AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maha Kumbh: ಮಹಾಕುಂಭ ಮೇಳದ ನಂತರ ನಾಗಸಾಧುಗಳು ಎಲ್ಲಿ ಹೋಗುತ್ತಾರೆ? ಈ ಸನ್ಯಾಸಿಗಳ ನಿಗೂಢ ಜಗತ್ತಿನ ಮಾಹಿತಿ ಇಲ್ಲಿದೆ

144 ವರ್ಷಗಳ ನಂತರ ನಡೆಯುತ್ತಿರುವ 45 ದಿನಗಳ ಮಹಾಕುಂಭ ಮೇಳ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪ್ರಾರಂಭವಾಯಿತು. ಇಂದು ಬೆಳಗ್ಗೆ 8 ಗಂಟೆಗೆ ಸುಮಾರು 60 ಲಕ್ಷ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು. 45 ಕೋಟಿಗೂ ಹೆಚ್ಚು ಭಕ್ತರು ಈ ಕಾರ್ಯಕ್ರಮಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ಮಹಾಕುಂಭದ ಪ್ರಮುಖ ಆಕರ್ಷಣೆಯೆಂದರೆ ನಾಗ ಸಾಧುಗಳು. ಈ ನಾಗ ಸಾಧುಗಳು ಮಹಾಕುಂಭ ಮುಗಿದ ನಂತರ ಎಲ್ಲಿ ನಾಪತ್ತೆಯಾಗುತ್ತಾರೆ? ಅವರ ನಿಗೂಢ ಜಗತ್ತಿನ ಬಗ್ಗೆ ನಿಮಗೆಷ್ಟು ಗೊತ್ತು?

Maha Kumbh: ಮಹಾಕುಂಭ ಮೇಳದ ನಂತರ ನಾಗಸಾಧುಗಳು ಎಲ್ಲಿ ಹೋಗುತ್ತಾರೆ? ಈ ಸನ್ಯಾಸಿಗಳ ನಿಗೂಢ ಜಗತ್ತಿನ ಮಾಹಿತಿ ಇಲ್ಲಿದೆ
Naga Sadhu
ಸುಷ್ಮಾ ಚಕ್ರೆ
|

Updated on:Jan 13, 2025 | 4:43 PM

Share

ಪ್ರಯಾಗ​ರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾ ಕುಂಭ ಮೇಳವನ್ನು ಆಯೋಜಿಸಲಾಗಿದೆ. ಇಂದಿನಿಂದ ಮಹಾ ಕುಂಭ ಮೇಳ ಪ್ರಾರಂಭವಾಗಿದೆ. ನಾಗ ಸಾಧುಗಳು ಸನಾತನ ಧರ್ಮದ ವೈಶಿಷ್ಟ್ಯ ಮತ್ತು ಅತ್ಯಂತ ತಪಸ್ವಿ ಸಂಪ್ರದಾಯದ ಭಾಗವಾಗಿದ್ದು, ಅವರು ಮಹಾ ಕುಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ನಾಗ ಸಾಧುಗಳ ನಿಗೂಢ ಜೀವನದಿಂದಾಗಿ ಅವರನ್ನು ಸಾಮಾಜಿಕವಾಗಿ ಕುಂಭಮೇಳದಲ್ಲಿ ಮಾತ್ರ ಕಾಣಲು ಸಾಧ್ಯ. ಅವರು ಕುಂಭಮೇಳಕ್ಕೆ ಎಲ್ಲಿಂದ ಬರುತ್ತಾರೆ? ಮತ್ತು ಎಲ್ಲಿಗೆ ಹೋಗುತ್ತಾರೆ? ಎಂಬುದು ಯಾರಿಗೂ ತಿಳಿದಿಲ್ಲ.

ಮಹಾ ಕುಂಭದ ಸಮಯದಲ್ಲಿ ನಾಗ ಸಾಧುಗಳು ಆಕರ್ಷಣೆಯ ಕೇಂದ್ರವಾಗಿದ್ದಾರೆ. ಇಲ್ಲಿ ಹೆಚ್ಚಿನ ಸಂಖ್ಯೆಯ ನಾಗ ಸಾಧುಗಳು ಕಂಡುಬರುತ್ತಾರೆ. ಆದರೆ, ಮಹಾಕುಂಭದ ನಂತರ ಈ ನಾಗ ಸಾಧುಗಳು ಎಲ್ಲಿಯೂ ಕಂಡುಬರುವುದಿಲ್ಲ. ಇದಾದ ನಂತರ ಅವರು ಎಲ್ಲಿ ಕಣ್ಮರೆಯಾಗುತ್ತಾರೆ ಎಂಬುದು ನಿಮಗೆ ಗೊತ್ತಾ?

ವಿಶೇಷವೆಂದರೆ, ಲಕ್ಷಾಂತರ ನಾಗಾ ಸಾಧುಗಳು ಯಾವುದೇ ವಾಹನವನ್ನು ಬಳಸದೆ ಮತ್ತು ಜನರ ಕಣ್ಣಿಗೆ ಬೀಳದೆ ಈ ಮಹಾ ಕುಂಭವನ್ನು ತಲುಪುತ್ತಾರೆ. ಅವರು ಹಿಮಾಲಯದಲ್ಲಿ ವಾಸಿಸುತ್ತಾರೆ ಮತ್ತು ಕುಂಭಮೇಳದ ಸಮಯದಲ್ಲಿ ಮಾತ್ರ ಸಾಮಾನ್ಯ ಜನರಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ನಾಗ ಸಾಧುಗಳು ಹೆಚ್ಚಾಗಿ ತ್ರಿಶೂಲಗಳನ್ನು ಹೊತ್ತುಕೊಂಡು ತಮ್ಮ ದೇಹವನ್ನು ಬೂದಿಯಿಂದ ಮುಚ್ಚಿಕೊಳ್ಳುತ್ತಾರೆ. ಅವರು ರುದ್ರಾಕ್ಷಿ ಮಣಿಗಳು ಮತ್ತು ಪ್ರಾಣಿಗಳ ಚರ್ಮದಿಂದ ಮಾಡಿದ ಬಟ್ಟೆಗಳನ್ನು ಧರಿಸುತ್ತಾರೆ. ಕುಂಭಮೇಳದಲ್ಲಿ ಮೊದಲು ಸ್ನಾನ ಮಾಡುವ ಹಕ್ಕು ಅವರಿಗೆ ಇದೆ. ಅದರ ನಂತರವೇ ಉಳಿದ ಭಕ್ತರಿಗೆ ಸ್ನಾನ ಮಾಡಲು ಅವಕಾಶವಿರುತ್ತದೆ. ಆದರೆ, ಈ ಮಹಾಕುಂಭದ ನಂತರ ಎಲ್ಲರೂ ತಮ್ಮ ನಿಗೂಢ ಲೋಕಗಳಿಗೆ ಮರಳುತ್ತಾರೆ.

ಕುಂಭಮೇಳದ ಸಮಯದಲ್ಲಿ ನಾಗ ಸಾಧುಗಳು ತಮ್ಮ ಅಖಾಡಗಳನ್ನು ಪ್ರತಿನಿಧಿಸುತ್ತಾರೆ. ಕುಂಭದ ನಂತರ, ಅವರು ತಮ್ಮ ತಮ್ಮ ಅಖಾಡಗಳಿಗೆ ಹಿಂತಿರುಗುತ್ತಾರೆ. ಅಖಾಡಗಳು ಭಾರತದ ವಿವಿಧ ಭಾಗಗಳಲ್ಲಿವೆ. ಈ ಸಾಧುಗಳು ಅಲ್ಲಿ ಧ್ಯಾನ, ಸಾಧನ ಮತ್ತು ಧಾರ್ಮಿಕ ಶಿಕ್ಷಣವನ್ನು ಒದಗಿಸುತ್ತಾರೆ. ನಾಗ ಸಾಧುಗಳು ತಮ್ಮ ತಪಸ್ವಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಕುಂಭದ ನಂತರ, ಅನೇಕ ನಾಗ ಸಾಧುಗಳು ಧ್ಯಾನ ಮತ್ತು ತಪಸ್ಸಿಗಾಗಿ ಹಿಮಾಲಯ, ಕಾಡುಗಳು ಮತ್ತು ಇತರ ಶಾಂತ ಮತ್ತು ಏಕಾಂತ ಸ್ಥಳಗಳಿಗೆ ಹೋಗುತ್ತಾರೆ. ಅವರು ಕಠಿಣ ತಪಸ್ಸು ಮತ್ತು ಧ್ಯಾನದಲ್ಲಿ ಸಮಯವನ್ನು ಕಳೆಯುತ್ತಾರೆ. ಕುಂಭಮೇಳ ಅಥವಾ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದಾಗ ಮಾತ್ರ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.

ಇದನ್ನೂ ಓದಿ: Mahakumbh Mela 2025: ಮಹಾಕುಂಭವು ಅನಾದಿ ಕಾಲದ ಆಧ್ಯಾತ್ಮಿಕ ಪರಂಪರೆಯ ಸಂಕೇತ, ನಂಬಿಕೆ, ಸಾಮರಸ್ಯದ ಆಚರಣೆ: ಮೋದಿ

ಕೆಲವು ನಾಗ ಸಾಧುಗಳು ಕಾಶಿ, ಹರಿದ್ವಾರ, ಹೃಷಿಕೇಶ, ಉಜ್ಜಯಿನಿ ಅಥವಾ ಪ್ರಯಾಗರಾಜ್‌ನಂತಹ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ವಾಸಿಸುತ್ತಾರೆ. ಈ ಸ್ಥಳಗಳು ಅವರಿಗೆ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರಗಳಾಗಿವೆ. ನಾಗ ಸಾಧುಗಳಾಗುವ ಕೆಲಸವನ್ನು ಪ್ರಯಾಗರಾಜ್, ನಾಸಿಕ್, ಹರಿದ್ವಾರ ಮತ್ತು ಉಜ್ಜಯಿನಿ ಕುಂಭದಲ್ಲಿ ಮಾತ್ರ ಮಾಡಲಾಗುತ್ತದೆ. ಆದರೆ, ಅವರನ್ನು ವಿಭಿನ್ನ ನಾಗರು ಎಂದು ಕರೆಯಲಾಗುತ್ತದೆ. ಪ್ರಯಾಗದಲ್ಲಿ ದೀಕ್ಷೆ ತೆಗೆದುಕೊಳ್ಳುವ ನಾಗ ಸಾಧುವನ್ನು ರಾಜರಾಜೇಶ್ವರ ಎಂದು ಕರೆಯಲಾಗುತ್ತದೆ. ಉಜ್ಜಯಿನಿಯಲ್ಲಿ ದೀಕ್ಷೆ ತೆಗೆದುಕೊಳ್ಳುವವರನ್ನು ಖುನಿ ನಾಗ ಸಾಧು ಮತ್ತು ಹರಿದ್ವಾರದಲ್ಲಿ ದೀಕ್ಷೆ ತೆಗೆದುಕೊಳ್ಳುವವರನ್ನು ಬರ್ಫಾನಿ ನಾಗ ಸಾಧು ಎಂದು ಕರೆಯಲಾಗುತ್ತದೆ. ಇದರೊಂದಿಗೆ, ನಾಸಿಕ್‌ನಲ್ಲಿ ದೀಕ್ಷೆ ತೆಗೆದುಕೊಳ್ಳುವವರನ್ನು ಬರ್ಫಾನಿ ಮತ್ತು ಖಿಚ್ಡಿಯಾ ನಾಗ ಸಾಧು ಎಂದು ಕರೆಯಲಾಗುತ್ತದೆ.

ನಾಗ ಸಾಧುಗಳು ಭಾರತದಾದ್ಯಂತ ಧಾರ್ಮಿಕ ತೀರ್ಥಯಾತ್ರೆಗಳನ್ನು ಕೈಗೊಳ್ಳುತ್ತಾರೆ. ಅವರು ವಿವಿಧ ದೇವಾಲಯಗಳು, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಉಪಸ್ಥಿತಿಯನ್ನು ಗುರುತಿಸುತ್ತಾರೆ. ಅನೇಕ ನಾಗಾ ಸಾಧುಗಳು ಅಜ್ಞಾತವಾಗಿ ವಾಸಿಸುತ್ತಾರೆ ಮತ್ತು ಸಾಮಾನ್ಯ ಸಮಾಜದಿಂದ ದೂರವಾಗಿ ತಮ್ಮ ಜೀವನವನ್ನು ಕಳೆಯುತ್ತಾರೆ. ಅವರ ಸಾಧನೆ ಮತ್ತು ಜೀವನಶೈಲಿ ಅವರನ್ನು ಸಮಾಜದಿಂದ ವಿಭಿನ್ನ ಮತ್ತು ಸ್ವತಂತ್ರರನ್ನಾಗಿ ಮಾಡುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:42 pm, Mon, 13 January 25