಿದೆ. ಅಂದರೆ ಅವರು ಬಿಟ್ಟು ಹೋಗಿದ್ದ ಬ್ಯಾಗ್​​ನ ಟ್ಯಾಗ್​ ಮೇಲೆ ಹೆಸರು ಇದ್ದಿದ್ದನ್ನು ನೋಡಿಕೊಂಡಿದ್ದೆ. ಆ ಪಿಎನ್​​ಆರ್​ ಹಾಕಿದ ನಂತರವೂ ಹಲವು ರೀತಿಯ ಪ್ರಯತ್ನ ಮಾಡಿದೆ. ಆದರೆ ಪ್ರಯಾಣಿಕನ ಫೋನ್​ ನಂಬರ್ ಸಿಗಲಿಲ್ಲ.  ಅದಾದ ನಂತರ ನಾನು ಎಫ್​ 12 ಬಟನ್​ ಪ್ರೆಸ್ ಮಾಡುವ ಮೂಲಕ ವೆಬ್​ಸೈಟ್​ನ developer console ಓಪನ್​ ಮಾಡಿ ಪ್ರಯಾಣಿಕನ ಫೋನ್​ನಂಬರ್​, ವಿವರಗಳನ್ನೆಲ್ಲ ತೆಗೆದುಕೊಂಡೆ ಎಂದು ನಂದನ್​ ಕುಮಾರ್​ ತಿಳಿಸಿದ್ದಾರೆ.

ಇಂಡಿಗೋ ಹೇಳಿದ್ದೇನು?

ನಮ್ಮ ವೆಬ್​ಸೈಟ್ ಹ್ಯಾಕ್​ ಆಗಿಲ್ಲ. ಸೈಬರ್ ಭದ್ರತೆ ವಿಷಯದಲ್ಲಿ ನಾವು ಯಾವುದೇ ರಾಜಿಯನ್ನೂ ಮಾಡಿಕೊಂಡಿಲ್ಲ. ನಮ್ಮಲ್ಲಿ ಐಟಿ ಪ್ರಕ್ರಿಯೆಗಳು ತುಂಬ ದೃಢವಾಗಿದ್ದು, ಹ್ಯಾಕ್​ ಮಾಡುವುದು ಸುಲಭವಲ್ಲ. ಪಿಎನ್​ಆರ್​, ಕೊನೇ ಹೆಸರು, ಸಂಪರ್ಕ ಸಂಖ್ಯೆ ಅಥವಾ ಇಮೇಲ್​ ವಿಳಾಸ ಬಳಸಿಕೊಂಡು ಯಾವುದೇ ಪ್ರಯಾಣಿಕರೂ ವೆಬ್​ಸೈಟ್​ನಿಂದ ಅವರ ಬುಕ್ಕಿಂಗ್​ ವಿವರಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಜಾಗತಿಕವಾಗಿ ಎಲ್ಲ ವಿಮಾನಯಾನ ಸಂಸ್ಥೆಗಳಲ್ಲೂ ಈ ವ್ಯವಸ್ಥೆ ಇದ್ದೇ ಇರುತ್ತದೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: ಸಾರಿ ಕೇಳುವುದರಿಂದ ನಮ್ಮ ವ್ಯಕ್ತಿತ್ವ ಕಡಿಮೆಯಾಗುತ್ತಾ..! ಹಾಗಾದ್ರೆ ಈ ವಿಡಿಯೋ ನೋಡಿ

Published On - 7:33 am, Thu, 31 March 22

Follow Us
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್