Sign In

By signing in or creating an account, you agree with Associated Broadcasting Company's Terms & Conditions and Privacy Policy.

Magha Purnima: ಮಾಘ ಪೂರ್ಣಿಮೆಯ ಗಂಗಾ ಸ್ನಾನ, ದಾನ ಏಕೆ ಶ್ರೇಷ್ಠ? ಈ ದಿನದಂದು ಕಲ್ಪವಾಸ ಆಚರಣೆ ಏಕೆ ಮಾಡುತ್ತಾರೆ?

Ganga Snan: ಮಾಘ ಪೂರ್ಣಿಮೆ ಅಥವಾ ಹುಣ್ಣಿಮೆಯ ದಿನದಂದು ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಮಹತ್ತರ ಫಲಗಳು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇದರೊಂದಿಗೆ, ಬಡವರಿಗೆ ಅಥವಾ ಅವಶ್ಯಕತೆ ಇರುವವರಿಗೆ ದಾನ ಮಾಡುವುದು ಸಹ ವಿಶೇಷ ಮಹತ್ವವನ್ನು ಹೊಂದಿದೆ. ಏಕೆಂದರೆ ಮಾಘ ಪೂರ್ಣಿಮೆ ಅಥವಾ ಹುಣ್ಣಿಮೆಯ ದಿನದಂದು ದಾನ ಮಾಡುವ ಮೂಲಕ ಪಾಪಗಳು ಪರಿಹಾರವಾಗಿ ಜನರ ಆಸೆಗಳು ಈಡೇರುತ್ತವೆ.

Magha Purnima: ಮಾಘ ಪೂರ್ಣಿಮೆಯ ಗಂಗಾ ಸ್ನಾನ, ದಾನ ಏಕೆ ಶ್ರೇಷ್ಠ? ಈ ದಿನದಂದು ಕಲ್ಪವಾಸ ಆಚರಣೆ ಏಕೆ ಮಾಡುತ್ತಾರೆ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 13, 2024 | 4:09 PM

ಹಿಂದೂ ಧರ್ಮದಲ್ಲಿ, ಮಾಘ ಮಾಸದಲ್ಲಿ ಬರುವ ಹುಣ್ಣಿಮೆಯ ದಿನವನ್ನು ಮಾಘ ಪೂರ್ಣಿಮಾ ಅಥವಾ ಮಾಘ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಈ ದಿನ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಮತ್ತು ದಾನ ಮಾಡುವುದಕ್ಕೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿಂದ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಪುರಾಣಗಳ ಪ್ರಕಾರ, ಮಾಘಿ ಹುಣ್ಣಿಮೆಯಂದು ಎಲ್ಲಾ ಪಾಪಗಳನ್ನು ನಾಶ ಮಾಡುವ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಇದರೊಂದಿಗೆ, ಬಡವರಿಗೆ ಅಥವಾ ಅವಶ್ಯಕತೆ ಇರುವವರಿಗೆ ದಾನ ಮಾಡುವುದು ಸಹ ಮಹತ್ತರ ಶುಭ ಫಲಗಳನ್ನು ನೀಡುತ್ತದೆ. ಏಕೆಂದರೆ ಮಾಘ ಪೂರ್ಣಿಮೆ ಅಥವಾ ಹುಣ್ಣಿಮೆಯ ದಿನದಂದು ದಾನ ಮಾಡುವ ಮೂಲಕ ಪಾಪಗಳು ಪರಿಹಾರವಾಗಿ ಜನರ ಆಸೆಗಳು ಈಡೇರುತ್ತವೆ. ಇನ್ನು ಪ್ರಯಾಗ್ ರಾಜ್ ನ ದಡದಲ್ಲಿ ಕೆಲವು ಭಾಗದ ಜನರು ಕಲ್ಪವಾಸ ಎಂಬ ಪದ್ದತಿಯನ್ನು ಆಚರಣೆ ಮಾಡುತ್ತಾರೆ. ಏನದು? ಯಾಕಾಗಿ ಆಚರಣೆ ಮಾಡಲಾಗುತ್ತದೆ? ಇಲ್ಲಿದೆ ಮಾಹಿತಿ.

ಆಚರಣೆಯ ಸಮಯ;

ಮಾಘ ಪೂರ್ಣಿಮಾ ಅಥವಾ ಹುಣ್ಣಿಮೆಯು ಫೆ. 23 ರಂದು ಮಧ್ಯಾಹ್ನ 3:36 ಕ್ಕೆ ಪ್ರಾರಂಭವಾಗುತ್ತದೆ. ಫೆಬ್ರವರಿ 24 ರಂದು ಸಂಜೆ 6:03 ಕ್ಕೆ ಈ ತಿಥಿ ಕೊನೆಗೊಳ್ಳುತ್ತದೆ. ಹಾಗಾಗಿ ಮಾಘ ಹುಣ್ಣಿಮೆಯ ಉಪವಾಸವನ್ನು ಫೆಬ್ರವರಿ 24 ರಂದು ಆಚರಿಸಲಾಗುತ್ತದೆ. ಈ ದಿನ, ಗಂಗಾ ನದಿಯಲ್ಲಿ ಸ್ನಾನ ಮಾಡಿ ಬಳಿಕ ಸೂರ್ಯ ದೇವರ ಆರಾಧನೆ ಮಾಡುವುದಕ್ಕೆ ವಿಶೇಷ ಮಹತ್ವವಿದೆ.

ದಾನ ಮಾಡುವುದಕ್ಕೆ ಶುಭ ಸಮಯ ಬೆಳಿಗ್ಗೆ 05.11 ರಿಂದ 06.02 ರ ವರೆಗೆ.

ಇನ್ನು ಅಭಿಜಿತ್ ಮುಹೂರ್ತವು ಮಧ್ಯಾಹ್ನ 12:12 ರಿಂದ 12:57 ರ ವರೆಗೆ ಇರುತ್ತದೆ.

ಮನೆಗಳಲ್ಲಿ ಸತ್ಯನಾರಾಯಣ ಪೂಜೆ ಮಾಡುವವರಿಗೆ ಶುಭ ಸಮಯ ಬೆಳಿಗ್ಗೆ 08:18 ರಿಂದ 9:43 ರ ವರೆಗೆ.

ಲಕ್ಷ್ಮೀ ದೇವಿಯ ಆರಾಧನೆಯ ಸಮಯವು ಬೆಳಿಗ್ಗೆ 12:09 ರಿಂದ ಮಧ್ಯಾಹ್ನ 12:59 ರ ವರೆಗೆ ಇರುತ್ತದೆ.

ಚಂದ್ರೋದಯದ ಸಮಯ ಸಂಜೆ 06:12 ಕ್ಕೆ.

ಇದನ್ನೂ ಓದಿ: ದಿನಗಳಿಗೆ ಅನುಗುಣವಾಗಿ ವಸ್ತು ದಾನ ಮಾಡಿ, ಶುಭ ಫಲಿತಾಂಶ ಖಂಡಿತ

ಕಲ್ಪವಾಸ ಎಂದರೇನು? ಏಕೆ ಈ ಆಚರಣೆಯನ್ನು ಮಾಡುತ್ತಾರೆ?

ಮಾಘ ಮಾಸದಲ್ಲಿ ಕೆಲವು ಭಾಗದ ಜನರು ಕಲ್ಪವಾಸ ಎಂಬ ಪದ್ದತಿಯನ್ನು ಆಚರಿಸುತ್ತಾರೆ. ಈ ಬಗ್ಗೆ ನೀವು ಕೇಳಿರಬಹುದು. ಪುರಾಣಗಳ ಪ್ರಕಾರ, ಕಲ್ಪವಾಸ ಸಂಪ್ರದಾಯವು ಅನೇಕ ವರ್ಷಗಳಿಂದ ನಡೆಯುತ್ತಾ ಬಂದಿದೆ. ಏಕೆಂದರೆ ಈ ಸಮಯದಲ್ಲಿ, ಜನರು ಪ್ರಯಾಗ್ ರಾಜ್ ನ ದಡದಲ್ಲಿ ಉಳಿದುಕೊಂಡು ಅಲ್ಲಿಯೇ ತಮ್ಮ ಆಹಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಇದಲ್ಲದೆ, ಅಲ್ಲಿಯೇ ದೇವರನ್ನು ಪೂಜಿಸುತ್ತಾರೆ. ಈ ಆಚರಣೆಯು ಮಾನವ ಜೀವನದ ಆಧ್ಯಾತ್ಮಿಕತೆಯ ಒಂದು ಹಂತ ಎಂದು ನಂಬಲಾಗಿದೆ, ಅದರ ಮೂಲಕ ಸ್ವಯಂ ನಿಯಂತ್ರಣ ಮತ್ತು ಮನಸ್ಸಿನ ಶುದ್ಧೀಕರಣವನ್ನು ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ತಮ್ಮ ಆಶಯ ಮತ್ತು ಬೇಡಿಕೆಗಳು ನೆರವೇರುತ್ತವೆ ಎಂಬುದು ಭಕ್ತರ ನಂಬಿಕೆ. ಈ ಅವಧಿಯಲ್ಲಿ ಭಕ್ತರು ಹಣ್ಣನ್ನು ಮಾತ್ರ ಸೇವನೆ ಮಾಡುತ್ತಾರೆ. ಅದಲ್ಲದೆ ಮಾಘ ಹುಣ್ಣಿಮೆಯಂದು ದೇವಾನುದೇವತೆಗಳು ಭೂಮಿಗೆ ಬಂದು ಮಾನವ ರೂಪ ತಳೆದು ಪ್ರಯಾಗರಾಜ್‌ನಲ್ಲಿ ಸ್ನಾನ, ದಾನ ಮತ್ತು ಜಪ ಮಾಡುತ್ತಾರೆ ಎಂದು ನಂಬಲಾಗಿದೆ. ಹಾಗಾಗಿ ಪ್ರಯಾಗ್ ರಾಜ್ ನ ದಡದಲ್ಲಿಯೂ ಕೂಡ ಕಲ್ಪವಾಸ ಪದ್ದತಿ ಜಾರಿಯಲ್ಲಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು