AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

EV Trans Bus: ಪುಣೆ-ಮುಂಬೈ ಮಾರ್ಗದಲ್ಲಿ ಇವಿ ಟ್ರಾನ್ಸ್​ ಎಲೆಕ್ಟ್ರಿಕ್ ಬಸ್ ಸೇವೆ ಆರಂಭ: ಭಾರತದ ರಸ್ತೆ ಸಾರಿಗೆ ಇತಿಹಾಸದಲ್ಲಿ ಹೊಸ ದಾಖಲೆ

Intercity Coach EV Trans Bus: ಪುಣೆ-ಮುಂಬೈ ಮಾರ್ಗದಲ್ಲಿ ಬುಧವಾರ ಎಲೆಕ್ಟ್ರಾನಿಕ್ ಬಸ್​ ಸೇವೆಯನ್ನು ಇವಿ ಟ್ರಾನ್ಸ್​ ಆರಂಭಿಸಿದೆ. ಮಾಲಿನ್ಯ ರಹಿತ, ನಿಶ್ಯಬ್ದ ಮತ್ತು ಆರಾಮದಾಯಕವಾಗಿ ದೂರದ ಪ್ರಯಾಣಗಳನ್ನು ಮಾಡಲು ಇಂಥ ಸೇವೆಗಳು ಸಹಾಯಕವಾಗಲಿವೆ.

EV Trans Bus: ಪುಣೆ-ಮುಂಬೈ ಮಾರ್ಗದಲ್ಲಿ ಇವಿ ಟ್ರಾನ್ಸ್​ ಎಲೆಕ್ಟ್ರಿಕ್ ಬಸ್ ಸೇವೆ ಆರಂಭ: ಭಾರತದ ರಸ್ತೆ ಸಾರಿಗೆ ಇತಿಹಾಸದಲ್ಲಿ ಹೊಸ ದಾಖಲೆ
ಎಲೆಕ್ಟ್ರಾ ನಿರ್ಮಿಸಿರುವ ಎಲೆಕ್ಟ್ರಿಕ್ ಬಸ್
TV9 Web
| Edited By: |

Updated on: Oct 13, 2021 | 9:26 PM

Share

MEIL Intercity Coach EV Trans Buses: ಹೈದರಾಬಾದ್: ದೇಶದ ಮುಂಚೂಣಿ ಎಲೆಕ್ಟ್ರಾನಿಕ್ ಬಸ್​ ಕಾರ್ಯಾಚರಣೆ ಸಂಸ್ಥೆ ಇವಿ ಟ್ರಾನ್ಸ್​ ಪ್ರೈವೇಟ್ ಲಿಮಿಟೆಡ್​ ‘ಪುರಿಬಸ್’ (PuriBus) ಬ್ರಾಂಡ್​ನ ಅಡಿಯಲ್ಲಿ ಪುಣೆ-ಮುಂಬೈ ಮಾರ್ಗದಲ್ಲಿ ಬುಧವಾರ ಎಲೆಕ್ಟ್ರಾನಿಕ್ ಬಸ್​ ಸೇವೆ ಆರಂಭಿಸಿದೆ. ಮೇಘಾ ಎಂಜಿನಿಯರಿಂಗ್ ಲಿಮಿಟೆಡ್ (MEIL) ಗ್ರೂಪ್​ನ ಭಾಗವಾಗಿರುವ ಈ ಕಂಪನಿಯು ಇದೇ ಮೊದಲ ಬಾರಿಗೆ ದೇಶದಲ್ಲಿ ಎರಡು ಮುಖ್ಯ ನಗರಗಳ ನಡುವೆ ಎಲೆಕ್ಟ್ರಾನಿಕ್ ಬಸ್​ ಸೇವೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದೆ. ವಿಜಯದಶಮಿಯಿಂದ (ಅಕ್ಟೋಬರ್ 15) ಈ ಸೇವೆಯು ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ. ಮಾಲಿನ್ಯ ರಹಿತ, ನಿಶ್ಯಬ್ದ ಮತ್ತು ಆರಾಮದಾಯಕವಾಗಿ ದೂರದ ಪ್ರಯಾಣಗಳನ್ನು ಮಾಡಲು ಇಂಥ ಸೇವೆಗಳು ಸಹಾಯಕವಾಗಲಿದೆ.

ಫೇಮ್-1 ಮತ್ತು ಫೇಮ್-2 ಉಪಕ್ರಮಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕ ಸಾರಿಗೆಯಲ್ಲಿ ಎಲೆಕ್ಟ್ರಾನಿಕ್ ಬಸ್​ಗಳ ಬಳಕೆಯನ್ನು ಉತ್ತೇಜಿಸುತ್ತಿವೆ. ಪುರಿಬಸ್ ಸೇವೆಯ ಸೌಲಭ್ಯಗಳ ಬಗ್ಗೆ ವಿವರಿಸಿದ ಈವಿಟ್ರಾನ್ಸ್​​ನ ಪ್ರಧಾನ ವ್ಯವಸ್ಥಾಪಕ ಸಂದೀಪ್ ರೈಜಾಡಾ, ‘ಭಾರತದಲ್ಲಿ ಎರಡು ನಗರಗಳ ನಡುವೆ ಇ-ಬಸ್ ಸೇವೆ ಆರಂಭಿಸಿದ ಬಗ್ಗೆ ನಮಗೆ ಹೆಮ್ಮೆ ಮತ್ತು ವಿನಮ್ರತೆ ಇದೆ. ಒಮ್ಮೆ ಚಾರ್ಜ್ ಮಾಡಿದ ನಂತರ ಪುರಿಬಸ್ 350 ಕಿಮೀ ಅಂತರ ಕ್ರಮಿಸಬಲ್ಲದು. ಹೊಗೆ ಉಗುಳದ ಈ ವಾಹನವು ವಿವಿಧ ನಗರಗಳ ನಡುವೆ ಬಸ್ ಸೇವೆ ಒದಗಿಸುವವರಿಗೆ ಉತ್ತಮ ಆಯ್ಕೆ ಆಗಬಲ್ಲದು. ದೀರ್ಘಾವಧಿಯಲ್ಲಿ ಸಾಕಷ್ಟು ಉಳಿತಾಯದ ಲಾಭಗಳೂ ಇವೆ’ ಎಂದು ಹೇಳಿದರು.

12 ಮೀಟರ್ ಉದ್ದದ ಪುರಿಬಸ್ ಈ ಹೊಗೆ ಉಗುಳದ ಇಂಟರ್​ಸಿಟಿ ಎಲೆಕ್ಟ್ರಿಕ್ ಕೋಚ್ ಬಸ್​ನಲ್ಲಿ 45 ಪ್ರಯಾಣಿಕರು, ಚಾಲಕ, ಸಹಚಾಲಕರಿಗೆ ಕೂರುವಷ್ಟು ಸ್ಥಳಾವಕಾಶವಿದೆ. ಸುಂದರ ವಿನ್ಯಾಸದ ಬಸ್​ ಪ್ರಯಾಣಿಕರು ಸಾಕಷ್ಟು ಆರಾಮದಾಯಕ ಸೌಕರ್ಯಗಳನ್ನು ನೀಡುತ್ತದೆ. ದೂರ ಪ್ರಯಾಣಕ್ಕಾಗಿಯೇ ವಿನ್ಯಾಸ ಮಾಡಿರುವ ಈ ಹವಾನಿಯಂತ್ರಿತ ಬಸ್​ನಲ್ಲಿ ಆರಾಮದಾಯಕ ಮತ್ತು ಐಷಾರಾಮಿ ಪುಶ್​ಬ್ಯಾಕ್​ ಸೀಟ್​ಗಳಿವೆ. ಪ್ರಯಾಣದ ಖುಷಿ ಹೆಚ್ಚಿಸಲೆಂದು ಅನು ಬಸ್​ನಲ್ಲಿ ಅತ್ಯಾಧುನಿಕ ಟಿವಿ ಮತ್ತು ಇನ್​ಫೋಟೈನ್​ಮೆಂಟ್ ವ್ಯವಸ್ಥೆಯ ಜೊತೆಗೆ ವೈ-ಫೈ ಸಹ ಇದೆ. ಪ್ರತಿ ಸೀಟ್​ ಸಮೀಪ ಯುಎಸ್​ಬಿ ಚಾರ್ಜರ್ ಇರುತ್ತದೆ. ಲಗೇಜ್ ಇರಿಸಲೆಂದು ಐದು ಕ್ಯೂಬಿಕ್ ಮೀಟರ್​ನಷ್ಟು ಜಾಗವಿದೆ. ಹೀಗಾಗಿ ಲಗೇಜ್ ಸಾಗಿಸುವುದು ಸಹ ಹೆಚ್ಚು ಸಮಸ್ಯೆಯಾಗುವುದಿಲ್ಲ.

ವಿವಿಧ ನಗರಗಳ ನಡುವೆ ಬಸ್​ಗಳನ್ನು ಓಡಿಸುತ್ತಿರುವ ಬಸ್ ಆಪರೇಟರ್​ಗಳಿಗೆ ಹಲವು ಆರ್ಥಿಕ ಅನುಕೂಲಗಳನ್ನೂ ಈ ಬಸ್ ಒದಗಿಸುತ್ತದೆ. ಅತ್ಯಂತ ಕಡಿಮೆ ನಿರ್ವಹಣಾ ವೆಚ್ಚ, ಡೀಸೆಲ್ ಬಸ್​ಗಳಿಗೆ ಓಡಿಸಿದರೆ ಕಡಿಮೆ ಕಾರ್ಯಾಚರಣೆ ವೆಚ್ಚದ ಲಾಭಗಳೂ ಇವೆ. ಭಾರತದಲ್ಲಿ ಈ ಬಸ್​ಗಳನ್ನು ಒಲೆಕ್ಟ್ರಾ ಗ್ರೀನ್​ಟೆಕ್ ಲಿಮಿಟೆಡ್​ ನಿರ್ಮಿಸುತ್ತಿದೆ. ಲಿಯಾನ್ ಫಾಸ್ಪೇಟ್​ ಬ್ಯಾಟರಿಗಳಿಂದ ಈ ಬಸ್​ಗಳು ಸಂಚರಿಸುತ್ತವೆ.

Electra-Bus

ಎಲೆಕ್ಟ್ರಾ ಬಸ್​

ಪ್ರಯಾಣಿಕರ ಸುರಕ್ಷೆಗೆ ಆದ್ಯತೆ ಬಸ್​ನಲ್ಲಿ ಹಲವು ಸುರಕ್ಷಾ ವ್ಯವಸ್ಥೆಗಳು ಇವೆ. ಐರೋಪ್ಯ ಒಕ್ಕೂಟ ಮಾನದಂಡಕ್ಕೆ ಅನುಗುಣವಾದ ಟಿಯುವಿ ಪ್ರಮಾಣಪತ್ರದ ಎಫ್​ಡಿಎಸ್​ಎಸ್ ವ್ಯವಸ್ಥೆ, ಎಡಿಎಎಸ್ ವ್ಯವಸ್ಥೆ (Advanced Driver Assistance System – ADAS) ಮತ್ತು ಭಾರತೀಯ ನಿಯಂತ್ರಣ ಪ್ರಾಧಿಕಾರ ರೂಪಿಸಿರುವ ನಿಯಮಗಳಿಗೆ ಅನುಗುಣವಾದ ಐಟಿಎಸ್​​ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಸಂಕಷ್ಟ ಪರಿಸ್ಥಿತಿಯಲ್ಲಿ ಅಲಾರಾಂ ಮೊಳಗಿಸುವ ಮತ್ತು ಬೆಳಕು ಹೊತ್ತಿಕೊಳ್ಳುವ ವ್ಯವಸ್ಥೆಗಳು ಬಸ್​ನಲ್ಲಿ ಇವೆ. ಸೂರತ್, ಸಿಲ್​ವಾಸಾ, ಗೋವಾ, ಹೈದರಾಬಾದ್, ಡೆಹ್ರಾಡೂನ್ ಸೇರಿದಂತೆ ಹಲವು ನಗರಗಳಲ್ಲಿ ಈಗಾಗಲೇ ಇ-ಬಸ್​ಗಳನ್ನು ಕಂಪನಿ ಓಡಿಸುತ್ತಿದೆ. ನಮ್ಮ ಕಂಪನಿಗೆ ಪೂರಿಬಸ್​ ಸೇರಿಸಿಕೊಳ್ಳುವ ಮೂಲಕ ಮತ್ತೊಮ್ಮೆ ನಮ್ಮ ಕಾರ್ಯಾಚರಣೆ ಸಾಮರ್ಥ್ಯವನ್ನು ನಿರೂಪಿಸಿದ್ದೇವೆ ಎಂದು ಕಂಪನಿ ಹೇಳಿದೆ.

ಕಂಪನಿಯ ಬಗ್ಗೆ ಮಾಹಿತಿ ಮೆಘಾ ಎಂಜಿನಿಯರಿಂಗ್ ಲಿಮಿಟೆಡ್​ (MEIL) ಸಮೂಹ ಕಂಪನಿಗಳ ಭಾಗವಾಗಿರುವ ಇವಿ ​ಟ್ರಾನ್ಸ್​ ಪ್ರೈವೇಟ್ ಲಿಮಿಟೆಡ್ ಕಂಪನಿಯು ಎಂಇಐಎಲ್ ಹೋಲ್ಡಿಂಗ್ಸ್​ ಲಿಮಿಟೆಡ್​ನ (MEIL Holdings Limited) ಸಂಪೂರ್ಣ ಅಧೀನದಲ್ಲಿದೆ. ಇದು ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್​ಗಳ ಕಾರ್ಯಾಚರಣೆ ನಡೆಸುವ ಮತ್ತು ನಿರ್ವಹಿಸುವ ಕಂಪನಿಯಾಗಿದೆ. ಪ್ರಸ್ತುತ ದೇಶದ ವಿವಿಧೆಡೆ 400 ಬಸ್​ಗಳನ್ನು ನಿರ್ವಹಿಸುತ್ತಿದೆ. ಸಮಗ್ರ ಶುಲ್ಕ ಒಪ್ಪಂದ (Gross Cost Contract – GCC) ಆಧಾರದ ಮೇಲೆ ವಿವಿಧ ಸಾರಿಗೆ ನಿಗಮಗಳಿಗಾಗಿ ಕಂಪನಿಯು ಸ್ವತಃ ಬಸ್​ಗಳನ್ನು ಓಡಿಸುತ್ತದೆ, ಭೋಗ್ಯಕ್ಕೆ ಕೊಡುತ್ತದೆ, ನಿರ್ವಹಿಸುತ್ತದೆ. ಚಾರ್ಜಿಂಗ್​ ಸ್ಟೇಷನ್​ಗಳನ್ನೂ ಈವಿ ಅಭಿವೃದ್ಧಿಪಡಿಸುತ್ತದೆ.

ಇದನ್ನೂ ಓದಿ: ಮೇಘಾ ಕಂಪನಿಯ ಮೆಗಾ ಸಾಧನೆ! ಎಂಜಿನಿಯರಿಂಗ್​ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೆ ಸಾಕ್ಷಿ ಲಡಾಖ್​ನ ಜೋಜಿಲಾ ಸುರಂಗ ಮಾರ್ಗ ಇದನ್ನೂ ಓದಿ: Explainer: ಎಂಜಿನಿಯರಿಂಗ್ ಅದ್ಭುತ ಕಾಳೇಶ್ವರಂ ಏತ ನೀರಾವರಿ ಯೋಜನೆ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?