AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಮಂತರ ಶ್ರೀಮಂತಿಕೆ ಹೆಚ್ಚುತ್ತಿದೆ, ಭಾರತದ ಆರ್ಥಿಕತೆಗೇನೂ ಉಪಯೋಗ ಆಗುತ್ತಿಲ್ಲ: ವಿರಲ್ ಆಚಾರ್ಯ

ನವದೆಹಲಿ, ಸೆಪ್ಟೆಂಬರ್ 4: ದೇಶದಲ್ಲಿ ಶ್ರೀಮಂತರ ಶ್ರೀಮಂತಿಕೆ ಹೆಚ್ಚುತ್ತಲೇ ಇದೆ. ಅವರ ಬೆಳವಣಿಗೆಯ ಫಲ ಕೆಳಗಿನವರೆಗೂ ತಲುಪಿಲ್ಲ. ಬ್ಯಾಂಕ್ ಖಾತೆಯಲ್ಲಿ ಭರ್ತಿಯಾದ ಹಣವನ್ನು ಹಣಕಾಸು ಆಸ್ತಿಗಳತ್ತ ಹಾಕುತ್ತಿದ್ದಾರೆ. ಇದರಿಂದ ದೇಶದ ಅನುಭೋಗವೇನೂ ಹೆಚ್ಚುತ್ತಿಲ್ಲ ಎಂದು ಆರ್ಥಿಕ ತಜ್ಞ ಹಾಗು ಮಾಜಿ ಆರ್​ಬಿಐ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 04, 2024 | 12:13 PM

Share
ಭಾರತದ ಆರ್ಥಿಕತೆಯ ಅಮೂಲಾಗ್ರ ಅಭಿವೃದ್ಧಿಗೆ ಶ್ರೀಮಂತ ವ್ಯಕ್ತಿಗಳ ಮೇಲೆ ಅವಲಂಬಿತರಾಗುವುದು ತರವಲ್ಲ. ಶ್ರೀಮಂತರ ಮೂಲಕ ಪ್ರಗತಿಯನ್ನು ಸಾಧಿಸುತ್ತಾ ಆರ್ಥಿಕತೆಯೂ ಪ್ರಗತಿ ಹೊಂದಬೇಕೆಂದು ನಿರೀಕ್ಷಿಸಲು ಆಗುವುದಿಲ್ಲ ಎಂದು ಆರ್​ಬಿಐನ ಮಾಜಿ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ. ಇಲಾರ ಕ್ಯಾಪಿಟಲ್ ಸಂಸ್ಥೆ ಮೊನ್ನೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವಿರಲ್ ಆಚಾರ್ಯ, ಭಾರತ ಆರ್ಥಿಕ ಪ್ರಗತಿ ಸಾಧಿಸಿದರೂ ಆ ಪ್ರಗತಿಯ ಫಲ ಕೆಳಗಿನವರೆಗೂ ತಲುಪಿಲ್ಲ ಎಂದಿದ್ದಾರೆ.

ಭಾರತದ ಆರ್ಥಿಕತೆಯ ಅಮೂಲಾಗ್ರ ಅಭಿವೃದ್ಧಿಗೆ ಶ್ರೀಮಂತ ವ್ಯಕ್ತಿಗಳ ಮೇಲೆ ಅವಲಂಬಿತರಾಗುವುದು ತರವಲ್ಲ. ಶ್ರೀಮಂತರ ಮೂಲಕ ಪ್ರಗತಿಯನ್ನು ಸಾಧಿಸುತ್ತಾ ಆರ್ಥಿಕತೆಯೂ ಪ್ರಗತಿ ಹೊಂದಬೇಕೆಂದು ನಿರೀಕ್ಷಿಸಲು ಆಗುವುದಿಲ್ಲ ಎಂದು ಆರ್​ಬಿಐನ ಮಾಜಿ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ. ಇಲಾರ ಕ್ಯಾಪಿಟಲ್ ಸಂಸ್ಥೆ ಮೊನ್ನೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವಿರಲ್ ಆಚಾರ್ಯ, ಭಾರತ ಆರ್ಥಿಕ ಪ್ರಗತಿ ಸಾಧಿಸಿದರೂ ಆ ಪ್ರಗತಿಯ ಫಲ ಕೆಳಗಿನವರೆಗೂ ತಲುಪಿಲ್ಲ ಎಂದಿದ್ದಾರೆ.

1 / 5
‘ಪ್ರಗತಿಯ ಲಾಭವು ಕೆಳಗೆ ಪ್ರವಹಿಸುತ್ತದೆ ಎಂದಾದರೆ ಇಷ್ಟರಲ್ಲಾಗಲೇ ಅದು ಆಗಬೇಕಿತ್ತು. ಆದರೆ ಹಾಗೇನೂ ಆಗಿಲ್ಲ. ಶ್ರೀಮಂತರ ಶ್ರೀಮಂತಿಗೆ ಹೆಚ್ಚಾಗುತ್ತಲೇ ಇದೆ,’ ಎಂದು ವಿರಲ್ ಆಚಾರ್ಯ ಹೇಳಿದ್ದಾರೆ.

‘ಪ್ರಗತಿಯ ಲಾಭವು ಕೆಳಗೆ ಪ್ರವಹಿಸುತ್ತದೆ ಎಂದಾದರೆ ಇಷ್ಟರಲ್ಲಾಗಲೇ ಅದು ಆಗಬೇಕಿತ್ತು. ಆದರೆ ಹಾಗೇನೂ ಆಗಿಲ್ಲ. ಶ್ರೀಮಂತರ ಶ್ರೀಮಂತಿಗೆ ಹೆಚ್ಚಾಗುತ್ತಲೇ ಇದೆ,’ ಎಂದು ವಿರಲ್ ಆಚಾರ್ಯ ಹೇಳಿದ್ದಾರೆ.

2 / 5
‘ಶ್ರೀಮಂತರ ಬ್ಯಾಂಕ್ ಖಾತೆ ದೊಡ್ಡದಾಗುತ್ತಾ ಬರುತ್ತಿದೆ. ಹಣಕಾಸು ಆಸ್ತಿಗಳಲ್ಲಿ ಹೂಡಿಕೆ ಮಾಡಲು ಎದುರು ನೋಡುತ್ತಾರೆ. ಭಾರತ ಒಂದು ರೀತಿಯಲ್ಲಿ ಮುಚ್ಚಿದ ಮಾರುಕಟ್ಟೆ. ಇಲ್ಲಿಂದ ಹಣ ಹೊರಗೆ ಹೋಗುವುದು ಅಷ್ಟು ಸುಲಭವಲ್ಲ. ಹೀಗಾಗಿ, ದೇಶದಲ್ಲಿರುವ ಸೀಮಿತಿ ಹಣಕಾಸು ಆಸ್ತಿಗಳೇ ಈ ಶ್ರೀಮಂತರಿಗೆ ಇರುವ ಆಯ್ಕೆ. ಆ ಕ್ಷೇತ್ರದಲ್ಲಿ ಬೆಲೆ ಸಾಕ್ಟು ಏರಿದೆಯಾದರೂ ಅದರಿಂದ ಭಾರತದ ಕನ್ಸಂಪ್ಷನ್​ಗೆ (ಬಳಕೆ ಅಥವಾ ಅನುಭೋಗ) ಉಪಯೋಗ ಏನೂ ಇಲ್ಲ,’ ಎಂದು 2016ರಲ್ಲಿ ರಿಸರ್ವ್ ಬ್ಯಾಂಕ್​ನ ಡೆಪ್ಯೂಟಿ ಗವರ್ನ್ ಆಗಿದ್ದ ವಿರಲ್ ಆಚಾರ್ಯ ವಾದಿಸಿದ್ದಾರೆ.

‘ಶ್ರೀಮಂತರ ಬ್ಯಾಂಕ್ ಖಾತೆ ದೊಡ್ಡದಾಗುತ್ತಾ ಬರುತ್ತಿದೆ. ಹಣಕಾಸು ಆಸ್ತಿಗಳಲ್ಲಿ ಹೂಡಿಕೆ ಮಾಡಲು ಎದುರು ನೋಡುತ್ತಾರೆ. ಭಾರತ ಒಂದು ರೀತಿಯಲ್ಲಿ ಮುಚ್ಚಿದ ಮಾರುಕಟ್ಟೆ. ಇಲ್ಲಿಂದ ಹಣ ಹೊರಗೆ ಹೋಗುವುದು ಅಷ್ಟು ಸುಲಭವಲ್ಲ. ಹೀಗಾಗಿ, ದೇಶದಲ್ಲಿರುವ ಸೀಮಿತಿ ಹಣಕಾಸು ಆಸ್ತಿಗಳೇ ಈ ಶ್ರೀಮಂತರಿಗೆ ಇರುವ ಆಯ್ಕೆ. ಆ ಕ್ಷೇತ್ರದಲ್ಲಿ ಬೆಲೆ ಸಾಕ್ಟು ಏರಿದೆಯಾದರೂ ಅದರಿಂದ ಭಾರತದ ಕನ್ಸಂಪ್ಷನ್​ಗೆ (ಬಳಕೆ ಅಥವಾ ಅನುಭೋಗ) ಉಪಯೋಗ ಏನೂ ಇಲ್ಲ,’ ಎಂದು 2016ರಲ್ಲಿ ರಿಸರ್ವ್ ಬ್ಯಾಂಕ್​ನ ಡೆಪ್ಯೂಟಿ ಗವರ್ನ್ ಆಗಿದ್ದ ವಿರಲ್ ಆಚಾರ್ಯ ವಾದಿಸಿದ್ದಾರೆ.

3 / 5
ಇಲ್ಲಿ ಹಣಕಾಸು ಆಸ್ತಿಗಳೆಂದರೆ ಷೇರು, ಮ್ಯೂಚುವಲ್ ಫಂಡ್, ಬಾಂಡುಗಳು, ನಗದು ಹಣ, ಬ್ಯಾಂಕ್ ಡೆಪಾಸಿಟ್ ಮುಂತಾದವು. ವಿರಲ್ ಆಚಾರ್ಯ ಪ್ರಸ್ತಾಪಿಸಿರುವ ಹಣಕಾಸು ಆಸ್ತಿ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಗಳಿರಬಹುದು.

ಇಲ್ಲಿ ಹಣಕಾಸು ಆಸ್ತಿಗಳೆಂದರೆ ಷೇರು, ಮ್ಯೂಚುವಲ್ ಫಂಡ್, ಬಾಂಡುಗಳು, ನಗದು ಹಣ, ಬ್ಯಾಂಕ್ ಡೆಪಾಸಿಟ್ ಮುಂತಾದವು. ವಿರಲ್ ಆಚಾರ್ಯ ಪ್ರಸ್ತಾಪಿಸಿರುವ ಹಣಕಾಸು ಆಸ್ತಿ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಗಳಿರಬಹುದು.

4 / 5
ಅಮೆರಿಕದ ನ್ಯೂಯಾರ್ಕ್ ಯೂನಿವರ್ಸಿಟಿಯ ಬಿಸಿನೆಸ್ ಸ್ಕೂಲ್​ನಲ್ಲಿ ಎಕನಾಮಿಕ್ಸ್ ಪ್ರೊಫೆಸರ್ ಆಗಿರುವ ವಿರಲ್ ಆಚಾರ್ಯ ಪ್ರಕಾರ ಭಾರತದ ಅನುಭೋಗ ಮತ್ತು ಜಿಡಿಪಿ ಬೆಳವಣಿಗೆಯು ಕೋವಿಡ್ ಮುಂಚಿನ ಮಟ್ಟಕ್ಕೆ ಏರಲು ಕಷ್ಟಪಡುತ್ತಿವೆ. ಗ್ರಾಮೀಣ ಭಾಗ ಹೆಚ್ಚು ಹಿಂದೆ ಬಿದ್ದಿದೆ. ನಗರ ಮತ್ತು ಗ್ರಾಮೀಣ ಭಾಗಗಳ ಮಧ್ಯೆ ಈ ಬೆಳವಣಿಗೆ ಅಸಮಾನತೆಯು ಒಟ್ಟಾರೆ ಪ್ರಗತಿಯನ್ನು ಕುಂಠಿಗೊಳಿಸಿದೆ. ಜೊತೆಗೆ ಸರ್ಕಾರದಿಂದ ವೆಚ್ಚ ಕಡಿಮೆ ಆಗಿರುವುದು, ಹೂಡಿಕೆ ಕಡಿಮೆ ಆಗಿರುವುದು ಇದಕ್ಕೆ ಇಂಬು ಕೊಟ್ಟಿದೆ ಎಂಬುದು ಅವರ ವಾದ.

ಅಮೆರಿಕದ ನ್ಯೂಯಾರ್ಕ್ ಯೂನಿವರ್ಸಿಟಿಯ ಬಿಸಿನೆಸ್ ಸ್ಕೂಲ್​ನಲ್ಲಿ ಎಕನಾಮಿಕ್ಸ್ ಪ್ರೊಫೆಸರ್ ಆಗಿರುವ ವಿರಲ್ ಆಚಾರ್ಯ ಪ್ರಕಾರ ಭಾರತದ ಅನುಭೋಗ ಮತ್ತು ಜಿಡಿಪಿ ಬೆಳವಣಿಗೆಯು ಕೋವಿಡ್ ಮುಂಚಿನ ಮಟ್ಟಕ್ಕೆ ಏರಲು ಕಷ್ಟಪಡುತ್ತಿವೆ. ಗ್ರಾಮೀಣ ಭಾಗ ಹೆಚ್ಚು ಹಿಂದೆ ಬಿದ್ದಿದೆ. ನಗರ ಮತ್ತು ಗ್ರಾಮೀಣ ಭಾಗಗಳ ಮಧ್ಯೆ ಈ ಬೆಳವಣಿಗೆ ಅಸಮಾನತೆಯು ಒಟ್ಟಾರೆ ಪ್ರಗತಿಯನ್ನು ಕುಂಠಿಗೊಳಿಸಿದೆ. ಜೊತೆಗೆ ಸರ್ಕಾರದಿಂದ ವೆಚ್ಚ ಕಡಿಮೆ ಆಗಿರುವುದು, ಹೂಡಿಕೆ ಕಡಿಮೆ ಆಗಿರುವುದು ಇದಕ್ಕೆ ಇಂಬು ಕೊಟ್ಟಿದೆ ಎಂಬುದು ಅವರ ವಾದ.

5 / 5

Published On - 12:00 pm, Wed, 4 September 24

Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!