AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Narendra Modi: ಇಂದಿರಾ ಬಳಿಕ ಈ ಸೌದಿ ನಗರಕ್ಕೆ ಭೇಟಿ ನೀಡಲಿರುವ ಮೊದಲ ಪ್ರಧಾನಿ ನರೇಂದ್ರ ಮೋದಿ

Narendra Modi Saudi visit: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಏಪ್ರಿಲ್ 22 ಸೌದಿ ಅರೇಬಿಯಾಗೆ ಎರಡು ದಿನದ ಪ್ರವಾಸ ಕೈಗೊಂಡಿದ್ದಾರೆ. ಇದರಲ್ಲಿ ಸೌದಿಯ ಎರಡನೇ ಅತಿದೊಡ್ಡ ನಗರವಾದ ಜೆದ್ದಾಗೂ ಮೋದಿ ಹೋಗಿಬರಲಿದ್ದಾರೆ. 1982ರಲ್ಲಿ ಇಂದಿರಾ ಬಳಿಕ ಭಾರತದ ಪ್ರಧಾನಿಯೊಬ್ಬರು ಜೆದ್ದಾಗೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

Narendra Modi: ಇಂದಿರಾ ಬಳಿಕ ಈ ಸೌದಿ ನಗರಕ್ಕೆ ಭೇಟಿ ನೀಡಲಿರುವ ಮೊದಲ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ ಮತ್ತು ಸೌದಿ ರಾಜಕುಮಾರ ಸಲ್ಮಾನ್, ಫೈಲ್ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 22, 2025 | 12:16 PM

ನವದೆಹಲಿ, ಏಪ್ರಿಲ್ 22: ನಿನ್ನೆ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತವರ ಕುಟುಂಬವನ್ನು (JD Vance and Family) ಸತ್ಕರಿಸಿ, ವ್ಯಾನ್ಸ್ ಜೊತೆ ಮಹತ್ವದ ವ್ಯಾಪಾರ ಮಾತುಕತೆ ನಡೆಸಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ಇವತ್ತು ಸೌದಿ ಅರೇಬಿಯಾಗೆ (Narendra Modi Saudi visit) ಎರಡು ದಿನದ ಪ್ರವಾಸ ಆರಂಭಿಸಿದ್ದಾರೆ. ಸೌದಿ ಅರೇಬಿಯಾದ ಪ್ರಧಾನಿ ಹಾಗೂ ರಾಜಕುಮಾರರೂ ಆದ ಮೊಹಮ್ಮದ್ ಬಿನ್ ಸಲ್ಮಾನ್ (Mohammed bin Salman) ಅವರು ಈ ಹಿಂದೆ ಪ್ರಧಾನಿ ಮೋದಿಯನ್ನು ತಮ್ಮ ದೇಶಕ್ಕೆ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಮೋದಿ ಎರಡು ದಿನದ ಪ್ರವಾಸ ಕೈಗೊಂಡಿದ್ದಾರೆ. ನಿರೀಕ್ಷೆಯಂತೆ, ಈ ಭೇಟಿಯಲ್ಲಿ ಭಾರತ ಮತ್ತು ಸೌದಿ ನಡುವಿನ ಸಂಬಂಧವನ್ನು ಬಲಪಡಿಸುವ ಪ್ರಯತ್ನಗಳು ನಡೆಯಲಿವೆ.

ಮೋದಿ ಭೇಟಿಗೆ ಮುನ್ನವೇ ಈ ಎರಡು ದೇಶಗಳ ನಡುವಿನ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಹಲವು ಸುತ್ತುಗಳ ಸಭೆ, ಮಾತುಕತೆಗಳು ನಡೆದಿವೆ. ಕಳೆದ ವರ್ಷ (2024) ಭಾರತದಿಂದ ಸೌದಿ ಅರೇಬಿಯಾಗೆ 11 ಸಚಿವ ಮಟ್ಟದ ಭೇಟಿಗಳು ನಡೆದಿದ್ದವು.

ಇದನ್ನೂ ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಮೋದಿ-ವ್ಯಾನ್ಸ್ ಮಾತುಕತೆಯ ಪ್ರಮುಖ ಅಂಶಗಳು

ಇದನ್ನೂ ಓದಿ
Image
ಈ ಸೌದಿ ನಗರಕ್ಕೆ ಮೋದಿ ಐತಿಹಾಸಿಕ ಭೇಟಿಯ ಮಹತ್ವ
Image
ಅಕ್ಷರಧಾಮ ಕಂಡು ಖುಷಿ ಪಟ್ಟ ಅಮೆರಿಕ ಉಪಾಧ್ಯಕ್ಷರ ಕುಟುಂಬ
Image
ಸರ್ಕಾರಿ ನೌಕರರಿಗೆ ಜವಾಬ್ದಾರಿ ನೆನಪಿಸಿದ ಪ್ರಧಾನಿ ಮೋದಿ
Image
ಅಮೆರಿಕ ಉಪಾಧ್ಯಕ್ಷರು ಮತ್ತವರ ಭಾರತ ಮೂಲದ ಪತ್ನಿ ಕಥೆ

ಒಂದೇ ತಕ್ಕಡಿಯಲ್ಲಿರುವ ಭಾರತ, ಸೌದಿ ಅರೇಬಿಯಾ

ಸೌದಿ ಅರೇಬಿಯಾ ಜೊತೆ ಭಾರತದ ಸಂಬಂಧ ಬಹಳ ವರ್ಷಗಳಿಂದ ಉತ್ತಮವಾಗಿದೆ. ಎರಡೂ ದೇಶಗಳ ಜಾಗತಿಕ ರಾಜಕೀಯ ಮತ್ತು ಆರ್ಥಿಕ ಗತಿ ಏಕರೀತಿಯಲ್ಲಿವೆ. ಎರಡಊ ದೇಶಗಳು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳ ಸಾಲಿನಲ್ಲಿವೆ. ಜಾಗತಿಕ ಶ್ರೇಣಿ ವ್ಯವಸ್ಥೆಯಲ್ಲಿ ಎರಡೂ ಕೂಡ ಮಹತ್ವದ ಪಾತ್ರ ಹೊಂದಿವೆ. ಅಮೆರಿಕ, ರಷ್ಯಾ, ಇಬ್ಬರ ಜೊತೆಯೂ ಸ್ನೇಹ ಹೊಂದಿರುವ ಕೆಲವೇ ದೇಶಗಳಲ್ಲಿ ಭಾರತ ಮತ್ತು ಸೌದಿ ಸೇರಿವೆ. ಡೊನಾಲ್ಡ್ ಟ್ರಂಪ್, ವ್ಲಾದಿಮಿರ್ ಪುಟಿನ್, ವೊಲೋಡಿಮಿರ್ ಝೆಲೆನ್​ಸ್ಕಿ, ಈ ಮೂವರ ಜೊತೆಯೂ ನರೇಂದ್ರ ಮೋದಿ ಮತ್ತು ಸಲ್ಮಾನ್ ಉತ್ತಮ ಸಂಬಂಧ ಹೊಂದಿದ್ದಾರೆ.

ನಾಲ್ಕು ದಶಕಗಳ ಬಳಿಕ ಜೆದ್ದಾಗೆ ಭೇಟಿ ನೀಡಲಿರುವ ಭಾರತದ ಪ್ರಧಾನಿ

ನರೇಂದ್ರ ಮೋದಿ ಅವರು ಈ ಬಾರಿಯ ಸೌದಿ ಅರೇಬಿಯಾ ಭೇಟಿಯಲ್ಲಿ ಜೆದ್ದಾ ನಗರಕ್ಕೆ ಹೋಗುವ ಯೋಜನೆಯೂ ಇದೆ. 1982ರಲ್ಲಿ ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ ಅವರು ಜೆದ್ದಾಗೆ ಹೋಗಿದ್ದರು. ಅದಾದ ಬಳಿಕ ಭಾರತದ ಪ್ರಧಾನಿಯೊಬ್ಬರು ಅಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಪತ್ನಿ ಉಷಾ ಲವ್ ಸ್ಟೋರಿ; ನೆಟ್​​ಫ್ಲಿಕ್ಸ್​​ನಲ್ಲೂ ಇದೆ ಒಂದು ಸಿನಿಮಾ

ನರೇಂದ್ರ ಮೋದಿ ಈ ಹಿಂದೆ ಸೌದಿಗೆ ಹೋಗಿದ್ದರಾದರೂ ಜೆದ್ದಾಗೆ ಹೋಗಿರಲಿಲ್ಲ. ಸೌದಿ ರಾಜಧಾನಿ ರಿಯಾಧ್​​ಗೆ ಮಾತ್ರ ಹೋಗಿ ಬಂದಿದ್ದರು.

ಐತಿಹಾಸಿಕ ಮಹತ್ವದ ಜೆದ್ದಾ

ಸೌದಿ ಅರೇಬಿಯಾ ರಾಜಧಾನಿ ರಿಯಾಧ್ ಬಿಟ್ಟರೆ ಜೆದ್ದಾ ಆ ದೇಶದ ಅತಿದೊಡ್ಡ ನಗರ ಎನಿಸಿದೆ. ಕೆಂಪು ಸಮುದ್ರದ ಕರಾವಳಿಯಲ್ಲಿರುವ ಜೆದ್ದಾ ನಗರ ಸೌದಿಯ ಕಮರ್ಷಿಯಲ್ ಹಬ್ ಎನಿಸಿದೆ. ಮುಸ್ಲಿಮರಿಗೆ ಪವಿತ್ರ ಎನಿಸಿರುವ ಮೆಕ್ಕಾ ಮತ್ತು ಮದೀನಾಗೆ ಹೋಗಬೇಕೆನ್ನುವವರು ಜೆದ್ದಾ ಮೂಲಕ ಹೋಗಬೇಕು. ಜೆದ್ದಾ ಬಂದರಿನಲ್ಲಿ ಇಳಿದು ಅಲ್ಲಿಂದ ಮೆಕ್ಕಾ, ಮದೀನಾಗೆ ಹೋಗುತ್ತಾರೆ ಯಾತ್ರಿಕರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Tue, 22 April 25

ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ