AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾಲಯ ಅಮಾವಾಸ್ಯೆಯ ಮಹತ್ವವೇನು..? ಆಚರಣೆ ಹೇಗೆ..?

ಇಂದು ಭಾದ್ರಪದ ಮಾಸದ ಕೃಷ್ಣಪಕ್ಷದ ಅಮಾವಾಸ್ಯೆ. ಈ ದಿನವನ್ನು ಮಹಾಲಯ ಅಮಾವಾಸ್ಯೆ ಎಂದು ಕರೆಯಲಾಗುತ್ತೆ. ಕಳೆದ ಹದಿನೈದು ದಿನಗಳ ಪಿತೃಪಕ್ಷದ ಪಿತೃಕಾರ್ಯಕ್ಕೆ ಇಂದು ಕೊನೆಯ ದಿನ. ಪಿತೃಪಕ್ಷದ ಕೊನೆಯ ದಿನ ಮಹಾಲಯ ಅಮಾವಾಸ್ಯೆ ಬರುವುದರಿಂದ ಈ ದಿನವನ್ನು ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ. ನಮ್ಮನ್ನು ಅಗಲಿದ ಪಿತೃಗಳಿಗೆ ಪಿತೃಪಕ್ಷದ 14 ದಿನಗಳಲ್ಲಿ ಯಾವ ದಿನವೂ ಪಿತೃ ಕಾರ್ಯ ಮಾಡೋಕೆ ಸಾಧ್ಯವಾಗದೇ ಇದ್ರೆ ಕೊನೆಯ ಪಕ್ಷ ಈ ದಿನವಾದ್ರೂ ಸ್ಮರಿಸೋದು ರೂಢಿಯಲ್ಲಿದೆ.  ಈ ದಿನ, ಅಗಲಿದ ನಮ್ಮವರನ್ನು ಸ್ಮರಿಸಿ, […]

ಮಹಾಲಯ ಅಮಾವಾಸ್ಯೆಯ ಮಹತ್ವವೇನು..? ಆಚರಣೆ ಹೇಗೆ..?
ಸಾಧು ಶ್ರೀನಾಥ್​
|

Updated on:Sep 27, 2019 | 1:50 PM

Share

ಇಂದು ಭಾದ್ರಪದ ಮಾಸದ ಕೃಷ್ಣಪಕ್ಷದ ಅಮಾವಾಸ್ಯೆ. ಈ ದಿನವನ್ನು ಮಹಾಲಯ ಅಮಾವಾಸ್ಯೆ ಎಂದು ಕರೆಯಲಾಗುತ್ತೆ. ಕಳೆದ ಹದಿನೈದು ದಿನಗಳ ಪಿತೃಪಕ್ಷದ ಪಿತೃಕಾರ್ಯಕ್ಕೆ ಇಂದು ಕೊನೆಯ ದಿನ. ಪಿತೃಪಕ್ಷದ ಕೊನೆಯ ದಿನ ಮಹಾಲಯ ಅಮಾವಾಸ್ಯೆ ಬರುವುದರಿಂದ ಈ ದಿನವನ್ನು ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ. ನಮ್ಮನ್ನು ಅಗಲಿದ ಪಿತೃಗಳಿಗೆ ಪಿತೃಪಕ್ಷದ 14 ದಿನಗಳಲ್ಲಿ ಯಾವ ದಿನವೂ ಪಿತೃ ಕಾರ್ಯ ಮಾಡೋಕೆ ಸಾಧ್ಯವಾಗದೇ ಇದ್ರೆ ಕೊನೆಯ ಪಕ್ಷ ಈ ದಿನವಾದ್ರೂ ಸ್ಮರಿಸೋದು ರೂಢಿಯಲ್ಲಿದೆ.

 ಈ ದಿನ, ಅಗಲಿದ ನಮ್ಮವರನ್ನು ಸ್ಮರಿಸಿ, ಪಿಂಡ ಪ್ರದಾನ, ತಿಲ ತರ್ಪಣ ಅರ್ಪಿಸಿ ಸ್ಮರಿಸುತ್ತಾರೆ. ಇನ್ನು, ಈ ಮಹಾಲಯ ಅಮಾವಾಸ್ಯೆಗೆ ಪುರಾಣದ ಪ್ರಕಾರ ವಿಶೇಷ ಮಹತ್ವವಿದೆ. ಅದೇನಂದ್ರೆ ಸ್ವರ್ಗಕ್ಕೆ ಹೋದ ಕರ್ಣ ಯಮನ ಆದೇಶದಂತೆ ಮತ್ತೆ ಭೂ ಲೋಕಕ್ಕೆ ಬರ್ತಾನೆ. ಹಾಗೇ ಬಂದ ಕರ್ಣ ಭೂ ಲೋಕದಲ್ಲಿ ಇದ್ದು ಹಿರಿಯರಿಗೆ, ಬಡವರಿಗೆ ಅನ್ನ, ವಸ್ತ್ರದಾನವನ್ನು ಮಾಡ್ತಾನೆ. ಕರ್ಣನಿಂದ ದಾನ ಪಡೆದ ಎಲ್ಲರೂ ಆತನನ್ನು ಹರಸ್ತಾರೆ. ಹಿರಿಯರ ಆಶೀರ್ವಾದ ಪಡೆದ ಕರ್ಣ ಮತ್ತೆ ಸ್ವರ್ಗಕ್ಕೆ ತೆರಳುತ್ತಾನೆ. ಹೀಗೆ ಕರ್ಣ ಭೂಲೋಕದಿಂದ ಸ್ವರ್ಗಲೋಕಕ್ಕೆ ತೆರಳುವ ದಿನವೇ ಮಹಾಲಯ ಅಮಾವಾಸ್ಯೆ ಎಂದು ಪುರಾಣದಲ್ಲಿ ಉಲ್ಲೇಖವಿದೆ.

ಅಲ್ಲದೇ ಹಿಂದೂ ಪುರಾಣದ ಪ್ರಕಾರ, ಮೂರು ತಲೆಮಾರಿನವರೆಗಿನ ಪಿತೃಗಳ ಆತ್ಮವು ಭೂಮಿ ಮತ್ತು ಸ್ವರ್ಗಲೋಕದ ನಡುವೆ ಇರುವ ಪಿತೃಲೋಕಕ್ಕೆ ಈ ದಿನದಂದು ಬರ್ತಾರೆ ಅನ್ನೋ ನಂಬಿಕೆ ಇದೆ. ಇದೇ ಕಾರಣಕ್ಕೆ ಪಿಂಡಪ್ರದಾನ, ತರ್ಪಣ ಬಿಡುವಾಗ ಕೇವಲ ಮೂರು ತಲೆಮಾರಿನವರೆಗಿನ ಪಿತೃಗಳನ್ನು ಮಾತ್ರ ಸ್ಮರಿಸಲಾಗುತ್ತೆ. ಪಿತೃ ಪಕ್ಷದಲ್ಲಿ ಮತ್ತು ಪಿತೃ ಪಕ್ಷದ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆಯಂದು ಮಾಡುವ ಪಿತೃಕಾರ್ಯ ಅಥವಾ ಶ್ರಾದ್ಧ ಕಾರ್ಯಕ್ಕೆ ವಿಶೇಷ ಫಲ ಪ್ರಾಪ್ತಿಯಾಗುತ್ತೆ ಎನ್ನಲಾಗುತ್ತೆ.

ಇದನ್ನೂ ಓದಿ:  ಮಹಾಲಯ ಅಮಾವಾಸ್ಯೆ ದಿನ ಶ್ರಾದ್ಧ ಕಾರ್ಯ ಹೇಗೆ ಮಾಡಬೇಕು? 

Published On - 1:09 pm, Fri, 27 September 19

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು