AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ದುಃಖಕ್ಕೆ ಆರು ಕಾರಣಗಳು ಯಾವುವು ಗೊತ್ತಾ? ಗರುಡ ಪುರಾಣದಲ್ಲಿ ಅದರ ವಿವರಣೆ ಹೀಗಿದೆ

ಗ್ರಂಥ ಮತ್ತು ಧರ್ಮಶಾಸ್ತ್ರಗಳು ವ್ಯಕ್ತಿಗೆ ಸರಿಯಾದ ಮಾರ್ಗವನ್ನು ತೋರಿಸುತ್ತದೆ. ಆದರೆ ನಮ್ಮಲ್ಲಿ ಅನೇಕರು ಅದರಲ್ಲಿ ತಿಳಿಯಹೇಳಿರುವ ಸಂಗತಿಗಳನ್ನು ಅನುಸರಿಸುವುದೇ ಇಲ್ಲ.

ನಿಮ್ಮ ದುಃಖಕ್ಕೆ ಆರು ಕಾರಣಗಳು ಯಾವುವು ಗೊತ್ತಾ? ಗರುಡ ಪುರಾಣದಲ್ಲಿ ಅದರ ವಿವರಣೆ ಹೀಗಿದೆ
ನಿಮ್ಮ ದುಃಖಕ್ಕೆ ಆರು ಕಾರಣಗಳು ಇಲ್ಲಿವೆ; ಗರುಡ ಪುರಾಣದಲ್ಲಿ ಅದರ ವಿವರಣೆ ಹೀಗಿದೆ
TV9 Web
| Edited By: |

Updated on: Sep 26, 2021 | 7:54 AM

Share

ಗರುಡ ಪುರಾಣದಲ್ಲಿ ಜೀವನವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವುದಕ್ಕೆ ಅನೇಕ ಸಂಗತಿಗಳನ್ನು ತಿಳಿಯ ಹೇಳಲಾಗಿದೆ. ಇದನ್ನು ಅನುಸರಿಸುತ್ತಾ ಹೋದರೆ ಸಾಕು ಎಲ್ಲ ಕಷ್ಟಗಳಿಂದಲೂ ದೂರವಾಗಿ ನಿಮ್ಮ ಜೀವನ ದಡ ತಲುಪುತ್ತದೆ. ಗ್ರಂಥ ಮತ್ತು ಧರ್ಮಶಾಸ್ತ್ರಗಳು ವ್ಯಕ್ತಿಗೆ ಸರಿಯಾದ ಮಾರ್ಗವನ್ನು ತೋರಿಸುತ್ತದೆ. ಆದರೆ ನಮ್ಮಲ್ಲಿ ಅನೇಕರು ಅದರಲ್ಲಿ ತಿಳಿಯಹೇಳಿರುವ ಸಂಗತಿಗಳನ್ನು ಅನುಸರಿಸುವುದೇ ಇಲ್ಲ. ಅವುಗಳನ್ನು ಕೇಳಿದಾಗ ಪಾಲಿಸುವುದಾಗಿ ತಲೆದೂಗುತ್ತೇವೆ, ಆದರೆ ಮರುಕ್ಷಣವೇ ಅದನ್ನು ಅಲ್ಲಿಯೇ ಬಿಟ್ಟುಬಿಡುತ್ತೇವೆ. ಅದನ್ನು ಆಚರಣೆಗೆ ತರುವುದಿಲ್ಲ. ಈ ಶಾಸ್ತ್ರಗಳನ್ನು ಆಲಿಸಿ, ಅರಿತು, ಅಳವಡಿಸಿಕೊಂಡಿದ್ದೇ ಆದರೆ ಜೀವನದ ಎಲ್ಲ ಸಂಕಷ್ಟಗಳನ್ನೂ ದೂರ ಮಾಡಿಕೊಳ್ಳಬಹುದು.

ಗರುಡ ಮಹಾಪುರಾಣದಲ್ಲಿ ಜೀವನವನ್ನು ಚೆನ್ನಾಗಿ ಮುನ್ನಡೆಸಿಕೊಂಡು ಹೋಗುವುದರ ಜೊತೆಗೆ ಸಾವು ಮತ್ತು ಆ ನಂತರದ ಸ್ಥಿತಿಗಳ ವರ್ಣನೆ ನೀಡಲಾಗಿದೆ. ಈ ಪುರಾಣವನ್ನೆಲ್ಲಾ ವಿಷ್ಣು ಭಗವಾನ್ ತನ್ನ ವಾಹನವಾದ ಗರುಡನಿಗೆ ಸ್ವಯಂ ಹೇಳಿರುವುದಾಗಿ ಗ್ರಂಥಗಳು ಹೇಳುತ್ತವೆ. ಇನ್ನು ಆಚಾರಕಾಂಡದಲ್ಲಿ ಕೆಲವು ಸಂಗತಿಗಳನ್ನು ಉಲ್ಲೇಖಿಸಲಾಗಿದೆ. ಕೆಟ್ಟ ಆಚಾರ ವಿಚಾರಗಳ ಬಗ್ಗೆ ಇದರಲ್ಲಿ ಹೇಳಲಾಗಿದೆ. ಇದರಿಂದಲೇ ಜೀವನದಲ್ಲಿ ದುಃಖ ಸೃಷ್ಟಿಯಾಗುವುದು. ಆರು ಆಚಾರ ಸಂಹಿತೆಗಳನ್ನು ಇಲ್ಲಿ ನೀಡಲಾಗಿದೆ.

1. ಚಿಂತೆ ಚಿಂತೆ ಅಂದರೆ ಅದು ಚಿತೆಗೆ ಸಮಾನ ಎಂದು ಪರಿಗಣಿಸಲಾಗಿದೆ. ಚಿಂತೆ ಜೀವನವನ್ನು ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ. ಚಿಂತೆಯಿದ್ದೆಡೆ ಚಿಂತನೆ ಮಾಡುವ, ಆಲೋಚಿಸುವ ಶಕ್ತಿಯನ್ನೇ ಕಳೆದುಕೊಂಡುಬಿಡುತ್ತೇವೆ. ಆಗಲೇ ಆಗಬಾರದ್ದು ಆಗುವುದು, ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಕಷ್ಟಗಳನ್ನು ಮತ್ತಷ್ಟು ಹೆಚ್ಚಾಗುವುದಕ್ಕೆ ಇದೇ ಕಾರಣವಾಗಿಬಿಡುತ್ತದೆ.

2. ಭಯ ಭೀತಿ ಎಂಬೋದು ಸಾವಿಗೆ ಸಮಾನ ಅನ್ನುತ್ತಾರೆ. ಭಯ ಯಾವುದೇ ಸಮಸ್ಯೆಗೆ ಪರಿಹಾರ ಅಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಅಂದ್ರೆ ಅದನ್ನು ಎದುರಿಸುವುದು ಅತ್ಯಗತ್ಯ. ನಿಮ್ಮ ಮನದಲ್ಲಿ ಯಾವುದರ ಬಗ್ಗೆಯಾದರೂ ಭಯ ಇದೆ ಎಂದಾದರೆ ಅದುವೇ ನಿಮಗೆ ಮುಳುವಾಗುತ್ತದೆ. ಹಾಗಾಇ ಅದನ್ನು ದೂರ ಮಾಡಿಕೊಳ್ಳಬೇಕು. ಭಯಮುಕ್ತರಾಗಿ ಜೀವನ ನಡೆಸಬೇಕಿದೆ.

3. ಈರ್ಷ್ಯೆ ಹೊಟ್ಟೆಕಿಚ್ಚು ಎಂಬುದು ಉದರಾಗ್ನಿ, ಅದು ನಮ್ಮನ್ನೇ ಒಳಗೊಳಗೇ ಜ್ವಲಿಸಿಬಿಡುತ್ತದೆ. ಈರ್ಷ್ಯೆಯಿಂದ ಬೇಯುತ್ತಿರುವ ವ್ಯಕ್ತಿ ಸ್ವತಃ ಸಂತೋಷದಿಂದ ಇರಲಾರ. ಈ ಉದರಾಗ್ನಿಯಿಂದಾಗಿ ತಾನೂ ಉದ್ಧಾರ ಆಗಲಾರ. ಅವರ ಮನದಲ್ಲಿ ಸದಾ ಬೇರೊಬ್ಬರನ್ನು ಮುಂದಕ್ಕೆ ಬಿಡದಂತೆ ಅಡ್ಡಗಾಲು ಹಾಕುವ ಬಗ್ಗೆ ಯೋಚಿಸುವುದೇ ಆಗುತ್ತದೆ. ಇದರಿಂದ ಸ್ವತಃ ತನಗೆ ತಾನೇ ನಷ್ಟ ಮಾಡಿಕೊಂಡು, ನಾಶವಾಗಿಬಿಡುತ್ತಾನೆ.

4. ಕ್ರೋಧ ಕೋಪ ಎಂಬುದು ನುಷ್ಯನ ಆಲೋಚನಾ ಲಹರಿಯನ್ನೇ ನಾಶಮಾಡಿಬಿಡುತ್ತದೆ. ಕೋಪವಿದ್ದೆಡೆ ಮನುಷ್ಯ ಸರಿಯಾದ ನಿರ್ಣಯ ತೆಗೆದುಕೊಳ್ಳಲಾರ. ಅಂತಹುದರಲ್ಲಿ ಮನುಷ್ಯ ದುಃಖದ ಹೊರತಾಗಿ ಬೇರೆ ಏನನ್ನೂ ಸಂಪಾದಿಸಲಾರ. ಹಾಗಾಗಿಯೇ ವ್ಯಕ್ತಿಯ ಮನಸ್ಸು ಶಾಂತವಾಗಿದ್ದು, ಸದಾ ಪ್ರಸನ್ನವಾಗಿರಬೇಕು.

5. ಆಲಸ್ಯ ಆಲಸ್ಯ ವಿಷಕ್ಕೆ ಸಮಾನ ಎನ್ನುತ್ತಾರೆ. ಆಲಸ್ಯ ಮಾಡಿದರೆ ಕ್ಷಣಾರ್ಧದಲ್ಲಿ ಎಲ್ಲವನ್ನೂ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ವ್ಯಕ್ತಿ ಎಷ್ಟೇ ಬುದ್ಧಿವಂತನಿದ್ದರೂ ಸ್ವಲ್ಪವೇ ಆಲಸ್ಯ ಪಟ್ಟರೆ ಅನಾಯಾಸವಾಗಿ ಬಂದಿರುವ ಅವಕಾಶ ಕೈತಪ್ಪುತ್ತದೆ. ಅದರಿಂದ ಕೊನೆಯಲ್ಲಿ ದುಃಖವಷ್ಟೇ ಉಳಿಯುತ್ತದೆ.

6. ನಕಾರಾತ್ಮಕ ಚಿಂತನೆ ಮನುಷ್ಯ ಸದಾ ಸಕಾರಾತ್ಮಕ ಚಿಂತನೆಯಲ್ಲಿ ತೊಡಗಬೇಕು. ನಕಾರಾತ್ಮಕ ಚಿಂತನೆ ಹಚ್ಚಿಕೊಂಡ ವ್ಯಕ್ತಿ ಜೀವನದಲ್ಲಿ ಉತ್ತಮ ಸಂಗತಿಗಳನ್ನೇ ನೋಡಲಾರ. ಇದರಿಂದ ಮಾನಸಿಕವಾಗಿ ಕುಗ್ಗುತ್ತಾನೆ. ಹಾಗಾಗಿಯೇ ಜನ ತಮ್ಮ ಚಿಂಗತನೆಯನ್ನು ಸಕಾರಾತ್ಮಕವಾಗಿಟ್ಟುಕೊಳ್ಳಬೇಕು.

(six habits mentioned in garuda purana root cause of the sorrow)

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್