AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajya Sabha Election 2024: ರಾಜ್ಯಸಭಾ ಸಂಸದರ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಇಲ್ಲಿದೆ ವಿವರ

ರಾಜ್ಯಸಭಾ ಚುನಾವಣೆ 2024: ಫೆಬ್ರವರಿ 27 ರಂದು ದೇಶದ 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಫೆಬ್ರವರಿ 15 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಅಭ್ಯರ್ಥಿಗಳು ಫೆಬ್ರವರಿ 20 ರವರೆಗೆ ನಾಪತ್ರವನ್ನು ಹಿಂಪಡೆಯಬಹುದಾಗಿದೆ. ರಾಜ್ಯಸಭಾ ಚುನಾವಣೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಿಂತ ಭಿನ್ನವಾಗಿರುತ್ತದೆ. ಈ ಚುನಾವಣೆಯನ್ನು ಹೇಗೆ ನಡೆಸಲಾಗುತ್ತದೆ ಮತ್ತು ಇದು ಇತರ ಚುನಾವಣೆಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬ ಮಾಹಿತಿ ಇಲ್ಲಿದೆ.

Rajya Sabha Election 2024: ರಾಜ್ಯಸಭಾ ಸಂಸದರ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Feb 14, 2024 | 12:54 PM

ದೇಶದಲ್ಲಿ ಲೋಕಸಭೆ ಚುನಾವಣೆಯ (Lok Sabha Elections) ಕಹಳೆ ಮೊಳಗುವ ಮುನ್ನವೇ ಮತ್ತೊಂದು ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಇದು ರಾಜ್ಯಸಭಾ ಚುನಾವಣೆ (Rajya Sabha Election). ಫೆಬ್ರವರಿ 27 ರಂದು ದೇಶದ 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಫೆಬ್ರವರಿ 15 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಅಭ್ಯರ್ಥಿಗಳು ಫೆಬ್ರವರಿ 20 ರವರೆಗೆ ತಮ್ಮ ನಾಮಪತ್ರವನ್ನು ಹಿಂಪಡೆಯಬಹುದಾಗಿದೆ.

ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಗುಜರಾತ್, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಒಡಿಶಾ, ಹರಿಯಾಣ, ಹಿಮಾಚಲ, ರಾಜಸ್ಥಾನ, ಉತ್ತರಾಖಂಡ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಗಳಿಂದ ರಾಜ್ಯಸಭೆಗೆ ಪ್ರತಿನಿಧಿಗಳ ಆಯ್ಕೆ ನಡೆಯಲಿದೆ. ರಾಜ್ಯಸಭಾ ಚುನಾವಣೆಯನ್ನು ಹೇಗೆ ನಡೆಸಲಾಗುತ್ತದೆ ಮತ್ತು ಇದು ಇತರ ಚುನಾವಣೆಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬ ಮಾಹಿತಿ ಇಲ್ಲಿದೆ.

ಸಾರ್ವಜನಿಕರಿಗಿಲ್ಲ ಮತದಾನ ಅವಕಾಶ

ಸಾರ್ವಜನಿಕರು ರಾಜ್ಯಸಭಾ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ. ಬದಲಿಗೆ ಜನರಿಂದ ಚುನಾಯಿತರಾದ ಶಾಸಕರು ಅದರಲ್ಲಿ ಭಾಗವಹಿಸುತ್ತಾರೆ. ಆದ್ದರಿಂದಲೇ ಈ ಚುನಾವಣೆಯನ್ನು ಪರೋಕ್ಷ ಚುನಾವಣೆ ಎಂದೂ ಕರೆಯುತ್ತಾರೆ. ಭಾರತದಲ್ಲಿ ಸಂಸತ್ತಿನ ಎರಡು ಮನೆಗಳಿದ್ದು, ಅವು ಲೋಕಸಭೆ ಮತ್ತು ರಾಜ್ಯಸಭೆ ಆಗಿವೆ. ಉಭಯ ಸದನಗಳಲ್ಲಿ ಮಸೂದೆ ಅಂಗೀಕಾರವಾದ ನಂತರ ಅದು ರಾಷ್ಟ್ರಪತಿಯವರಿಗೆ ಹೋಗುತ್ತದೆ. ಅವರ ಸಹಿಯ ನಂತರ, ಮಸೂದೆಯು ಕಾನೂನಿನ ರೂಪವನ್ನು ತೆಗೆದುಕೊಳ್ಳುತ್ತದೆ ಮತ್ತು ದೇಶಾದ್ಯಂತ ಅನುಸರಿಸಲ್ಪಡುತ್ತದೆ

ಮೇಲ್ಮನೆ ವಿಸರ್ಜನೆಯಾಗುವುದಿಲ್ಲ!

ಐದು ವರ್ಷಗಳಿಗೊಮ್ಮೆ ಲೋಕಸಭೆ ಚುನಾವಣೆ ನಡೆಯುವುದು ನಮಗೆಲ್ಲ ಗೊತ್ತೇ ಇದೆ. ದೇಶದಲ್ಲಿ ಸರ್ಕಾರವು ಅದರ ಚುನಾಯಿತ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ರಚನೆಯಾಗುತ್ತದೆ. ಅಂದರೆ, ಲೋಕಸಭೆಯ ಸಂಸದರ ಅಧಿಕಾರಾವಧಿಯು ಐದು ವರ್ಷಗಳು. ಆದರೆ ಪ್ರತಿಕೂಲ ಸಂದರ್ಭಗಳಲ್ಲಿ ಅದನ್ನು ಮಧ್ಯದಲ್ಲಿ ವಿಸರ್ಜಿಸಬಹುದು. ಇದಕ್ಕೆ ವಿರುದ್ಧವಾಗಿ, ರಾಜ್ಯಸಭೆಯು ಶಾಶ್ವತ ಸದನವಾಗಿದೆ ಮತ್ತು ಅದು ಎಂದಿಗೂ ವಿಸರ್ಜನೆಯಾಗುವುದಿಲ್ಲ. ಈ ಮೇಲ್ಮನೆಯ ಸದಸ್ಯರು ಆರು ವರ್ಷಗಳ ಕಾಲ ಚುನಾಯಿತರಾಗುತ್ತಾರೆ.

ಪ್ರತಿ ಎರಡು ವರ್ಷಗಳಿಗೊಮ್ಮೆ ಮೂರನೇ ಒಂದು ಭಾಗದಷ್ಟು ಸದಸ್ಯರ ಅಧಿಕಾರಾವಧಿ ಪೂರ್ಣಗೊಳ್ಳುತ್ತದೆ. ಅವರ ಸ್ಥಾನಕ್ಕೆ ಹೊಸಬರ ಆಯ್ಕೆಗೆ ಚುನಾವಣೆಗಳು ನಡೆಯುತ್ತವೆ. ಆದರೆ, ರಾಜ್ಯಸಭೆಯ ಸದಸ್ಯರೊಬ್ಬರು ರಾಜೀನಾಮೆ ನೀಡಿದರೆ ಅಥವಾ ಮರಣಹೊಂದಿದರೆ ಅಥವಾ ಕೆಲವು ಕಾರಣಗಳಿಂದ ಸದಸ್ಯರು ಸದನಕ್ಕೆ ಅನರ್ಹರೆಂದು ಘೋಷಿಸಲ್ಪಟ್ಟರೆ, ಅವರ ಸ್ಥಾನಕ್ಕೆ ಉಪಚುನಾವಣೆ ಕೂಡ ನಡೆಯುತ್ತದೆ. ಮಧ್ಯಂತರ ಅವಧಿಯಲ್ಲಿ ಚುನಾವಣೆ ನಡೆಯುವ ಸ್ಥಾನಕ್ಕೆ ಚುನಾಯಿತರಾದ ಸಂಸದರು ಪೂರ್ಣ ಆರು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವುದಿಲ್ಲ. ಬದಲಿಗೆ ಅವರು ಹಿಂದಿನ ಸದಸ್ಯರ ಅಧಿಕಾರಾವಧಿಯಲ್ಲಿ ಉಳಿದಿರುವ ಅವಧಿಗಷ್ಟೇ ಸಂಸದರಾಗುತ್ತಾರೆ.

ಗರಿಷ್ಠ 250 ಸದಸ್ಯರಿರಬಹುದು, ಪ್ರಸ್ತುತ ಸಂಖ್ಯೆ 245

ಭಾರತೀಯ ಸಂವಿಧಾನದ 80 ನೇ ವಿಧಿಯಲ್ಲಿ, ರಾಜ್ಯಸಭೆಯ ಒಟ್ಟು ಸದಸ್ಯರ ಗರಿಷ್ಠ ಸಂಖ್ಯೆಯನ್ನು 250 ಕ್ಕೆ ನಿಗದಿಪಡಿಸಲಾಗಿದೆ. ಇದರಲ್ಲಿ 238 ಸದಸ್ಯರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾಗಿದ್ದಾರೆ. ಸರ್ಕಾರದ ಸಲಹೆಯ ಮೇರೆಗೆ ರಾಷ್ಟ್ರಪತಿಗಳು 12 ಸಂಸದರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುತ್ತಾರೆ. ಇವರು ದೇಶದ ಗಣ್ಯ ವ್ಯಕ್ತಿಗಳಾಗಿರುತ್ತಾರೆ. ಪ್ರಸ್ತುತ ರಾಜ್ಯಸಭೆಯಲ್ಲಿ ಒಟ್ಟು ಸದಸ್ಯರ ಸಂಖ್ಯೆ 245 ಆಗಿದೆ.

ರಾಜ್ಯಸಭಾ ಸದಸ್ಯರ ಕನಿಷ್ಠ ವಯೋಮಿತಿಯನ್ನು 30 ವರ್ಷಕ್ಕೆ ನಿಗದಿಪಡಿಸಲಾಗಿದೆ. ಆದರೆ ಲೋಕಸಭಾ ಸದಸ್ಯರಿಗೆ ಈ ಮಿತಿ 25 ವರ್ಷಗಳು. ಚುನಾವಣಾ ಆಯೋಗವು ಅಧಿಕಾರಾವಧಿ ಕೊನೆಗೊಳ್ಳುವ ರಾಜ್ಯಸಭಾ ಸ್ಥಾನಗಳಿಗೆ ಹೊಸ ಚುನಾವಣೆಗಳನ್ನು ಘೋಷಿಸುತ್ತದೆ. ರಾಜ್ಯ ವಿಧಾನಸಭೆಗಳ ಚುನಾಯಿತ ಶಾಸಕರು ಮಾತ್ರ ಈ ಚುನಾವಣೆಯಲ್ಲಿ ಭಾಗವಹಿಸಬಹುದು. ದೇಶದ ಐದು ರಾಜ್ಯಗಳಲ್ಲಿ ರಾಜ್ಯಸಭೆಯ ರೀತಿಯಲ್ಲಿ ಕಾರ್ಯನಿರ್ವಹಿಸುವ ವಿಧಾನ ಪರಿಷತ್ತುಗಳೂ ಇವೆ. ಅವುಗಳ ಸದಸ್ಯರು ರಾಜ್ಯಸಭಾ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ.

ಚುನಾವಣೆಯಲ್ಲಿ ರಹಸ್ಯ ಮತದಾನವಿಲ್ಲ!

ರಾಜ್ಯಸಭಾ ಚುನಾವಣೆಗೆ ಯಾವುದೇ ರಹಸ್ಯ ಮತದಾನವಿಲ್ಲ. ಇದರಲ್ಲಿ ಇವಿಎಂ ಕೂಡ ಬಳಸುವುದಿಲ್ಲ. ಈ ಚುನಾವಣೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಒಂದರಿಂದ ನಾಲ್ಕರವರೆಗಿನ ಸಂಖ್ಯೆಯನ್ನು ಬರೆಯಲಾಗುತ್ತದೆ. ಮತದಾರರು ಮತ್ತು ಶಾಸಕರು ತಮ್ಮ ಆದ್ಯತೆಗಳ ಆಧಾರದ ಮೇಲೆ ಆ ಸಂಖ್ಯೆಗಳನ್ನು ಗುರುತಿಸುತ್ತಾರೆ. ನಂತರ ಅವರು ತಮ್ಮ ಪಕ್ಷದ ಏಜೆಂಟರಿಗೆ ತಮ್ಮ ಮತಪತ್ರವನ್ನು ತೋರಿಸಿ ಪೆಟ್ಟಿಗೆಯಲ್ಲಿ ಹಾಕುತ್ತಾರೆ. ಈ ಮತಪತ್ರವನ್ನು ಪಕ್ಷದ ಏಜೆಂಟ್‌ಗೆ ತೋರಿಸದಿದ್ದರೆ ಅಮಾನ್ಯವಾಗುತ್ತದೆ. ಅದೇ ರೀತಿ ಮತಪತ್ರವನ್ನು ಬೇರೆ ಪಕ್ಷದ ಏಜೆಂಟರಿಗೆ ತೋರಿಸಿದರೆ ಅದು ಅಮಾನ್ಯವಾಗುತ್ತದೆ.

ಒಬ್ಬ ಅಭ್ಯರ್ಥಿ ಗೆಲ್ಲಬೇಕಿದ್ದರೆ, ಆತನಿಗೆ ಗರಿಷ್ಠ ಸಂಖ್ಯೆಯ ಮತಗಳು ಬೇಕಾಗಿರುವುದು ಮಾತ್ರವಲ್ಲ, ನಿಗದಿತ ಸೂತ್ರದ ಪ್ರಕಾರ ಕನಿಷ್ಠ ಅಗತ್ಯವಿರುವ ಮತಗಳನ್ನು ಸಹ ಪಡೆಯಬೇಕು. ಆದರೆ, ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಹೀಗಲ್ಲ. ಅಲ್ಲಿ ಹೆಚ್ಚು ಮತ ಪಡೆದ ಸದಸ್ಯರು ಗೆಲ್ಲುತ್ತಾರೆ.

ಉದಾಹರಣೆಗೆ, ರಾಜ್ಯಸಭೆಯ ಒಬ್ಬ ಅಭ್ಯರ್ಥಿ ಗರಿಷ್ಠ ಸಂಖ್ಯೆಯ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯುತ್ತಾನೆ. ಆದರೆ ಆ ಸಂಖ್ಯೆಯು ಮೇಲೆ ತಿಳಿಸಿದ ಸೂತ್ರದ ಅಡಿಯಲ್ಲಿ ಗೆಲುವಿಗೆ ಅಗತ್ಯವಿರುವ ಸಂಖ್ಯೆಗಿಂತ ಕಡಿಮೆಯಿರುತ್ತದೆ ಎಂದು ಭಾವಿಸೋಣ. ನಂತರ ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಣಿಸಲಾಗುತ್ತದೆ. ಅಂದರೆ, ಹೆಚ್ಚಿನ ಸಂಖ್ಯೆಯ ಮತಗಳನ್ನು ಪಡೆದ ಅಭ್ಯರ್ಥಿಯು ಹೆಚ್ಚಿನ ಒಟ್ಟು ಮತಗಳನ್ನು ಹೊಂದಿದ್ದರೂ ನಿಗದಿತ ಸೂತ್ರದ ಪ್ರಕಾರ ಬೇಕಿರುವಷ್ಟು ಮತ ಗಳಿಸದಿದ್ದರೆ ಪೂರೈಸದಿದ್ದರೆ, ನಂತರ ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಣಿಸಲಾಗುತ್ತದೆ.

ಮತ್ತಷ್ಟು ಓದಿ: Rajya Sabha Election: ರಾಜ್ಯಸಭಾ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಒಡಿಶಾದಿಂದ ಅಶ್ವಿನಿ ವೈಷ್ಣವ್

ಪಡೆದ ಎರಡನೇ ಪ್ರಾಶಸ್ತ್ಯದ ಮತಗಳು ಗೆಲುವಿಗೆ ಬೇಕಾದ ಮತಗಳ ಸಂಖ್ಯೆಗೆ ಸಮನಾಗಿದ್ದರೆ ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಅವರನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಇದು ಸಂಭವಿಸದಿದ್ದರೆ, ಮೂರನೇ ಪ್ರಾಶಸ್ತ್ಯದ ಮತಗಳನ್ನು ಎಣಿಸಲಾಗುತ್ತದೆ. ಅದರಲ್ಲಿಯೂ ಯಶಸ್ಸು ಸಿಗದಿದ್ದರೆ ನಾಲ್ಕನೇ ಪ್ರಾಶಸ್ತ್ಯದ ಮತಗಳನ್ನು ಎಣಿಸಲಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:45 pm, Wed, 14 February 24

ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ