AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಸ್​ ಮಾಡದೇ ಓದಿ! ಯಾವುದೇ ವ್ಯಕ್ತಿ  ಶಿವನಿಂದ ಕಲಿಯಬೇಕಾದ ಅತ್ಯುತ್ತಮ ಎಂಟು ಮ್ಯಾನೇಜ್ಮೆಂಟ್​ ಪಾಠಗಳು..

Maha Shivratri Special Class: ಮಹಾ ಶಿವರಾತ್ರಿ ಸಂದರ್ಭದಲ್ಲಿ ವಿಶೇಷ ಪಾಠ. ಶಿವನಿಂದ ಈ ಎಂಟು ಪ್ರಮುಖ ಮ್ಯಾನೇಜ್ಮೆಂಟ್​ ಸ್ಕಿಲ್​ಗಳನ್ನು ಕಲಿತರೆ... ಯಾವುದೇ ವ್ಯಕ್ತಿ ಅತ್ಯುತ್ತಮ ಮ್ಯಾನೇಜರ್ ಆಗುವುದರಲ್ಲಿ ಸಂಶಯವಿಲ್ಲ. ಓಂ ನಮಶಿವಾಯ।

ಮಿಸ್​ ಮಾಡದೇ ಓದಿ! ಯಾವುದೇ ವ್ಯಕ್ತಿ  ಶಿವನಿಂದ ಕಲಿಯಬೇಕಾದ ಅತ್ಯುತ್ತಮ ಎಂಟು ಮ್ಯಾನೇಜ್ಮೆಂಟ್​ ಪಾಠಗಳು..
ಯಾವುದೇ ವ್ಯಕ್ತಿ  ಶಿವನಿಂದ ಕಲಿಯಬೇಕಾದ 8  ಮ್ಯಾನೇಜ್ಮೆಂಟ್​ ಪಾಠಗಳು..
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 08, 2024 | 4:45 PM

ಓಂ ನಮಶಿವಾಯ – ದಿನಕ್ಕೊಮ್ಮೆಯಾದರೂ ಆ ಶಿವನ ನಾಮವನ್ನು ಭಕ್ತಿಯಿಂದ ಅನೇಕರು ಸ್ಮರಿಸುತ್ತಾರೆ. ಆದರೆ ಮ್ಯಾನೇಜ್ ಮೆಂಟ್ ಗುರುಗಳು ಆ ಪರಮೇಶ್ವರನನ್ನು ತಮ್ಮ ಗುರು ಎಂದು ಪರಿಗಣಿಸುತ್ತಾರೆ. ಹಾಗಾದರೆ ಶಿವನಿಂದ ಕಲಿಯಬೇಕಾದ ಮ್ಯಾನೇಜ್ಮೆಂಟ್ ಪಾಠಗಳೇನು? ಎಂಬ ಕುತೂಹಲ ಮೂಡಬಹುದು. ವಾಸ್ತವವಾಗಿ, ಲಯಕಾರನಿಂದ ಕಲಿಯಲು ಬಹಳಷ್ಟಿದೆ. ಆದರೆ ಅದರಲ್ಲಿ ಎಂಟು ಮ್ಯಾನೇಜ್ಮೆಂಟ್ ಪಾಠಗಳ ಬಗ್ಗೆ ನಿಮಗೆ ತಿಳಿದರೆ.. ಎಲ್ಲರೂ ಅವರನ್ನು ಮ್ಯಾನೇಜ್‌ಮೆಂಟ್ ಗುರು ಎಂದು ಏಕೆ ಕರೆಯುತ್ತಾರೆ ಎಂಬುದು ನಿಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ.

ಜಗತ್ತಿನಲ್ಲಿ ಯಾವುದು ಸುಲಭ? ಕೆಲಸ ಮಾಡುವುದಾ? ಮಾಡಿಸುವುದಾ? ಅಥವಾ ಕೆಲಸವನ್ನು ಪರಿಣಾಮಕಾರಿಯಾಗಿ ಅಚ್ಚುಕಟ್ಟಾಗಿ ತಾನೇ ಮಾಡುವುದೇ? ಅಂದರೆ, ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಉತ್ತರವನ್ನು ನೀಡುತ್ತಾನೆ. ಆದರೆ ಶಿವನನ್ನು ಅನುಸರಿಸುವವರು, ಮ್ಯಾನೇಜರ್ ಆಗಿ ಕಾರ್ಯನಿರ್ವವಹಿಸುವುದು ತುಂಬಾ ಸುಲಭ. ಶಿವನಿಂದ ಆ 8 ಗುಣಗಳನ್ನು ಕಲಿಯಿರಿ.. ಸಕೆಲಸ, ವ್ಯವಹಾರ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವ ಮೂಲಕ ನೀವು ಯಶಸ್ಸನ್ನು ಸಾಧಿಸಬಹುದು. ಹಾಗಾದರೆ 8 ನಿರ್ವಹಣೆ ಪಾಠಗಳು ಯಾವುವು? ಸ್ಟಾರ್ಟ್‌ಅಪ್‌ಗಳ ಈ ದಿನಮಾನದಲ್ಲಿ ಆಧುನಿಕ ಮ್ಯಾನೇಜರ್​​ಗಳು ಎದುರಿಸುವ ಪ್ರತಿಯೊಂದು ಸಮಸ್ಯೆಗೂ ಇಸದು ಉತ್ತರವಾಗಿದೆ.

1. ಸಮತೋಲನ.. ಶಿವನನ್ನು ಮಹಾಯೋಗಿ ಎಂದು ಕರೆಯುತ್ತಾರೆ. ಸದಾ ಧ್ಯಾನದಲ್ಲಿರುವ ಈಶ್ವರನು ಈ ಸಮಸ್ತ ವಿಶ್ವವನ್ನು ನಿಯಂತ್ರಿಸುತ್ತಾನೆ. ಅದೇ ಸಮಯದಲ್ಲಿ ಅವನು ತನ್ನ ಕುಟುಂಬವನ್ನು ಸಹ ನೋಡಿಕೊಳ್ಳುತ್ತಾನೆ. ಇದರರ್ಥ ಈ ಆಧುನಿಕ ಯುಗದಲ್ಲಿ ಮ್ಯಾನೇಜರ್‌ಗಳು ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಹೇಗೆ ಸಮತೋಲನಗೊಳಿಸಬೇಕು ಎಂಬುದನ್ನು ಲಯಕಾರನನ್ನು ನೋಡಿ ಕಲಿಯಬೇಕು. ಎಲ್ಲೆಲ್ಲಿ ಕೆಲಸ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನದ ಕೊರತೆ ಇದೆಯೋ.. ಒಂದಕ್ಕೆ ಆದ್ಯತೆ ನೀಡಿ ಮತ್ತೊಬ್ಬರಿಗೆ ನೀಡದಿದ್ದರೂ ಸಮಸ್ಯೆಗಳು ಎದುರಾಗುತ್ತವೆ. ಅದಕ್ಕಾಗಿಯೇ ಮ್ಯಾನೇಜರ್​​ಗಳು ವೃತ್ತಿ ಮತ್ತು ಕುಟುಂಬಕ್ಕೆ ಆದ್ಯತೆ ನೀಡಬೇಕು ಮತ್ತು ಉತ್ತಮ ಫಲಿತಾಂಶಗಳನ್ನು ಸಾಧಿಸಬೇಕು.

2. ಬದಲಾವಣೆ ಮ್ಯಾನೇಜ್ಮೆಂಟ್​ ಅನ್ನು ಅಭ್ಯಾಸ ಮಾಡಿ.. ಶಿವನನ್ನು ಮಹೇಶ್ವರನೆಂದು ಅಳೆಯಲಾಗುತ್ತದೆ. ಅಂದರೆ ಅವನಲ್ಲಿ ಎರಡು ಗುಣಗಳಿವೆ ಎಂದರ್ಥ. ಸೃಷ್ಟಿ ಮತ್ತು ವಿನಾಶ. ವಿಷ್ಣುವು ಶಕ್ತಿಯಾದರೆ.. ಶಿವನು ಲಯಕಾರನಾಗುತ್ತಾನೆ. ಈ ಎರಡರ ಸಂಯೋಗದಿಂದ ಪಾರ್ವತೀಪತಿಯು ನಮಗೆ ಗೋಚರಿಸುವುದರಿಂದ ಮಹೇಶ್ವರನೆಂದು ಕರೆಯಲ್ಪಡುತ್ತಾನೆ. ಹಾಗಾಗಿ.. ಯಾವಾಗ ಮತ್ತು ಯಾವುದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಸಮಸ್ಯೆ ಎದುರಾದರೂ.. ಮ್ಯಾನೇಜರ್.. ಆ ಸಮಸ್ಯೆಯನ್ನು ಎದುರಿಸಬೇಕು. ಅದನ್ನು ನಿಭಾಯಿಸಬೇಕು. ಪರಿಣಾಮಗಳನ್ನು ಸಹ ಒಪ್ಪಿಕೊಳ್ಳಬೇಕು. ಎಲ್ಲೆಲ್ಲಿ ಅವಶ್ಯವಿದ್ದರೂ.. ಬದಲಾವಣೆ ನಿರ್ವಹಣಾ ತತ್ವ ಜಾರಿಗೆ ತರಬೇಕು. ಈ ಪ್ರಕ್ರಿಯೆಯಲ್ಲಿ ಎದುರಾಗುವ ಸವಾಲುಗಳನ್ನು ಜಯಿಸಬೇಕು. ಆಗ ಮಾತ್ರ ನೀವು ಯಶಸ್ವಿ ಮ್ಯಾನೇಜರ್ ಆಗುತ್ತೀರಿ.

3. ಸಮಾನತೆಯಿಂದ ನೋಡುವುದು.. ಸಮಾನತೆಯಿಂದ ಕಾಣದಿದ್ದರೆ ಅಸಮಾನತೆ ಹೆಚ್ಚುತ್ತದೆ. ನಿಜ ಹೇಳಬೇಕೆಂದರೆ ನಮ್ಮ ದೇಶದಲ್ಲಿ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನತೆ ಇಲ್ಲ. ಇನ್ನೂ, ಪುರುಷರು ಮಹಿಳೆಯರಿಗಿಂತ ಉತ್ತಮ ನಿರ್ವಾಹಕರಾಗಿರುತ್ತಾರೆ. ಆದರೆ ಶಿವನನ್ನು ನೋಡಿ. ಆತ ತನ್ನ ದೇಹ ಮತ್ತು ಮನಸ್ಸಿನ ಅರ್ಧವನ್ನು ತನ್ನ ಸಂಗಾತಿಯಾದ ಪಾರ್ವತಿಗೆ ಕೊಟ್ಟು.. ಅರ್ಧನಾರೀಶ್ವರನಾದನು. ಆತ ಪಾರ್ವತಿ ದೇವಿಯನ್ನು ಆದಿಶಕ್ತಿ ಎಂದು ಕರೆದ. ಆದಿಶಕ್ತಿ ಎಂದರೆ.. ವಿಶ್ವದಲ್ಲಿರುವ ಎಲ್ಲದಕ್ಕೂ ಆ ತಾಯಿಯೇ ಪರಮೋಚ್ಛ. ಪ್ರಮುಖ ನಿರ್ಧಾರಗಳಲ್ಲಿ ಅವನು ಅವಳ ಸಲಹೆಯನ್ನು ತೆಗೆದುಕೊಳ್ಳುತ್ತಾನೆ. ಅಂದರೆ ಉತ್ತಮ ನಿರ್ವಾಹಕರಾಗಲು.. ಪುರುಷರು ಮತ್ತು ಮಹಿಳೆಯರನ್ನು ಸಮಾನವಾಗಿ ಕಾಣಬೇಕು. ಪೂರ್ವಾಗ್ರಹವಿಲ್ಲದೆ ಎಲ್ಲ ನೌಕರರನ್ನು ಸಮಾನವಾಗಿ ಕಾಣಬೇಕು.

4. ನಾವೀನ್ಯತೆ ಮತ್ತು ಸೃಜನಶೀಲತೆ.. ಕ್ಷೀರಸಾಗರದ ಮಂಥನದಲ್ಲಿ ಏನಾಯಿತು ಎಂದು ಹಲವರು ನೆನಪಿಸಿಕೊಳ್ಳುತ್ತಾರೆ. ಹಾಲಾಹಲವು ಹುಟ್ಟಿದಾಗ ಎಲ್ಲವನ್ನೂ ನಾಶಮಾಡುತ್ತದೆ ಎಂದು ಎಲ್ಲಾ ದೇವತೆಗಳು ಭಯಪಟ್ಟರು. ಇದರೊಂದಿಗೆ ಎಲ್ಲರೂ ಆ ಹಾಲಾಹಲವನ್ನು ಸ್ವತಃ ಸೇವಿಸುವಂತೆ ಶಿವನನ್ನು ಪ್ರಾರ್ಥಿಸಿದರು.. ಇಡೀ ಸೃಷ್ಟಿಯನ್ನು ಉಳಿಸಲು ಅವನು ಹಾಲಾಹಲವನ್ನು ಸೇವಿಸಿ ತನ್ನ ಕಂಠದಲ್ಲಿ ಇಟ್ಟುಕೊಂಡನು. ಅದೇನೆಂದರೆ.. ಕಷ್ಟ-ನಷ್ಟಗಳು ಎದುರಾದಾಗ ಅದನ್ನು ಎದುರಿಸಿ ತಾನೇ ಭರಿಸಕೊಂಡ.. ಅದೇ ವೇಳೆ ವಿಶ್ವಕ್ಕೆ ಅಮೃತವನ್ನು ಹಂಚಿದ. ಇಷ್ಟೆಲ್ಲಾ ಕಷ್ಟಕಾಲದಲ್ಲೂ ಬುದ್ಧಿವಂತಿಕೆಯಿಂದ ಯೋಚಿಸಿದ.. ಎಲ್ಲಿಯೂ ಯಾರಿಗೂ ತೊಂದರೆ ಕೊಡಲಿಲ್ಲ. ಈಗಿನ ಮ್ಯಾನೇಜರ್ ಗಳು ಅದೇ ರೀತಿ ಮಾಡಬೇಕು. ಸೃಜನಾತ್ಮಕ ಆವಿಷ್ಕಾರವನ್ನು ಕಷ್ಟಕರ ಸಂದರ್ಭಗಳಲ್ಲಿ ಸಹ ಮರೆಯಬಾರದು. ಅಂದಾಗ ಮಾತ್ರ ಸ್ಪರ್ಧಿಗಳಿಗಿಂತ ಮುಂದಿರಲು ಸಾಧ್ಯ.

5. ತಂಡದ ನಾಯಕತ್ವ.. ಕ್ಷೀರಸಾಗರದ ಮಂಥನದಲ್ಲಿ ದೇವತೆಗಳ ಜೊತೆಗೆ ರಾಕ್ಷಸರು ಸಹ ಭಾಗವಹಿಸಿದರೆ ಮಾತ್ರ ಅದು ಸಾಧ್ಯವಾದೀತು ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂದರೆ ಅಲ್ಲಿ ಟೀಮ್ ವರ್ಕ್ ಮಾಡಿದ್ದರಿಂದಲೇ ಅಮೃತವು ಹೊರಬಂತು. ಇದು ಶಿವನಿಗೆ ಚೆನ್ನಾಗಿ ಗೊತ್ತು. ಅದಕ್ಕೇ ಅವರಿಂದ ಟೀಮ್ ವರ್ಕ್ ಮಾಡಿಸಿದ. ಮ್ಯಾನೇಜರ್ ಸ್ವಯಂಆಗಿ ವೈಯಕ್ತಿಕ ಉತ್ಪಾದನೆಗಿಂತ ಇಡೀ ತಂಡವನ್ನು ಒಟ್ಟಾಗಿ ಕೆಲಸ ಮಾಡಲು ಪ್ರೇರೇಪಿಸಬೇಕು ಮತ್ತು ಪ್ರೋತ್ಸಾಹಿಸಬೇಕು. ಅಂತಹ ಕಷ್ಟದ ಕೆಲಸವನ್ನು ಶಿವನು ಹೇಗೆ ನಿಭಾಯಿಸಿದನೆಂದು ಈ ಕ್ಷೀರಸಾಗರ ಮಂಥನ ಪ್ರಸಂಗವನ್ನು ಮುಂದಿಟ್ಟುಕೊಂಡು ನೋಡಿ. ಅದೇ ರೀತಿ ಮ್ಯಾನೇಜರ್ ಇಂತಹ ವಿಷಯಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಬೇಕು.. ತನ್ನ ತಂಡವನ್ನು ಮುನ್ನಡೆಸುತ್ತಲೇ.. ಅವರಿಂದ ಸಾಧ್ಯವಾದಷ್ಟು ಉತ್ತಮ ಔಟ್ ಪುಟ್ ಪಡೆಯಬೇಕು. ಆಗ ಮಾತ್ರ ಯಶಸ್ಸು ಸಾಧ್ಯ.

6. ಬಲವಾದ ಇಚ್ಛೆ.. ಪರಮೇಶ್ವರನು ತಾನು ಮಾಡುವ ಪ್ರತಿಯೊಂದರಲ್ಲೂ ಇಚ್ಛಾಶಕ್ತಿಯುಳ್ಳವನಾಗಿದ್ದಾನೆ. ಆದುದರಿಂದಲೇ ಅವನು ಮಹಾದೇವನಾದನು. ಮನುಷ್ಯನು ದೃಢ ಸಂಕಲ್ಪದಿಂದ ಮತ್ತು ದೃಢವಾದ ಇಚ್ಛಾಶಕ್ತಿಯಿಂದ ಏನನ್ನಾದರೂ ಮಾಡಿದರೆ, ಅವನು ಖಂಡಿತವಾಗಿಯೂ ಅದರಲ್ಲಿ ಯಶಸ್ವಿಯಾಗುತ್ತಾನೆ. ಮ್ಯಾನೇಜರ್ ಶಿವನಿಂದಲೂ ಈ ಗುಣವನ್ನು ಉದಾಹರಣೆಯಾಗಿ ತೆಗೆದುಕೊಳ್ಳಬೇಕು. ಎಂತಹ ಕಷ್ಟಕಾಲ ಬಂದರೂ, ಎಂತಹ ಸಮಸ್ಯೆಗಳು ಎದುರಾದರೂ ಅವುಗಳತ್ತ ಗಮನ ಹರಿಸಿ ದೃಢ ಸಂಕಲ್ಪದಿಂದ ಪರಿಹರಿಸಬೇಕು. ಸ್ಟಾರ್ಟ್‌ಅಪ್‌ಗಳನ್ನು ನಡೆಸುವವರು.. ಮುಂದೆನಿಂತು ಮುನ್ನಡೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಶಿವನಂತೆ ದೃಢ ಸಂಕಲ್ಪವಿದ್ದರೆ ಮಾತ್ರ ಇದು ಸಾಧ್ಯ.

7. ಏಕಾಗ್ರತೆ.. ಶಿವ ಹೆಚ್ಚಾಗಿ ಧ್ಯಾನದಲ್ಲಿಯೇ ಇರುತ್ತಾನೆ. ಆದ್ದರಿಂದಲೇ ಮಹಾದೇವ ಯಾವುದೇ ಕೆಲಸದಲ್ಲಿ ಹೆಚ್ಚಿನ ಕಾಳಜಿಯನ್ನು ತೋರಿಸಲು ಸಮರ್ಥರಾಗಿದ್ದಾರೆ. ಧ್ಯಾನ ಮಾಡುವುದರಿಂದ.. ಶಾಂತತೆ ಮತ್ತು ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಾಯಿತು. ಇಂದಿನ ದಿನಗಳಲ್ಲಿ ಯಾವುದೇ ಕೆಲಸವನ್ನು ಮಾಡಲು ಏಕಾಗ್ರ ಮನಸ್ಸು ಖಂಡಿತವಾಗಿಯೂ ಅಗತ್ಯವಾಗಿರುತ್ತದೆ. ಅದು ಬೇಕಾದರೆ… ಧ್ಯಾನ ಮಾಡಬೇಕು. ಇದರಿಂದ ಕೆಲಸ ಮತ್ತು ವೈಯಕ್ತಿಕ ಜೀವನದಲ್ಲಿ ಒತ್ತಡವನ್ನು ದೂರ ಮಾಡಬಹುದು. ನೀವು ಧ್ಯಾನ ತಂತ್ರಗಳ ಮೂಲಕ ನಿಮ್ಮ ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸಿದರೆ ಕಷ್ಟಕರ ಸಂದರ್ಭಗಳನ್ನು ಸುಲಭವಾಗಿ ನಿಭಾಯಿಸುವ ಮಾನಸಿಕ ಶಕ್ತಿಯನ್ನು ನೀವು ಹೊಂದಿರುತ್ತೀರಿ. ಈ ದಿನಗಳಲ್ಲಿ ಮ್ಯಾನೇಜರ್‌ಗಳಿಗೆ ಬೇಕಾಗಿರುವುದು ಇದೇ.

8. ಅಪಾಯವನ್ನು ತಡೆದುಕೊಳ್ಳುವ ಸಾಮರ್ಥ್ಯ.. ಶಿವನನ್ನು ರುದ್ರ ಎಂದು ಕರೆಯಲಾಗುತ್ತದೆ. ಅಂದರೆ ನಿರ್ಭೀತ ಎಂದರ್ಥ. ಅವಶ್ಯವಿದ್ದಾಗ ಅಪಾಯವನ್ನು ಎದುರಿಸುವವನೆಂದೂ ಹೆಸರುವಾಸಿ. ಈಶ್ವರ ಯಾವುದೇ ಪರಿಸ್ಥಿತಿಯನ್ನು ನಿರ್ಭಯವಾಗಿ ಎದುರಿಸುತ್ತಾನೆ. ಅಂದರೆ ಕಂಪನಿಗಳಲ್ಲಿ ಮ್ಯಾನೇಜರ್ ಆದವರು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಾಗಿರಬೇಕು. ಇದು ಆತನ ನಿರ್ವಹಣಾ ಕೌಶಲ್ಯವನ್ನು ಹೆಚ್ಚಿಸುತ್ತದೆ. ಶಿವನು ಯಾವುದೇ ಹಾನಿಯನ್ನು ಸಹಿಸುವುದಿಲ್ಲ. ಸಂಸ್ಥೆಯಲ್ಲಿನ ಉಪದ್ರವದ ಬಗ್ಗೆ ಮ್ಯಾನೇಜರ್‌ಗಳು ಸಹ ಕಟ್ಟುನಿಟ್ಟಾಗಿರಬೇಕು. ಭಗವಾನ್ ಶಿವನು ತನ್ನ ಭಕ್ತರಿಂದ ಅಪಾರ ಪ್ರೀತಿ ಮತ್ತು ಭಕ್ತಿಯನ್ನು ಪಡೆಯುತ್ತಾನೆ. ಮ್ಯಾನೇಜರ್ ತನ್ನ ಸಹೋದ್ಯೋಗಿಗಳಿಂದ ಪ್ರೀತಿ ಮತ್ತು ಗೌರವವನ್ನು ಗಳಿಸಬೇಕು. ಪ್ರತಿಯೊಬ್ಬರ ಕೌಶಲ್ಯವನ್ನು ಮೌಲ್ಯಮಾಪನ ಮಾಡುವುದು.. ಆ ಮೂಲಕ ನಾವು ಅವರಿಂದ ಉತ್ತಮ ಫಲಿತಾಂಶಗಳನ್ನು ಸಾಧಿಸುವಂತೆ ಮಾಡಬೇಕು.

ಹಾಗಾದ್ರೆ.. ಈ 8 ಪ್ರಮುಖ ಮ್ಯಾನೇಜ್ಮೆಂಟ್​ ಸ್ಕಿಲ್ ಗಳನ್ನು ಶಿವನಿಂದ ಕಲಿತರೆ.. ಯಾವುದೇ ವ್ಯಕ್ತಿ ಅತ್ಯುತ್ತಮ ಮ್ಯಾನೇಜರ್ ಆಗುವುದರಲ್ಲಿ ಸಂಶಯವಿಲ್ಲ. ಓಂ ನಮಶಿವಾಯ।

ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್