AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: RCB ಟಾಸ್ ಗೆಲ್ಲೋದು ಅನಿವಾರ್ಯ: ಯಾಕೆ ಗೊತ್ತಾ?

IPL 2024: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು (ಮೇ 18) ನಡೆಯಲಿರುವ ಪಂದ್ಯದಲ್ಲಿ ಆರ್​ಸಿಬಿ ಪಾಲಿಗೆ ಟಾಸ್ ಅದೃಷ್ಟ ಕೈ ಹಿಡಿಯಬೇಕು. ಏಕೆಂದರೆ ಮಳೆ ಬರುವ ಸಾಧ್ಯತೆಯಿರುವುದರಿಂದ ಈ ಪಂದ್ಯದ ಫಲಿತಾಂಶ ನಿರ್ಧರಿಸಲು ಡಕ್​ವರ್ತ್ ಲೂಯಿಸ್ ನಿಯಮವನ್ನು ಅನ್ವಯಿಸಬಹುದು. ಇದರಿಂದ ಆರ್​ಸಿಬಿ ತಂಡದ ಲೆಕ್ಕಾಚಾರಗಳು ಕೂಡ ಬದಲಾಗಬಹುದು.

ಝಾಹಿರ್ ಯೂಸುಫ್
|

Updated on:May 18, 2024 | 8:52 AM

Share
ಐಪಿಎಲ್​ನ (IPL 2024) 68ನೇ ಪಂದ್ಯದಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ಮುಖಾಮುಖಿಯಾಗಲಿದೆ. ಪ್ಲೇಆಫ್ ಪ್ರವೇಶಿಸಲು ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ ಟಾಸ್ ಕೂಡ ಪ್ರಮುಖ ಪಾತ್ರವಹಿಸಲಿದೆ. ಏಕೆಂದರೆ ಇಂದಿನ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಅತ್ತ ಆರ್​ಸಿಬಿ ತಂಡಕ್ಕೆ ಗೆಲುವಿನೊಂದಿಗೆ ನೆಟ್ ರನ್ ರೇಟ್ ಕೂಡ ಹೆಚ್ಚಿಸಿಕೊಳ್ಳಬೇಕಿದೆ.

ಐಪಿಎಲ್​ನ (IPL 2024) 68ನೇ ಪಂದ್ಯದಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ಮುಖಾಮುಖಿಯಾಗಲಿದೆ. ಪ್ಲೇಆಫ್ ಪ್ರವೇಶಿಸಲು ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ ಟಾಸ್ ಕೂಡ ಪ್ರಮುಖ ಪಾತ್ರವಹಿಸಲಿದೆ. ಏಕೆಂದರೆ ಇಂದಿನ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಅತ್ತ ಆರ್​ಸಿಬಿ ತಂಡಕ್ಕೆ ಗೆಲುವಿನೊಂದಿಗೆ ನೆಟ್ ರನ್ ರೇಟ್ ಕೂಡ ಹೆಚ್ಚಿಸಿಕೊಳ್ಳಬೇಕಿದೆ.

1 / 8
ಅಂದರೆ ಈ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಆರ್​ಸಿಬಿ ಕನಿಷ್ಠ 18 ರನ್​ಗಳ ಅಂತರದಿಂದ ಗೆಲ್ಲಬೇಕು. ಒಂದು ವೇಳೆ ಆರ್​ಸಿಬಿ ದ್ವಿತೀಯ ಇನಿಂಗ್ಸ್ ಆಡಿದರೆ ಸಿಎಸ್​ಕೆ ನೀಡುವ ಗುರಿಯನ್ನು 18.1 ಓವರ್​ಗಳಲ್ಲಿ ಚೇಸ್ ಮಾಡಬೇಕು. ಹೀಗಾದಲ್ಲಿ ಮಾತ್ರ ಸಿಎಸ್​ಕೆ ತಂಡವನ್ನು ನೆಟ್ ರನ್ ರೇಟ್​ನಲ್ಲಿ ಹಿಂದಿಕ್ಕಿ ಆರ್​ಸಿಬಿಗೆ ಪ್ಲೇಆಫ್​ಗೆ ಎಂಟ್ರಿ ಕೊಡಬಹುದು.

ಅಂದರೆ ಈ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಆರ್​ಸಿಬಿ ಕನಿಷ್ಠ 18 ರನ್​ಗಳ ಅಂತರದಿಂದ ಗೆಲ್ಲಬೇಕು. ಒಂದು ವೇಳೆ ಆರ್​ಸಿಬಿ ದ್ವಿತೀಯ ಇನಿಂಗ್ಸ್ ಆಡಿದರೆ ಸಿಎಸ್​ಕೆ ನೀಡುವ ಗುರಿಯನ್ನು 18.1 ಓವರ್​ಗಳಲ್ಲಿ ಚೇಸ್ ಮಾಡಬೇಕು. ಹೀಗಾದಲ್ಲಿ ಮಾತ್ರ ಸಿಎಸ್​ಕೆ ತಂಡವನ್ನು ನೆಟ್ ರನ್ ರೇಟ್​ನಲ್ಲಿ ಹಿಂದಿಕ್ಕಿ ಆರ್​ಸಿಬಿಗೆ ಪ್ಲೇಆಫ್​ಗೆ ಎಂಟ್ರಿ ಕೊಡಬಹುದು.

2 / 8
ಇಲ್ಲಿ ಆರ್​ಸಿಬಿ ವಿಶೇಷ ತಂತ್ರ ರೂಪಿಸಲು ಟಾಸ್ ಗೆಲುವು ಕೂಡ ಅನಿವಾರ್ಯ. ಏಕೆಂದರೆ ಈ ಪಂದ್ಯದ ವೇಳೆ ಮಳೆ ಬಂದರೆ ಓವರ್​ಗಳ ಕಡಿತವಾಗುತ್ತದೆ. ಇದರಿಂದ ಆರ್​ಸಿಬಿ ತಂಡದ ಲೆಕ್ಕಾಚಾರಗಳು ಕೂಡ ತಲೆ ಕೆಳಗಾಗಬಹುದು. ಅಂದರೆ ಇಲ್ಲಿ ಮಳೆ ಬರುವುದಿಲ್ಲ ಎಂದು ಕಂಡು ಬಂದರೆ ಆರ್​ಸಿಬಿ ತಂಡ ಬೌಲಿಂಗ್ ಆಯ್ದುಕೊಳ್ಳುವುದು ಉತ್ತಮ.

ಇಲ್ಲಿ ಆರ್​ಸಿಬಿ ವಿಶೇಷ ತಂತ್ರ ರೂಪಿಸಲು ಟಾಸ್ ಗೆಲುವು ಕೂಡ ಅನಿವಾರ್ಯ. ಏಕೆಂದರೆ ಈ ಪಂದ್ಯದ ವೇಳೆ ಮಳೆ ಬಂದರೆ ಓವರ್​ಗಳ ಕಡಿತವಾಗುತ್ತದೆ. ಇದರಿಂದ ಆರ್​ಸಿಬಿ ತಂಡದ ಲೆಕ್ಕಾಚಾರಗಳು ಕೂಡ ತಲೆ ಕೆಳಗಾಗಬಹುದು. ಅಂದರೆ ಇಲ್ಲಿ ಮಳೆ ಬರುವುದಿಲ್ಲ ಎಂದು ಕಂಡು ಬಂದರೆ ಆರ್​ಸಿಬಿ ತಂಡ ಬೌಲಿಂಗ್ ಆಯ್ದುಕೊಳ್ಳುವುದು ಉತ್ತಮ.

3 / 8
ಏಕೆಂದರೆ ಚಿನ್ನಸ್ವಾಮಿ ಸ್ಟೇಡಿಯಂ ಪಿಚ್​ ಚೇಸಿಂಗ್ ಮಾಡಲು ಸಹಕಾರಿ. ಅದೇ ಮಳೆಯ ಬರುವ ಸಾಧ್ಯತೆಗಳಿದ್ದರೆ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಬೇಕಾಗುತ್ತದೆ. ಏಕೆಂದರೆ ಆರ್​ಸಿಬಿ ಮೊದಲ ಇನಿಂಗ್ಸ್​ನಲ್ಲಿ 20 ಓವರ್​ಗಳನ್ನು ಆಡುವ ಅವಕಾಶ ಪಡೆಯಬಹುದು. ಈ ಮೂಲಕ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗುತ್ತದೆ.

ಏಕೆಂದರೆ ಚಿನ್ನಸ್ವಾಮಿ ಸ್ಟೇಡಿಯಂ ಪಿಚ್​ ಚೇಸಿಂಗ್ ಮಾಡಲು ಸಹಕಾರಿ. ಅದೇ ಮಳೆಯ ಬರುವ ಸಾಧ್ಯತೆಗಳಿದ್ದರೆ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಬೇಕಾಗುತ್ತದೆ. ಏಕೆಂದರೆ ಆರ್​ಸಿಬಿ ಮೊದಲ ಇನಿಂಗ್ಸ್​ನಲ್ಲಿ 20 ಓವರ್​ಗಳನ್ನು ಆಡುವ ಅವಕಾಶ ಪಡೆಯಬಹುದು. ಈ ಮೂಲಕ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗುತ್ತದೆ.

4 / 8
ಈ ಮೊತ್ತವನ್ನು ಬೆನ್ನತ್ತುವ ವೇಳೆ ಮಳೆ ಬಂದರೂ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಸಿಎಸ್​ಕೆ ತಂಡಕ್ಕೆ ಕಠಿಣ ಗುರಿ ಸಿಗಲಿದೆ. ಇದೇ ವೇಳೆ ಆರ್​ಸಿಬಿ 18 ರನ್​ಗಳ ಅಂತರದಿಂದ ಜಯ ಸಾಧಿಸಿ ಪ್ಲೇಆಫ್​ಗೆ ಎಂಟ್ರಿ ಕೊಡಬಹುದು.

ಈ ಮೊತ್ತವನ್ನು ಬೆನ್ನತ್ತುವ ವೇಳೆ ಮಳೆ ಬಂದರೂ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಸಿಎಸ್​ಕೆ ತಂಡಕ್ಕೆ ಕಠಿಣ ಗುರಿ ಸಿಗಲಿದೆ. ಇದೇ ವೇಳೆ ಆರ್​ಸಿಬಿ 18 ರನ್​ಗಳ ಅಂತರದಿಂದ ಜಯ ಸಾಧಿಸಿ ಪ್ಲೇಆಫ್​ಗೆ ಎಂಟ್ರಿ ಕೊಡಬಹುದು.

5 / 8
ಒಂದು ವೇಳೆ ಆರ್​ಸಿಬಿ ಚೇಸಿಂಗ್ ಮಾಡುವುದಾದರೆ ಲೆಕ್ಕಾಚಾರಗಳು ಬದಲಾಗಲಿದೆ. ಏಕೆಂದರೆ, ಸಿಎಸ್​ಕೆ ತಂಡವು ಮೊದಲು ಬ್ಯಾಟ್ ಮಾಡಿ 201 ರನ್​ ಕಲೆಹಾಕಿದರೆ ಆರ್​ಸಿಬಿ ತಂಡವು ಇದನ್ನು 18.1 ಓವರ್​ಗಳಲ್ಲಿ ಚೇಸ್ ಮಾಡಬೇಕು. ಒಂದು ವೇಳೆ ಮಳೆ ಬಂದು ಓವರ್​ಗಳ ಕಡಿತವಾದರೂ ಆರ್​ಸಿಬಿ ತಂಡದ ರನ್ ಗುರಿಯಲ್ಲಿ ಅಂತಹ ದೊಡ್ಡ ವ್ಯತ್ಯಾಸವಾಗುವುದಿಲ್ಲ.

ಒಂದು ವೇಳೆ ಆರ್​ಸಿಬಿ ಚೇಸಿಂಗ್ ಮಾಡುವುದಾದರೆ ಲೆಕ್ಕಾಚಾರಗಳು ಬದಲಾಗಲಿದೆ. ಏಕೆಂದರೆ, ಸಿಎಸ್​ಕೆ ತಂಡವು ಮೊದಲು ಬ್ಯಾಟ್ ಮಾಡಿ 201 ರನ್​ ಕಲೆಹಾಕಿದರೆ ಆರ್​ಸಿಬಿ ತಂಡವು ಇದನ್ನು 18.1 ಓವರ್​ಗಳಲ್ಲಿ ಚೇಸ್ ಮಾಡಬೇಕು. ಒಂದು ವೇಳೆ ಮಳೆ ಬಂದು ಓವರ್​ಗಳ ಕಡಿತವಾದರೂ ಆರ್​ಸಿಬಿ ತಂಡದ ರನ್ ಗುರಿಯಲ್ಲಿ ಅಂತಹ ದೊಡ್ಡ ವ್ಯತ್ಯಾಸವಾಗುವುದಿಲ್ಲ.

6 / 8
ಸಿಎಸ್​ಕೆ ತಂಡ 201 ರನ್​ಗಳ ಟಾರ್ಗೆಟ್​ ನೀಡಿದ ಬಳಿಕ ಮಳೆ ಬಂದು 19 ಓವರ್​ಗಳ ಪಂದ್ಯ ನಡೆದರೆ ಆರ್​ಸಿಬಿ ಈ ಗುರಿಯನ್ನು 17.1 ಓವರ್​ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ. ಇನ್ನು 15 ಓವರ್​ಗಳ ಪಂದ್ಯ ನಡೆದರೆ ಆರ್​ಸಿಬಿ 13.1 ಓವರ್​ಗಳಲ್ಲಿ ಸಿಎಸ್​ಕೆ ತಂಡದ ಗುರಿಯನ್ನು ಬೆನ್ನತ್ತಬೇಕಾಗುತ್ತದೆ. ಅಂದರೆ ಇಲ್ಲಿ ಓವರ್​ಗಳ ಕಡಿತವಾದರೂ ಆರ್​ಸಿಬಿ 11 ಎಸೆತಗಳು ಬಾಕಿಯಿರುವಂತೆಯೇ ಗುರಿ ತಲುಪಬೇಕಾಗುತ್ತದೆ.

ಸಿಎಸ್​ಕೆ ತಂಡ 201 ರನ್​ಗಳ ಟಾರ್ಗೆಟ್​ ನೀಡಿದ ಬಳಿಕ ಮಳೆ ಬಂದು 19 ಓವರ್​ಗಳ ಪಂದ್ಯ ನಡೆದರೆ ಆರ್​ಸಿಬಿ ಈ ಗುರಿಯನ್ನು 17.1 ಓವರ್​ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ. ಇನ್ನು 15 ಓವರ್​ಗಳ ಪಂದ್ಯ ನಡೆದರೆ ಆರ್​ಸಿಬಿ 13.1 ಓವರ್​ಗಳಲ್ಲಿ ಸಿಎಸ್​ಕೆ ತಂಡದ ಗುರಿಯನ್ನು ಬೆನ್ನತ್ತಬೇಕಾಗುತ್ತದೆ. ಅಂದರೆ ಇಲ್ಲಿ ಓವರ್​ಗಳ ಕಡಿತವಾದರೂ ಆರ್​ಸಿಬಿ 11 ಎಸೆತಗಳು ಬಾಕಿಯಿರುವಂತೆಯೇ ಗುರಿ ತಲುಪಬೇಕಾಗುತ್ತದೆ.

7 / 8
ಹೀಗಾಗಿ ಈ ಪಂದ್ಯದಲ್ಲಿ ಆರ್​ಸಿಬಿ ಟಾಸ್ ಗೆಲ್ಲುವುದು ಕೂಡ ಅನಿವಾರ್ಯ. ಈ ಮೂಲಕ ಮಳೆಯ ಬರುವ ಸಾಧ್ಯತೆಗಳಿದ್ದರೆ ಬ್ಯಾಟಿಂಗ್ ಆಯ್ದುಕೊಳ್ಳಬೇಕು. ಅಲ್ಲದೆ ಬೃಹತ್ ಮೊತ್ತ ಪೇರಿಸಿ ಸಿಎಸ್​ಕೆ ತಂಡವನ್ನು ಕನಿಷ್ಠ 18 ರನ್​ಗಳಿಂದ ಸೋಲಿಸಿ ಪ್ಲೇಆಫ್​ಗೆ ಅರ್ಹತೆ ಗಿಟ್ಟಿಸಿಕೊಳ್ಳಬಹುದು. ಇನ್ನು ಮಳೆ ಬರುವ ಸಾಧ್ಯತೆಗಳಿಲ್ಲದಿದ್ದರೆ, ಚೇಸಿಂಗ್ ಮಾಡುವುದು ಉತ್ತಮ. ಈ ಮೂಲಕ ಸಿಎಸ್​ಕೆ ನೀಡುವ ಗುರಿಯನ್ನು 11 ಎಸೆತಗಳು ಬಾಕಿ ಇರುವಂತೆ ಚೇಸ್ ಮಾಡಿ ನೆಟ್ ರನ್ ರೇಟ್ ಮೂಲಕ ಪ್ಲೇಆಫ್​ಗೆ ಪ್ರವೇಶಿಸಬಹುದು.

ಹೀಗಾಗಿ ಈ ಪಂದ್ಯದಲ್ಲಿ ಆರ್​ಸಿಬಿ ಟಾಸ್ ಗೆಲ್ಲುವುದು ಕೂಡ ಅನಿವಾರ್ಯ. ಈ ಮೂಲಕ ಮಳೆಯ ಬರುವ ಸಾಧ್ಯತೆಗಳಿದ್ದರೆ ಬ್ಯಾಟಿಂಗ್ ಆಯ್ದುಕೊಳ್ಳಬೇಕು. ಅಲ್ಲದೆ ಬೃಹತ್ ಮೊತ್ತ ಪೇರಿಸಿ ಸಿಎಸ್​ಕೆ ತಂಡವನ್ನು ಕನಿಷ್ಠ 18 ರನ್​ಗಳಿಂದ ಸೋಲಿಸಿ ಪ್ಲೇಆಫ್​ಗೆ ಅರ್ಹತೆ ಗಿಟ್ಟಿಸಿಕೊಳ್ಳಬಹುದು. ಇನ್ನು ಮಳೆ ಬರುವ ಸಾಧ್ಯತೆಗಳಿಲ್ಲದಿದ್ದರೆ, ಚೇಸಿಂಗ್ ಮಾಡುವುದು ಉತ್ತಮ. ಈ ಮೂಲಕ ಸಿಎಸ್​ಕೆ ನೀಡುವ ಗುರಿಯನ್ನು 11 ಎಸೆತಗಳು ಬಾಕಿ ಇರುವಂತೆ ಚೇಸ್ ಮಾಡಿ ನೆಟ್ ರನ್ ರೇಟ್ ಮೂಲಕ ಪ್ಲೇಆಫ್​ಗೆ ಪ್ರವೇಶಿಸಬಹುದು.

8 / 8

Published On - 8:51 am, Sat, 18 May 24

ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ