AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Red Fort: ಪ್ರತಿ ವರ್ಷ ಆಗಸ್ಟ್ 15ರಂದು ಕೆಂಪು ಕೋಟೆಯಲ್ಲೇ ಏಕೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ?

Independence Day Celebrations: ಪ್ರತಿ ವರ್ಷ ಆಗಸ್ಟ್ 15ರಂದು ಭಾರತವು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಈ ವೇಳೆ ನವದೆಹಲಿಯ ಕೆಂಪು ಕೋಟೆ ಈ ಆಚರಣೆಯ ಪ್ರಮುಖ ಆಕರ್ಷಣೆಯ ಕೇಂದ್ರವಾಗಿರುತ್ತದೆ. ಈ ವರ್ಷದ ಆಗಸ್ಟ್ 15 ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸೂಚಿಸುತ್ತದೆ. ಆಗಸ್ಟ್ 15, 1947ರಂದು ಭಾರತವು ಬ್ರಿಟಿಷ್ ಆಡಳಿತದಿಂದ ಮುಕ್ತಿ ಪಡೆದಿದ್ದರಿಂದ ಈ ದಿನಕ್ಕೆ ವಿಶೇಷ ಪ್ರಾಮುಖ್ಯತೆಯಿದೆ. ಹಾಗಾದರೆ, ಸರ್ಕಾರದ ವತಿಯಿಂದ ಪ್ರತಿ ವರ್ಷ ಕೆಂಪು ಕೋಟೆಯಲ್ಲೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಕಾರಣವೇನು ಎಂದು ನಿಮಗೆ ಗೊತ್ತಾ? ಈ ಬಗ್ಗೆ ಕುತೂಹಲಕಾರಿ ಸಂಗತಿ ಇಲ್ಲಿದೆ.

Red Fort: ಪ್ರತಿ ವರ್ಷ ಆಗಸ್ಟ್ 15ರಂದು ಕೆಂಪು ಕೋಟೆಯಲ್ಲೇ ಏಕೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ?
Red Fort Image Credit source: TV9
ಸುಷ್ಮಾ ಚಕ್ರೆ
|

Updated on: Aug 15, 2026 | 7:34 AM

Share

ನವದೆಹಲಿ, ಆಗಸ್ಟ್ 15: ಪ್ರತಿ ವರ್ಷ ಭಾರತದ ಪ್ರಧಾನಮಂತ್ರಿ ದೆಹಲಿಯ ಕೆಂಪು ಕೋಟೆಯಲ್ಲಿ (Red Fort) ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆಗೆ ಚಾಲನೆ ನೀಡುತ್ತಾರೆ. ಈಗಾಗಲೇ ಕೆಂಪುಕೋಟೆ ಸ್ವಾತಂತ್ರ್ಯ ದಿನಾಚರಣೆಯ (Independence Day) ಧ್ವಜಾರೋಹಣಕ್ಕೆ ಸಜ್ಜಾಗಿದೆ. ಈ ಕಾರ್ಯಕ್ರಮವು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಉದಾತ್ತ ಹಿತಕ್ಕಾಗಿ ಧೀರ ಯೋಧರು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗಗಳನ್ನು ಜನರಿಗೆ ನೆನಪಿಸುತ್ತದೆ. ಆದರೆ, ಪ್ರತಿ ವರ್ಷ ಆಗಸ್ಟ್ 15ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ರಾಷ್ಟ್ರೀಯ ಸಮಾರಂಭವು ದೆಹಲಿಯ ಚಾರಿತ್ರಿಕ ಕೆಂಪು ಕೋಟೆ (Red Fort)ಯಲ್ಲಿ ಏಕೆ ನಡೆಯುತ್ತದೆ ಎಂದು ನಿಮಗೆ ಗೊತ್ತಾ?

ಸ್ವಾತಂತ್ರ್ಯ ದಿನಾಚರಣೆಗೆ ಕೆಂಪು ಕೋಟೆಯನ್ನೇ ಏಕೆ ಆಯ್ಕೆ ಮಾಡಲಾಯಿತು?:

ಅದರ ಐತಿಹಾಸಿಕ ಮಹತ್ವದ ಕಾರಣದಿಂದಾಗಿ ಸ್ವಾತಂತ್ರ್ಯ ದಿನಾಚರಣೆಯ ಸ್ಥಳವಾಗಿ ಕೆಂಪು ಕೋಟೆಯನ್ನು ಆಯ್ಕೆ ಮಾಡಲಾಯಿತು. ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರು 1947ರಲ್ಲಿ ಮೊದಲ ಬಾರಿಗೆ ಇಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಅಂದಿನಿಂದ, ಭಾರತದ ಎಲ್ಲಾ ಪ್ರಧಾನ ಮಂತ್ರಿಗಳು ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಿಂದಲೇ ರಾಷ್ಟ್ರಧ್ವಜವನ್ನು ಹಾರಿಸಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಪರಂಪರೆ ಬೆಳೆದುಬಂದಿದೆ. ಕೋಟೆಯ ಬೃಹತ್ ಕೆಂಪು ಮರಳುಕಲ್ಲಿನ ಗೋಡೆಗಳು ಮತ್ತು ಪ್ರಭಾವಶಾಲಿ ವಾಸ್ತುಶಿಲ್ಪವು ಈ ಸಂದರ್ಭದ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತವೆ. ಈ ಐತಿಹಾಸಿಕ ರಚನೆಯು ಆಚರಣೆಗೆ ಒಂದು ಭವ್ಯ ಹಿನ್ನೆಲೆಯನ್ನು ಒದಗಿಸುತ್ತದೆ. ಈ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು, ಇತರ ಗಣ್ಯರು ಮತ್ತು ದೇಶಾದ್ಯಂತ ಆಗಮಿಸುವ ನಾಗರಿಕರು ಭಾಗವಹಿಸುತ್ತಾರೆ.

ನೆಹರೂ ಅವರ ಮೊದಲ ಧ್ವಜಾರೋಹಣ:

ಆಗಸ್ಟ್ 15, 1947ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ, ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರು ಆಗಸ್ಟ್ 16, 1947ರಂದು ಕೆಂಪು ಕೋಟೆಯ ‘ಲಹೋರಿ ಗೇಟ್’ ಮೇಲೆ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿ, ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಅಂದಿನಿಂದ ಈ ಸಂಪ್ರದಾಯವು ಪ್ರತಿ ವರ್ಷ ಮುಂದುವರಿದುಕೊಂಡು ಬಂದಿದೆ.

ಇದನ್ನೂ ಓದಿ: President Speech: ’25 ಕೋಟಿಗೂ ಹೆಚ್ಚು ಜನ ಬಡತನದಿಂದ ಹೊರಬಂದಿದ್ದಾರೆ’; ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ಬ್ರಿಟಿಷ್ ಆಡಳಿತ ಮತ್ತು ಭಾರತೀಯರ ಪ್ರತಿರೋಧ:

1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮವಾದ 1857ರ ಸಿಪಾಯಿ ದಂಗೆಯ ಸಮಯದಲ್ಲಿ ಭಾರತೀಯ ದಂಗೆಕೋರರು ಮೊಘಲ್ ಚಕ್ರವರ್ತಿ ಬಹಾದ್ದೂರ್ ಶಾ ಜಾಫರ್‌ನನ್ನು ತಮ್ಮ ನಾಯಕನೆಂದು ಘೋಷಿಸಿ ಕೆಂಪು ಕೋಟೆಯನ್ನೇ ತಮ್ಮ ಹೋರಾಟದ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು.

ಐಎನ್‌ಎ ವಿಚಾರಣೆಗಳು:

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ‘ಆಜಾದ್ ಹಿಂದ್ ಫೌಜ್’ (INA) ಯೋಧರಾದ ಕರ್ನಲ್ ಪ್ರೇಮ್ ಸೆಹಗಲ್, ಕರ್ನಲ್ ಗುರುಬಕ್ಷ್ ಸಿಂಗ್ ಧಿಲ್ಲೋನ್ ಮತ್ತು ಮೇಜರ್ ಶಹನವಾಜ್ ಖಾನ್ ಅವರ ಐತಿಹಾಸಿಕ ವಿಚಾರಣೆ (ವಿಚಾರಣಾ ನ್ಯಾಯಾಲಯ) ಕೆಂಪು ಕೋಟೆಯಲ್ಲೇ ನಡೆಯಿತು.

“ದೆಹಲಿ ಚಲೋ” ಕರೆ:

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ನೀಡಿದ್ದ “ಚಲೋ ದೆಹಲಿ” ಕರೆ ಮತ್ತು ಕೆಂಪು ಕೋಟೆಯ ಮೇಲಿನ ಐಎನ್‌ಎ ವಿಚಾರಣೆಯು ದೇಶಾದ್ಯಂತ ಅಪಾರ ದೇಶಭಕ್ತಿಯ ಅಲೆಯನ್ನು ಎಬ್ಬಿಸಿತು. ಇದರಿಂದಾಗಿ ಕೆಂಪು ಕೋಟೆಯು ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧದ ಹೋರಾಟದ ಸಂಕೇತವಾಗಿ ಬದಲಾಯಿತು.

ಸಾರ್ವಭೌಮತ್ವದ ಪ್ರದರ್ಶನ:

ಕೆಂಪು ಕೋಟೆಯ ಮೇಲೆ ಬ್ರಿಟಿಷರ ‘ಯೂನಿಯನ್ ಜಾಕ್’ ಧ್ವಜವನ್ನು ಇಳಿಸಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವುದು ಬ್ರಿಟಿಷ್ ಆಡಳಿತದ ಅಂತ್ಯ ಮತ್ತು ಸ್ವತಂತ್ರ, ಸಾರ್ವಭೌಮ ಭಾರತದ ಉದಯವನ್ನು ಸಾರುವ ಸಂಕೇತವಾಗಿತ್ತು.

ಆಗಸ್ಟ್ 15ರಂದು ದೇಶದ ಪ್ರಧಾನ ಮಂತ್ರಿಯವರು ಕೆಂಪು ಕೋಟೆಯ ಬುರುಜಿನಿಂದ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುವುದು ಮತ್ತು ಸರ್ಕಾರದ ಸಾಧನೆಗಳು ಹಾಗೂ ಮುಂದಿನ ದೃಷ್ಟಿಕೋನವನ್ನು ದೇಶದ ಜನರೊಂದಿಗೆ ಹಂಚಿಕೊಳ್ಳುವುದು ಒಂದು ಪರಂಪರೆಯಾಗಿದೆ.

ಇದನ್ನೂ ಓದಿ: Independence Day: ನಾಳೆ ಬೆಳಗ್ಗೆ ಕೆಂಪು ಕೋಟೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ನೇತೃತ್ವ ವಹಿಸಲಿದ್ದಾರೆ ಪ್ರಧಾನಿ ಮೋದಿ

ಕೆಂಪು ಕೋಟೆಯಲ್ಲಿ ನಡೆಯುವ ಧ್ವಜಾರೋಹಣ ಸಮಾರಂಭ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗವನ್ನು ಪ್ರತಿಯೊಬ್ಬರಿಗೂ ನೆನಪಿಸುತ್ತವೆ.

ಕೆಂಪು ಕೋಟೆಯ ಇತಿಹಾಸ:

ಕೆಂಪು ಕೋಟೆಯ ಇತಿಹಾಸವು ಹಲವು ಶತಮಾನಗಳಷ್ಟು ಹಳೆಯದಾಗಿದೆ. ತಾಜ್ ಮಹಲ್ ನಿರ್ಮಿಸಿ ಪ್ರಸಿದ್ಧರಾಗಿದ್ದ ಮೊಘಲ್ ಚಕ್ರವರ್ತಿ ಶಹಜಹಾನ್ ಈ ಕೋಟೆಯನ್ನು ನಿರ್ಮಿಸಿದರು. 17ನೇ ಶತಮಾನದಲ್ಲಿ ಶಹಜಹಾನ್ ಶಕ್ತಿಯುತ ಮತ್ತು ಭವ್ಯವಾದ ಕೋಟೆಯನ್ನು ನಿರ್ಮಿಸಲು ಬಯಸಿದಾಗ ಇದನ್ನು ಕಟ್ಟಲಾಯಿತು. ಅದರ ಗೋಡೆಗಳಿಗೆ ಕೆಂಪು ಕಲ್ಲುಗಳನ್ನು ಬಳಸಲು ನಿರ್ಧರಿಸಿದರು. ಆದ್ದರಿಂದ ಇದನ್ನು ಕೆಂಪು ಕೋಟೆ ಎಂದು ಕರೆಯಲಾಯಿತು. ಇದರ ದೈತ್ಯಾಕಾರದ ಗೋಡೆಗಳನ್ನು ಕೇವಲ ರಕ್ಷಣೆಗಾಗಿ ಮಾತ್ರವಲ್ಲದೆ, ರಾಜನ ಅಧಿಕಾರ ಮತ್ತು ಶಕ್ತಿಯನ್ನು ಪ್ರದರ್ಶಿಸಲು ನಿರ್ಮಿಸಲಾಗಿತ್ತು.

ಕೆಂಪು ಕೋಟೆಯು ಮೊಘಲ್ ಚಕ್ರವರ್ತಿಗಳು ಮತ್ತು ಅವರ ಕುಟುಂಬಗಳಿಗೆ ರಾಜಮನೆತನದ ನಿವಾಸವಾಗಿಯೂ ಸೇವೆಯನ್ನು ಒದಗಿಸಿತ್ತು. ಕೋಟೆಯ ಸಂಕೀರ್ಣದೊಳಗೆ ಸುಂದರವಾದ ಉದ್ಯಾನವನಗಳನ್ನು ನಿರ್ಮಿಸಲಾಗಿತ್ತು, ಅಲ್ಲಿ ರಾಜಕುಟುಂಬದವರು ವಿಶ್ರಾಂತಿ ಪಡೆಯಲು ಮತ್ತು ಮನರಂಜನೆ ಹೊಂದಲು ಅವಕಾಶವಿತ್ತು. ಜೊತೆಗೆ, ಕೋಟೆಯು ಭವ್ಯ ಸಮಾರಂಭಗಳು ಮತ್ತು ಪ್ರಮುಖ ಸಭೆಗಳಿಗೆ ವೇದಿಕೆಯಾಗಿತ್ತು.

ನಂತರ, ಭಾರತವು ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡಿದಾಗ, ಕೆಂಪು ಕೋಟೆಯು ಮತ್ತಷ್ಟು ಪ್ರಾಮುಖ್ಯತೆಯನ್ನು ಪಡೆಯಿತು. ಬಳಿಕ ಸ್ವಾತಂತ್ರ್ಯ ದಿನಾಚರಣೆಯಂತಹ ಪ್ರಮುಖ ಸಂದರ್ಭಗಳನ್ನು ಆಚರಿಸಲು ಇದು ಅತ್ಯಂತ ವಿಶೇಷವಾದ ಸ್ಥಳವಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಇಂದು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಶ್ರಾವಣ ಶನಿವಾರ
ಇಂದು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಶ್ರಾವಣ ಶನಿವಾರ
ಚಿತ್ರದುರ್ಗದ ಮಂಕಿಮ್ಯಾನ್ ಜ್ಯೋತಿರಾಜ್​​ಗೆ ಮದುವೆ ಫಿಕ್ಸ್: ಹುಡುಗಿ ಯಾರು?
ಚಿತ್ರದುರ್ಗದ ಮಂಕಿಮ್ಯಾನ್ ಜ್ಯೋತಿರಾಜ್​​ಗೆ ಮದುವೆ ಫಿಕ್ಸ್: ಹುಡುಗಿ ಯಾರು?
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಪೊಲೀಸರ ವಿರುದ್ಧದ ತನಿಖೆ ಕ್ಲೋಸ್
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಪೊಲೀಸರ ವಿರುದ್ಧದ ತನಿಖೆ ಕ್ಲೋಸ್
'ಜಮ್ಮು ಕಾಶ್ಮೀರ, ಲಡಾಖ್​ ಭಾರತದ ಅವಿಭಾಜ್ಯ ಅಂಗ'; ವಿದೇಶಾಂಗ ಸಚಿವಾಲಯ
'ಜಮ್ಮು ಕಾಶ್ಮೀರ, ಲಡಾಖ್​ ಭಾರತದ ಅವಿಭಾಜ್ಯ ಅಂಗ'; ವಿದೇಶಾಂಗ ಸಚಿವಾಲಯ
ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಸೆಟ್ ಹಾಕಲು ಅಂದಾಜು 75 ಕೋಟಿ ರೂಪಾಯಿ ಬಜೆಟ್
ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಸೆಟ್ ಹಾಕಲು ಅಂದಾಜು 75 ಕೋಟಿ ರೂಪಾಯಿ ಬಜೆಟ್
ಮನೆ ಮುಂದೆ ವಾಹನ ಪಾರ್ಕಿಂಗ್‌ಗೆ ಶುಲ್ಕ: ಜಿಬಿಎ ನಿಯಮಕ್ಕೆ ಸಿಟಿ ಮಂದಿ ಕಿಡಿ
ಮನೆ ಮುಂದೆ ವಾಹನ ಪಾರ್ಕಿಂಗ್‌ಗೆ ಶುಲ್ಕ: ಜಿಬಿಎ ನಿಯಮಕ್ಕೆ ಸಿಟಿ ಮಂದಿ ಕಿಡಿ
ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್‌; ಹಿಂಬಾಕಿ ಬಿಡುಗಡೆ
ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್‌; ಹಿಂಬಾಕಿ ಬಿಡುಗಡೆ
ಯತೀಂದ್ರ ಸಿದ್ದರಾಮಯ್ಯನವರನ್ನ ವಿಶೇಷವಾಗಿ ಪರಿಚಯಿಸಿದ ಡಿಕೆಶಿ
ಯತೀಂದ್ರ ಸಿದ್ದರಾಮಯ್ಯನವರನ್ನ ವಿಶೇಷವಾಗಿ ಪರಿಚಯಿಸಿದ ಡಿಕೆಶಿ
ಜೈಲಾಧಿಕಾರಿಗಳಿಗೆ ಅಲೋಕ್ ಕುಮಾರ್ ಕ್ಲಾಸ್!
ಜೈಲಾಧಿಕಾರಿಗಳಿಗೆ ಅಲೋಕ್ ಕುಮಾರ್ ಕ್ಲಾಸ್!
RSS ಚಟುವಟಿಕೆಗಳಿಗೆ ಬ್ರೇಕ್ ಆರೋಪ: ವಿಧೇಯಕದ ಅಂಶ ಬಿಚ್ಚಿಟ್ಟ ಗೃಹ ಸಚಿವ
RSS ಚಟುವಟಿಕೆಗಳಿಗೆ ಬ್ರೇಕ್ ಆರೋಪ: ವಿಧೇಯಕದ ಅಂಶ ಬಿಚ್ಚಿಟ್ಟ ಗೃಹ ಸಚಿವ