AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ‘ರಾಂಚೋ’ ಎಲ್ಲಿದ್ದೀಯಾ? ಸೆಪ್ಟೆಂಬರ್ 5 ಬಂದಿದೆ!

Teachers Day : ರಾಂಚೋ ಪಾತ್ರಧಾರಿ ಅಮೀರ್​ ಖಾನ್​ ಅವರಿಗೆ ಶಿಕ್ಷಕರ ದಿನಾಚರಣೆ ನಿಮಿತ್ತ ವಿಡಿಯೋ ಸಂದೇಶ ಕಳಿಸಿದ್ಧಾರೆ ಚತುರ್​ ರಾಮಲಿಂಗಂ ಪಾತ್ರಧಾರಿ ಓಮಿ ವೈದ್ಯ. ಏನಿದೆ ವಿಡಿಯೋದಲ್ಲಿ?

Viral Video : ‘ರಾಂಚೋ’ ಎಲ್ಲಿದ್ದೀಯಾ? ಸೆಪ್ಟೆಂಬರ್ 5 ಬಂದಿದೆ!
ಚತುರ್​ ರಾಮಲಿಂಗಮ್ ಖ್ಯಾತಿಯ ನಟ ಓಮಿ ವೈದ್ಯ
TV9 Web
| Edited By: |

Updated on:Sep 06, 2022 | 4:41 PM

Share

Viral Video : ತ್ರೀ ಈಡಿಯಟ್ಸ್​ನಂಥ ಉತ್ತಮ ಸಿನೆಮಾ ನೋಡಿದ ಯಾರೂ ಅಲ್ಲಿರುವ ಎಲ್ಲ ಪಾತ್ರಧಾರಿಗಳನ್ನೂ ಮರೆಯಲು ಸಾಧ್ಯವೇ ಇಲ್ಲ. ಅಮೀರ್ ಖಾನ್, ಕರೀನಾ ಕಪೂರ್ ಖಾನ್, ಮಾಧವನ್ ಮತ್ತು ಬೊಮನ್ ಇರಾನಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಲನಚಿತ್ರವನ್ನು ವೀಕ್ಷಿಸದೇ ಇರುವವರು ಕಡಿಮೆಯೇ. ಈ ಪಾತ್ರವೃಂದದೊಂದಿಗೆ ಗಮನ ಸೆಳೆದ ಚತುರ ನಟನೇ ಚತುರ್ ರಾಮಲಿಂಗಂ ಪಾತ್ರಧಾರಿ ಓಮಿ ವೈದ್ಯ. ಪಂಚಿಂಗ್ ಡೈಲಾಗ್​ ಮತ್ತು ಆಕರ್ಷಕ ಅಭಿನಯದ ಮೂಲಕ ಜನಮನ ಸೆಳೆದ ಓಮಿ ಈಗ, ರಾಂಚೋ ಪಾತ್ರಧಾರಿ ಅಮೀರ್​ ಖಾನ್​ ಅವರಿಗೆ ಶಿಕ್ಷಕರ ದಿನಾಚರಣೆ ನಿಮಿತ್ತ ವಿಡಿಯೋ ಸಂದೇಶ ಕಳಿಸಿದ್ಧಾರೆ. ಈ ವಿಡಿಯೋ ಅನ್ನು ಅವರ ಇನ್​ಸ್ಟಾಗ್ರಾಂ ಖಾತೆಯಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ರಾಂಚೋ ಪಾತ್ರವನ್ನು ಹತ್ತು ವರ್ಷಗಳ ನಂತರ ಭೇಟಿಯಾಗುವೆನೆಂದು ಚತುರ್ ಸವಾಲು ಹಾಕಿದ್ದರು. ಹೀಗೆ ಸವಾಲು ಹಾಕಿದ ದಿನವೂ ಸೆಪ್ಟೆಂಬರ್ 5 ಆಗಿತ್ತು. ಈ ಕ್ಲಿಪ್ ಸಿನೆಮಾದಲ್ಲಿದೆ.

ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದರೂ ಚತುರ್ ಪಾತ್ರವೇ ಓಮಿ ಅವರಿಗೆ ಬ್ರೇಕ್​ ತಂದುಕೊಟ್ಟಿದ್ದು. 52, 500 ಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿರುವ ನಟ ಓಮಿ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ಕ್ಲಿಪ್ ಹಂಚಿಕೊಂಡಿದ್ದಾರೆ. ಈತನಕ 1,29,000 ಲೈಕ್ಸ್​ಗಳನ್ನು ಈ ವಿಡಿಯೋ ಪಡೆದಿದೆ.

ಈ ಮನುಷ್ಯ ಬಂಗಾರದಂತೆ ಎಂದು ಇನ್​ಸ್ಟಾಗ್ರಾಂ ಖಾತೆದಾರರೊಬ್ಬರು ಮರುಹಂಚಿಕೆ ಮಾಡುವಾಗ ಶೀರ್ಷಿಕೆ ಬರೆದಿದ್ದಾರೆ. ಸೆಪ್ಟೆಂಬರ್ 5ನೇ ತಾರೀಖನ್ನು ನೆನಪಿಡಿ ಎಂದು ಹೇಳುತ್ತ ಮತ್ತೊಬ್ಬರು ಮರುಹಂಚಿಕೆ ಮಾಡಿಕೊಂಡಿದ್ದಾರೆ. ನೀವೊಬ್ಬ ದಂತಕಥೆ ಎಂದು ಮಗದೊಬ್ಬರು ಮರುಹಂಚಿಕೆ ಮಾಡಿಕೊಳ್ಳುತ್ತ ಹೊಗಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:32 pm, Tue, 6 September 22

ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ