AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

15,660 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್​ನ 3 ತಂಡಗಳು ಮಾರಾಟ..!

Rajasthan Royals: ಕ್ರಿಕೆಟ್ ಮೈದಾನದಲ್ಲಿ ಈಗ ಬಿಲಿಯನೇರ್‌ಗಳ ಅಬ್ಬರ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಚಾಂಪಿಯನ್ಸ್ 'ರಾಜಸ್ಥಾನ್ ರಾಯಲ್ಸ್' ತಂಡ ಈಗ ಮಿತ್ತಲ್ ಕುಟುಂಬ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್‌ನ ಅದಾರ್ ಪೂನಾವಾಲಾ ಪಾಲಾಗಿದೆ. ಐಪಿಎಲ್ 2026ಕ್ಕೂ ಮುನ್ನ ನಡೆದ ಈ ಐತಿಹಾಸಿಕ ಒಪ್ಪಂದದ ಸಂಪೂರ್ಣ ವಿವರ ಇಲ್ಲಿದೆ.

15,660 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್​ನ 3 ತಂಡಗಳು ಮಾರಾಟ..!
Rajasthan Royals (2)
ಝಾಹಿರ್ ಯೂಸುಫ್
|

Updated on: May 04, 2026 | 8:22 AM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ (IPL) ಮತ್ತೊಂದು ಫ್ರಾಂಚೈಸಿ ಮಾರಾಟವಾಗಿದೆ. ಈ ಬಾರಿ ಮಾರಾಟವಾಗಿದ್ದು ರಾಜಸ್ಥಾನ್ ರಾಯಲ್ಸ್​. ವಿಶ್ವದ ಖ್ಯಾತ ಉಕ್ಕು ಉದ್ಯಮಿ ಲಕ್ಷ್ಮಿ ಎನ್. ಮಿತ್ತಲ್ ನೇತೃತ್ವದ ಮಿತ್ತಲ್ ಕುಟುಂಬ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಅವರು ಜಂಟಿಯಾಗಿ ‘ರಾಜಸ್ಥಾನ ರಾಯಲ್ಸ್’ ತಂಡವನ್ನು ಭರ್ಜರಿ 15,660 ಕೋಟಿ ರೂಪಾಯಿ ($1.65 ಬಿಲಿಯನ್) ಮೊತ್ತಕ್ಕೆ ಖರೀದಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್​ ಫ್ರಾಂಚೈಸಿಯ ಹಿಂದಿನ ಮಾಲೀಕರು ಯಾರು?

  • ಮನೋಜ್ ಬಡಾಲೆ ಅವರ ನೇತೃತ್ವದ ಎಮರ್ಜಿಂಗ್ ಮೀಡಿಯಾ  ರಾಜಸ್ಥಾನ್ ರಾಯಲ್ಸ್​ ತಂಡದ ಶೇ. 65 ರಷ್ಟು ಪಾಲನ್ನು ಹೊಂದಿದ್ದರು.
  • ಅಮೆರಿಕ ಮೂಲದ ಈ ಹೂಡಿಕೆ ಸಂಸ್ಥೆ ರೆಡ್‌ಬರ್ಡ್ ಕ್ಯಾಪಿಟಲ್ ಪಾರ್ಟ್ನರ್ಸ್ 2021 ರಲ್ಲಿ ಆರ್​ಆರ್ ಫ್ರಾಂಚೈಸಿಯ ಶೇ. 15 ರಷ್ಟು ಪಾಲನ್ನು ಖರೀದಿಸಿದ್ದರು.
  • ಲಚ್ಲನ್ ಮರ್ಡೋಕ್ ಅವರು ಸಹ ತಂಡದಲ್ಲಿ ಗಮನಾರ್ಹ ಹೂಡಿಕೆ ಹೊಂದಿದ್ದರು.

ಈಗ ಯಾರು ಪಾಲು ಎಷ್ಟು?

ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಇದೀಗ ಮಿತ್ತಲ್ ಫ್ಯಾಮಿಲಿ ಹಾಗೂ ಆದಾರ್ ಪೂನಾವಾಲಾ ಜಂಟಿಯಾಗಿ ಖರೀದಿಸಿದ್ದಾರೆ. ಈ ಖರೀದಿಯೊಂದಿಗೆ ಇದೀಗ ಆರ್​ಆರ್​ ಫ್ರಾಂಚೈಸಿಯಲ್ಲಿ ಮೂವರು ಮಾಲೀಕರು ರಚನೆಯಾಗಿದ್ದಾರೆ. ಅವರೆಂದರೆ…

  • ಮಿತ್ತಲ್ ಕುಟುಂಬ: ಶೇಕಡಾ 75 ರಷ್ಟು ಪಾಲು ಹೊಂದಲಿದ್ದು, ಬಹುಮತದ ಮಾಲೀಕರಾಗಿ ಹೊರಹೊಮ್ಮಿದ್ದಾರೆ.
  • ಆದಾರ್ ಪೂನಾವಾಲಾ: ಸುಮಾರು ಶೇಕಡಾ 18 ರಷ್ಟು ಪಾಲನ್ನು ಖರೀದಿಸಿದ್ದಾರೆ.
  • ಮನೋಜ್ ಬಡಾಲೆ ಮತ್ತು ತಂಡ: ಈ ಹಿಂದಿನ ಮಾಲೀಕರಾದ ಮನೋಜ್ ಬಡಾಲೆ ಮತ್ತು ಅವರ ಹೂಡಿಕೆದಾರರು ಉಳಿದ ಶೇಕಡಾ 7 ರಷ್ಟು ಪಾಲನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

 3 ತಂಡಗಳು ಮಾರಾಟ!

ಈ ಮಾರಾಟ ಪ್ರಕ್ರಿಯೆಯು ಕೇವಲ ಐಪಿಎಲ್ ತಂಡಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ರಾಜಸ್ಥಾನ್ ರಾಯಲ್ಸ್ ಒಡೆತನದ ಉಳಿದ ಎರಡು ಟೀಮ್​ಗಳನ್ನು ಸೇರಿ ಹೊಸ ಒಪ್ಪಂದ ಮಾಡಲಾಗಿದೆ. ಅದರಂತೆ ಆರ್​ಆರ್ ಫ್ರಾಂಚೈಸಿ ಮಾರಾಟ ಮಾಡಿದ 3 ತಂಡಗಳು ಈ ಕೆಳಗಿನಂತಿದೆ…

  • ರಾಜಸ್ಥಾನ್ ರಾಯಲ್ಸ್​ (ಇಂಡಿಯನ್ ಪ್ರೀಮಿಯರ್ ಲೀಗ್)
  • ಬಾರ್ಬಡೋಸ್ ರಾಯಲ್ಸ್​ (ಕೆರಿಬಿಯನ್ ಪ್ರೀಮಿಯರ್ ಲೀಗ್, ವೆಸ್ಟ್ ಇಂಡೀಸ್)
  • ಪಾರ್ಲ್ ರಾಯಲ್ಸ್​ (ಸೌತ್ ಆಫ್ರಿಕಾ ಟಿ20 ಲೀಗ್​).

ಈ ಮೂರು ತಂಡಗಳನ್ನು ಲಕ್ಷ್ಮಿ ಎನ್. ಮಿತ್ತಲ್ ನೇತೃತ್ವದ ಮಿತ್ತಲ್ ಕುಟುಂಬ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಅವರು ಜಂಟಿಯಾಗಿ 15,660 ಕೋಟಿ ರೂ.ಗೆ ಖರೀದಿಸಿದ್ದಾರೆ.

ಮನೋಜ್ ಬಡಾಲೆ ಮುಂದುವರಿಕೆ:

ತಂಡದ ಸುಗಮ ನಿರ್ವಹಣೆ ಮತ್ತು ಸ್ಥಿರತೆಗಾಗಿ, ಪ್ರಸ್ತುತ ಮಾಲೀಕ ಮನೋಜ್ ಬಡಾಲೆ ಅವರು ಬೋರ್ಡ್ ಸದಸ್ಯರಾಗಿ ಮುಂದುವರಿಯಲಿದ್ದಾರೆ. ಹಳೆಯ ಮತ್ತು ಹೊಸ ಆಡಳಿತದ ನಡುವೆ ಅವರು ಕೊಂಡಿಯಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ.

ಮುಂದಿನ ಹಂತವೇನು?

ಈ ವ್ಯವಹಾರವು 2026 ರ ಮೂರನೇ ತ್ರೈಮಾಸಿಕದ ವೇಳೆಗೆ ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಇದಕ್ಕೆ ಬಿಸಿಸಿಐ (BCCI), ಐಪಿಎಲ್ ಆಡಳಿತ ಮಂಡಳಿ ಮತ್ತು ಭಾರತೀಯ ಸ್ಪರ್ಧಾ ಆಯೋಗದ (CCI) ಅಂತಿಮ ಅನುಮೋದನೆ ಬಾಕಿ ಇದೆ. ಅದರಂತೆ ಐಪಿಎಲ್ 2027 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಹೊಸ ಮಾಲೀಕರ ಅಧೀನದಲ್ಲಿ ಕಣಕ್ಕಿಳಿಯಲಿದೆ.

ಆರ್​ಸಿಬಿ ಹೆಸರಿನಲ್ಲೇ ಉಳಿದ ದಾಖಲೆ:

ಐಪಿಎಲ್​ ಇತಿಹಾಸದಲ್ಲೇ ಅತೀ ದುಬಾರಿ ಮೊತ್ತಕ್ಕೆ ಮಾರಾಟವಾದ ಫ್ರಾಂಚೈಸಿ ಎಂಬ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದೆ.

ಕೆಲ ತಿಂಗಳುಗಳ ಹಿಂದೆಯಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ (Aditya Birla Group) ನೇತೃತ್ವದ ಒಕ್ಕೂಟವು ಸುಮಾರು 16,660 ಕೋಟಿ ರೂಪಾಯಿಗಳಿಗೆ ($1.78 ಬಿಲಿಯನ್) ಖರೀದಿಸಿತ್ತು. ಈ ಒಕ್ಕೂಟದಲ್ಲಿ ಟೈಮ್ಸ್ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲ್ಯಾಕ್‌ಸ್ಟೋನ್ ಕಂಪನಿಗಳು ಪಾಲುದಾರಿಕೆಯನ್ನು ಹೊಂದಿವೆ.

ಇದನ್ನೂ ಓದಿ: IPL 2026: RCB ತಂಡದ ಪ್ಲೇಆಫ್ ಲೆಕ್ಕಾಚಾರ ಹೀಗಿದೆ

ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾದ ಫ್ರಾಂಚೈಸಿ ಎಂಬ ದಾಖಲೆಯನ್ನು ಆರ್​ಸಿಬಿ ನಿರ್ಮಿಸಿತ್ತು. ಇದೀಗ 15,660 ಕೋಟಿ ರೂ.ಗೆ ರಾಜಸ್ಥಾನf ರಾಯಲ್ಸ್​ನ ಫ್ರಾಂಚೈಸಿಯ ತಂಡಗಳನ್ನು ಮಾರಾಟ ಮಾಡಲಾಗಿದೆ.

Follow Us
ಸುವೇಂದು ಅಧಿಕಾರಿಯೇ ದುಷ್ಕರ್ಮಿಗಳ ಗುರಿ? ಹೆಚ್ಚಾಯ್ತು ಅನುಮಾನ
ಸುವೇಂದು ಅಧಿಕಾರಿಯೇ ದುಷ್ಕರ್ಮಿಗಳ ಗುರಿ? ಹೆಚ್ಚಾಯ್ತು ಅನುಮಾನ
ಕಾರು ಪಾರ್ಕ್ ಮಾಡಿ ಹೋಗುವಾಗ ಬೆಲೆಬಾಳುವ ವಸ್ತು ಬಿಟ್ಟು ಹೋಗ್ತೀರಾ? ಎಚ್ಚರ
ಕಾರು ಪಾರ್ಕ್ ಮಾಡಿ ಹೋಗುವಾಗ ಬೆಲೆಬಾಳುವ ವಸ್ತು ಬಿಟ್ಟು ಹೋಗ್ತೀರಾ? ಎಚ್ಚರ
ಬಂಡೆಯ ಸಂದಿಯಲ್ಲಿ ಸಿಲುಕಿದ ಬಾಲಕನ ತಲೆ, ಕಣ್ಣೆದುರೇ ಹೆಡೆ ಎತ್ತಿ ನಿಂತ ಹಾವು
ಬಂಡೆಯ ಸಂದಿಯಲ್ಲಿ ಸಿಲುಕಿದ ಬಾಲಕನ ತಲೆ, ಕಣ್ಣೆದುರೇ ಹೆಡೆ ಎತ್ತಿ ನಿಂತ ಹಾವು
ತೆಂಗಿನ ಮರ ಕಡಿಯುವುದಕ್ಕೂ ಮುನ್ನ ಅನುಸರಿಸಬೇಕಾದ ವಿಧಾನ ಇಲ್ಲಿದೆ
ತೆಂಗಿನ ಮರ ಕಡಿಯುವುದಕ್ಕೂ ಮುನ್ನ ಅನುಸರಿಸಬೇಕಾದ ವಿಧಾನ ಇಲ್ಲಿದೆ
ಇಂದು ಈ ರಾಶಿಯವರಿಗೆ ಹೂಡಿಕೆಯಿಂದ ಲಾಭವಿದೆ
ಇಂದು ಈ ರಾಶಿಯವರಿಗೆ ಹೂಡಿಕೆಯಿಂದ ಲಾಭವಿದೆ
ಮಾಂಗಲ್ಯ ಸರ ಮನೆ ಮುಂದೆ ಪ್ರತ್ಯಕ್ಷ: ಆದ್ರೂ ಅವನ್ನ ಹೊಡಿಬೇಕು ಎಂದ ಮಹಿಳೆ
ಮಾಂಗಲ್ಯ ಸರ ಮನೆ ಮುಂದೆ ಪ್ರತ್ಯಕ್ಷ: ಆದ್ರೂ ಅವನ್ನ ಹೊಡಿಬೇಕು ಎಂದ ಮಹಿಳೆ
ತಪ್ಪಿದ ಭಾರೀ ದುರಂತ; ಕಾರು ಚಾಲಕ ಬ್ರೇಕ್ ಹಾಕಿದ್ದರಿಂದ ಉಳಿಯಿತು ಜೀವ
ತಪ್ಪಿದ ಭಾರೀ ದುರಂತ; ಕಾರು ಚಾಲಕ ಬ್ರೇಕ್ ಹಾಕಿದ್ದರಿಂದ ಉಳಿಯಿತು ಜೀವ
ಹುತಾತ್ಮ ಅಂಬಾರಿ ಆನೆ ಅರ್ಜುನ ಸ್ಮಾರಕ ಉದ್ಘಾಟನೆ, ಹೇಗಿದೆ, ಎಲ್ಲಿದೆ ನೋಡಿ
ಹುತಾತ್ಮ ಅಂಬಾರಿ ಆನೆ ಅರ್ಜುನ ಸ್ಮಾರಕ ಉದ್ಘಾಟನೆ, ಹೇಗಿದೆ, ಎಲ್ಲಿದೆ ನೋಡಿ
ಕಾನೂನು ಇರುವುದೇ ಹಾಗೆ: ಬಿಜೆಪಿ ಆರೋಪಗಳಿಗೆ ಸ್ಪೀಕರ್ ಖಾದರ್ ಸ್ಪಷ್ಟನೆ
ಕಾನೂನು ಇರುವುದೇ ಹಾಗೆ: ಬಿಜೆಪಿ ಆರೋಪಗಳಿಗೆ ಸ್ಪೀಕರ್ ಖಾದರ್ ಸ್ಪಷ್ಟನೆ
ಭಾರತದಲ್ಲಿ ವಿಶೇಷ ತ್ರಿಶತಕ ಪೂರೈಸಿದ ಅಭಿಷೇಕ್ ಶರ್ಮಾ
ಭಾರತದಲ್ಲಿ ವಿಶೇಷ ತ್ರಿಶತಕ ಪೂರೈಸಿದ ಅಭಿಷೇಕ್ ಶರ್ಮಾ