Viral: ಯಾವತ್ತಾದ್ರೂ ಒಣ ಕಪ್ಪೆ ಚಟ್ನಿ ಟ್ರೈ ಮಾಡಿದ್ದೀರಾ?

ಸೋಷಿಯಲ್‌ ಮೀಡಿಯಾದಲ್ಲಿ ಬಗೆಬಗೆಯ ರೆಸಿಪಿ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅದರಲ್ಲಿ ಕೆಲವು ವಿಚಿತ್ರ ಆಹಾರಗಳನ್ನು ಕಂಡಾಗ ವಾಂತಿ ಬಂದಂತೆ ಆಗುತ್ತೆ. ಇದೀಗ ಇಂತಹದ್ದೇ ವಿಚಿತ್ರ ರೆಸಿಪಿ ವಿಡಿಯೋವೊಂದು ವೈರಲ್‌ ಆಗಿದ್ದು, ವ್ಯಕ್ತಿಯೊಬ್ಬ ಗಂಜಿಯೊಂದಿಗೆ ಸವಿಯಲು ಒಣ ಕಪ್ಪೆಯ ಚಟ್ನಿ ತಯಾರಿಸುವುದನ್ನು ಕಂಡು ನೋಡುಗರು ಫುಲ್‌ ಶಾಕ್‌ ಆಗಿದ್ದಾರೆ.

Viral: ಯಾವತ್ತಾದ್ರೂ ಒಣ ಕಪ್ಪೆ ಚಟ್ನಿ ಟ್ರೈ ಮಾಡಿದ್ದೀರಾ?
ವೈರಲ್​​ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 03, 2024 | 5:43 PM

ಇಡ್ಲಿ, ದೋಸೆಯೊಂದಿಗೆ ಸವಿಯಲು ತೆಂಗಿನಕಾಯಿ ಚಟ್ನಿ ಬೆಸ್ಟ್‌ ಆದ್ರೆ ಕರಾವಳಿಯ ಶೈಲಿಯ ಒಣ ಮೀನು ಚಟ್ನಿ ಗಂಜಿಯೊಟ್ಟಿಗೆ ಸವಿಯಲು ಸಖತ್‌ ರುಚಿಯಾಗಿರುತ್ತದೆ. ಸಾಮಾನ್ಯವಾಗಿ ನೀವು ಕೂಡಾ ಈ ಎರಡೂ ರೆಸಿಪಿಗಳನ್ನು ಟ್ರೈ ಮಾಡಿರ್ತೀರಿ ಅಲ್ವಾ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಸ್ವಲ್ಪ ಡಿಫರೆಂಟ್‌ ಆಗಿರುವ ಚಟ್ನಿ ರೆಸಿಪಿಯೊಂದನ್ನು ತಯಾರಿಸಿದ್ದು, ಈ ಒಣ ಕಪ್ಪೆಯ ರೆಸಿಪಿಯನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

ಈ ಒಣ ಕಪ್ಪೆ ಚಟ್ನಿ ಮಣಿಪುರದ ಸಾಂಪ್ರದಾಯಿಕ ಖಾದ್ಯವಂತೆ. ಒಣ ಕಪ್ಪೆ, ಕೆಂಪು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಮತ್ತು ಪುದೀನಾವನ್ನು ಸೇರಿಸಿ ಕುಟ್ಟಿ ಪುಡಿ ಮಾಡಿ ಈ ಸಾಂಪ್ರದಾಯಿಕ ಚಟ್ನಿಯನ್ನು ತಯಾರಿಸಲಾಗುತ್ತದೆ. ಒಣ ಮೀನಿನ ಚಟ್ನಿಯಂತೆ, ಈ ಕಪ್ಪೆ ಚಟ್ನಿಯನ್ನೂ ಕೂಡಾ ಅನ್ನದೊಂದಿಗೆ ಸವಿಯುತ್ತಾರೆ ಇಲ್ಲಿನ ಜನ. ಈ ರೆಸಿಪಿ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಈ ವಿಡಿಯೋವನ್ನು telien_thefoodie ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಒಣ ಕಪ್ಪೆ ಚಟ್ನಿಯನ್ನು ಹೇಗೆ ತಯಾರಿಸುತ್ತಿದ್ದಾರೆ ಎಂಬ ದೃಶ್ಯವನ್ನು ಕಾಣಬಹುದು. ಮೊದಲಿಗೆ ಒಣ ಕಪ್ಪೆಯನ್ನು ಸ್ಪಲ್ಪ ಬಿಸಿ ಮಾಡಿ ನಂತರ ಅದನ್ನು ಕುಟ್ಟಣಿಗೆಯಲ್ಲಿ ಹಾಕಿ ಬಳಿಕ ಅದರ ಜೊತೆ ಕೆಂಪು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಹಾಕಿ ಎಲ್ಲವನ್ನೂ ಎಲ್ಲವನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಈ ಚಟ್ನಿಯನ್ನು ತಯಾರಿಸಿದ್ದಾರೆ.

ಇದನ್ನೂ ಓದಿ: ಈ ಯುವತಿಗೆ ಕಿಸ್ ಕೊಡಬೇಕಾದ್ರೆ ಈ ಮೂರು ರೂಲ್ಸ್ ಬ್ರೇಕ್ ಮಾಡೋ ಆಗಿಲ್ಲ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

ಆರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 11.8 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಯಾರು ಕೂಡಾ ಇತರರು ತಿನ್ನುವ ಆಹಾರವನ್ನು ದ್ವೇಷಿಸಬೇಕಾಗಿಲ್ಲ, ನೀವು ನಿಮ್ಮ ಇಷ್ಟದ ಆಹಾರವನ್ನು ತಿನ್ನುವಂತೆ ಅವರಿಗೂ ಅವರಿಷ್ಟದ ಆಹಾರವನ್ನು ತಿನ್ನುವ ಹಕ್ಕಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕಪ್ಪೆಯನ್ನು ತಿನ್ನುವುದು ಸುರಕ್ಷಿತವೇʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನವರಾತ್ರಿ: ದುರ್ಗಾ ದೇವಿಗೆ 2.5 ಕೋಟಿ ಮೌಲ್ಯದ ಚಿನ್ನದ ಕಿರೀಟ ಉಡುಗೊರೆ
ನವರಾತ್ರಿ: ದುರ್ಗಾ ದೇವಿಗೆ 2.5 ಕೋಟಿ ಮೌಲ್ಯದ ಚಿನ್ನದ ಕಿರೀಟ ಉಡುಗೊರೆ
ಜಿ.ಟಿ ದೇವೇಗೌಡ ಹೇಳಿಕೆಗೆ ಖಡಕ್ ರಿಯಾಕ್ಷನ್​ ಕೊಟ್ಟ ಹೆಚ್​ಡಿಕೆ
ಜಿ.ಟಿ ದೇವೇಗೌಡ ಹೇಳಿಕೆಗೆ ಖಡಕ್ ರಿಯಾಕ್ಷನ್​ ಕೊಟ್ಟ ಹೆಚ್​ಡಿಕೆ
ಬಿಗ್​ಬಾಸ್​ ಮನೆಯಲ್ಲಿ ಲಾಯರ್​ ಜಗದೀಶ್​ ಜಪ
ಬಿಗ್​ಬಾಸ್​ ಮನೆಯಲ್ಲಿ ಲಾಯರ್​ ಜಗದೀಶ್​ ಜಪ
ಜಿಟಿ ದೇವೇಗೌಡ ಸಿಎಂ ಪರ ಮಾತನಾಡಿದ್ದೇಕೆ? ಕಾರಣ ಬಿಚ್ಚಿಟ್ಟ ಕುಮಾರಸ್ವಾಮಿ!
ಜಿಟಿ ದೇವೇಗೌಡ ಸಿಎಂ ಪರ ಮಾತನಾಡಿದ್ದೇಕೆ? ಕಾರಣ ಬಿಚ್ಚಿಟ್ಟ ಕುಮಾರಸ್ವಾಮಿ!
ಸಿಎಂ ಸಿದ್ದರಾಮಯ್ಯ ಅಂಡ್ ಟೀಮ್​ಗೆ ಓಪನ್ ಚಾಲೆಂಜ್ ಹಾಕಿದ ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಅಂಡ್ ಟೀಮ್​ಗೆ ಓಪನ್ ಚಾಲೆಂಜ್ ಹಾಕಿದ ಆರ್ ಅಶೋಕ್
ರೈಲ್ವೆ ಇಲಾಖೆಯಲ್ಲಿ ಮಹತ್ವದ ಚರ್ಚೆ, ಹೊಸ ಯೋಜನೆಗಳ ಬಗ್ಗೆ ಸಚಿವರ ಮಾತು
ರೈಲ್ವೆ ಇಲಾಖೆಯಲ್ಲಿ ಮಹತ್ವದ ಚರ್ಚೆ, ಹೊಸ ಯೋಜನೆಗಳ ಬಗ್ಗೆ ಸಚಿವರ ಮಾತು
ಮೊಟೊರೊಲ ಜಿ ಸರಣಿಯಲ್ಲಿ ಮತ್ತೊಂದು ಆಕರ್ಷಕ ಸ್ಮಾರ್ಟ್​​ಫೋನ್ ಬಿಡುಗಡೆ
ಮೊಟೊರೊಲ ಜಿ ಸರಣಿಯಲ್ಲಿ ಮತ್ತೊಂದು ಆಕರ್ಷಕ ಸ್ಮಾರ್ಟ್​​ಫೋನ್ ಬಿಡುಗಡೆ
ಸಿಎಂ ಯಾಕೆ ರಾಜೀನಾಮೆ ಕೊಡಬೇಕು? ಸಿದ್ದು ಬೆನ್ನಿಗೆ ನಿಂತ ಜಿಟಿಡಿ
ಸಿಎಂ ಯಾಕೆ ರಾಜೀನಾಮೆ ಕೊಡಬೇಕು? ಸಿದ್ದು ಬೆನ್ನಿಗೆ ನಿಂತ ಜಿಟಿಡಿ