IND vs PAK: ಯಾಕೆ ಕೈಕುಲುಕಲಿಲ್ಲ ಎಂದು ಕೇಳಿದ ಪತ್ರಕರ್ತನಿಗೆ ಮುಖಕ್ಕೆ ಹೊಡೆದಂತೆ ತಿರುಗೇಟು ಕೊಟ್ಟ ಸೂರ್ಯಕುಮಾರ್
Asia Cup 2025, India vs Pakistan: ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯದ ನಂತರ ಟೀಮ್ ಇಂಡಿಯಾ ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕದಿದ್ದಾಗ, ನೆರೆಯ ದೇಶದಲ್ಲಿ ಇದು ದೊಡ್ಡ ಸುದ್ದಿಯಾಗಿದೆ. ಕ್ರೀಡಾ ಮನೋಭಾವವನ್ನು ಉಲ್ಲೇಖಿಸಿ, ಪಾಕಿಸ್ತಾನಿಗಳು ಸೂರ್ಯಕುಮಾರ್ ಅವರನ್ನು ಪ್ರಶ್ನಿಸಲು ಶುರುಮಾಡಿದ್ದಾರೆ. ಆದರೆ, ಇಂಥವರಿಗೆ ಸೂರ್ಯ ಸರಿಯಾಗಿ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಸೆ. 15): 2025 ರ ಏಷ್ಯಾ ಕಪ್ನಲ್ಲಿ ನಿನ್ನೆ (ಸೆ. 14) ಭಾರತ (Indian Cricket Team) ಮತ್ತು ಪಾಕಿಸ್ತಾನ ನಡುವೆ ಗುಂಪು ಹಂತದ ಪಂದ್ಯ ನಡೆಯಿತು. ಈ ಪಂದ್ಯವನ್ನು ಭಾರತ ತಂಡ 7 ವಿಕೆಟ್ಗಳಿಂದ ಬಹಳ ಸುಲಭವಾಗಿ ಗೆದ್ದುಕೊಂಡಿತು. ಪಂದ್ಯ ಮುಗಿದ ನಂತರ, ಭಾರತ ತಂಡವು ಯಾವುದೇ ಆಟಗಾರರು ಪಾಕಿಸ್ತಾನಿ ಆಟಗಾರನೊಂದಿಗೆ ಹಸ್ತಲಾಘವ ಮಾಡಲಿಲ್ಲ ಮತ್ತು ಪಾಕಿಸ್ತಾನ ತಂಡ ಇದಕ್ಕಾಗಿ ಕಾಯುತ್ತ ನಿಂತರೂ ಯಾವುದೇ ಟೀಮ್ ಇಂಡಿಯಾ ಪ್ಲೇಯರ್ಸ್ ಬರಲಿಲ್ಲ. ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ವಿನ್ನಿಂಗ್ ಶಾಟ್ ಹೊಡೆದ ತಕ್ಷಣ, ಅವರು ತಮ್ಮ ಸಹ ಆಟಗಾರ ಶಿವಂ ದುಬೆ ಅವರೊಂದಿಗೆ ಮೈದಾನದಿಂದ ಹೊರನಡೆದರು.
ಪಾಕಿಸ್ತಾನಿಗಳಿಗೆ ತಕ್ಕ ಉತ್ತರ ನೀಡಿದ ಸೂರ್ಯಕುಮಾರ್ ಯಾದವ್
ಟೀಮ್ ಇಂಡಿಯಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಈ ನಿರ್ಧಾರದ ನಂತರ, ಒಂದೆಡೆ ಭಾರತೀಯ ಅಭಿಮಾನಿಗಳು ಸಂಪೂರ್ಣವಾಗಿ ಸಂತೋಷಗೊಂಡಿದ್ದಾರೆ. ಅದೇ ಸಮಯದಲ್ಲಿ, ಈ ವಿಷಯದ ಬಗ್ಗೆ ಪಾಕಿಸ್ತಾನದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ನಿನ್ನೆ ರಾತ್ರಿಯಿಂದ, ಪಾಕಿಸ್ತಾನಿ ಮಾಧ್ಯಮವಾಗಲಿ ಅಥವಾ ಮಾಜಿ ಪಾಕಿಸ್ತಾನಿ ಆಟಗಾರರಾಗಲಿ, ಭಾರತೀಯ ತಂಡವು ತಮ್ಮೊಂದಿಗೆ ಕೈಕುಲುಕಲಿಲ್ಲ ಎಂದು ಅವರು ಟೀಕಿಸುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಮತ್ತು ಅವರ ತಂಡವು ಕ್ರೀಡಾ ಮನೋಭಾವವನ್ನು ಅವಮಾನಿಸಿದೆ ಎಂದು ಸಹ ಪಾಕಿಸ್ತಾನಿಗಳು ಉಲ್ಲೇಖಿಸುತ್ತಿದ್ದಾರೆ, ಆದರೆ ಸೂರ್ಯ ಅಂತಹ ಜನರಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ. ಈ ಉತ್ತರ ಪಾಕಿಸ್ತಾನಿಗಳನ್ನು ಮೌನಗೊಳಿಸಿದೆ.
ಪಂದ್ಯ ಮುಗಿದ ನಂತರ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಬೇಸರದಲ್ಲಿ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ಗೂ ಬಂದಿರಲಿಲ್ಲ. ಆದರೆ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯದ ನಂತರವೂ ಪಾಕಿಸ್ತಾನಿಗಳಿಗೆ ಬುದ್ದಿ ಕಲಿಸಲು ಹಿಂಜರಿಯಲಿಲ್ಲ. ಪಂದ್ಯದ ನಂತರ ಸೂರ್ಯ ಪತ್ರಿಕಾಗೋಷ್ಠಿಗೆ ಬಂದಾಗ, ಪತ್ರಕರ್ತರೊಬ್ಬರು ಅವರನ್ನು ಟೀಮ್ ಇಂಡಿಯಾ ಜೊತೆ ಕೈಕುಲುಕದಿರುವ ನಿರ್ಧಾರ ಅವರದ್ದೇ ಅಥವಾ ಬೇರೆಯವರದ್ದೇ ಎಂದು ಕೇಳಿದರು.
ಕ್ರೀಡಾ ಮನೋಭಾವವನ್ನು ಮೀರಿ ಹಲವು ವಿಷಯಗಳಿವೆ: ಸೂರ್ಯ
ಈ ಪ್ರಶ್ನೆಗೆ ಉತ್ತರಿಸಿದ ಸೂರ್ಯ, ಜೀವನದಲ್ಲಿ ಕ್ರೀಡಾ ಮನೋಭಾವಕ್ಕಿಂತ ಕೆಲವು ವಿಷಯಗಳು ದೊಡ್ಡವು ಎಂದು ಹೇಳಿದರು. ‘‘ನಾವು ಇಲ್ಲಿಗೆ ಕ್ರಿಕೆಟ್ ಆಡಲು ಮಾತ್ರ ಬಂದಿದ್ದೇವೆ ಮತ್ತು ಅದನ್ನೇ ನಾವು ಮಾಡಿದ್ದೇವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮರಣ ಹೊಂದಿದವರಿಗೆ ಮಾತ್ರ ಈ ಗೆಲುವು ಸಮರ್ಪಿತವಾಗಿದೆ ಎಂದು ಪಂದ್ಯದ ನಂತರದ ಪ್ರಸ್ತುತಿಯಲ್ಲಿ ತಾನು ಈಗಾಗಲೇ ಹೇಳಿದ್ದೇನೆ ಮತ್ತು ಭಾರತೀಯ ಸಶಸ್ತ್ರ ಪಡೆಗಳು ನಮ್ಮನ್ನು ಖುಷಿಯಾಗಿರುವಂತೆ ನೋಡಿಕೊಳ್ಳುತ್ತದೆ. ಕ್ರಿಕೆಟ್ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಲು ನಮಗೆ ಅವಕಾಶ ಸಿಕ್ಕಾಗಲೆಲ್ಲಾ ನಾವು ನಮ್ಮ ದೇಶಕ್ಕೆ ಸಂತೋಷವನ್ನು ನೀಡುತ್ತಲೇ ಇರಬೇಕು’’ ಎಂದು ಸೂರ್ಯ ಹೇಳಿದರು. ಸೂರ್ಯನ ಈ ಹೇಳಿಕೆಯು ನಿನ್ನೆ ರಾತ್ರಿಯಿಂದ ಕ್ರೀಡಾ ಮನೋಭಾವದ ಬಗ್ಗೆ ಮಾತನಾಡುತ್ತಿರುವ ಎಲ್ಲರ ಬಾಯಿ ಮುಚ್ಚಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




