World Cadets Chess: ವಿಶ್ವ ಚೆಸ್ ಚಾಂಪಿಯನ್ಶಿಪ್ ಗೆದ್ದು ‘ಅಪ್ಪು’ಗೆ ಅರ್ಪಿಸಿದ ಪುಟ್ಟ ಕನ್ನಡತಿ
World Cadets Chess: ಚಾರ್ವಿ ಕೊನೆಯ ಮೂರು ಸುತ್ತುಗಳಲ್ಲಿ ಎರಡನೇ ಸ್ಥಾನ ಗಳಿಸಿದ ಬೋಧನ ಶಿವಾನಂದನ್ ( ಇಂಗ್ಲೆಂಡ್ ) ಅವರನ್ನು ಫಾಲೋ ಮಾಡಿದ್ದರು.

ಯೂರೋಪ್ನ ಜಾರ್ಜಿಯಾದಲ್ಲಿ ನಡೆದ FIDE ವಿಶ್ವ ಕೆಡೆಟ್ಸ್ ಚೆಸ್ ಚಾಂಪಿಯನ್ಶಿಪ್ನಲ್ಲಿ (World Cadets Chess) ಕರ್ನಾಟಕದ ಎ ಚಾರ್ವಿ (A Charvi) ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 8 ವರ್ಷದೊಳಗಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಾಸನದ ಪುಟ್ಟ ಪೋರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪಾತಾಕೆಯನ್ನು ಹಾರಿಸಿದರು. ವಿಶೇಷ ಎಂದರೆ ತನ್ನ ಈ ವಿಶ್ವ ಚಾಂಪಿಯನ್ ಗೆಲುವನ್ನು ಚಾರ್ವಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅವರಿಗೆ ಅರ್ಪಿಸಿದ್ದಾರೆ.
ಅಪ್ಪಟ ‘ಅಪ್ಪು’ ಅಭಿಮಾನಿಯಾಗಿರುವ ಹಾಸನದ ಶ್ರವಣಬೆಳಗೊಳ ಮೂಲದ ಚಾರ್ವಿ ತನ್ನ ಗೆಲುವನ್ನು ತನ್ನ ನೆಚ್ಚಿನ ನಟ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಸಮರ್ಪಿಸುವುದಾಗಿ ತಿಳಿಸಿದ್ದಾರೆ. ಈ ಮೂಲಕ ತನ್ನ ಆಲ್ಟೈಮ್ ಫೇವರೇಟ್ ನಟನಿಗೆ ವಿಶ್ವ ಚಾಂಪಿಯನ್ ಪಟ್ಟದೊಂದಿಗೆ ಗೌರವ ಸೂಚಿಸಿದ್ದಾರೆ.
Little Charvi makes the country proud by winning gold at the World under-8 girls championship 2022. Experience the goosebumps as the Indian national anthem plays in Batumi, Georgia! pic.twitter.com/iBFerHgVwX
— ChessBase India (@ChessbaseIndia) September 27, 2022
ಈ ಸ್ಪರ್ಧೆಯಲ್ಲಿ 8 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚಾರ್ವಿ 11 ಸುತ್ತುಗಳಿಂದ 9.5 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರು. ಚಾರ್ವಿ ಕೊನೆಯ ಮೂರು ಸುತ್ತುಗಳಲ್ಲಿ ಎರಡನೇ ಸ್ಥಾನ ಗಳಿಸಿದ ಬೋಧನ ಶಿವಾನಂದನ್ ( ಇಂಗ್ಲೆಂಡ್ ) ಅವರನ್ನು ಫಾಲೋ ಮಾಡಿದ್ದರು. ಆದರೆ ಇಬ್ಬರೂ 9.5 ಅಂಕಗಳೊಂದಿಗೆ ಚದುರಂಗದಾಟವನ್ನು ಕೊನೆಗೊಳಿಸಿದ್ದರು. ಆ ನಂತರ ಉತ್ತಮ ಟೈ-ಬ್ರೇಕ್ ಸ್ಕೋರ್ನಲ್ಲಿ ಬೋಧನ ಅವರನ್ನು ಹಿಂದಿಕ್ಕಿ ಚಾರ್ವಿ ಲಿಟಲ್ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಎ ಚಾರ್ವಿ
ಚಾರ್ವಿ ಅಲ್ಲದೆ, ಗಾಜಿಯಾಬಾದ್ ಮೂಲದ ಶುಭಿ ಗುಪ್ತಾ ಅವರು 12 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಅಲಂಕರಿಸಿದ್ದರು. 11 ಸುತ್ತುಗಳಿಂದ 8.5 ಅಂಕಗಳನ್ನು ಗಳಿಸಿದ ಶುಭಿ ಗುಪ್ತಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು.
Congratulations Charvi!! Rise of a new star https://t.co/mK8QpcJTTp
— Viswanathan Anand (@vishy64theking) September 28, 2022
ಕರ್ನಾಟಕದ ಕೀರ್ತಿ ಪಾತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ ಚಾರ್ವಿಯ ಈ ಸಾಧನೆಯನ್ನು 5 ಬಾರಿಯ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅಭಿನಂದಿಸಿದ್ದಾರೆ.
ರಾಜ್ಯ ಸರ್ಕಾರದಿಂದ 5 ಲಕ್ಷ ರೂ.:
ವಿಶ್ವ ಕೆಡೆಟ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ವಿಜೇತರಾಗಿರುವ ಹಾಸನ ಮೂಲದ ಚಾರ್ವಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಕ್ರೀಡಾ ಸಚಿವ ನಾರಾಯಣಗೌಡ ಘೋಷಿಸಿದ್ದಾರೆ.
Published On - 11:02 am, Wed, 28 September 22




