AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ‘ರಾಂಚೋ’ ಎಲ್ಲಿದ್ದೀಯಾ? ಸೆಪ್ಟೆಂಬರ್ 5 ಬಂದಿದೆ!

Teachers Day : ರಾಂಚೋ ಪಾತ್ರಧಾರಿ ಅಮೀರ್​ ಖಾನ್​ ಅವರಿಗೆ ಶಿಕ್ಷಕರ ದಿನಾಚರಣೆ ನಿಮಿತ್ತ ವಿಡಿಯೋ ಸಂದೇಶ ಕಳಿಸಿದ್ಧಾರೆ ಚತುರ್​ ರಾಮಲಿಂಗಂ ಪಾತ್ರಧಾರಿ ಓಮಿ ವೈದ್ಯ. ಏನಿದೆ ವಿಡಿಯೋದಲ್ಲಿ?

Viral Video : ‘ರಾಂಚೋ’ ಎಲ್ಲಿದ್ದೀಯಾ? ಸೆಪ್ಟೆಂಬರ್ 5 ಬಂದಿದೆ!
ಚತುರ್​ ರಾಮಲಿಂಗಮ್ ಖ್ಯಾತಿಯ ನಟ ಓಮಿ ವೈದ್ಯ
TV9 Web
| Edited By: |

Updated on:Sep 06, 2022 | 4:41 PM

Share

Viral Video : ತ್ರೀ ಈಡಿಯಟ್ಸ್​ನಂಥ ಉತ್ತಮ ಸಿನೆಮಾ ನೋಡಿದ ಯಾರೂ ಅಲ್ಲಿರುವ ಎಲ್ಲ ಪಾತ್ರಧಾರಿಗಳನ್ನೂ ಮರೆಯಲು ಸಾಧ್ಯವೇ ಇಲ್ಲ. ಅಮೀರ್ ಖಾನ್, ಕರೀನಾ ಕಪೂರ್ ಖಾನ್, ಮಾಧವನ್ ಮತ್ತು ಬೊಮನ್ ಇರಾನಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಲನಚಿತ್ರವನ್ನು ವೀಕ್ಷಿಸದೇ ಇರುವವರು ಕಡಿಮೆಯೇ. ಈ ಪಾತ್ರವೃಂದದೊಂದಿಗೆ ಗಮನ ಸೆಳೆದ ಚತುರ ನಟನೇ ಚತುರ್ ರಾಮಲಿಂಗಂ ಪಾತ್ರಧಾರಿ ಓಮಿ ವೈದ್ಯ. ಪಂಚಿಂಗ್ ಡೈಲಾಗ್​ ಮತ್ತು ಆಕರ್ಷಕ ಅಭಿನಯದ ಮೂಲಕ ಜನಮನ ಸೆಳೆದ ಓಮಿ ಈಗ, ರಾಂಚೋ ಪಾತ್ರಧಾರಿ ಅಮೀರ್​ ಖಾನ್​ ಅವರಿಗೆ ಶಿಕ್ಷಕರ ದಿನಾಚರಣೆ ನಿಮಿತ್ತ ವಿಡಿಯೋ ಸಂದೇಶ ಕಳಿಸಿದ್ಧಾರೆ. ಈ ವಿಡಿಯೋ ಅನ್ನು ಅವರ ಇನ್​ಸ್ಟಾಗ್ರಾಂ ಖಾತೆಯಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ರಾಂಚೋ ಪಾತ್ರವನ್ನು ಹತ್ತು ವರ್ಷಗಳ ನಂತರ ಭೇಟಿಯಾಗುವೆನೆಂದು ಚತುರ್ ಸವಾಲು ಹಾಕಿದ್ದರು. ಹೀಗೆ ಸವಾಲು ಹಾಕಿದ ದಿನವೂ ಸೆಪ್ಟೆಂಬರ್ 5 ಆಗಿತ್ತು. ಈ ಕ್ಲಿಪ್ ಸಿನೆಮಾದಲ್ಲಿದೆ.

ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದರೂ ಚತುರ್ ಪಾತ್ರವೇ ಓಮಿ ಅವರಿಗೆ ಬ್ರೇಕ್​ ತಂದುಕೊಟ್ಟಿದ್ದು. 52, 500 ಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿರುವ ನಟ ಓಮಿ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ಕ್ಲಿಪ್ ಹಂಚಿಕೊಂಡಿದ್ದಾರೆ. ಈತನಕ 1,29,000 ಲೈಕ್ಸ್​ಗಳನ್ನು ಈ ವಿಡಿಯೋ ಪಡೆದಿದೆ.

ಈ ಮನುಷ್ಯ ಬಂಗಾರದಂತೆ ಎಂದು ಇನ್​ಸ್ಟಾಗ್ರಾಂ ಖಾತೆದಾರರೊಬ್ಬರು ಮರುಹಂಚಿಕೆ ಮಾಡುವಾಗ ಶೀರ್ಷಿಕೆ ಬರೆದಿದ್ದಾರೆ. ಸೆಪ್ಟೆಂಬರ್ 5ನೇ ತಾರೀಖನ್ನು ನೆನಪಿಡಿ ಎಂದು ಹೇಳುತ್ತ ಮತ್ತೊಬ್ಬರು ಮರುಹಂಚಿಕೆ ಮಾಡಿಕೊಂಡಿದ್ದಾರೆ. ನೀವೊಬ್ಬ ದಂತಕಥೆ ಎಂದು ಮಗದೊಬ್ಬರು ಮರುಹಂಚಿಕೆ ಮಾಡಿಕೊಳ್ಳುತ್ತ ಹೊಗಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:32 pm, Tue, 6 September 22

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ