AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral video: ಏಕಕಾಲಕ್ಕೆ ಈ ಬೈಕ್​​​ನಲ್ಲಿ 5 ರಿಂದ 8 ಜನ ಸವಾರಿ ಮಾಡಬಹುದು

ರಸ್ತೆಯೊಂದರಲ್ಲಿ ಟೆಂಡೆಮ್ ಬೈಕ್ ಸವಾರಿ ಹೋಗುವ ವಿಡಿಯೋವನ್ನು ಸಂದೀಪ್ ಪ್ರಜಾಪತಿ ಎನ್ನುವವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಆ ಬೈಕ್ ಸವಾರಿ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

Viral video: ಏಕಕಾಲಕ್ಕೆ ಈ ಬೈಕ್​​​ನಲ್ಲಿ 5 ರಿಂದ 8 ಜನ ಸವಾರಿ ಮಾಡಬಹುದು
ವೈರಲ್ ವೀಡಿಯೊ
ಮಾಲಾಶ್ರೀ ಅಂಚನ್​
| Edited By: |

Updated on:Apr 25, 2023 | 6:35 PM

Share

ಜನರು ಹೊಸದು ಮತ್ತು ಉಪಯುಕ್ತವಾದುದನ್ನು ಮಾಡಲು ಬಯಸುತ್ತಾರೆ. ಇಂಟರ್​​ನೆಟ್​​ನಲ್ಲಿ ನೋಡಿಯೋ ಅಥವಾ ಇನ್ನಾವುದಾದರೂ ವಸ್ತುಗಳನ್ನು ಸ್ಪೂರ್ತಿ ತೆಗೆದುಕೊಂಡು ತನ್ನದೇ ಆದ ಹೊಸ ವಿನ್ಯಾಸದ ವಸ್ತುಗಳನ್ನು ಅನೇಕರು ರಚಿಸುತ್ತಾರೆ. ಅದರಲ್ಲೂ ಮೆಕ್ಯಾನಿಕ್ ಕೆಲಸ ಗೊತ್ತಿರುವವರಂತೂ ವಾಹನಗಳಿಗೆ ಹೊಸ ರೂಪವನ್ನು ನೀಡುವುದರಲ್ಲಿ ನಿಸ್ಸೀಮರು. ತಮ್ಮ ವಾಹನಗಳಲ್ಲಿ ತರಹೇವಾರಿ ವಿನ್ಯಾಸಗಳನ್ನು ರೂಪಿಸಿ ನೋಡುಗರ ಹುಬ್ಬೇರಿಸುವಂತೆ ಮಾಡುತ್ತಾರೆ. ಇದೇ ರೀತಿಯಲ್ಲಿ ಬೈಕ್ ಗೆ ಹೊಸ ವಿನ್ಯಾಸವನ್ನು ನೀಡಿ ರಸ್ತೆಯಲ್ಲಿ ಸವಾರಿ ಹೋಗುತ್ತಿರುವ ವ್ಯಕ್ತಿಯೊಬ್ಬರ ವೀಡಿಯೊ ಇನ್​​ಸ್ಟಾಗ್ರಾಮ್ ನಲ್ಲಿ ಹರಿದಾಡುತ್ತಿದೆ.

ಭಾರತೀಯ ವ್ಯಕ್ತಿಯೊಬ್ಬರು ಟೆಂಡಮ್ ಬೈಕ್ ವಿನ್ಯಾಸವನ್ನು ರೂಪಿಸಿದ್ದು, ಇದರಲ್ಲಿ ಇಬ್ಬರಿಗಿಂತ ಹೆಚ್ಚು ಸವಾರರು ಕುಳಿತುಕೊಳ್ಳಬಹುದಾಗಿದೆ. ಬಹುಶಃ ಇದನ್ನು ಸಾರ್ವಜನಿಕ ಸಾರಿಗೆಯಾಗಿ ಬಳಸಬಹುದು. ಇದು ಅನುಕೂಲಕರವಾದ ವಾಹನವಾಗಿದ್ದು, 5 ರಿಂದ 8 ಜನ ಏಕಕಾಲಕ್ಕೆ ಈ ಬೈಕ್​​​ನಲ್ಲಿ ಕುಲಿತು ಸವಾರಿ ಮಾಡಬಹುದು. ಈ ವಾಹನವೂ ಯಾವುದೇ ಪರಿಸರ ಮಾಲಿನ್ಯವನ್ನು ಉಂಟು ಮಾಡುವುದಿಲ್ಲ. ಟೆಂಡೆಮ್ ಬೈಕ್ ಎನ್ನುವುದು ಎರಡಕ್ಕಿಂತ ಹೆಚ್ಚು ವ್ಯಕ್ತಿಗಳು ಸವಾರಿ ಮಾಡಲು ವಿನ್ಯಾಸಗೊಳಿಸಲಾದ ಬೈಸಿಕಲ್ ನ ಒಂದು ರೂಪವಾಗಿದೆ.

ಇದನ್ನೂ ಓದಿ: Samantha: ಇಂಗ್ಲೆಂಡ್​ ಜನರ ರೀತಿ ಇಂಗ್ಲಿಷ್​ ಮಾತನಾಡಲು ಹೋಗಿ ಟ್ರೋಲ್​ ಆದ ಸಮಂತಾ; ವಿಡಿಯೋ ವೈರಲ್​

ಈ ಟೆಂಡಮ್ ಬೈಕ್ ಸವಾರಿಯ ವಿಡಿಯೋವನ್ನು ಸಂದೀಪ್ ಪ್ರಜಾಪತಿ ಎನ್ನುವವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 730 ಸಾವಿರ ವೀಕ್ಷಣೆ ಮತ್ತು 39.1 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಮತ್ತು ಅನೇಕ ಜನರು ಧನಾತ್ಮಕವಾದ ಕಮೆಂಟ್​​​ಗಳನ್ನು ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ಮಾಡಿ

Published On - 6:35 pm, Tue, 25 April 23

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ