AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಪತ್ತು ಬಂದಾಗ ಪ್ರತಿಯೊಬ್ಬರೂ ಈ ಮೂರು ದುರ್ಗುಣಗಳಿಂದ ದೂರವಿರಬೇಕು, ಚಾಣಕ್ಯ ಹೇಳುವಂತೆ ಅವು ಯಾವುವು?

ಚಾಣಕ್ಯನ ಪ್ರಕಾರ ಧನ ಸಂಪತ್ತು ಬಂದಾಗ ಮನುಷ್ಯನಲ್ಲಿ ಕೆಟ್ಟಗುಣಗಳು ಉದ್ಭವಿಸುತ್ತವೆ. ಹಾಗಾಗಿ ಹಣದ ವಿಷಯದಲ್ಲಿ ಜಾಗರೂಕರಾಗಿರಬೇಕು. ಹಣ ಬಂದಾಗ ಅಹಂಕಾರ ಬೆಳೆಸಿಕೊಳ್ಳಬಾರದು. ಜೀವನದಲ್ಲಿ ಹಣ ಐಶ್ವರ್ಯ ಬಂದಾಗ ಅಹಂಕಾರ ಪಡುವವರು ಅಂಧಕಾರದತ್ತ ಸಾಗುತ್ತಾರೆ. ತಾಯಿ ಲಕ್ಚ್ಮಿ ಅಂತಹವರನ್ನು ಇಷ್ಟಪಡುವುದಿಲ್ಲ.

ಸಂಪತ್ತು ಬಂದಾಗ ಪ್ರತಿಯೊಬ್ಬರೂ ಈ ಮೂರು ದುರ್ಗುಣಗಳಿಂದ ದೂರವಿರಬೇಕು, ಚಾಣಕ್ಯ ಹೇಳುವಂತೆ ಅವು ಯಾವುವು?
ಸಂಪತ್ತು ಬಂದಾಗ ಪ್ರತಿಯೊಬ್ಬರೂ ಈ ಮೂರು ದುರ್ಗುಣಗಳಿಂದ ದೂರವಿರಬೇಕು, ಚಾಣಕ್ಯ ಹೇಳುವಂತೆ ಅವು ಯಾವುವು?
TV9 Web
| Edited By: |

Updated on: Nov 18, 2021 | 7:11 AM

Share

ಸಂಪತ್ತು ಬಂದಾಗ ಪ್ರತಿಯೊಬ್ಬರೂ ಈ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಇಲ್ಲವಾದಲ್ಲಿ ತಾಯಿ ಲಕ್ಷ್ಮಿ ಕೋಪಗೊಂಡು ನಿಮ್ಮಿಂದ ವಿಮುಖವಾಗುತ್ತಾಳೆ. ಆಚಾರ್ಯ ಚಾಣಕ್ಯ ತನ್ನ ಚಾಣಕ್ಯ ನೀತಿಯಲ್ಲಿ ಇಂತಹ ವಿಷಯಗಳ ಬಗ್ಗೆಯೂ ತಿಳಿಯಹೇಳಿದ್ದಾನೆ. ಈ ಗ್ರಂಥದಲ್ಲಿ ವ್ಯಾವಹಾರಿಕ ಜ್ಞಾನ ಮತ್ತು ಗೃಹಸ್ಥ ಜೀವನದ ಬಗ್ಗೆಯೂ ವಿವರಿಸಿದ್ದಾರೆ.  ಆಚಾರ್ಯ ಚಾಣಕ್ಯನ ಮಾತುಗಳನ್ನುಆಲಿಸಲು, ಪಾಲಿಸಲು ಕಷ್ಟವೆನಿಸಿದರೂ ವಾಸ್ತವವಾಗಿ ಅವು ಜೀವನದ ಸುಧಾರಣೆಗಾಗಿ ಹೇಳಿಮಾಡಿಸಿದಂತೆ ಇರುವ ನೀತಿಗಳು. ಅವರು ಜೀವನದ ಸಮಸ್ತ ರಹಸ್ಯಗಳ ಬಗ್ಗೆ ವಿವರಣೆ ನೀಡಿದ್ದಾರೆ. ಧರ್ಮ, ಸಮಾಹ, ರಾಜನೀತಿ, ಸಂಪತ್ತು ಮುಂತಾದ ವಿಷಯಗಳ ರೀತಿರಿವಾಜುಗಳ ಬಗ್ಗೆ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಸರಿ ಮತ್ತು ತಪ್ಪುಗಳ ನಡುವಣ ಸೂಕ್ಷ್ಮ ವ್ಯತ್ಯಾಸವನ್ನು ಇವರು ವಿವರಿಸಿದ್ದಾರೆ. ಸಂಪತ್ತು ಬಂದಾಗ ಅದನ್ನು ಹೇಗೆ ಉಳಿಸಿ, ಬೆಳೆಸಬೇಕು. ಸಹಚರರ ಜೊತೆ ಹೇಗೆ ನಡೆದುಕೊಳ್ಳಬೇಕು. ವಿನಯ ಎಂದರೇನು ಎಂಬುದನ್ನು ವಿವರಿಸಿದ್ದಾರೆ.

ಅಹಂಕಾರ ಬಿಡಬೇಕು: ಚಾಣಕ್ಯನ ಪ್ರಕಾರ ಧನ ಸಂಪತ್ತು ಬಂದಾಗ ಮನುಷ್ಯನಲ್ಲಿ ಕೆಟ್ಟಗುಣಗಳು ಉದ್ಭವಿಸುತ್ತವೆ. ಹಾಗಾಗಿ ಹಣದ ವಿಷಯದಲ್ಲಿ ಜಾಗರೂಕರಾಗಿರಬೇಕು. ಹಣ ಬಂದಾಗ ಅಹಂಕಾರ ಬೆಳೆಸಿಕೊಳ್ಳಬಾರದು. ಜೀವನದಲ್ಲಿ ಹಣ ಐಶ್ವರ್ಯ ಬಂದಾಗ ಅಹಂಕಾರ ಪಡುವವರು ಅಂಧಕಾರದತ್ತ ಸಾಗುತ್ತಾರೆ. ತಾಯಿ ಲಕ್ಚ್ಮಿ ಅಂತಹವರನ್ನು ಇಷ್ಟಪಡುವುದಿಲ್ಲ.

ಕ್ರೋಧದಿಂದ ದೂರವಿರಿ: ಚಾಣಕ್ಯನ ಪ್ರಕಾರ ಸ್ವಯಂ ಕ್ರೋಧದಿಂದ ಸದಾ ದೂರವಿರಬೇಕು. ಕ್ರೋಧ ಅಥವಾ ಕೋಪ ಎಂಬುದು ತುಂಬಾ ಅಪಾಯಕಾರಿ ಅವಗುಣವಾಗಿರುತ್ತದೆ. ಕೋಪ ಸದಾ ನಿಮ್ಮನ್ನು ತಪ್ಪು ಮಾರ್ಗದಲ್ಲಿ ಕೊಂಡೊಯ್ಯುತ್ತದೆ. ಕೋಪ ಎಂಬುದು ಮನುಷ್ಯನ ದೊಡ್ಡ ಶತ್ರು. ಸಂಪತ್ತು ಬಂದಾಗ ನಿಮ್ಮಲ್ಲಿ ಕ್ರೋಧಭಾವ ಬರಬಾರದು, ಬದಲಿಗೆ ಧೈರ್ಯ, ಸಹನೆ ಇವೇ ಮುಂತಾದ ಸದ್ಗುಣಗಳು ಮೂಡಬೇಕು.

ಭಾಷೆ ಮತ್ತು ಧ್ವನಿ ಬದಲಾಗಬಾರದು: ಅಂದರೆ ಹಣ, ಐಶ್ವರ್ಯ ಬಂದಾಗ ನಿಮ್ಮ ಧ್ವನಿ ಬದಲಾಗಬಾರದು. ಅಂದರೆ ನಿಮ್ಮ ಕಂಠ ಅಂದರೆ ನಿಮ್ಮ ಮಾತು ಬದಲಾಗಬಾರದು. ಮೊದಲು ಹೇಗೆ ವಿನಯದಿಂದ ಸಹಚರರ ಜೊತೆ ವರ್ತಿಸುತ್ತಿದ್ದಿರೋ ಅದೇ ಮಾತುಗಳೊಂದಿಗೆ ಸಹಜವಾಗಿ ನಡೆದುಕೊಳ್ಳಬೇಕು. ಸಿರಿ ಬಂದಾಗ ಮನುಷ್ಯನ ಅಸಲಿ ಬಣ್ಣ ಬಯಲಾಗುತ್ತದೆ. ಮನುಷ್ಯರ ಅಸಲಿ ಧ್ವನಿ ಬದಲಾಗಿಬಿಡುತ್ತದೆ. ಜನರ ಬಗ್ಗೆ ಉದಾಸೀನತೆ, ನಿರ್ಲಕ್ಷ್ಯ ಭಾವಗಳು ಬೆಳೆದುಬಿಡುತ್ತದೆ. ಅವರ ಧ್ವನಿಯೂ ಅದಕ್ಕೆ ತಕ್ಕಂತೆ ಬದಲಾಗುತ್ತದೆ. ತನ್ಮೂಲಕ ಎದುರಿಗಿನ ವ್ಯಕ್ತಿಯನ್ನು ಅವಮಾನ ಪಡಿಸುವುದು ಇವರಿಗೆ ಸುಲಭವಾಗಿ ಬಂದುಬಿಡುತ್ತದೆ. ಆದರೆ ಕಠಿಣ ಮನಃಸ್ಥಿತಿಯೊಂದಿಗೆ ಅಂತಹ ಸ್ವಭಾವವನ್ನು ಮೈಗೂಡಿಸಿಕೊಳ್ಳಬಾರದು. ತಮ್ಮ ಭಾಷೆ ಮತ್ತು ಧ್ವನಿಯನ್ನು ನಂಬಿ, ಸಹಜವಾಗಿ ಜೀವನ ನಡೆಸಬೇಕು.

(chanakya niti in kannada matter of money those who do not pay attention to these things become poor)

ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್
ಖಾಸಗಿ ಶಾಲೆಗಳ ಶುಲ್ಕ ವಸೂಲಿಗೆ ಬೀಳುತ್ತಾ ಬ್ರೇಕ್?
ಖಾಸಗಿ ಶಾಲೆಗಳ ಶುಲ್ಕ ವಸೂಲಿಗೆ ಬೀಳುತ್ತಾ ಬ್ರೇಕ್?
Video: ಕಬ್ಬು ತುಂಬಿದ್ದ ಟ್ರಕ್ ಶಾಲಾ ವಾಹನದ ಮೇಲೆ ಪಲ್ಟಿ
Video: ಕಬ್ಬು ತುಂಬಿದ್ದ ಟ್ರಕ್ ಶಾಲಾ ವಾಹನದ ಮೇಲೆ ಪಲ್ಟಿ
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ