- Kannada News Photo gallery Cricket photos IPL 2026: Jasprit Bumrah Captains MI; Mumbai Indians Sets Unique Captaincy Record!
PBKS vs MI: ನಾಯಕರ ಬದಲಾವಣೆಯಲ್ಲೂ ದಾಖಲೆ ಬರೆದ ಮುಂಬೈ ಇಂಡಿಯನ್ಸ್
Jasprit Bumrah's MI Captaincy Debut: ಐಪಿಎಲ್ 2026 ರ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡು ಇತಿಹಾಸ ಸೃಷ್ಟಿಸಿದರು. ಈ ಆವೃತ್ತಿಯಲ್ಲಿ ಮುಂಬೈನ ಮೂರನೇ ನಾಯಕನಾಗಿ, ಬುಮ್ರಾ ತಮ್ಮ ಮೊದಲ ನಾಯಕತ್ವದ ಅವಕಾಶವನ್ನು ಪಡೆದರು. ಮುಂಬೈ ಇಂಡಿಯನ್ಸ್ ಒಂದೇ ಆವೃತ್ತಿಯಲ್ಲಿ ಮೂವರು ನಾಯಕರನ್ನು ಬದಲಿಸಿದ ಏಕೈಕ ತಂಡ ಎಂಬ ದಾಖಲೆ ನಿರ್ಮಿಸಿದೆ. ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ಈ ದಾಖಲೆ ಮಾಡಿದ ಮೊದಲ ತಂಡ ಮುಂಬೈ.
Updated on: May 14, 2026 | 9:56 PM

ಐಪಿಎಲ್ 2026 ರ 58ನೇ ಪಂದ್ಯ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವಹಿಸಿಕೊಂಡಿದ್ದರು. 2013 ರ ಐಪಿಎಲ್ನಿಂದಲೂ ಮುಂಬೈ ತಂಡದ ಪರ ಆಡುತ್ತಿರುವ ಬುಮ್ರಾಗೆ ಇದೇ ಮೊದಲ ಬಾರಿಗೆ ಮುಂಬೈ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿತ್ತು.

ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೂರನೇ ನಾಯಕ ಜಸ್ಪ್ರೀತ್ ಬುಮ್ರಾ. ವಾಸ್ತವವಾಗಿ ಮುಂಬೈ ಇಂಡಿಯನ್ಸ್ ತಂಡ ಹೆಚ್ಚಾಗಿ ತಂಡದ ನಾಯಕರನ್ನು ಬದಲಿಸುವುದಿಲ್ಲ. ಅದರಲ್ಲೂ ಆವೃತ್ತಿಯ ನಡುವೆ ಮುಂಬೈ ತಂಡದಲ್ಲಿ ನಾಯಕರು ಬದಲಾಗುವುದು ತೀರ ವಿರಳ. ಆದರೆ ಈ ಆವೃತ್ತಿಯಲ್ಲಿ ಮುಂಬೈ ಮೂವರು ನಾಯಕರನ್ನು ಬದಲಿಸುವುದರೊಂದಿಗೆ ವಿಶಿಷ್ಟ ದಾಖಲೆ ಸೃಷ್ಟಿಯಾಗಿದೆ.

ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಎರಡು ಆವೃತ್ತಿಗಳಲ್ಲಿ 3 ನಾಯಕರನ್ನು ಬದಲಾಯಿಸಿದ ಏಕೈಕ ತಂಡ ಎಂಬ ದಾಖಲೆ ಇದೀಗ ಮುಂಬೈ ಇಂಡಿಯನ್ಸ್ ಪಾಲಾಗಿದೆ. ಇದಕ್ಕೂ ಮೊದಲು, ಮುಂಬೈ ಇಂಡಿಯನ್ಸ್ 2008 ರಲ್ಲಿ ಮೂವರು ನಾಯಕರನ್ನು ಬದಲಿಸಿತ್ತು. ಈ ಆವೃತ್ತಿಯಲ್ಲಿ ಹರ್ಭಜನ್ ಸಿಂಗ್, ಶಾನ್ ಪೊಲಾಕ್ ಮತ್ತು ಸಚಿನ್ ತೆಂಡೂಲ್ಕರ್ ತಂಡದ ನಾಯಕರಾಗಿದ್ದರು.

ಮುಂಬೈ ಹೊರತುಪಡಿಸಿ ಇತರ ತಂಡಗಳು ಕೂಡ ಒಂದೇ ಆವೃತ್ತಿಯಲ್ಲಿ ಮೂವರು ನಾಯಕರನ್ನು ಬದಲಿಸಿವೆ. 2013 ರಲ್ಲಿ ಪುಣೆ ವಾರಿಯರ್ಸ್ ಮೂವರು ನಾಯಕರನ್ನು ಬದಲಾಯಿಸಿತ್ತು. ಆಗ ಏಂಜೆಲೊ ಮ್ಯಾಥ್ಯೂಸ್, ರಾಸ್ ಟೇಲರ್ ಮತ್ತು ಆರನ್ ಫಿಂಚ್ ನಾಯಕತ್ವದ ಪಾತ್ರವನ್ನು ನಿರ್ವಹಿಸಿದ್ದರು.

ಐಪಿಎಲ್ 2021 ರಲ್ಲಿ, ಸನ್ರೈಸರ್ಸ್ ಹೈದರಾಬಾದ್ ಒಂದೇ ಸೀಸನ್ನಲ್ಲಿ ಮೂವರು ನಾಯಕರನ್ನು ಬದಲಾಯಿಸಿತ್ತು. ಡೇವಿಡ್ ವಾರ್ನರ್ ನಂತರ, ಕೇನ್ ವಿಲಿಯಮ್ಸನ್ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಲಾಗಿತ್ತು. ಅದರ ನಂತರ, ಮನೀಶ್ ಪಾಂಡೆ ತಂಡವನ್ನು ಮುನ್ನಡೆಸಿದ್ದರು.

2024 ರಲ್ಲಿ ಪಂಜಾಬ್ ಕಿಂಗ್ಸ್ ತಂಡವು ಮೂವರು ನಾಯಕರನ್ನು ಬದಲಿಸಿತ್ತು. ಶಿಖರ್ ಧವನ್ ನಂತರ, ಸ್ಯಾಮ್ ಕರನ್ ಅವರಿಗೆ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಹಿಸಲಾಗಿತ್ತು. ಇವರಿಬ್ಬರ ಬಳಿಕ ಜಿತೇಶ್ ಶರ್ಮಾ ಕೂಡ ತಂಡವನ್ನು ಮುನ್ನಡೆಸಿದ್ದರು.

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More




