AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಪತ್ತು ಬಂದಾಗ ಪ್ರತಿಯೊಬ್ಬರೂ ಈ ಮೂರು ದುರ್ಗುಣಗಳಿಂದ ದೂರವಿರಬೇಕು, ಚಾಣಕ್ಯ ಹೇಳುವಂತೆ ಅವು ಯಾವುವು?

ಚಾಣಕ್ಯನ ಪ್ರಕಾರ ಧನ ಸಂಪತ್ತು ಬಂದಾಗ ಮನುಷ್ಯನಲ್ಲಿ ಕೆಟ್ಟಗುಣಗಳು ಉದ್ಭವಿಸುತ್ತವೆ. ಹಾಗಾಗಿ ಹಣದ ವಿಷಯದಲ್ಲಿ ಜಾಗರೂಕರಾಗಿರಬೇಕು. ಹಣ ಬಂದಾಗ ಅಹಂಕಾರ ಬೆಳೆಸಿಕೊಳ್ಳಬಾರದು. ಜೀವನದಲ್ಲಿ ಹಣ ಐಶ್ವರ್ಯ ಬಂದಾಗ ಅಹಂಕಾರ ಪಡುವವರು ಅಂಧಕಾರದತ್ತ ಸಾಗುತ್ತಾರೆ. ತಾಯಿ ಲಕ್ಚ್ಮಿ ಅಂತಹವರನ್ನು ಇಷ್ಟಪಡುವುದಿಲ್ಲ.

ಸಂಪತ್ತು ಬಂದಾಗ ಪ್ರತಿಯೊಬ್ಬರೂ ಈ ಮೂರು ದುರ್ಗುಣಗಳಿಂದ ದೂರವಿರಬೇಕು, ಚಾಣಕ್ಯ ಹೇಳುವಂತೆ ಅವು ಯಾವುವು?
ಸಂಪತ್ತು ಬಂದಾಗ ಪ್ರತಿಯೊಬ್ಬರೂ ಈ ಮೂರು ದುರ್ಗುಣಗಳಿಂದ ದೂರವಿರಬೇಕು, ಚಾಣಕ್ಯ ಹೇಳುವಂತೆ ಅವು ಯಾವುವು?
TV9 Web
| Updated By: ಸಾಧು ಶ್ರೀನಾಥ್​|

Updated on: Nov 18, 2021 | 7:11 AM

Share

ಸಂಪತ್ತು ಬಂದಾಗ ಪ್ರತಿಯೊಬ್ಬರೂ ಈ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಇಲ್ಲವಾದಲ್ಲಿ ತಾಯಿ ಲಕ್ಷ್ಮಿ ಕೋಪಗೊಂಡು ನಿಮ್ಮಿಂದ ವಿಮುಖವಾಗುತ್ತಾಳೆ. ಆಚಾರ್ಯ ಚಾಣಕ್ಯ ತನ್ನ ಚಾಣಕ್ಯ ನೀತಿಯಲ್ಲಿ ಇಂತಹ ವಿಷಯಗಳ ಬಗ್ಗೆಯೂ ತಿಳಿಯಹೇಳಿದ್ದಾನೆ. ಈ ಗ್ರಂಥದಲ್ಲಿ ವ್ಯಾವಹಾರಿಕ ಜ್ಞಾನ ಮತ್ತು ಗೃಹಸ್ಥ ಜೀವನದ ಬಗ್ಗೆಯೂ ವಿವರಿಸಿದ್ದಾರೆ.  ಆಚಾರ್ಯ ಚಾಣಕ್ಯನ ಮಾತುಗಳನ್ನುಆಲಿಸಲು, ಪಾಲಿಸಲು ಕಷ್ಟವೆನಿಸಿದರೂ ವಾಸ್ತವವಾಗಿ ಅವು ಜೀವನದ ಸುಧಾರಣೆಗಾಗಿ ಹೇಳಿಮಾಡಿಸಿದಂತೆ ಇರುವ ನೀತಿಗಳು. ಅವರು ಜೀವನದ ಸಮಸ್ತ ರಹಸ್ಯಗಳ ಬಗ್ಗೆ ವಿವರಣೆ ನೀಡಿದ್ದಾರೆ. ಧರ್ಮ, ಸಮಾಹ, ರಾಜನೀತಿ, ಸಂಪತ್ತು ಮುಂತಾದ ವಿಷಯಗಳ ರೀತಿರಿವಾಜುಗಳ ಬಗ್ಗೆ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಸರಿ ಮತ್ತು ತಪ್ಪುಗಳ ನಡುವಣ ಸೂಕ್ಷ್ಮ ವ್ಯತ್ಯಾಸವನ್ನು ಇವರು ವಿವರಿಸಿದ್ದಾರೆ. ಸಂಪತ್ತು ಬಂದಾಗ ಅದನ್ನು ಹೇಗೆ ಉಳಿಸಿ, ಬೆಳೆಸಬೇಕು. ಸಹಚರರ ಜೊತೆ ಹೇಗೆ ನಡೆದುಕೊಳ್ಳಬೇಕು. ವಿನಯ ಎಂದರೇನು ಎಂಬುದನ್ನು ವಿವರಿಸಿದ್ದಾರೆ.

ಅಹಂಕಾರ ಬಿಡಬೇಕು: ಚಾಣಕ್ಯನ ಪ್ರಕಾರ ಧನ ಸಂಪತ್ತು ಬಂದಾಗ ಮನುಷ್ಯನಲ್ಲಿ ಕೆಟ್ಟಗುಣಗಳು ಉದ್ಭವಿಸುತ್ತವೆ. ಹಾಗಾಗಿ ಹಣದ ವಿಷಯದಲ್ಲಿ ಜಾಗರೂಕರಾಗಿರಬೇಕು. ಹಣ ಬಂದಾಗ ಅಹಂಕಾರ ಬೆಳೆಸಿಕೊಳ್ಳಬಾರದು. ಜೀವನದಲ್ಲಿ ಹಣ ಐಶ್ವರ್ಯ ಬಂದಾಗ ಅಹಂಕಾರ ಪಡುವವರು ಅಂಧಕಾರದತ್ತ ಸಾಗುತ್ತಾರೆ. ತಾಯಿ ಲಕ್ಚ್ಮಿ ಅಂತಹವರನ್ನು ಇಷ್ಟಪಡುವುದಿಲ್ಲ.

ಕ್ರೋಧದಿಂದ ದೂರವಿರಿ: ಚಾಣಕ್ಯನ ಪ್ರಕಾರ ಸ್ವಯಂ ಕ್ರೋಧದಿಂದ ಸದಾ ದೂರವಿರಬೇಕು. ಕ್ರೋಧ ಅಥವಾ ಕೋಪ ಎಂಬುದು ತುಂಬಾ ಅಪಾಯಕಾರಿ ಅವಗುಣವಾಗಿರುತ್ತದೆ. ಕೋಪ ಸದಾ ನಿಮ್ಮನ್ನು ತಪ್ಪು ಮಾರ್ಗದಲ್ಲಿ ಕೊಂಡೊಯ್ಯುತ್ತದೆ. ಕೋಪ ಎಂಬುದು ಮನುಷ್ಯನ ದೊಡ್ಡ ಶತ್ರು. ಸಂಪತ್ತು ಬಂದಾಗ ನಿಮ್ಮಲ್ಲಿ ಕ್ರೋಧಭಾವ ಬರಬಾರದು, ಬದಲಿಗೆ ಧೈರ್ಯ, ಸಹನೆ ಇವೇ ಮುಂತಾದ ಸದ್ಗುಣಗಳು ಮೂಡಬೇಕು.

ಭಾಷೆ ಮತ್ತು ಧ್ವನಿ ಬದಲಾಗಬಾರದು: ಅಂದರೆ ಹಣ, ಐಶ್ವರ್ಯ ಬಂದಾಗ ನಿಮ್ಮ ಧ್ವನಿ ಬದಲಾಗಬಾರದು. ಅಂದರೆ ನಿಮ್ಮ ಕಂಠ ಅಂದರೆ ನಿಮ್ಮ ಮಾತು ಬದಲಾಗಬಾರದು. ಮೊದಲು ಹೇಗೆ ವಿನಯದಿಂದ ಸಹಚರರ ಜೊತೆ ವರ್ತಿಸುತ್ತಿದ್ದಿರೋ ಅದೇ ಮಾತುಗಳೊಂದಿಗೆ ಸಹಜವಾಗಿ ನಡೆದುಕೊಳ್ಳಬೇಕು. ಸಿರಿ ಬಂದಾಗ ಮನುಷ್ಯನ ಅಸಲಿ ಬಣ್ಣ ಬಯಲಾಗುತ್ತದೆ. ಮನುಷ್ಯರ ಅಸಲಿ ಧ್ವನಿ ಬದಲಾಗಿಬಿಡುತ್ತದೆ. ಜನರ ಬಗ್ಗೆ ಉದಾಸೀನತೆ, ನಿರ್ಲಕ್ಷ್ಯ ಭಾವಗಳು ಬೆಳೆದುಬಿಡುತ್ತದೆ. ಅವರ ಧ್ವನಿಯೂ ಅದಕ್ಕೆ ತಕ್ಕಂತೆ ಬದಲಾಗುತ್ತದೆ. ತನ್ಮೂಲಕ ಎದುರಿಗಿನ ವ್ಯಕ್ತಿಯನ್ನು ಅವಮಾನ ಪಡಿಸುವುದು ಇವರಿಗೆ ಸುಲಭವಾಗಿ ಬಂದುಬಿಡುತ್ತದೆ. ಆದರೆ ಕಠಿಣ ಮನಃಸ್ಥಿತಿಯೊಂದಿಗೆ ಅಂತಹ ಸ್ವಭಾವವನ್ನು ಮೈಗೂಡಿಸಿಕೊಳ್ಳಬಾರದು. ತಮ್ಮ ಭಾಷೆ ಮತ್ತು ಧ್ವನಿಯನ್ನು ನಂಬಿ, ಸಹಜವಾಗಿ ಜೀವನ ನಡೆಸಬೇಕು.

(chanakya niti in kannada matter of money those who do not pay attention to these things become poor)

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!