ಪಾವಗಡ: ಅಂಗನವಾಡಿಗಳಿಗೆ ನೀಡುವ ಉಚಿತ ಕ್ಷೀರಭಾಗ್ಯ ಹಾಲಿನ ಪೌಡರ್ ಅಂಗಡಿಗಳಲ್ಲಿ ಮಾರಾಟ
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈಎನ್ ಹೊಸಕೋಟೆಯ ಅಂಗಡಿಗಳಲ್ಲಿ ಅಂಗನವಾಡಿಯ ಹಾಲಿನ ಪುಡಿ ಪ್ಯಾಕೇಟ್ಗಳು ಪತ್ತೆಯಾಗಿವೆ. ಬಾಣಂತಿಯರಿಗೆ ಹಾಗೂ ಮಕ್ಕಳಿಗಾಗಿ ಸರ್ಕಾರ ನೀಡುತ್ತಿರುವ ಹಾಲಿನ ಪೌಡರನ್ನು ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತಿದೆ.
![ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿ ದುರ್ಬಳಕೆಯಾಗುತ್ತಿದೆ. ಅಂಗನವಾಡಿಯಲ್ಲಿ ಇರಬೇಕಿದ್ದ ಕ್ಷೀರಭಾಗ್ಯದ ಹಾಲುಪುಡಿ ಅಂಗಡಿಯಲ್ಲಿ ಪತ್ತೆಯಾಗಿದೆ.](https://images.tv9kannada.com/wp-content/uploads/2024/06/milk-powder.jpg?w=1280&enlarge=true)
1 / 5
![ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈಎನ್ ಹೊಸಕೋಟೆಯ ಅಂಗಡಿಗಳಲ್ಲಿ ಅಂಗನವಾಡಿಯ ಹಾಲಿನ ಪುಡಿ ಪ್ಯಾಕೇಟ್ಗಳು ಪತ್ತೆಯಾಗಿವೆ. ಬಾಣಂತಿಯರಿಗೆ ಹಾಗೂ ಮಕ್ಕಳಿಗಾಗಿ ಸರ್ಕಾರ ನೀಡುತ್ತಿರುವ ಹಾಲಿನ ಪೌಡರನ್ನು ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತಿದೆ.](https://images.tv9kannada.com/wp-content/uploads/2024/06/milk-powder-2.jpg)
2 / 5
![ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ರಾಜ್ಯ ಸರ್ಕಾರ ಅಂಗನವಾಡಿಗಳಿಗೆ ಹಾಲಿನ ಪೌಡರ್ ಪೂರೈಸುತ್ತಿದೆ. ಆದರೆ ಅಕ್ರಮವಾಗಿ ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತಿದ್ದು ಸರ್ಕಾರದ ಹಾಲಿನ ಪೌಡರ್ ಈಗ ಅಂಗಡಿಗಳಲ್ಲೂ ಮಾರಾಟ ಮಾಡಲಾಗುತ್ತಿದೆ. ಉಚಿತವಾಗಿಸುವುದನ್ನು ದುಡ್ಡಿಗೆ ಮಾರಾಟ ಮಾಡಿ ಹಣ ಮಾಡಲಾಗುತ್ತಿದೆ.](https://images.tv9kannada.com/wp-content/uploads/2024/06/milk-powder-4.jpg)
3 / 5
![ವೈಎನ್ ಹೊಸಕೋಟೆಯ ಸುಮಾರು 8 ಅಂಗಡಿಗಳಲ್ಲಿ ಸರ್ಕಾರದ ಹಾಲಿನ ಪೌಡರ್ ಮಾರಾಟ ಮಾಡಲಾಗುತ್ತಿರುವುದು ಪತ್ತೆಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಂದಲೇ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿದ್ದು ಮಹಿಳಾ ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ನಡೆಸಿ ಅಕ್ರಮ ಪತ್ತೆ ಮಾಡಿದ್ದಾರೆ.](https://images.tv9kannada.com/wp-content/uploads/2024/06/milk-powder-1.jpg)
4 / 5
![ಪಾವಗಡ ತಾಲೂಕಿನಲ್ಲೇ ಅತಿಹೆಚ್ಚು ಅಪೌಷ್ಟಿಕತೆ ಇರುವ ಮಕ್ಕಳಿದ್ದಾರೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಪಾವಗಡದತ್ತ ಗಮನ ಹರಿಸಬೇಕಿದೆ. ಮಕ್ಕಳಿಗೆ ಬಾಣಂತಿಯರಿಗೆ ನೀಡುವ ಹಾಲಿನ ಪೌಡರ್ ಮಾರಾಟವನ್ನು ತಪ್ಪಿಸಬೇಕಿದೆ.](https://images.tv9kannada.com/wp-content/uploads/2024/06/milk-powder-3.jpg)
5 / 5